ETV Bharat / state

ಬ್ಯಾಂಕ್​ನ ಸೇಫ್ ಲಾಕರ್​ನಲ್ಲಿ ಇಟ್ಟರೂ ಚಿನ್ನಕ್ಕಿಲ್ಲ ಸುರಕ್ಷತೆ: 580 ಗ್ರಾಂ ಬಂಗಾರ ಕಳವು, ಮ್ಯಾನೇಜರ್ ಉಡಾಫೆ ಉತ್ತರ!

author img

By

Published : Dec 15, 2022, 2:23 PM IST

ಬ್ಯಾಂಕ್​ನ ಸೇಫ್ ಲಾಕರ್​ನಲ್ಲಿ ಇಟ್ಟರೂ ಚಿನ್ನಕ್ಕೆ ಸುರಕ್ಷತೆ ಇಲ್ಲದಂತಾಗಿದೆ. ಇದರ ಬಗ್ಗೆ ಬ್ಯಾಂಕ್​ ಮ್ಯಾನೇಜರ್​ಗೆ ಕೇಳಿದರೆ ಗ್ರಾಹಕನಿಗೆ ಉಡಾಫೆ ಉತ್ತರ ನೀಡಿರುವುದು ಬೆಳಕಿಗೆ ಬಂದಿದೆ.

gold stolen from Bank safe locker  gold stolen from Bank safe locker in Bengaluru  gold stolen case  ಸೇಫ್ ಲಾಕರ್​ನಲ್ಲಿ ಇಟ್ಟರೂ ಚಿನ್ನಕ್ಕಿಲ್ಲ ಸುರಕ್ಷತೆ  ಮ್ಯಾನೇಜರ್​ನಿಂದ ಉಡಾಫೆ ಉತ್ತರ  ಗ್ರಾಹಕನಿಗೆ ಉಡಾಫೆ ಉತ್ತರ
ಬ್ಯಾಂಕ್​ನ ಸೇಫ್ ಲಾಕರ್​ನಲ್ಲಿ ಇಟ್ಟರೂ ಚಿನ್ನಕ್ಕಿಲ್ಲ ಸುರಕ್ಷತೆ

ಬೆಂಗಳೂರು: ಮೈ‌ ಮೇಲೆ‌ ಚಿನ್ನ ಹಾಕಿಕೊಂಡರೆ ಸರಗಳ್ಳರ ಹಾವಳಿ. ಅದೇ ಚಿನ್ನ ಮನೆಯಲ್ಲಿಟ್ಟರೆ ಮನೆಗಳ್ಳರ ಕಾಟ..‌ ಇವರಿಬ್ಬರಿಂದ ತಪ್ಪಿಸಿಕೊಳ್ಳಲು ಬ್ಯಾಂಕ್​ನಲ್ಲಿಟ್ಟರೇ ಅಲ್ಲಿಯೂ ಸುರಕ್ಷತೆ ಇಲ್ಲದಂತಾಗಿದೆ. ಹೌದು, ಬ್ಯಾಂಕ್​ನ ಸೇಫ್​ ಲಾಕರ್​ನಿಂದ 30 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.

ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಬ್ಯಾಂಕ್​ನ ಲಾಕರ್​ನಲ್ಲಿಟ್ಟಿದ್ದ 580 ಗ್ರಾಂ ಚಿನ್ನ ಮಾಯವಾಗಿದ್ದು, ಈ ಸಂಬಂಧ ದೂರುದಾರ ಬಿ‌ಎನ್ ಕೃಷ್ಣಕುಮಾರ್ ದೂರು ನೀಡಿದ್ದಾರೆ. ಸಂತ್ರಸ್ತ ನೀಡಿದ‌ ದೂರಿನ ಮೇರೆಗೆ ಬ್ಯಾಂಕ್ ಮ್ಯಾನೇಜರ್ ಪ್ರದೀಪ್, ಕಸ್ಟೋಡಿಯನ್​ಗಳಾದ ಸೌಮ್ಯ ಹಾಗೂ ನಳನ್ ವಿರುದ್ಧ ಎಫ್ಐಆರ್ ದಾಖಲಾಗಿದೆ‌‌.

gold stolen from Bank safe locker  gold stolen from Bank safe locker in Bengaluru  gold stolen case  ಸೇಫ್ ಲಾಕರ್​ನಲ್ಲಿ ಇಟ್ಟರೂ ಚಿನ್ನಕ್ಕಿಲ್ಲ ಸುರಕ್ಷತೆ  ಮ್ಯಾನೇಜರ್​ನಿಂದ ಉಡಾಫೆ ಉತ್ತರ  ಗ್ರಾಹಕನಿಗೆ ಉಡಾಫೆ ಉತ್ತರ
ಬ್ಯಾಂಕ್​ನ ಸೇಫ್ ಲಾಕರ್​ನಲ್ಲಿ ಇಟ್ಟರೂ ಚಿನ್ನಕ್ಕಿಲ್ಲ ಸುರಕ್ಷತೆ

ಕೃಷ್ಣಕುಮಾರ್ ಕಳೆದ 10 ವರ್ಷಗಳ ಹಿಂದೆ ಕರ್ನಾಟಕ ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ತೆರೆದಿದ್ದರು‌‌.‌ ಕೃಷ್ಣಕುಮಾರ್​ನ ಮಗ ಮೂರು ವರ್ಷಗಳಿಂದ ಜರ್ಮನಿಯಲ್ಲಿ ವಾಸವಿದ್ದರು.‌ ಕೃಷ್ಣಕುಮಾರ್​ ತಮ್ಮ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಸುರಕ್ಷತೆಗಾಗಿ ಕರ್ನಾಟಕ ಬ್ಯಾಂಕ್​ನಲ್ಲಿ ಸೇಫ್ ಲಾಕರ್ ತೆರೆದಿದ್ದರು. ಕೆಲ ತಿಂಗಳ ಹಿಂದೆ 30 ಲಕ್ಷ ಮೌಲ್ಯದ 580 ಗ್ರಾಂ ಚಿನ್ನವನ್ನು ಲಾಕರ್​​ನಲ್ಲಿ ಇರಿಸಿದ್ದರು.

ಕೆಲ ದಿನಗಳ ಹಿಂದೆ ಮಗ ಜರ್ಮನಿಯಿಂದ ಬೆಂಗಳೂರಿಗೆ ಬಂದಿದ್ದರು.‌ ಬಳಿಕ ಮಗ ಮತ್ತು ಕೃಷ್ಣಕುಮಾರ್​ ಬ್ಯಾಂಕ್​ಗೆ ಬಂದು ಚಿನ್ನಭಾರಣ ತೆಗೆದುಕೊಳ್ಳಲು ಲಾಕರ್ ಓಪನ್ ಮಾಡಿದ್ದಾರೆ. ಈ ವೇಳೆ ಲಾಕರ್ ಖಾಲಿಯಾಗಿದ್ದು, ತಂದೆ - ಮಗ ಇಬ್ಬರು ಆತಂಕಕ್ಕೆ ಒಳಗಾದರು. ಕೃಷ್ಣಕುಮಾರ್​ ಮತ್ತು ಆತನ ಮಗ ಕೂಡಲೇ ಬ್ಯಾಂಕ್ ಮ್ಯಾನೇಜರ್​ಗೆ ಮಾಹಿತಿ ನೀಡಿದ್ದರು.

ಮ್ಯಾನೇಜರ್ ಪ್ರದೀಪ್ ಮೂರು ದಿನಗಳ ಕಾಲ ಸಮಯ ಕೊಡಿ‌.. ನಿಮ್ಮ ಚಿನ್ನಾಭರಣವನ್ನು ವಾಪಸ್​ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಮೂರು ದಿನಗಳ ಬಳಿಕ ಮ್ಯಾಜೇಜರ್​ ಪ್ರದೀಪ್​ ಬಳಿ ಹೋಗಿ ಕೃಷ್ಣಕುಮಾರ್​ ಚಿನ್ನಭಾರಣ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ ಪ್ರದೀಪ್​, ಪೊಲೀಸ್ ಠಾಣೆಗೆ ದೂರು ಕೊಡುವುದಾದರೆ ಕೊಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ಕೃಷ್ಣಕುಮಾರ್​ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಓದಿ: ಶಿವಮೊಗ್ಗ: ಹೆತ್ತ ತಾಯಿಯ ಮನೆಗೇ ಕನ್ನ ಹಾಕಿದ ಮಗನ ಬಂಧನ!

ಬೆಂಗಳೂರು: ಮೈ‌ ಮೇಲೆ‌ ಚಿನ್ನ ಹಾಕಿಕೊಂಡರೆ ಸರಗಳ್ಳರ ಹಾವಳಿ. ಅದೇ ಚಿನ್ನ ಮನೆಯಲ್ಲಿಟ್ಟರೆ ಮನೆಗಳ್ಳರ ಕಾಟ..‌ ಇವರಿಬ್ಬರಿಂದ ತಪ್ಪಿಸಿಕೊಳ್ಳಲು ಬ್ಯಾಂಕ್​ನಲ್ಲಿಟ್ಟರೇ ಅಲ್ಲಿಯೂ ಸುರಕ್ಷತೆ ಇಲ್ಲದಂತಾಗಿದೆ. ಹೌದು, ಬ್ಯಾಂಕ್​ನ ಸೇಫ್​ ಲಾಕರ್​ನಿಂದ 30 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.

ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಬ್ಯಾಂಕ್​ನ ಲಾಕರ್​ನಲ್ಲಿಟ್ಟಿದ್ದ 580 ಗ್ರಾಂ ಚಿನ್ನ ಮಾಯವಾಗಿದ್ದು, ಈ ಸಂಬಂಧ ದೂರುದಾರ ಬಿ‌ಎನ್ ಕೃಷ್ಣಕುಮಾರ್ ದೂರು ನೀಡಿದ್ದಾರೆ. ಸಂತ್ರಸ್ತ ನೀಡಿದ‌ ದೂರಿನ ಮೇರೆಗೆ ಬ್ಯಾಂಕ್ ಮ್ಯಾನೇಜರ್ ಪ್ರದೀಪ್, ಕಸ್ಟೋಡಿಯನ್​ಗಳಾದ ಸೌಮ್ಯ ಹಾಗೂ ನಳನ್ ವಿರುದ್ಧ ಎಫ್ಐಆರ್ ದಾಖಲಾಗಿದೆ‌‌.

gold stolen from Bank safe locker  gold stolen from Bank safe locker in Bengaluru  gold stolen case  ಸೇಫ್ ಲಾಕರ್​ನಲ್ಲಿ ಇಟ್ಟರೂ ಚಿನ್ನಕ್ಕಿಲ್ಲ ಸುರಕ್ಷತೆ  ಮ್ಯಾನೇಜರ್​ನಿಂದ ಉಡಾಫೆ ಉತ್ತರ  ಗ್ರಾಹಕನಿಗೆ ಉಡಾಫೆ ಉತ್ತರ
ಬ್ಯಾಂಕ್​ನ ಸೇಫ್ ಲಾಕರ್​ನಲ್ಲಿ ಇಟ್ಟರೂ ಚಿನ್ನಕ್ಕಿಲ್ಲ ಸುರಕ್ಷತೆ

ಕೃಷ್ಣಕುಮಾರ್ ಕಳೆದ 10 ವರ್ಷಗಳ ಹಿಂದೆ ಕರ್ನಾಟಕ ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ತೆರೆದಿದ್ದರು‌‌.‌ ಕೃಷ್ಣಕುಮಾರ್​ನ ಮಗ ಮೂರು ವರ್ಷಗಳಿಂದ ಜರ್ಮನಿಯಲ್ಲಿ ವಾಸವಿದ್ದರು.‌ ಕೃಷ್ಣಕುಮಾರ್​ ತಮ್ಮ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಸುರಕ್ಷತೆಗಾಗಿ ಕರ್ನಾಟಕ ಬ್ಯಾಂಕ್​ನಲ್ಲಿ ಸೇಫ್ ಲಾಕರ್ ತೆರೆದಿದ್ದರು. ಕೆಲ ತಿಂಗಳ ಹಿಂದೆ 30 ಲಕ್ಷ ಮೌಲ್ಯದ 580 ಗ್ರಾಂ ಚಿನ್ನವನ್ನು ಲಾಕರ್​​ನಲ್ಲಿ ಇರಿಸಿದ್ದರು.

ಕೆಲ ದಿನಗಳ ಹಿಂದೆ ಮಗ ಜರ್ಮನಿಯಿಂದ ಬೆಂಗಳೂರಿಗೆ ಬಂದಿದ್ದರು.‌ ಬಳಿಕ ಮಗ ಮತ್ತು ಕೃಷ್ಣಕುಮಾರ್​ ಬ್ಯಾಂಕ್​ಗೆ ಬಂದು ಚಿನ್ನಭಾರಣ ತೆಗೆದುಕೊಳ್ಳಲು ಲಾಕರ್ ಓಪನ್ ಮಾಡಿದ್ದಾರೆ. ಈ ವೇಳೆ ಲಾಕರ್ ಖಾಲಿಯಾಗಿದ್ದು, ತಂದೆ - ಮಗ ಇಬ್ಬರು ಆತಂಕಕ್ಕೆ ಒಳಗಾದರು. ಕೃಷ್ಣಕುಮಾರ್​ ಮತ್ತು ಆತನ ಮಗ ಕೂಡಲೇ ಬ್ಯಾಂಕ್ ಮ್ಯಾನೇಜರ್​ಗೆ ಮಾಹಿತಿ ನೀಡಿದ್ದರು.

ಮ್ಯಾನೇಜರ್ ಪ್ರದೀಪ್ ಮೂರು ದಿನಗಳ ಕಾಲ ಸಮಯ ಕೊಡಿ‌.. ನಿಮ್ಮ ಚಿನ್ನಾಭರಣವನ್ನು ವಾಪಸ್​ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಮೂರು ದಿನಗಳ ಬಳಿಕ ಮ್ಯಾಜೇಜರ್​ ಪ್ರದೀಪ್​ ಬಳಿ ಹೋಗಿ ಕೃಷ್ಣಕುಮಾರ್​ ಚಿನ್ನಭಾರಣ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ ಪ್ರದೀಪ್​, ಪೊಲೀಸ್ ಠಾಣೆಗೆ ದೂರು ಕೊಡುವುದಾದರೆ ಕೊಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ಕೃಷ್ಣಕುಮಾರ್​ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಓದಿ: ಶಿವಮೊಗ್ಗ: ಹೆತ್ತ ತಾಯಿಯ ಮನೆಗೇ ಕನ್ನ ಹಾಕಿದ ಮಗನ ಬಂಧನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.