ದೇವನಹಳ್ಳಿ: ರಾತ್ರಿ ಸುರಿದ ಮಳೆಗೆ ಫಸಲಿಗೆ ಬಂದಿದ್ದ ದ್ರಾಕ್ಷಿ ತೋಟ ಚಪ್ಪರ ಸಮೇತ ಕುಸಿದು ಬಿದ್ದಿರುವ ಘಟನೆ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ನಡೆದಿದೆ.
ದೇವನಹಳ್ಳಿಯಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರೈತ ದೇವರಾಜು ಎಂಬುವರಿಗೆ ಸೇರಿದ ದ್ರಾಕ್ಷಿ ತೋಟ ನೆಲಕ್ಕುರುಳಿದೆ. ಒಂದು ವಾರದಲ್ಲಿ ಈ ದ್ರಾಕ್ಷಿಯನ್ನು ಕೊಯ್ಲು ಮಾಡಬೇಕಾಗಿತ್ತು. ರಾತ್ರಿಯ ಮಳೆಗೆ ಕಲ್ಲಿನ ಕಂಬ ಮುರಿದು ಬಿದ್ದಿದ್ದು ಇಡೀ ದ್ರಾಕ್ಷಿ ತೋಟದ ಚಪ್ಪರವೇ ನೆಲಕಚ್ಚಿದೆ.
ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು. ಕೊರೊನಾದಿಂದ ಬಚಾವ್ ಆಗಿ ಇನ್ನೇನು ದ್ರಾಕ್ಷಿ ಬೆಳೆಗೆ ಮಾರುಕಟ್ಟೆ ಸಿಗುತ್ತಿದ್ದ ವೇಳೆಗೆ ಮಳೆಯ ಆರ್ಭಟಕ್ಕೆ ದ್ರಾಕ್ಷಿ ಬೆಳೆ ನಾಶವಾಗಿದೆ, ಒಂದೆಡೆ ದ್ರಾಕ್ಷಿ ಬೆಳೆ ನಾಶವಾಗಿದ್ದಲ್ಲದೆ ತೋಟ ಸಹ ಸಂಪೂರ್ಣವಾಗಿ ನಾಶವಾಗಿದ್ದಾರಿಂದ ರೈತ ಕಂಗಲಾಗಿದ್ದಾನೆ.