ETV Bharat / state

ಗಾಂಧಿ ಜಯಂತಿ ಪ್ರಯುಕ್ತ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ ತ್ರಿಚಕ್ರ ವಾಹನ ವಿತರಣೆ - nelamagala

ಗಾಂಧಿ ಜಯಂತಿ ಹಿನ್ನೆಲೆ ಹೆಸರಘಟ್ಟ ಬಳಿ ಇರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಯ ಇಬ್ಬರು ತರಕಾರಿ ಮಾರಾಟಗಾರರಿಗೆ ನೂತನ ಅವಿಷ್ಕಾರದ ಸೌರಶಕ್ತಿ ಚಾಲಿತ ತ್ರಿಚಕ್ರ ವಾಹನ ವಿತರಿಸಲಾಯಿತು.

gandhi jayanti celebration
ಹಣ್ಣು ಮತ್ತು ತರಕಾರಿ ಮಾರಾಟಗಾರರಿಗೆ ಸೌರಶಕ್ತಿ ಆಧಾರಿತ ತ್ರಿಚಕ್ರ ಗಾಡಿ ವಿತರಣೆ
author img

By

Published : Oct 3, 2020, 9:24 AM IST

ನೆಲಮಂಗಲ: ಸಮಾನತೆ ಮತ್ತು ದಮನಿತರ ಉದ್ಧಾರಕ್ಕೆ ಹೆಚ್ಚು ಒತ್ತು ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 151ನೇ ಜಯಂತಿಯನ್ನು ಹೆಸರಘಟ್ಟ ಬಳಿ ಇರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.

ಹಣ್ಣು ಮತ್ತು ತರಕಾರಿ ಮಾರಾಟಗಾರರಿಗೆ ಸೌರಶಕ್ತಿ ಆಧಾರಿತ ತ್ರಿಚಕ್ರ ವಾಹನ ವಿತರಣೆ

ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಯ ಇಬ್ಬರು ತರಕಾರಿ ಮಾರಾಟಗಾರರಿಗೆ ನೂತನ ಅವಿಷ್ಕಾರದ ಸೌರಶಕ್ತಿ ಚಾಲಿತ ತ್ರಿಚಕ್ರ ವಾಹನ ವಿತರಣೆ ಮಾಡಿ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಿದರು. ಐ.ಐ.ಹೆಚ್.ಆರ್​.ನ ನಿರ್ದೇಶಕ ಡಾ. ಎಂ.ಆರ್.ದಿನೇಶ್ ಮತ್ತು ನಾಮ ನಿದೇರ್ಶಿತ ನಿರ್ವಹಣಾ ಕಮಿಟಿಯ ಸದಸ್ಯರಾದ ಡಾ. ಪ್ರಭಾಕರ್ ಮತ್ತು ಶಿವಪ್ರಸಾದ್ ಧ್ವಜರೋಹಣ ಮಾಡಿ, ಮಹಾತ್ಮನಿಗೆ ಪುಷ್ಪ ನಮನ ಸಲ್ಲಿಸಿ ಗಾಂಧಿ ಜಯಂತಿ ಆಚರಣೆಗೆ ಚಾಲನೆ ನೀಡಿದರು.

ತುಮಕೂರಿನ ಶಿರಾ ತಾಲೂಕಿನ ಯರಾಡಕಟ್ಟೆ ತರಕಾರಿ ಮಾರಾಟಗಾರ ರೈತ ಕರ್ಣಾ ಹಾಗೂ ಐವರಕಂಡಪುರದ ತರಕಾರಿ ಮಾರಾಟಗಾರ ವಿಜಯ್ ಕುಮಾರ್​ಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು.

ನೆಲಮಂಗಲ: ಸಮಾನತೆ ಮತ್ತು ದಮನಿತರ ಉದ್ಧಾರಕ್ಕೆ ಹೆಚ್ಚು ಒತ್ತು ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 151ನೇ ಜಯಂತಿಯನ್ನು ಹೆಸರಘಟ್ಟ ಬಳಿ ಇರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.

ಹಣ್ಣು ಮತ್ತು ತರಕಾರಿ ಮಾರಾಟಗಾರರಿಗೆ ಸೌರಶಕ್ತಿ ಆಧಾರಿತ ತ್ರಿಚಕ್ರ ವಾಹನ ವಿತರಣೆ

ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಯ ಇಬ್ಬರು ತರಕಾರಿ ಮಾರಾಟಗಾರರಿಗೆ ನೂತನ ಅವಿಷ್ಕಾರದ ಸೌರಶಕ್ತಿ ಚಾಲಿತ ತ್ರಿಚಕ್ರ ವಾಹನ ವಿತರಣೆ ಮಾಡಿ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಿದರು. ಐ.ಐ.ಹೆಚ್.ಆರ್​.ನ ನಿರ್ದೇಶಕ ಡಾ. ಎಂ.ಆರ್.ದಿನೇಶ್ ಮತ್ತು ನಾಮ ನಿದೇರ್ಶಿತ ನಿರ್ವಹಣಾ ಕಮಿಟಿಯ ಸದಸ್ಯರಾದ ಡಾ. ಪ್ರಭಾಕರ್ ಮತ್ತು ಶಿವಪ್ರಸಾದ್ ಧ್ವಜರೋಹಣ ಮಾಡಿ, ಮಹಾತ್ಮನಿಗೆ ಪುಷ್ಪ ನಮನ ಸಲ್ಲಿಸಿ ಗಾಂಧಿ ಜಯಂತಿ ಆಚರಣೆಗೆ ಚಾಲನೆ ನೀಡಿದರು.

ತುಮಕೂರಿನ ಶಿರಾ ತಾಲೂಕಿನ ಯರಾಡಕಟ್ಟೆ ತರಕಾರಿ ಮಾರಾಟಗಾರ ರೈತ ಕರ್ಣಾ ಹಾಗೂ ಐವರಕಂಡಪುರದ ತರಕಾರಿ ಮಾರಾಟಗಾರ ವಿಜಯ್ ಕುಮಾರ್​ಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.