ETV Bharat / state

ಬೆಂಗಳೂರು ಗ್ರಾಮಾಂತರ ಆನೇಕಲ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ - undefined

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಆನೇಕಲ್​ನಲ್ಲಿ ಚುನವಣಾ ಪೂರ್ವಬಾವಿ ಸಿದ್ದತೆಗಳು ಹಲವಾರು ಹಲವು ಗೊಂದಲಗಳಿಂದ ಕೂಡಿದ್ದರಿಂದ ಚುನಾವಣಾ ಕೇಂದ್ರದ ಜಾಗಕ್ಕಾಗಿ ನಡೆದ ವಿವಾದ ಹೈಕೋರ್ಟ್ ಮೆಟ್ಟಿಲು ಸಹ ಏರಿತ್ತು. ಕೊನೆಗೆ ಹೈಕೋರ್ಟ್ ಚುನಾವಣಾಧಿಕಾರಿಗಳ ಪರ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಾಂತರ ಆನೇಕಲ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ
author img

By

Published : Apr 8, 2019, 9:59 AM IST

Updated : Apr 8, 2019, 10:41 AM IST

ಆನೇಕಲ್ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಕಣ ರಂಗೇರುತ್ತಿದೆ. ಅಭ್ಯರ್ಥಿಗಳ ಮಧ್ಯೆ ಪರಸ್ಪರ ಕೆಸರೆರಚಾಟ ಜೋರಾಗಿದೆ.

ಆನೇಕಲ್ ತಾಲೂಕಲ್ಲಿ ಚುನಾವಣಾ ಪೂರ್ವಬಾವಿ ಸಿದ್ದತೆಗಳು ಹಲವಾರು ವಿವಾದಗಳಿಂದ ಕೂಡಿದ್ದು ಚುನಾವಣಾ ಕೇಂದ್ರದ ಜಾಗಕ್ಕಾಗಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೆ ಹೈಕೋರ್ಟ್ ಚುನಾವಣಾಧಿಕಾರಿಗಳ ಪರ ಆದೇಶ ಹೊರಡಿಸಿ ಖಾಸಗೀ ಶಾಲೆಯನ್ನು ಚುನಾವಣೆ ಮುಗಿಯುವವರೆಗೂ ಬೇಷರತ್ತಾಗಿ ನೀಡಲೇಬೇಕೆಂದು ಹುಕುಂ ಹೊರಡಿಸಿದೆ. ಸಧ್ಯಕ್ಕೆ ಇದ್ದ ಎಲ್ಲ ವಿಘ್ನಗಳು ಶಮನವಾದಂತಾಗಿದೆ. ಹೀಗಾಗಿ ತಾಲೂಕಿನಾದ್ಯಂತ ಎಲ್ಲ ಸಿದ್ಧತೆಗಳು ಅಚ್ಚುಕಟ್ಟಾಗಿ ಸಾಗಿವೆ.

ಬೆಂಗಳೂರು ಗ್ರಾಮಾಂತರ ಆನೇಕಲ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ

ಆನೇಕಲ್​ ತಾಲೂಕಲ್ಲಿ ಒಟ್ಟು 3,56,632 ಮತದಾರರಿದ್ದಾರೆ. ಪುರುಷ ಮತದಾರರು 1,92,459, ಮಹಿಳೆಯರು 1,71336 ಆಗಿದ್ದು ಇತರರು 86 ಮಂದಿಯೆಂದು ತಿಳಿದುಬಂದಿದೆ. ಒಟ್ಟು 368 ಮತಗಟ್ಟೆಗಳಲ್ಲಿ ಮತದಾತನ ನಡೆಯಲಿದೆ. 69 ಸೂಕ್ಷ್ಮ ಮತಗಟ್ಟೆಗಳಾಗಿದ್ದು, 4 ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ. 2 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಆನೇಕಲ್ ವಿಭಾಗದ ಸಹಾಯಕ ಚುನಾವಣಾಧಿಕಾರಿ ಮದನ್ ಮೋಹನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಎ.18ರಂದು ನಡೆಯಲಿದ್ದು, ಅಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೂ ಜನ ಹಕ್ಕು ಚಲಾಯಿಸಬಹುದು. ಇದಕ್ಕಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಮದನ್​ ಮೋಹನ್ ಮಾಹಿತಿ ನೀಡಿದರು.

ಇನ್ನು ಚಂದಾಪುರ ಕಂದಾಯ ಅಧಿಕಾರಿ ಮಂಜುನಾಥ್​ ಅವರನ್ನು ಅಮಾನತುಗೊಳಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು ಸಾಬೀತಾದ ಹಿನ್ನಲೆ ಜಿಲ್ಲಾಧಿಕಾರಿ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಎಚ್ಚರಿಕೆ ಗಂಟೆ ರವಾನೆಯಾಗಿದೆ ಎಂದರು.

ಆನೇಕಲ್ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಕಣ ರಂಗೇರುತ್ತಿದೆ. ಅಭ್ಯರ್ಥಿಗಳ ಮಧ್ಯೆ ಪರಸ್ಪರ ಕೆಸರೆರಚಾಟ ಜೋರಾಗಿದೆ.

ಆನೇಕಲ್ ತಾಲೂಕಲ್ಲಿ ಚುನಾವಣಾ ಪೂರ್ವಬಾವಿ ಸಿದ್ದತೆಗಳು ಹಲವಾರು ವಿವಾದಗಳಿಂದ ಕೂಡಿದ್ದು ಚುನಾವಣಾ ಕೇಂದ್ರದ ಜಾಗಕ್ಕಾಗಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೆ ಹೈಕೋರ್ಟ್ ಚುನಾವಣಾಧಿಕಾರಿಗಳ ಪರ ಆದೇಶ ಹೊರಡಿಸಿ ಖಾಸಗೀ ಶಾಲೆಯನ್ನು ಚುನಾವಣೆ ಮುಗಿಯುವವರೆಗೂ ಬೇಷರತ್ತಾಗಿ ನೀಡಲೇಬೇಕೆಂದು ಹುಕುಂ ಹೊರಡಿಸಿದೆ. ಸಧ್ಯಕ್ಕೆ ಇದ್ದ ಎಲ್ಲ ವಿಘ್ನಗಳು ಶಮನವಾದಂತಾಗಿದೆ. ಹೀಗಾಗಿ ತಾಲೂಕಿನಾದ್ಯಂತ ಎಲ್ಲ ಸಿದ್ಧತೆಗಳು ಅಚ್ಚುಕಟ್ಟಾಗಿ ಸಾಗಿವೆ.

ಬೆಂಗಳೂರು ಗ್ರಾಮಾಂತರ ಆನೇಕಲ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ

ಆನೇಕಲ್​ ತಾಲೂಕಲ್ಲಿ ಒಟ್ಟು 3,56,632 ಮತದಾರರಿದ್ದಾರೆ. ಪುರುಷ ಮತದಾರರು 1,92,459, ಮಹಿಳೆಯರು 1,71336 ಆಗಿದ್ದು ಇತರರು 86 ಮಂದಿಯೆಂದು ತಿಳಿದುಬಂದಿದೆ. ಒಟ್ಟು 368 ಮತಗಟ್ಟೆಗಳಲ್ಲಿ ಮತದಾತನ ನಡೆಯಲಿದೆ. 69 ಸೂಕ್ಷ್ಮ ಮತಗಟ್ಟೆಗಳಾಗಿದ್ದು, 4 ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ. 2 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಆನೇಕಲ್ ವಿಭಾಗದ ಸಹಾಯಕ ಚುನಾವಣಾಧಿಕಾರಿ ಮದನ್ ಮೋಹನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಎ.18ರಂದು ನಡೆಯಲಿದ್ದು, ಅಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೂ ಜನ ಹಕ್ಕು ಚಲಾಯಿಸಬಹುದು. ಇದಕ್ಕಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಮದನ್​ ಮೋಹನ್ ಮಾಹಿತಿ ನೀಡಿದರು.

ಇನ್ನು ಚಂದಾಪುರ ಕಂದಾಯ ಅಧಿಕಾರಿ ಮಂಜುನಾಥ್​ ಅವರನ್ನು ಅಮಾನತುಗೊಳಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು ಸಾಬೀತಾದ ಹಿನ್ನಲೆ ಜಿಲ್ಲಾಧಿಕಾರಿ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಎಚ್ಚರಿಕೆ ಗಂಟೆ ರವಾನೆಯಾಗಿದೆ ಎಂದರು.

sample description
Last Updated : Apr 8, 2019, 10:41 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.