ETV Bharat / state

ಸೌಮ್ಯ ರೆಡ್ಡಿ ಮೇಲಿನ ದೂರು ಹಿಂಪಡೆಯದಿದ್ರೆ ಉಗ್ರ ಹೋರಾಟ: ಕಾಂಗ್ರೆಸ್ ಎಚ್ಚರಿಕೆ

ಕೇಂದ್ರದ ತಾಳಕ್ಕೆ ರಾಜ್ಯ ಸರ್ಕಾರ ಕುಣಿಯುತ್ತಿದೆ. ರೈತ ನೆಲ‌ ಕಳೆದುಕೊಳ್ಳುವ ಕುಣಿಕೆಯಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕಾಯ್ದೆಗಳನ್ನು ತಂದು ದೇಶವನ್ನು ಶತಮಾನಗಳ ಹಿಂದಕ್ಕೆ ದೂಡಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

author img

By

Published : Jan 28, 2021, 7:45 PM IST

Updated : Jan 28, 2021, 9:21 PM IST

Congress
ಡಾ.ರಾಮಚಂದ್ರ ರೆಡ್ಡಿ

ಬೆಂಗಳೂರು: ಕೇಂದ್ರದ ತಾಳಕ್ಕೆ ರಾಜ್ಯ ಸರ್ಕಾರ ಕುಣಿಯುತ್ತಿದೆ. ರೈತ ನೆಲ‌ ಕಳೆದುಕೊಳ್ಳುವ ಕುಣಿಕೆಯಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತರುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ. ರಾಮಚಂದ್ರ ರೆಡ್ಡಿ ದೂರಿದ್ದಾರೆ.

ಆನೇಕಲ್ ಶಾಸಕ ಬಿ.ಶಿವಣ್ಣ ಮನೆಯಲ್ಲಿ ಮಾತನಾಡಿದ ಅವರು, ಸೌಮ್ಯ ರೆಡ್ಡಿ ಮನೆತನ ಹಾಗೂ ಅವರ ತಂದೆ ಸರಳ ಸಜ್ಜನಿಕೆಗೆ ಹೆಸರಾದವರು. ಇತ್ತೀಚೆಗೆ ಕಾಂಗ್ರೆಸ್​ನಲ್ಲಿ ಗಟ್ಟಿ ದನಿಯಾಗಿ ಪ್ರಬುದ್ಧವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ಸಹಿಸದ ಆಡಳಿತರೂಢ ಬಿಜೆಪಿ ಸರ್ಕಾರ ಶಾಸಕಿಯ ಮೇಲೆ ದೂರು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇದು ಹೀಗೇ ಮುಂದುವರೆದರೆ ಕಾಂಗ್ರೆಸ್ ಹೋರಾಟಕ್ಕೆ ಇಳಿಯುವ ಎಚ್ಚರಿಕೆ ನೀಡಿದರು.

ಸೌಮ್ಯ ರೆಡ್ಡಿ ಮೇಲಿನ ದೂರು ಹಿಂಪಡೆಯದಿದ್ರೆ ಉಗ್ರ ಹೋರಾಟ: ಕಾಂಗ್ರೆಸ್ ಎಚ್ಚರಿಕೆ

ಕೇಂದ್ರದ ತಾಳಕ್ಕೆ ರಾಜ್ಯ ಸರ್ಕಾರ ಕುಣಿಯುತ್ತಿದೆ. ರೈತ ನೆಲ‌ ಕಳೆದುಕೊಳ್ಳುವ ಕುಣಿಕೆಯಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕಾಯ್ದೆಗಳನ್ನು ತಂದು ದೇಶವನ್ನು ಶತಮಾನಗಳ ಹಿಂದಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಅಧಿವೇಶನ ನಡೆಸದೇ ನಿರ್ಲಕ್ಷ್ಯ: ಸದನದಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ

ಕಾಂಗ್ರೆಸ್ ರೈತ ಹೋರಾಟಕ್ಕೆ ಕರೆ ನೀಡಿದ್ದ ಸಂದರ್ಭದಲ್ಲಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಗೃಹರಕ್ಷಕ ದಳದ ಸಿಬ್ಬಂದಿಯ ಮೇಲೆ‌ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರು ಸುದ್ದಿಗೋಷ್ಠಿ ನಡೆಸಿದರು.

ಬೆಂಗಳೂರು: ಕೇಂದ್ರದ ತಾಳಕ್ಕೆ ರಾಜ್ಯ ಸರ್ಕಾರ ಕುಣಿಯುತ್ತಿದೆ. ರೈತ ನೆಲ‌ ಕಳೆದುಕೊಳ್ಳುವ ಕುಣಿಕೆಯಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತರುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ. ರಾಮಚಂದ್ರ ರೆಡ್ಡಿ ದೂರಿದ್ದಾರೆ.

ಆನೇಕಲ್ ಶಾಸಕ ಬಿ.ಶಿವಣ್ಣ ಮನೆಯಲ್ಲಿ ಮಾತನಾಡಿದ ಅವರು, ಸೌಮ್ಯ ರೆಡ್ಡಿ ಮನೆತನ ಹಾಗೂ ಅವರ ತಂದೆ ಸರಳ ಸಜ್ಜನಿಕೆಗೆ ಹೆಸರಾದವರು. ಇತ್ತೀಚೆಗೆ ಕಾಂಗ್ರೆಸ್​ನಲ್ಲಿ ಗಟ್ಟಿ ದನಿಯಾಗಿ ಪ್ರಬುದ್ಧವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ಸಹಿಸದ ಆಡಳಿತರೂಢ ಬಿಜೆಪಿ ಸರ್ಕಾರ ಶಾಸಕಿಯ ಮೇಲೆ ದೂರು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇದು ಹೀಗೇ ಮುಂದುವರೆದರೆ ಕಾಂಗ್ರೆಸ್ ಹೋರಾಟಕ್ಕೆ ಇಳಿಯುವ ಎಚ್ಚರಿಕೆ ನೀಡಿದರು.

ಸೌಮ್ಯ ರೆಡ್ಡಿ ಮೇಲಿನ ದೂರು ಹಿಂಪಡೆಯದಿದ್ರೆ ಉಗ್ರ ಹೋರಾಟ: ಕಾಂಗ್ರೆಸ್ ಎಚ್ಚರಿಕೆ

ಕೇಂದ್ರದ ತಾಳಕ್ಕೆ ರಾಜ್ಯ ಸರ್ಕಾರ ಕುಣಿಯುತ್ತಿದೆ. ರೈತ ನೆಲ‌ ಕಳೆದುಕೊಳ್ಳುವ ಕುಣಿಕೆಯಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕಾಯ್ದೆಗಳನ್ನು ತಂದು ದೇಶವನ್ನು ಶತಮಾನಗಳ ಹಿಂದಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಅಧಿವೇಶನ ನಡೆಸದೇ ನಿರ್ಲಕ್ಷ್ಯ: ಸದನದಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ

ಕಾಂಗ್ರೆಸ್ ರೈತ ಹೋರಾಟಕ್ಕೆ ಕರೆ ನೀಡಿದ್ದ ಸಂದರ್ಭದಲ್ಲಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಗೃಹರಕ್ಷಕ ದಳದ ಸಿಬ್ಬಂದಿಯ ಮೇಲೆ‌ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರು ಸುದ್ದಿಗೋಷ್ಠಿ ನಡೆಸಿದರು.

Last Updated : Jan 28, 2021, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.