ನೆಲಮಂಗಲ: ಲಾರಿ ಚಾಲಕನ ನಿರ್ಲಕ್ಷ್ಯದಿಂದ ಟೋಲ್ ಕಾರ್ಮಿಕನ ಪ್ರಾಣ ಪಕ್ಷಿ ಹಾರಿಹೋಗಿದೆ. ಇಲ್ಲಿನ ನವಯುಗ ಟೋಲ್ ಗೇಟ್ನಲ್ಲಿ ಈ ದುರ್ಘಟನೆ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಟೋಲ್ ನಲ್ಲಿ ಈ ಘಟನೆ ಜರುಗಿದೆ. ಯಮಸ್ವರೂಪಿಯಾಗಿ ಬಂದ ಲಾರಿಯೊಂದು ಟೋಲ್ಗೇಟ್ ಬಳಿ ಬಾಗಿಲಲ್ಲಿ ಕೈತೊಳೆಯುತ್ತಿದ್ದ ಕಾರ್ಮಿಕನನ್ನು ಎಳೆದೊಯ್ದಿದೆ. ಅಲ್ಲದೆ, ಮುಂದೆ ಸಾಗುತ್ತಿದ್ದ ಕಾರಿಗೂ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಟೋಲ್ ಕಾರ್ಮಿಕ ಗೋಪಾಲ್ ಮೃತಪಟ್ಟಿದ್ದಾರೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಟೋಲ್ನ ಅವೈಜ್ಞಾನಿಕ ಮಾದರಿ ಸಹ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.