ETV Bharat / state

ಪ್ರೇಮಿಗಳು ಆತ್ಮಹತ್ಯೆಗೆ ಶರಣು: ಬ್ಯಾಂಕ್​ನಲ್ಲಿ ಅರಳಿದ ಪ್ರೇಮ ರೆಸಾರ್ಟ್​ನಲ್ಲಿ ಅಂತ್ಯ!

author img

By

Published : Jul 4, 2019, 11:44 PM IST

ಧರ್ಮಪುರಿಯ ಆಕ್ಸಿಸ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದವರ ನಡುವೆ ಪ್ರೇಮ ಚಿಗುರೊಡೆದು ಅದು ಫಲಿಸದೆ ಪ್ರೇಮಿಗಳಿಬ್ಬರು ಬೆಂಗಳೂರಿಗೆ ಬಂದು ಗೋಲ್ಡನ್ ಫಾರ್ಮ್ ರೆಸಾರ್ಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೇಮಿಗಳು ಆತ್ಮಹತ್ಯೆಗೆ ಶರಣು

ನೆಲಮಂಗಲ: ಒಂದೇ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರು ಒಂದಾಗಿ ಬದುಕುವ ಕನಸು ಕಂಡಿದ್ದರು. ಮದುವೆಗೆ ಹೆತ್ತವರ ವಿರೋಧದಿಂದ ಬೇಸತ್ತ ಪ್ರೇಮಿಗಳು ರೆಸಾರ್ಟ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್​ ಠಾಣೆ

ಬೆಂಗಳೂರು ನಗರ ಹೊರವಲಯದ ಮಾದನಾಯಕನಹಳ್ಳಿಯ ಗೋಲ್ಡನ್ ಫಾರ್ಮ್ ರೆಸಾರ್ಟ್​ನಲ್ಲಿ ಈ ಘಟನೆ ನಡೆದಿದೆ. ಈ ಪ್ರೇಮಿಗಳು ತಮಿಳುನಾಡಿನ ಧರ್ಮಪುರಿಯ ಮೂಲದವರು. ಮೃತರನ್ನು ಶ್ರೀನಿವಾಸ್ ( 37), ಸತ್ಯಜ್ಯೋತಿ (27) ಎಂದು ಗುರುತಿಸಲಾಗಿದೆ.

ಈ ಪ್ರೇಮಿಗಳು ಧರ್ಮಪುರಿಯ ಆಕ್ಸಿಸ್ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸ್ ಸೀನಿಯರ್ ಅಸಿಸ್ಟೆಂಟ್ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್​​ನಲ್ಲಿ ಸತ್ಯಜ್ಯೋತಿ ಕ್ಯಾಶಿಯರ್ ಆಗಿದ್ದರು. ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕಳೆದ 10 ತಿಂಗಳಿಂದ ಇಬ್ಬರು ಪರಸ್ಪರ ಪ್ರೀತಿಸತೊಡಗಿದ್ದರು ಎನ್ನಲಾಗಿದೆ.

ಇದೇ ವೇಳೆ ಸತ್ಯಜ್ಯೋತಿಗೆ ಮದುವೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಈ ಹಿನ್ನೆಲೆ ಎರಡು ದಿನದ ಹಿಂದೆ ಮನೆ ಬಿಟ್ಟ ಪ್ರೇಮಿಗಳು ಧರ್ಮಪುರಿ ಎಸ್ಪಿ ಕಚೇರಿಗೆ ಭೇಟಿ ನೀಡಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ನಂತರ ಅಲ್ಲಿಂದ ಅವರಿಬ್ಬರು ಬೆಂಗಳೂರಿಗೆ ಬಂದಿದ್ದರು.

ನಿನ್ನೆ ಬೆಂ.ಉತ್ತರ ತಾಲೂಕು ನಗರೂರು ರಸ್ತೆಯ ಮಾದನಾಯಕನಹಳ್ಳಿಯಲ್ಲಿರುವ ಗೊಲ್ಡನ್ ಫಾರ್ಮ್​ ರೆಸಾರ್ಟ್​ನಲ್ಲಿ ತಂಗಿದ್ದರು. ರಾತ್ರಿ 9:30ಕ್ಕೆ ಚೆಕ್ ಇನ್ ಆದ ಜೋಡಿ ಬೆಳಿಗ್ಗೆಯಾದ್ರೂ ಹೊರಕ್ಕೆ ಬಂದಿರಲಿಲ್ಲ. ರೂಂ ಬಾಯ್ ಬಾಗಿಲು ತೆರದು ನೋಡಿದಾಗ ಅವರಿಬ್ಬರು ಆತ್ಮಹತ್ಯೆಗೆ ಶರಣಾಗಿರೋದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶ್ರೀನಿವಾಸ್​​ ಈ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳಿರುವ ಮಾಹಿತಿ ಇದೆ. ಪ್ರೇಮಿಗಳ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ನೆಲಮಂಗಲ: ಒಂದೇ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರು ಒಂದಾಗಿ ಬದುಕುವ ಕನಸು ಕಂಡಿದ್ದರು. ಮದುವೆಗೆ ಹೆತ್ತವರ ವಿರೋಧದಿಂದ ಬೇಸತ್ತ ಪ್ರೇಮಿಗಳು ರೆಸಾರ್ಟ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್​ ಠಾಣೆ

ಬೆಂಗಳೂರು ನಗರ ಹೊರವಲಯದ ಮಾದನಾಯಕನಹಳ್ಳಿಯ ಗೋಲ್ಡನ್ ಫಾರ್ಮ್ ರೆಸಾರ್ಟ್​ನಲ್ಲಿ ಈ ಘಟನೆ ನಡೆದಿದೆ. ಈ ಪ್ರೇಮಿಗಳು ತಮಿಳುನಾಡಿನ ಧರ್ಮಪುರಿಯ ಮೂಲದವರು. ಮೃತರನ್ನು ಶ್ರೀನಿವಾಸ್ ( 37), ಸತ್ಯಜ್ಯೋತಿ (27) ಎಂದು ಗುರುತಿಸಲಾಗಿದೆ.

ಈ ಪ್ರೇಮಿಗಳು ಧರ್ಮಪುರಿಯ ಆಕ್ಸಿಸ್ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸ್ ಸೀನಿಯರ್ ಅಸಿಸ್ಟೆಂಟ್ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್​​ನಲ್ಲಿ ಸತ್ಯಜ್ಯೋತಿ ಕ್ಯಾಶಿಯರ್ ಆಗಿದ್ದರು. ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕಳೆದ 10 ತಿಂಗಳಿಂದ ಇಬ್ಬರು ಪರಸ್ಪರ ಪ್ರೀತಿಸತೊಡಗಿದ್ದರು ಎನ್ನಲಾಗಿದೆ.

ಇದೇ ವೇಳೆ ಸತ್ಯಜ್ಯೋತಿಗೆ ಮದುವೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಈ ಹಿನ್ನೆಲೆ ಎರಡು ದಿನದ ಹಿಂದೆ ಮನೆ ಬಿಟ್ಟ ಪ್ರೇಮಿಗಳು ಧರ್ಮಪುರಿ ಎಸ್ಪಿ ಕಚೇರಿಗೆ ಭೇಟಿ ನೀಡಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ನಂತರ ಅಲ್ಲಿಂದ ಅವರಿಬ್ಬರು ಬೆಂಗಳೂರಿಗೆ ಬಂದಿದ್ದರು.

ನಿನ್ನೆ ಬೆಂ.ಉತ್ತರ ತಾಲೂಕು ನಗರೂರು ರಸ್ತೆಯ ಮಾದನಾಯಕನಹಳ್ಳಿಯಲ್ಲಿರುವ ಗೊಲ್ಡನ್ ಫಾರ್ಮ್​ ರೆಸಾರ್ಟ್​ನಲ್ಲಿ ತಂಗಿದ್ದರು. ರಾತ್ರಿ 9:30ಕ್ಕೆ ಚೆಕ್ ಇನ್ ಆದ ಜೋಡಿ ಬೆಳಿಗ್ಗೆಯಾದ್ರೂ ಹೊರಕ್ಕೆ ಬಂದಿರಲಿಲ್ಲ. ರೂಂ ಬಾಯ್ ಬಾಗಿಲು ತೆರದು ನೋಡಿದಾಗ ಅವರಿಬ್ಬರು ಆತ್ಮಹತ್ಯೆಗೆ ಶರಣಾಗಿರೋದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶ್ರೀನಿವಾಸ್​​ ಈ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳಿರುವ ಮಾಹಿತಿ ಇದೆ. ಪ್ರೇಮಿಗಳ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Intro:ರೆಸಾರ್ಟ್ ನಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣು

ಬ್ಯಾಂಕ್ ನಲ್ಲಿ ಅರಳಿದ ಪ್ರೇಮ ರೆಸಾರ್ಟ್ ನಲ್ಲಿ ಅಂತ್ಯ.
Body:ನೆಲಮಂಗಲ : ಒಂದೇ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರು ಒಂದಾಗಿ ಬದುಕು ಕನಸು ಕಂಡಿದ್ದರು. ಮದುವೆಗೆ ಹೆತ್ತವರ ವಿರೋಧದಿಂದ ಬೇಸತ್ತ ಪ್ರೇಮಿಗಳು ರೆಸಾರ್ಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರು ನಗರ ಹೊರವಲಯದ ಮಾದನಾಯಕನಹಳ್ಳಿಯ ಗೋಲ್ಡನ್ ಫಾಂ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ. ಮೃತ ಪ್ರೇಮಿಗಳು ತಮಿಳುನಾಡಿನ ಧರ್ಮಪುರಿಯ ಮೂಲದವರು. ಮೃತರನ್ನು ಶ್ರೀನಿವಾಸ್ ( 37) ಸತ್ಯಜ್ಯೋತಿ (27) ಗುರುತಿಸಲಾಗಿದೆ.


ಮೃತ ಪ್ರೇಮಿಗಳು ಧರ್ಮಪುರಿಯ ಆಕ್ಸಿಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸ್ ಸೀನಿಯರ್ ಅಸಿಸ್ಟೆಂಟ್ ಮ್ಯಾನೆಜರ್ ಕೆಲಸ ಮಾಡುತ್ತಿದ್ದಾರೆ. ಅದೇ ಬ್ಯಾಂಕ್ ನಲ್ಲಿ ಸತ್ಯಜ್ಯೋತಿ ಕ್ಯಾಶಿಯರ್ ಆಗಿದ್ದರು. ಒಂದೇ ಕಡೇ ಕೆಲಸ ಮಾಡುತ್ತಿದ್ದರಿಂದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕಳೆದ 10 ತಿಂಗಳಿಂದ ಇಬ್ಬರ ಪರಸ್ಪರ ಪ್ರೀತಿಸ ತೊಡಗಿದ್ದರು.

ಇದೇ ವೇಳೆ ಸತ್ಯಜ್ಯೋತಿಗೆ ಮದುವೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಈ ಹಿನ್ನೆಲೆ ಎರಡು ದಿನದ ಹಿಂದೆ ಮನೆ ಬಿಟ್ಟ ಪ್ರೇಮಿಗಳು ಧರ್ಮಪುರಿ ಎಸ್ಪಿ ಭೇಟಿ ನೀಡಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿಂದ ಅವರಿಬ್ಬರು ಬೆಂಗಳೂರಿಗೆ ಬಂದಿದ್ದರು.

ನಿನ್ನೆ ಬೆಂ.ಉತ್ತರ ತಾಲ್ಲೂಕು ನಗರೂರು ರಸ್ತೆಯ ಮಾದನಾಯಕನಹಳ್ಳಿಯಲ್ಲಿರುವ ಗೊಲ್ಡನ್ ಫಾಂ ರೆಸಾರ್ಟ್ ನಲ್ಲಿ ತಂಗಿಂದ್ದರು
ರಾತ್ರಿ 9:30 ಗೆ ಚೆಕ್ ಇನ್ ಆದ ಜೋಡಿ ಬೆಳಿಗ್ಗೆಯಾದ್ರೂ ಹೊರ ಕ್ಕೆ ಬಂದಿರಲಿಲ್ಲ.
ರೂಂ ಬಾಯ್ ಬಾಗಿಲು ತೆರಿದು ನೋಡಿದಾಗ ಅವರಿಬ್ಬರು ಆತ್ಮಹತ್ಯೆಗೆ ಶರಣಾಗಿರೋದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಶ್ರೀನಿವಾಸನ್ ಈ ಹಿಂದೆ ಮದುವೆಯಾಗಿದ್ದು ಎರಡು ಮಕ್ಕಳಿರುವ ಮಾಹಿತಿ ಇದೆ. ಪ್ರೇಮಿಗಳ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.