ETV Bharat / state

ನೆಲಮಂಗಲ: ಗಾರ್ಮೆಂಟ್ಸ್​​​ಗಳಿಗೆ ತಹಶೀಲ್ದಾರ್​ ದಿಢೀರ್​ ಭೇಟಿ, ಪರಿಶೀಲನೆ

author img

By

Published : May 1, 2021, 2:10 PM IST

ಟೆಕ್ಸ್ ಪೋರ್ಟ್ ಗಾರ್ಮೆಂಟ್ಸ್​​​ಗೆ ಭೇಟಿ ನೀಡಿದ ತಹಶೀಲ್ದಾರ್​, ಸಾಮಾಜಿಕ ಅಂತರವಿಲ್ಲದೆ ಕಾರ್ಯನಿರತ ಹೆಚ್ಚುವರಿ ನೌಕರರಿದ್ದ ಕಾರಣ ಕಾರ್ಮಿಕರನ್ನು ಬೇರೊಂದು ಫ್ಲೋರ್​​ಗೆ ಸ್ಥಳಾಂತರಿಸಿ ಆದೇಶ ಉಲ್ಲಂಘನೆ ಮಾಡಿದರೆ ಗಾರ್ಮೆಂಟ್ಸ್ ಸೀಲ್ ಡೌನ್ ಮಾಡುವುದಾಗಿ ಮ್ಯಾನೇಜರ್​ಗೆ ಎಚ್ಚರಿಕೆ ನೀಡಿದರು.

ಗಾರ್ಮೆಂಟ್ಸ್​​​ಗಳಿಗೆ ತಹಶೀಲ್ದಾರ್​ ದಿಢೀರ್​ ಭೇಟಿ, ಪರಿಶೀಲನೆ
ಗಾರ್ಮೆಂಟ್ಸ್​​​ಗಳಿಗೆ ತಹಶೀಲ್ದಾರ್​ ದಿಢೀರ್​ ಭೇಟಿ, ಪರಿಶೀಲನೆ

ನೆಲಮಂಗಲ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ ಮೇರೆಗೆ ತಹಶೀಲ್ದಾರ್ ಕೆ.ಮಂಜುನಾಥ್ ನಗರದ ಗಾರ್ಮೆಂಟ್ಸ್​​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗಾರ್ಮೆಂಟ್ಸ್​​​ಗಳಿಗೆ ತಹಶೀಲ್ದಾರ್​ ದಿಢೀರ್​ ಭೇಟಿ, ಪರಿಶೀಲನೆ

ಜನತಾ ಕರ್ಫ್ಯೂ ಉಲ್ಲಂಘನೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿರುವ ಜಿಲ್ಲಾಧಿಕಾರಿಗಳು ಹಾಗೂ ಗಾರ್ಮೆಂಟ್ಸ್​​ಗಳಲ್ಲಿ 50%ಕ್ಕಿಂತ ಹೆಚ್ಚು ಕೆಲಸಗಾರರು ಇದ್ದಲ್ಲಿ ಅಂತಹವರ ವಿರುದ್ಧ ಕ್ರಮಕ್ಕೆ ಆದೇಶಿಸಿದ ಹಿನ್ನೆಲೆಯಲ್ಲಿ ನೆಲಮಂಗಲ ಹೊರವಲಯದ ಮೈಲನಹಳ್ಳಿ ಬಳಿಯ ಗಾರ್ಮೆಂಟ್ಸ್​​ಗಳಗೆ ತಹಶಿಲ್ದಾರ್ ಕೆ. ಮಂಜುನಾಥ್ ಭೇಟಿ ನೀಡಿ ಪರಿಶಿಲನೆ ನಡೆಸಿದರು.

ಟೆಕ್ಸ್ ಪೋರ್ಟ್ ಗಾರ್ಮೆಂಟ್ಸ್​ಗೆ ಭೇಟಿ ನೀಡಿದ ತಹಶೀಲ್ದಾರ್​, ಸಾಮಾಜಿಕ ಅಂತರವಿಲ್ಲದೇ ಕಾರ್ಯನಿರತ ಹೆಚ್ಚುವರಿ ನೌಕರರಿದ್ದ ಕಾರಣ ಕಾರ್ಮಿಕರನ್ನು ಬೇರೊಂದು ಫ್ಲೋರ್​​​ಗೆ ಸ್ಥಳಾಂತರಿಸಿ ಆದೇಶ ಉಲ್ಲಂಘನೆ ಮಾಡಿದರೆ ಗಾರ್ಮೆಂಟ್ಸ್ ಸೀಲ್ ಡೌನ್ ಮಾಡುವುದಾಗಿ ಮ್ಯಾನೇಜರ್​ಗೆ ಎಚ್ಚರಿಕೆ ನೀಡಿದರು.

ನೆಲಮಂಗಲ ಪಟ್ಟಣದಲ್ಲಿನ ಸಂತೆ ಬೀದಿಯಲ್ಲಿ ಕರ್ಫ್ಯೂ ಉಲ್ಲಂಘಿಸಿದ ಜನರು, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಅಗತ್ಯ ವಸ್ತುಗಳನ್ನು ಕೊಳ್ಳಲು ಬಂದ ಜನರು ತಮ್ಮ ಬೈಕ್ ಹಾಗೂ ಕಾರ್​ಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿದ್ದರಿಂದ ಇತರ ವಾಹನ ಸವಾರರಿಗೂ ಟ್ರಾಫಿಕ್ ಕಿರಿಕಿರಿ ಉಂಟಾಯಿತು.

ಓದಿ : ದೊಡ್ದ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲ .. ಅಭಿಯಾನಕ್ಕೆ ಸಾಂಕೇತಿಕ ಚಾಲನೆ : ಸಚಿವ ಸುಧಾಕರ್

ನೆಲಮಂಗಲ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ ಮೇರೆಗೆ ತಹಶೀಲ್ದಾರ್ ಕೆ.ಮಂಜುನಾಥ್ ನಗರದ ಗಾರ್ಮೆಂಟ್ಸ್​​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗಾರ್ಮೆಂಟ್ಸ್​​​ಗಳಿಗೆ ತಹಶೀಲ್ದಾರ್​ ದಿಢೀರ್​ ಭೇಟಿ, ಪರಿಶೀಲನೆ

ಜನತಾ ಕರ್ಫ್ಯೂ ಉಲ್ಲಂಘನೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿರುವ ಜಿಲ್ಲಾಧಿಕಾರಿಗಳು ಹಾಗೂ ಗಾರ್ಮೆಂಟ್ಸ್​​ಗಳಲ್ಲಿ 50%ಕ್ಕಿಂತ ಹೆಚ್ಚು ಕೆಲಸಗಾರರು ಇದ್ದಲ್ಲಿ ಅಂತಹವರ ವಿರುದ್ಧ ಕ್ರಮಕ್ಕೆ ಆದೇಶಿಸಿದ ಹಿನ್ನೆಲೆಯಲ್ಲಿ ನೆಲಮಂಗಲ ಹೊರವಲಯದ ಮೈಲನಹಳ್ಳಿ ಬಳಿಯ ಗಾರ್ಮೆಂಟ್ಸ್​​ಗಳಗೆ ತಹಶಿಲ್ದಾರ್ ಕೆ. ಮಂಜುನಾಥ್ ಭೇಟಿ ನೀಡಿ ಪರಿಶಿಲನೆ ನಡೆಸಿದರು.

ಟೆಕ್ಸ್ ಪೋರ್ಟ್ ಗಾರ್ಮೆಂಟ್ಸ್​ಗೆ ಭೇಟಿ ನೀಡಿದ ತಹಶೀಲ್ದಾರ್​, ಸಾಮಾಜಿಕ ಅಂತರವಿಲ್ಲದೇ ಕಾರ್ಯನಿರತ ಹೆಚ್ಚುವರಿ ನೌಕರರಿದ್ದ ಕಾರಣ ಕಾರ್ಮಿಕರನ್ನು ಬೇರೊಂದು ಫ್ಲೋರ್​​​ಗೆ ಸ್ಥಳಾಂತರಿಸಿ ಆದೇಶ ಉಲ್ಲಂಘನೆ ಮಾಡಿದರೆ ಗಾರ್ಮೆಂಟ್ಸ್ ಸೀಲ್ ಡೌನ್ ಮಾಡುವುದಾಗಿ ಮ್ಯಾನೇಜರ್​ಗೆ ಎಚ್ಚರಿಕೆ ನೀಡಿದರು.

ನೆಲಮಂಗಲ ಪಟ್ಟಣದಲ್ಲಿನ ಸಂತೆ ಬೀದಿಯಲ್ಲಿ ಕರ್ಫ್ಯೂ ಉಲ್ಲಂಘಿಸಿದ ಜನರು, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಅಗತ್ಯ ವಸ್ತುಗಳನ್ನು ಕೊಳ್ಳಲು ಬಂದ ಜನರು ತಮ್ಮ ಬೈಕ್ ಹಾಗೂ ಕಾರ್​ಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿದ್ದರಿಂದ ಇತರ ವಾಹನ ಸವಾರರಿಗೂ ಟ್ರಾಫಿಕ್ ಕಿರಿಕಿರಿ ಉಂಟಾಯಿತು.

ಓದಿ : ದೊಡ್ದ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲ .. ಅಭಿಯಾನಕ್ಕೆ ಸಾಂಕೇತಿಕ ಚಾಲನೆ : ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.