ETV Bharat / state

ದಾಂಪತ್ಯದಲ್ಲಿ ವಿರಸ: ಇಬ್ಬರು ಮಕ್ಕಳೊಂದಿಗೆ ಪತ್ನಿ ನಾಪತ್ತೆ

author img

By

Published : Aug 4, 2019, 1:46 PM IST

ಗಂಡನೊಂದಿಗೆ ಮುನಿಸಿಕೊಂಡ ಹೆಂಡತಿ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆ ಬಿಟ್ಟು ನಾಪತ್ತೆಯಾದ ಘಟನೆ ಬೆಂಗಳೂರು ಗ್ರಾಮಂತರ ಜಿಲ್ಲೆ ತ್ಯಾಮಗೊಂಡ್ಲು ಪಟ್ಟಣದ ಹೊಸ ಕಾಲೊನಿಯಲ್ಲಿ ನಡೆದಿದೆ.

ಪತಿಯೊಂದಿಗೆ ಮುನಿಸು ಇಬ್ಬರು ಮಕ್ಕಳೊಂದಿಗೆ ಪತ್ನಿ ನಾಪತ್ತೆ

ನೆಲಮಂಗಲ : ಗಂಡ ಹೆಂಡತಿಯ ವಿರಸದಿಂದ ಬೇಸತ್ತ ಪತ್ನಿ ತನ್ನಿಬ್ಬರು ಹೆಣ್ಣು ಮಕ್ಕಳ ಜೊತೆ ನಾಪತ್ತೆಯಾದ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ಹೊಸ ಕಾಲೊನಿಯಲ್ಲಿ ನಡೆದಿದೆ.

ಹೊಸ ಕಾಲೊನಿ ನಿವಾಸಿ ಅನಿಲ್ ಕುಮಾರ್ ಪತ್ನಿ ಪುಷ್ಪ (28) ಮಕ್ಕಳಾದ ಭೂಮಿಕಾ (7) ಮತ್ತು ನಾಗಶ್ರೀ (6) ಕಾಣೆಯಾದವರು.

ಜುಲೈ 27ರಂದು ಮನೆಯಿಂದ ಹೊರ ಹೋದ ಇವರು ಇದುವರೆಗೂ ಪತ್ತೆಯಾಗಿಲ್ಲ. ತಾಯಿ ಮಕ್ಕಳ ನಾಪತ್ತೆಗೆ ಪತಿ ಅನಿಲ್ ಕುಮಾರ್ ಮತ್ತು ಪತ್ನಿ ಪುಷ್ಪ ನಡುವಿನ ವಿರಸವೇ ಕಾರಣ ಎಂದು ಹೇಳಲಾಗುತ್ತಿದೆ.

ಸಾರ್ವಜನಿಕರಲ್ಲಿ ಮನವಿ:

ಕಾಣೆಯಾದ ಪುಷ್ಪ 4.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡು ಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾರೆ. ಭೂಮಿಕಾ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಮೂರು ಅಡಿ ಎತ್ತರ ಇದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ಬಿಳಿ ಮೈಬಣ್ಣ, ನಾಗಶ್ರೀ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದು 2.5 ಅಡಿ ಎತ್ತರ ಇದ್ದಾಳೆ. ಇವರ ಬಗ್ಗೆ ಮಾಹಿತಿ ದೊರೆತರೆ ತ್ಯಾಮಗೊಂಡ್ಲು ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

ಮೊಬೈಲ್ - 9480802463

ನೆಲಮಂಗಲ : ಗಂಡ ಹೆಂಡತಿಯ ವಿರಸದಿಂದ ಬೇಸತ್ತ ಪತ್ನಿ ತನ್ನಿಬ್ಬರು ಹೆಣ್ಣು ಮಕ್ಕಳ ಜೊತೆ ನಾಪತ್ತೆಯಾದ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ಹೊಸ ಕಾಲೊನಿಯಲ್ಲಿ ನಡೆದಿದೆ.

ಹೊಸ ಕಾಲೊನಿ ನಿವಾಸಿ ಅನಿಲ್ ಕುಮಾರ್ ಪತ್ನಿ ಪುಷ್ಪ (28) ಮಕ್ಕಳಾದ ಭೂಮಿಕಾ (7) ಮತ್ತು ನಾಗಶ್ರೀ (6) ಕಾಣೆಯಾದವರು.

ಜುಲೈ 27ರಂದು ಮನೆಯಿಂದ ಹೊರ ಹೋದ ಇವರು ಇದುವರೆಗೂ ಪತ್ತೆಯಾಗಿಲ್ಲ. ತಾಯಿ ಮಕ್ಕಳ ನಾಪತ್ತೆಗೆ ಪತಿ ಅನಿಲ್ ಕುಮಾರ್ ಮತ್ತು ಪತ್ನಿ ಪುಷ್ಪ ನಡುವಿನ ವಿರಸವೇ ಕಾರಣ ಎಂದು ಹೇಳಲಾಗುತ್ತಿದೆ.

ಸಾರ್ವಜನಿಕರಲ್ಲಿ ಮನವಿ:

ಕಾಣೆಯಾದ ಪುಷ್ಪ 4.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡು ಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾರೆ. ಭೂಮಿಕಾ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಮೂರು ಅಡಿ ಎತ್ತರ ಇದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ಬಿಳಿ ಮೈಬಣ್ಣ, ನಾಗಶ್ರೀ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದು 2.5 ಅಡಿ ಎತ್ತರ ಇದ್ದಾಳೆ. ಇವರ ಬಗ್ಗೆ ಮಾಹಿತಿ ದೊರೆತರೆ ತ್ಯಾಮಗೊಂಡ್ಲು ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

ಮೊಬೈಲ್ - 9480802463

Intro:ಗಂಡನೊಂದಿಗೆ ಮುನಿಸು ಇಬ್ಬರು ಹೆಣ್ಣು ಮಕ್ಕಳ ಜೊತೆ ಪತಿ ನಾಪತ್ತೆ
Body:ನೆಲಮಂಗಲ : ಗಂಡ ಹೆಂಡತಿಯ ವಿರಸದಿಂದ ಬೇಸತ್ತ ಹೆಂಡತಿ ಇಬ್ಬರು ಹೆಣ್ಣು ಮಕ್ಕಳ ಜೊತೆ ನಾಪತ್ತೆಯಾಗಿದ್ದು. ಮೂವರು ಕಾಣೆಯಾಗಿ ವಾರವಾದ್ರು ಇಲ್ಲಿಯವರೆಗೂ ಪತ್ತೆಯಾಗಿಲ್ಲ.


ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ಹೊಸಕಾಲೋನಿಯ ನಿವಾಸಿಯಾದ ಅನಿಲ್ ಕುಮಾರ್ ಪತ್ನಿ ಪುಷ್ಪ (28) ಮಕ್ಕಳಾದ ಭೂಮಿಕಾ (7) ನಾಗಶ್ರೀ (6) ಕಾಣೆಯಾದ ವ್ಯಕ್ತಿಗಳು ಜುಲೈ 27ರಂದು ಮನೆಯಿಂದ ಹೊರ ಹೋದವರು ಇಲ್ಲಿಯವರೆಗೂ ಪತ್ತೆಯಾಗಿಲ್ಲ.

ಘಟನೆ ಹಿನ್ನೆಲೆ

ತ್ಯಾಮಗೊಂಡ್ಲು ಹೊಸಕಾಲೋನಿಯ ಅನಿಲ್ ಕುಮಾರ್ ಮತ್ತು ಪುಷ್ಪ ದಂಪತಿ ವಾಸವಾಗಿದ್ದರು. ಇವರಿಗೂ ಭೂಮಿಕಾ ಮತ್ತು ನಾಗಶ್ರೀ ಹೆಣ್ಣು ಮಕ್ಕಳಿದ್ದರು. ಗಂಡ ಅನಿಲ್ ಕುಮಾರ್ ಕೂಲಿ ಕೆಲಸಕ್ಕೆ ಹೋದ್ರೆ ಹೆಂಡತಿ ಗಾರ್ಮೆಂಟ್ಸ್ ಹೋಗುತ್ತಿದ್ದರು. ಜುಲೈ 27 ರಂದು ಅನಿಲ್ ಕುಮಾರ್ ಕೆಲಸಕ್ಕೆಂದು ಮನೆಯಿಂದ ಹೊರಹೋದಾಗ. ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಆಟೋದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಪಕ್ಕದ ಮನೆಯ ಜಗದೀಶ ಮನೆಯಿಂದ ಹೊರ ಹೋದ ಬಗ್ಗೆ ಗಂಡ ಅನಿಲ್ ಕುಮಾರ್ ಗೆ ಹೇಳಿದ್ದಾನೆ ತಕ್ಷಣವೇ ಅನಿಲ್ ಹೆಂಡತಿ ಪುಷ್ಪ ಗೆ ಪೋನ್ ಮಾಡಿದ್ದಾನೆ. ಕರೆ ಸ್ವೀಕರಿಸಿ ನನಗೆ ಪೋನ್ ಮಾಡ್ಬೇಡಾ ಸೀಮ್ ಮುರಿದು ಹಾಕುವುದ್ದಾಗಿ ಹೇಳಿ ಪೋನ್ ಕಟ್ ಮಾಡಿದ್ದಾಳೆ. ಮತ್ತೆ ಕರೆ ಮಾಡಿದ್ದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಮನೆಗೆ ಬಂದು ನೋಡಿದಾಗ ಹೊಲಿಗೆ ಮಿಷಿನ್ ಮತ್ತು ಬಟ್ಟೆಗಳು ಸಹ ಇರಲಿಲ್ಲ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದ್ದಾಗ ಹೆಂಡತಿ ಮಕ್ಕಳ ಪತ್ತೆಯಾಗಿಲ್ಲ. ಇದರಿಂದ ಭಯಗೊಂಡ ಅನಿಲ್ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ.

ನಾಪತ್ತೆಯಾದವರ ಚಹರೆ

ಕಾಣೆಯಾದ ಪುಷ್ಪ 4.5 ಅಡಿ ಎತ್ತರವಿದ್ದು ಸಾಧಾರಣ ಮೈಕಟ್ಟು, ದುಂಡುಮುಖ, ಬಿಳಿ ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಭೂಮಿಕಾ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಮೂರು ಅಡಿ ಎತ್ತರ ಇದ್ದು, ಸಾಧಾರಣ ಮೈಕಟ್ಟು, ದುಂಡುಮುಖ, ಬಿಳಿ ಮೈಬಣ್ಣ, ನಾಗಶ್ರೀ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದು 2.5 ಅಡಿ ಎತ್ತರ ಇದ್ದಾಳೆ. ಇವರ ಬಗ್ಗೆ ಮಾಹಿತಿ ಸಿಕ್ಕರೆ ತ್ಯಾಮಗೊಂಡ್ಲು ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ
ಮೊಬೈಲ್ - 9480802463

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.