ETV Bharat / state

ಹೊಸಕೋಟೆ ಉಪ ಕಣ.. ನಾನಿದ್ದೇನೆ ಭಯಬೇಡ ಎಂದು ಎಂಟಿಬಿಗೆ ಅಭಯ ನೀಡಿದ ಸಿಎಂ.. - ನಾಗರಾಜ್​ ಸುದ್ದಿ

ಉಪ ಚುನಾವಣೆಯಲ್ಲಿ ಹೈವೋಲ್ಟೇಜ್​ ಕ್ಷೇತ್ರವಾಗಿ ಮಾರ್ಪಟ್ಟಿರುವ ಹೊಸಕೋಟೆಯಲ್ಲಿಂದು ಎಂಟಿಬಿ ಶಕ್ತಿ ಪ್ರದರ್ಶನ ಮಾಡಿದ್ದಾರೆ‌. ಸಿಎಂ ಬಿಎಸ್‌ವೈ ಸೇರಿದಂತೆ ಬಿಜೆಪಿ ಸಚಿವರು, ಶಾಸಕರನ್ನ ನಾಮಪತ್ರಕ್ಕೆ ಸಲ್ಲಿಸಲು ಕರೆಸುವುದರ ಮೂಲಕ ಎದುರಾಳಿಗಳ ವಿರುದ್ಧ ಬಲ ಪ್ರದರ್ಶನ ತೋರಿಸಿದ್ದಾರೆ.

ಎಂಟಿಬಿ ನಾಗರಾಜ್​ ನಾಮಪತ್ರ ಸಲ್ಲಿಕೆ
author img

By

Published : Nov 18, 2019, 9:59 PM IST

ಹೊಸಕೋಟೆ : ಉಪ ಚುನಾವಣೆಯಲ್ಲಿ ಹೈವೋಲ್ಟೇಜ್​ ಕ್ಷೇತ್ರವಾಗಿ ಮಾರ್ಪಟ್ಟಿರುವ ಹೊಸಕೋಟೆಯಲ್ಲಿಂದು ಎಂಟಿಬಿ ಶಕ್ತಿ ಪ್ರದರ್ಶನ ಮಾಡಿದ್ದಾರೆ‌. ಸಿಎಂ ಬಿಎಸ್‌ವೈ ಸೇರಿದಂತೆ ಬಿಜೆಪಿ ಸಚಿವರು ಶಾಸಕರನ್ನ ನಾಮಪತ್ರಕ್ಕೆ ಸಲ್ಲಿಸಲು ಕರೆಸುವುದರ ಮೂಲಕ ಎದುರಾಳಿಗಳ ವಿರುದ್ದ ಶಕ್ತಿ ಪ್ರದರ್ಶನ ತೋರಿದ್ದಾರೆ.

ಎಂಟಿಬಿ ನಾಗರಾಜ್​ ನಾಮಪತ್ರ ಸಲ್ಲಿಕೆ ವೇಳೆ ಸೇರಿದ ಬೆಂಬಲಿಗರು..

ಹೊಸಕೋಟೆಯಲ್ಲಿ ಈಗಾಗಲೇ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಹೀಗಾಗಿ ನಾಮಪತ್ರ ಹಾಕಲು ಕೊನೆಯ ದಿನವಾದ ಇಂದು ಎಂಟಿಬಿ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಭಾರಿಗೆ ನಾಮಪತ್ರ ಸಲ್ಲಿಸುವ ಹೆಸರಲ್ಲಿ ಭರ್ಜರಿ ಜನ ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೆಳಗ್ಗೆ ಕೆಇಬಿ ಸರ್ಕಲ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮುಖಾಂತರ ಸಚಿವ ಆರ್ ಅಶೋಕ್, ಸಂಸದ ಮುನಿಸ್ವಾಮಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೊತೆಯಲ್ಲಿ ಆಗಮಿಸಿದ ಎಂಟಿಬಿ ಎದುರಾಳಿಗಳಿಗೆ ಟಾಂಗ್ ನೀಡಿದ್ರು. ಅಲ್ಲದೆ ತಾನು ಮೈತ್ರಿ ಸರ್ಕಾರದಲ್ಲಿದ್ದಾಗ ಕಾಂಗ್ರೆಸ್‌ಗೆ ರಾಜೀನಾಮೆ ಕೊಡಲು ಇದ್ದ ಕಾರಣಗಳನ್ನ ಜನರ ಮುಂದೆ ಬಹಿರಂಗಪಡಿಸಿದ್ರು.
ತಡವಾಗಿ ಬಂದ ಸಿಎಂ ಯಡಿಯೂರಪ್ಪ ಪ್ರಚಾರದಲ್ಲಿ ಸೇರಿಕೊಂಡರು. ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್‌ವೈ ಬದಲಾವಣೆ ತರುವ ದೃಷ್ಟಿಯಿಂದ ಎಂಟಿಬಿ ರಾಜೀನಾಮೆ ಕೊಟ್ಟು ನಮ್ಮ ಜತೆ ಬಂದಿದ್ದಾರೆ. ಕೆಲ ನಾಯಕರು ದೊಂಬರಾಟ ಮಾಡ್ತಿದ್ದಾರೆ. ಯಾವುದೇ ಶಕ್ತಿ ಕೂಡ ಎಂಟಿಬಿ ಗೆಲವು ತಡೆಯಲು ಸಾಧ್ಯವಿಲ್ಲ ಎಂದ ಸಿಎಂ, ನಾನು ಯಾರ ಹೆಸರು ಹಿಡಿದು ಮಾತನಾಡಲ್ಲ. ಆದರೆ, ಪಕ್ಷಕ್ಕೆ ದ್ರೋಹ ಬಗೆದವರಿಗೆ ಯಾವತ್ತೂ ಒಳ್ಳೆಯದು ಆಗೋದಿಲ್ಲ ಎಂದು ಪರೋಕ್ಷವಾಗಿ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಬಿಎಸ್​ವೈ ಕಿಡಿಕಾರಿದರು. ಅಲ್ಲದೆ ಎಂಟಿಬಿ ಗೆದ್ದ 24 ಗಂಟೆಗಳಲ್ಲಿ ಒಳ್ಳೆಯ ಮಂತ್ರಿ ಆಗಿ ನಿಮ್ಮ ಕ್ಷೇತ್ರಕ್ಕೆ ಬರ್ತಾರೆ. ಎಂಟಿಬಿಯನ್ನ ಬೆಂಬಲಿಸಿ ಎಂದರು.

ಹೊಸಕೋಟೆ : ಉಪ ಚುನಾವಣೆಯಲ್ಲಿ ಹೈವೋಲ್ಟೇಜ್​ ಕ್ಷೇತ್ರವಾಗಿ ಮಾರ್ಪಟ್ಟಿರುವ ಹೊಸಕೋಟೆಯಲ್ಲಿಂದು ಎಂಟಿಬಿ ಶಕ್ತಿ ಪ್ರದರ್ಶನ ಮಾಡಿದ್ದಾರೆ‌. ಸಿಎಂ ಬಿಎಸ್‌ವೈ ಸೇರಿದಂತೆ ಬಿಜೆಪಿ ಸಚಿವರು ಶಾಸಕರನ್ನ ನಾಮಪತ್ರಕ್ಕೆ ಸಲ್ಲಿಸಲು ಕರೆಸುವುದರ ಮೂಲಕ ಎದುರಾಳಿಗಳ ವಿರುದ್ದ ಶಕ್ತಿ ಪ್ರದರ್ಶನ ತೋರಿದ್ದಾರೆ.

ಎಂಟಿಬಿ ನಾಗರಾಜ್​ ನಾಮಪತ್ರ ಸಲ್ಲಿಕೆ ವೇಳೆ ಸೇರಿದ ಬೆಂಬಲಿಗರು..

ಹೊಸಕೋಟೆಯಲ್ಲಿ ಈಗಾಗಲೇ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಹೀಗಾಗಿ ನಾಮಪತ್ರ ಹಾಕಲು ಕೊನೆಯ ದಿನವಾದ ಇಂದು ಎಂಟಿಬಿ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಭಾರಿಗೆ ನಾಮಪತ್ರ ಸಲ್ಲಿಸುವ ಹೆಸರಲ್ಲಿ ಭರ್ಜರಿ ಜನ ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೆಳಗ್ಗೆ ಕೆಇಬಿ ಸರ್ಕಲ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮುಖಾಂತರ ಸಚಿವ ಆರ್ ಅಶೋಕ್, ಸಂಸದ ಮುನಿಸ್ವಾಮಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೊತೆಯಲ್ಲಿ ಆಗಮಿಸಿದ ಎಂಟಿಬಿ ಎದುರಾಳಿಗಳಿಗೆ ಟಾಂಗ್ ನೀಡಿದ್ರು. ಅಲ್ಲದೆ ತಾನು ಮೈತ್ರಿ ಸರ್ಕಾರದಲ್ಲಿದ್ದಾಗ ಕಾಂಗ್ರೆಸ್‌ಗೆ ರಾಜೀನಾಮೆ ಕೊಡಲು ಇದ್ದ ಕಾರಣಗಳನ್ನ ಜನರ ಮುಂದೆ ಬಹಿರಂಗಪಡಿಸಿದ್ರು.
ತಡವಾಗಿ ಬಂದ ಸಿಎಂ ಯಡಿಯೂರಪ್ಪ ಪ್ರಚಾರದಲ್ಲಿ ಸೇರಿಕೊಂಡರು. ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್‌ವೈ ಬದಲಾವಣೆ ತರುವ ದೃಷ್ಟಿಯಿಂದ ಎಂಟಿಬಿ ರಾಜೀನಾಮೆ ಕೊಟ್ಟು ನಮ್ಮ ಜತೆ ಬಂದಿದ್ದಾರೆ. ಕೆಲ ನಾಯಕರು ದೊಂಬರಾಟ ಮಾಡ್ತಿದ್ದಾರೆ. ಯಾವುದೇ ಶಕ್ತಿ ಕೂಡ ಎಂಟಿಬಿ ಗೆಲವು ತಡೆಯಲು ಸಾಧ್ಯವಿಲ್ಲ ಎಂದ ಸಿಎಂ, ನಾನು ಯಾರ ಹೆಸರು ಹಿಡಿದು ಮಾತನಾಡಲ್ಲ. ಆದರೆ, ಪಕ್ಷಕ್ಕೆ ದ್ರೋಹ ಬಗೆದವರಿಗೆ ಯಾವತ್ತೂ ಒಳ್ಳೆಯದು ಆಗೋದಿಲ್ಲ ಎಂದು ಪರೋಕ್ಷವಾಗಿ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಬಿಎಸ್​ವೈ ಕಿಡಿಕಾರಿದರು. ಅಲ್ಲದೆ ಎಂಟಿಬಿ ಗೆದ್ದ 24 ಗಂಟೆಗಳಲ್ಲಿ ಒಳ್ಳೆಯ ಮಂತ್ರಿ ಆಗಿ ನಿಮ್ಮ ಕ್ಷೇತ್ರಕ್ಕೆ ಬರ್ತಾರೆ. ಎಂಟಿಬಿಯನ್ನ ಬೆಂಬಲಿಸಿ ಎಂದರು.

Intro:ಹೊಸಕೋಟೆ:

ಹೊಸಕೋಟೆಯಲ್ಲಿ ಕಾವೇರಿದ ಚುನಾವಣಾ ಕಣ, ಎಂಟಿಬಿಯಿಂದ ಶಕ್ತಿ ಪ್ರದರ್ಶನ
ನಾನಿದ್ದೇನೆ ಭಯಬೇಡ ಎಂಟಿಬಿ ಎಂದು ಅಭಯ ನೀಡಿದ ಬಿಎಸ್ ವೈ.


ರಾಜ್ಯ ಉಪ ಚುನಾವಣೆಯಲ್ಲಿ ಹೈವೊಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿರುವ ಹೊಸಕೋಟೆಯಲ್ಲಿಂದು ಎಂಟಿಬಿ ಶಕ್ತಿ ಪ್ರದರ್ಶನ ಮಾಡಿದ್ದಾರೆ‌. ಸಿಎಂ ಬಿಎಸ್ ವೈ ಬಿಜೆಪಿ ಸಚಿವರು ಶಾಸಕರನ್ನ ನಾಮಪತ್ರಕ್ಕೆ ಕರೆಸುವುದರ ಮೂಲಕ ಎದುರಾಳಿಗಳಿಗೆ ತೊಡೆತಟ್ಡಿದ್ದಾರೆ.

ಎಂಟಿಬಿ ಟಿ ಶರ್ಟ್ ಧರಿಸಿ ಸಾಗರೋಪದಿಯಲ್ಲಿ ಆಗಮಿಸುತ್ತಿರೋ ಅಭಿಮಾನಿಗಳು...... ಬಿಜೆಪಿ ಬಾವುಟವಿಡಿದು ಸೇರಿರುವ ಜನಸಮೂಹ..... ಒಂದ್ಕಡೆ ಎಂಟಿಬಿ ಪರ ಪ್ರಚಾರದಲ್ಲಿ ತೊಡಗಿರೋ ಬಿಜೆಪಿ ಸಚಿವರು ಹಾಗೂ ನಾಯಕರು....ಹೌದು ಅಂದಹಾಗೆ ಈ ಎಲ್ಲಾ ದೃಶ್ಯಗಳು ಇಂದು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಯಲ್ಲಿ. ಅಂದಹಾಗೆ ಹೊಸಕೋಟೆ ಯಲ್ಲಿ ಈಗಾಗಲೇ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಹೀಗಾಗಿ ನಾಮಪತ್ರ ಹಾಕಲು ಕೊನೆಯ ದಿನವಾದ ಇಂದು ಎಂಟಿಬಿ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಭಾರಿಗೆ ನಾಮಪತ್ರ ಸಲ್ಲಿಸುವ ಹೆಸರಲ್ಲಿ ಭರ್ಜರಿ ಜನ ಸೇರಿಸಿ ತಮ್ಮ ಶಕ್ತಿ ಪ್ರದರ್ಶನವನ್ನ ಮಾಡಿದ್ರು. ಬೆಳಗ್ಗೆ ಕೆಇಬಿ ಸರ್ಕಲ್ ನಿಂದ ತೆರೆದ ವಾಹನದಲ್ಲಿ ರ್ಯಾಲಿ ಮುಖಾಂತರ ಸಚಿವ ಆರ್.ಅಶೋಕ್, ಸಂಸದ ಮುನಿಸ್ವಾಮಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜತೆಯಲ್ಲಿ ಆಗಮಿಸಿದ ಎಂಟಿಬಿ ಎದುರಾಳಿಗಳಿಗೆ ಟಾಂಗ್ ನೀಡಿದ್ರು. ಅಲ್ಲದೆ ತಾನು ಮೈತ್ರಿ ಸರ್ಕಾರದಲ್ಲಿದ್ದಾಗ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟ ಕಾರಣಗಳನ್ನ ಜನರ ಮುಂದೆ ಬಹಿರಂಗಪಡಿಸಿದ್ರು.

ಇನ್ನೂ ತಾಲೂಕು ಕಚೇರಿ ವೃತ್ತದಿಂದ ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸಿ ತಾಲೂಕು ಕಛೇರಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ತಡವಾಗಿ ಬಂದ ಸಿಎಂ ಯಡಿಯೂರಪ್ಪ ಪ್ರಚಾರದ ಜತೆ ಗೂಡಿದ್ರು. ಇನ್ನೂ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್ ವೈ ಬದಲಾವಣೆ ತರುವ ದೃಷ್ಟಿಯಿಂದ ಎಂಟಿಬಿ ರಾಜೀನಾಮೆ ಕೊಟ್ಟು ನಮ್ಮ ಜತೆ ಬಂದ್ರು. ಕೆಲ ನಾಯಕರು ದೊಂಬರಾಟ ಮಾಡ್ತಿದ್ದಾರೆ. ಯಾವುದೇ ಶಕ್ತಿ ಕೂಡ ಎಂಟಿಬಿ ಗೆಲವು ತಡೆಯಲು ಸಾಧ್ಯವಿಲ್ಲ ಎಂದ ಸಿಎಂ ನಾನು ಯಾರ ಹೆಸರು ಹಿಡಿದು ಮಾತನಾಡಲ್ಲ. ಆದರೆ ಪಕ್ಷಕ್ಕೆ ದ್ರೋಹ ಬಗೆದವರಿಗೆ ಯಾವತ್ತು ಒಳ್ಳೆಯದು ಆಗೋದಿಲ್ಲ ಅಂತಾ ಪರೋಕ್ಷವಾಗಿ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಬಿಎಸ್ವೈ ಕಿಡಿಕಾರಿದ್ರು. ಅಲ್ಲದೆ ಎಂಟಿಬಿ ಗೆದ್ದ 24 ಗಂಟೆಗಳಲ್ಲಿ ಒಳ್ಳೆಯ ಮಂತ್ರಿ ಆಗಿ ನಿಮ್ಮ ಕ್ಷೇತ್ರಕ್ಕೆ ಬರ್ತಾರೆ. ಎಂಟಿಬಿಯನ್ನ ಬೆಂಬಲಿಸಿ ಎಂದ್ರು.


Body:ಇನ್ನೂ ಎಂಟಿಬಿಯನ್ನ ಪಕ್ಷಕ್ಕೆ ಕರೆದುಕೊಂಡು ಬರಲು ಪ್ರಮುಖ ಪಾತ್ರವಹಿಸಿದ ಸಚಿವ.ಆರ್ ಅಶೋಕ್ ಇಂದು ನಮ್ಮ‌ಸರ್ಕಾರ ಬರಬೇಕಾದ್ರೆ ಪ್ರಮುಖ ಕಾರಣ ಎಂಟಿಬಿ ನಾಗರಾಜ್, ಯಾರೇ ಪಕ್ಷ ಕ್ಕೆ ದ್ರೋಹ ಬಗೆದರು ಅಂತವರನ್ನ ಪಕ್ಷ‌ ಸಹಿಸಲ್ಲ ಅಂತಾ ಶರತ್ ಗೆ ಟಾಂಗ್ ನೀಡಿದ್ರು. ಅಲ್ಲದೆ ಆಪರೇಷನ್ ಕಮಲದ ವೇಳೆ 15 ದಿನಗಳ ಕಾಲ ರಾಜೀನಾಮೆ ಕೊಟ್ಟ ಶಾಸಕರ ನೊವ್ವಿನ ಬಗ್ಗೆ ಮೆಲುಕು ಹಾಕಿದ ಅಶೋಕ್ ಅನರ್ಹರಿಗೆ ಅನ್ಯಾಯವಾಗಲು ನಾನು ಬಿಡಲ್ಲ ಅಂತಾ ಗುಟುರು ಹಾಕಿದ್ರು.


Conclusion:ಒಟ್ಟಾರೆ ಎಂಟಿಬಿ ಸಿಎಂ ಹಾಗೂ ಬಿಜೆಪಿ ಮುಖಂಡರನ್ನ ಕರೆಸಿ ಶಕ್ತಿ ಪ್ರದರ್ಶನ ನಡೆಸುವ ಮುಖಾಂತರ ಪಕ್ಷೇತರ ಅಭ್ಯರ್ಥಿ ಶರತ್ ಗೆ ಟಾಂಗ್ ನೀಡಿದ್ದಾರೆ. ಇನ್ನೂ ಶರತ್ ನಿರ್ಧಾರದಿಂದ ಕ್ಷೇತ್ರದ ರಾಜಕೀಯದ ಕಾವು ಮತ್ತಷ್ಟು ಹೆಚ್ಚಾಗಿದ್ದು , ಜನ ಯಾರ ಪರ ನಿಲ್ಲಲಿದ್ದಾರೆ ಅನ್ನೂದನ್ನ ಕಾದು ನೋಡಬೇಕಿದೆ.

ಬೈಟ್: ಬಿ.ಎಸ್ ಯಡಿಯೂರಪ್ಪ, ಸಿಎಂ

ಬೈಟ್: ಎಂಟಿಬಿ ನಾಗರಾಜ್, ಬಿಜೆಪಿ ಅಭ್ಯರ್ಥಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.