ETV Bharat / state

ಜಿಲ್ಲೆಯಾದ್ಯಂತ ಸಂಭ್ರಮದ ಶ್ರಾವಣ ಶನಿವಾರ ಆಚರಣೆ

author img

By

Published : Aug 3, 2019, 9:21 PM IST

ಶ್ರಾವಣ ಶನಿವಾರವಾದ ಇಂದು ನಗರದಲ್ಲಿರುವ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಅನ್ನ ದಾಸೋಹವನ್ನು ನೆರವೇರಿಸಲಾಯಿತು.

bangalore ,ಬೆಂಗಳೂರು

ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಮೊದಲ ಶನಿವಾರವನ್ನು ಜಿಲ್ಲೆಯಾದ್ಯಂತ ಆಚರಣೆ ಮಾಡಲಾಗಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಅನ್ನ ದಾಸೋಹವನ್ನು ನೆರವೇರಿಸಲಾಯಿತು.

ಜಿಲ್ಲೆಯಾದ್ಯಂತ ಸಂಭ್ರಮದ ಶ್ರಾವಣ ಶನಿವಾರ ಆಚರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಗ್ಗಲಹಳ್ಳಿ ಶನಿ ಮಹಾತ್ಮ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಶಿವನ ದೇವಾಲಯ, ಗಂಗಮ್ಮ ದೇವಾಲಯ, ಕಾಟೇರಮ್ಮ ದೇವಾಲಯ, ಗಣಪತಿ ದೇವಾಲಯ ಸೇರಿ ವಿವಿಧ ದೇವಾಲಯಗಳಲ್ಲಿಶ್ರಾವಣ ಶನಿವಾರವಾದ ಇಂದು ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು.

ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಹೂವು, ಹಣ್ಣು ಸಮರ್ಪಿಸಿ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಮುಂದೆ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು ವಿಶೇಷವಾಗಿತ್ತು.

ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಮೊದಲ ಶನಿವಾರವನ್ನು ಜಿಲ್ಲೆಯಾದ್ಯಂತ ಆಚರಣೆ ಮಾಡಲಾಗಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಅನ್ನ ದಾಸೋಹವನ್ನು ನೆರವೇರಿಸಲಾಯಿತು.

ಜಿಲ್ಲೆಯಾದ್ಯಂತ ಸಂಭ್ರಮದ ಶ್ರಾವಣ ಶನಿವಾರ ಆಚರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಗ್ಗಲಹಳ್ಳಿ ಶನಿ ಮಹಾತ್ಮ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಶಿವನ ದೇವಾಲಯ, ಗಂಗಮ್ಮ ದೇವಾಲಯ, ಕಾಟೇರಮ್ಮ ದೇವಾಲಯ, ಗಣಪತಿ ದೇವಾಲಯ ಸೇರಿ ವಿವಿಧ ದೇವಾಲಯಗಳಲ್ಲಿಶ್ರಾವಣ ಶನಿವಾರವಾದ ಇಂದು ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು.

ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಹೂವು, ಹಣ್ಣು ಸಮರ್ಪಿಸಿ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಮುಂದೆ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು ವಿಶೇಷವಾಗಿತ್ತು.

Intro:KN_BNG_01_03_shravan shanivara_Ambarish_7203301
Slug: ಜಿಲ್ಲೆಯಾದ್ಯಂತ ಸಂಭ್ರಮದ ಶ್ರಾವಣ ಶನಿವಾರ ಆಚರಣೆ

ಬೆಂಗಳೂರು: ಪ್ರತಿ ವರ್ಷ ದಂತೆ ಈ ವರ್ಷವೂ ಶ್ರಾವಣ ಮಾಸದ ಮೊದಲ ಶನಿವಾರ ಜಿಲ್ಲಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುರಸ್ಕಾರಗಳು, ಭಜನೆ, ಅನ್ನ ದಾಸೋಹವನ್ನು ನೆರವೇರಿಸಲಾಯಿತು..

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ತಮುಖ‌ ದೇವಾಲಯ ಆಗಿರುವ ದೇವನಹಳ್ಳಿಯ‌ ಕಗ್ಗಲಹಳ್ಳಿ ಶನಿ ಮಹಾತ್ಮ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಶಿವನ ದೇವಾಲಯ, ಗಂಗಮ್ಮ ದೇವಾಲಯ, ಕಾಟೇರಮ್ಮ‌ ದೇವಾಲಯ, ಗಣಪತಿ ದೇವಾಲಯ ಸೇರಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಆಂಜನೇಯ ಸ್ವಾಮಿ ದೇವಾಲಯ ಮತ್ತು ಶನಿ ಮಹಾತ್ಮ ದೇವಾಲಯದಲ್ಲಿ ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಹೂವು, ಹಣ್ಣು ಸಮರ್ಪಿಸಿ ಪೂಜೆ ಸಲ್ಲಿಸಿದರು. ಆಲಯ ಸಮಿತಿ, ದಾನಿಗಳು ದೇವಾಲಯ ಆವರಣದಲ್ಲಿ ಬಂದ ಭಕ್ತರಿಗೆ ಪ್ರಸಾದ ಹಂಚಿದರು. ಅನ್ನಸಂತರ್ಪಣ ಕೂಡ ನಡೆಯಿತು.. ಇದೇ ವೇಳೆ ದೇವಸ್ಥಾನದ ಮುಂದೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು..

ಶಿವ, ಗಣೇಶ ಮತ್ತು ಆಂಜನೇಯ ದೇವಾಲಯದಲ್ಲಿ ದೇವರಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನಕ್ಕೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಯ್ತು.. ಬಳಿಕ ದೇವಾಲಯದ ಮುಂದೆ ರಾಮ ಲಕ್ಷ್ಮಣ ಸೀತೆ ಮತ್ತು ಆಂಜನೇಯ ಸ್ವಾಮಿ ದೇವರುಗಳನ್ನು ಇಟ್ಟು, ಅದರ ಮುಂದೆ ರಾಮನಾಮ ಭಜನೆ ನಡೆಯಿತು.. ಬೆಳಗ್ಗೆಯಿಂದಲೂ ಸಂಜೆಯವರೆಗೂ ಭಜನೆ ನಡೆಯಿತು..

ಶ್ರಾವಣ ಮಾಸ ಶಿವನಿಗೆ ಮೀಸಲಾದ ತಿಂಗಳು.. ಈ ತಿಂಗಳಲ್ಲಿ ಮಹಿಳೆಯರು ಸೌಭಾಗ್ಯಕ್ಕೆ, ಪುರುಷರು ಆರೋಗ್ಯಕರ ಕುಟುಂಬಕ್ಕಾಗಿ, ತಮ್ಮ‌ ಇಷ್ಟಾರ್ಥ ಸಿದ್ದಿಗಾಗಿ ದೇವತೆಗಳನ್ನು ಪೂಜಿಸುತ್ತಾರೆ.. ಶ್ರಾವಣ ಶನಿವಾರವೂ ಶನಿ ದೋಷ ಆಗಲಿ ಶನಿ ತೊಂದರೆಯ ಪರಿಹಾರಕ್ಕೆ ಪೂಜೆ ಸಲ್ಲಿಸುತ್ತಾರೆ.. ಈ ಪೂಜೆ ಮೂಲಕ ಎಲ್ಲಾ ಒಳ್ಳೆಯದ್ದಾಗುತ್ತದೆ ಅನ್ನೊ ನಂಬಿಕೆ ಇದೆ..



Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.