ETV Bharat / state

ಕಿಟ್​ ವಿತರಣೆಯಲ್ಲಿ ರಾಜಕೀಯ ಆರೋಪ: ಶಾಸಕರ ವಿರುದ್ಧ ಜೆಡಿಎಸ್​-ಬಿಜೆಪಿ ಮುಖಂಡರ ಆಕ್ರೋಶ - ದೊಡ್ಡಬಳ್ಳಾಪುರ ಶಾಸಕರ ವಿರುದ್ಧ ಜೆಡಿಎಸ್​, ಬಿಜೆಪಿ ಮುಖಂಡರ ಆರೋಪ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಹಳ್ಳಿ ಗ್ರಾಮದಲ್ಲಿ ದಿನಸಿ ಸಾಮಗ್ರಿಗಳ ಕಿಟ್​ ವಿತರಿಸುವ ವೇಳೆ ಶಾಸಕರು ತಮ್ಮ ಪಕ್ಷದವರಿಗೆ ಮಾತ್ರ ವಿತರಿಸುತ್ತಿದ್ದಾರೆ ಎಂದು ಜೆಡಿಎಸ್​​, ಬಿಜೆಪಿ ಮುಖಂಡರು ಆರೋಪಿಸಿದ್ದು, ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ.

Politics in Kit Distribution
ಕಿಟ್​ ವಿತರಣೆ ವೇಳೆ ರಾಜಕೀಯ
author img

By

Published : May 16, 2020, 11:16 AM IST

ದೊಡ್ಡಬಳ್ಳಾಪುರ: ದಿನಸಿ ಸಾಮಗ್ರಿಗಳ ಕಿಟ್​ ವಿತರಣೆ ವೇಳೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಕಿಟ್​ ವಿತರಿಸುವ ಮೂಲಕ ಶಾಸಕ ಟಿ.ವೆಂಕಟರಮಣಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

ಕಿಟ್​ಗಾಗಿ ಮುಗಿಬಿದ್ದ ಜನ

ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಕಿಟ್​ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕರು ಕೇವಲ 250 ಕಿಟ್​ಗಳ ವ್ಯವಸ್ಥೆ ಮಾಡಿದ್ದರು. ಆದರೆ ಕಿಟ್​ ಪಡೆದುಕೊಳ್ಳಲು 500ಕ್ಕೂ ಹೆಚ್ಚಿನ ಜನ ಬಂದಿದ್ದರು. ಈ ವೇಳೆ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಗುರುತಿಸಿ ಟೋಕನ್​ ನೀಡಿ ಕಿಟ್​ ವಿತರಿಸುತ್ತಿದ್ದಾರೆ ಎಂದು ಜೆಡಿಎಸ್​, ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಸಲು ಹೋಬಳಿಯಿಂದ ಅವರ ಪರವಾಗಿ ಕಡಿಮೆ ಮತ ಬಿದ್ದಿದವು. ಹೀಗಾಗಿ ಶಾಸಕರು ತಮಗೆ ಮತ ಹಾಕಿದವರನ್ನು ಮಾತ್ರ ಗುರುತಿಸಿ ಕಿಟ್​ ವಿತರಿಸುತ್ತಿದ್ದಾರೆ ಎಂದಿದ್ದಾರೆ.

ಕಿಟ್​ ವಿತರಣೆ ವಿಚಾರದಲ್ಲಿ ಶಾಸಕರ ಬೆಂಬಲಿಗರು ಮತ್ತು ಇತರ ಪಕ್ಷಗಳ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶಾಸಕರು ತಮ್ಮ ಬೆಂಬಲಿಗರಿಗೆ ಮಾತ್ರ ಕಿಟ್​ ವಿತರಿಸುತ್ತಿದ್ದಾರೆ ಎಂದು ಆರೋಪಿಸಿದ ಜನರು, ಕಿಟ್​ ವಿತರಣಾ ಸ್ಥಳಕ್ಕೆ ಆಗಮಿಸಿ ತಾವಾಗಿಯೇ ಕಿಟ್​ಗಳನ್ನು ಕೊಂಡೊಯ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ, ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಯಿತು.

ದೊಡ್ಡಬಳ್ಳಾಪುರ: ದಿನಸಿ ಸಾಮಗ್ರಿಗಳ ಕಿಟ್​ ವಿತರಣೆ ವೇಳೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಕಿಟ್​ ವಿತರಿಸುವ ಮೂಲಕ ಶಾಸಕ ಟಿ.ವೆಂಕಟರಮಣಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

ಕಿಟ್​ಗಾಗಿ ಮುಗಿಬಿದ್ದ ಜನ

ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಕಿಟ್​ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕರು ಕೇವಲ 250 ಕಿಟ್​ಗಳ ವ್ಯವಸ್ಥೆ ಮಾಡಿದ್ದರು. ಆದರೆ ಕಿಟ್​ ಪಡೆದುಕೊಳ್ಳಲು 500ಕ್ಕೂ ಹೆಚ್ಚಿನ ಜನ ಬಂದಿದ್ದರು. ಈ ವೇಳೆ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಗುರುತಿಸಿ ಟೋಕನ್​ ನೀಡಿ ಕಿಟ್​ ವಿತರಿಸುತ್ತಿದ್ದಾರೆ ಎಂದು ಜೆಡಿಎಸ್​, ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಸಲು ಹೋಬಳಿಯಿಂದ ಅವರ ಪರವಾಗಿ ಕಡಿಮೆ ಮತ ಬಿದ್ದಿದವು. ಹೀಗಾಗಿ ಶಾಸಕರು ತಮಗೆ ಮತ ಹಾಕಿದವರನ್ನು ಮಾತ್ರ ಗುರುತಿಸಿ ಕಿಟ್​ ವಿತರಿಸುತ್ತಿದ್ದಾರೆ ಎಂದಿದ್ದಾರೆ.

ಕಿಟ್​ ವಿತರಣೆ ವಿಚಾರದಲ್ಲಿ ಶಾಸಕರ ಬೆಂಬಲಿಗರು ಮತ್ತು ಇತರ ಪಕ್ಷಗಳ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶಾಸಕರು ತಮ್ಮ ಬೆಂಬಲಿಗರಿಗೆ ಮಾತ್ರ ಕಿಟ್​ ವಿತರಿಸುತ್ತಿದ್ದಾರೆ ಎಂದು ಆರೋಪಿಸಿದ ಜನರು, ಕಿಟ್​ ವಿತರಣಾ ಸ್ಥಳಕ್ಕೆ ಆಗಮಿಸಿ ತಾವಾಗಿಯೇ ಕಿಟ್​ಗಳನ್ನು ಕೊಂಡೊಯ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ, ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.