ETV Bharat / state

ಬೈಕ್​ ಅಡ್ಡಗಟ್ಟಿ ಸುಲಿಗೆ: ದೊಡ್ಡಬಳ್ಳಾಪುರದಲ್ಲಿ ಮೂವರ ಬಂಧನ

author img

By

Published : Jun 1, 2021, 6:52 AM IST

Updated : Jun 1, 2021, 10:07 AM IST

ದೊಡ್ಡಬಳ್ಳಾಪುರದಲ್ಲಿ ದಾರಿಹೋಕರ ಬಳಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ದೊಡ್ಡಬೆಳವಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

three robbers arrested in doddaballapura news
ಬೈಕ್​ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ದೊಡ್ಡಬಳ್ಳಾಪುರ: ರಾತ್ರಿ ಸಮಯದಲ್ಲಿ ಬೈಕ್ ಅಡ್ಡಗಟ್ಟಿ ಸವಾರರಿಂದ ಹಣ, ಮೊಬೈಲ್, ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 18ರ ರಾತ್ರಿ ನಾರಾಯಣಸ್ವಾಮಿ ಎಂಬುವವರು ಅವರ ಸಂಬಂಧಿ ಬೈಕ್​ನಲ್ಲಿ ಹೋಗುವ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗೇಟ್ ಬಳಿ ಬೈಕ್ ಓವರ್‌ಟೇಕ್ ಮಾಡಿದ ದುಷ್ಕರ್ಮಿಗಳು, ಸವಾರರಿಂದ 20 ಸಾವಿರ ರೂ. ನಗದು, ಎರಡು ಮೊಬೈಲ್ ಹಾಗೂ ಬೈಕ್ ದೋಚಿ ಪರಾರಿಯಾಗಿದ್ದರು.

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳಾದ ಸೋಮಶೇಖರ್, ಚಂದ್ರಕೀರ್ತಿ, ಪ್ರಕಾಶ್ ಎಂಬುವರನ್ನು ಅರೆಸ್ಟ ಮಾಡಲಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕ್, ಎರಡು ಮೊಬೈಲ್ ಮತ್ತು ಕದ್ದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.

ಇವರ ಪೈಕಿ ಸೋಮಶೇಖರ್ ಮತ್ತು ಚಂದ್ರಕೀರ್ತಿ ಈ ಹಿಂದೆಯೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ದೊಡ್ಡಬಳ್ಳಾಪುರ: ರಾತ್ರಿ ಸಮಯದಲ್ಲಿ ಬೈಕ್ ಅಡ್ಡಗಟ್ಟಿ ಸವಾರರಿಂದ ಹಣ, ಮೊಬೈಲ್, ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 18ರ ರಾತ್ರಿ ನಾರಾಯಣಸ್ವಾಮಿ ಎಂಬುವವರು ಅವರ ಸಂಬಂಧಿ ಬೈಕ್​ನಲ್ಲಿ ಹೋಗುವ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗೇಟ್ ಬಳಿ ಬೈಕ್ ಓವರ್‌ಟೇಕ್ ಮಾಡಿದ ದುಷ್ಕರ್ಮಿಗಳು, ಸವಾರರಿಂದ 20 ಸಾವಿರ ರೂ. ನಗದು, ಎರಡು ಮೊಬೈಲ್ ಹಾಗೂ ಬೈಕ್ ದೋಚಿ ಪರಾರಿಯಾಗಿದ್ದರು.

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳಾದ ಸೋಮಶೇಖರ್, ಚಂದ್ರಕೀರ್ತಿ, ಪ್ರಕಾಶ್ ಎಂಬುವರನ್ನು ಅರೆಸ್ಟ ಮಾಡಲಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕ್, ಎರಡು ಮೊಬೈಲ್ ಮತ್ತು ಕದ್ದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.

ಇವರ ಪೈಕಿ ಸೋಮಶೇಖರ್ ಮತ್ತು ಚಂದ್ರಕೀರ್ತಿ ಈ ಹಿಂದೆಯೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

Last Updated : Jun 1, 2021, 10:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.