ನೆಲಮಂಗಲ : ಪವನ ವಿದ್ಯುತ್ ಯಂತ್ರದ ರೆಕ್ಕೆಗಳನ್ನ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿಂಡ್ ಪವರ್ ರೆಕ್ಕೆಗಳು ಹಿಂದಿದ್ದ ಲಾರಿಯ ಮುಂಭಾಗದಿಂದ ತೂರಿ ಹೊರ ಬಂದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
![A terrible accident in Doddaballapura](https://etvbharatimages.akamaized.net/etvbharat/prod-images/kn-bng-03-accident-av-7208821_02092020212401_0209f_1599062041_877.jpg)
ದಾಬಸ್ ಪೇಟೆ ಹಾಗೂ ದೊಡ್ಡಬಳ್ಳಾಪುರ ರಸ್ತೆಯ ಪೆಮ್ಮನಹಳ್ಳಿಯ ರಾಮ್ಕಿ ಕಾರ್ಖಾನೆಯ ಮುಂಭಾಗ ಈ ಅಪಘಾತ ಸಂಭವಿಸಿದೆ. ಎಲ್ಎಂ ಕಂಪನಿಗೆ ಸೇರಿದ ಲಾರಿಯು ವಿಂಡ್ ಪವರ್ ರೆಕ್ಕೆಗಳನ್ನು ಸಾಗಿಸುತ್ತಿದ್ದ ವೇಳೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ರೆಕ್ಕೆಗಳು ಲಾರಿಯ ಮುಂಭಾಗದಿಂದ ತೂರಿ ಹೊರ ಬಂದಿವೆ. ಅಪಘಾತದ ದೃಶ್ಯ ಭಯಾನವಾಗಿದ್ದು, ಸ್ಥಳೀಯರನ್ನು ದಂಗು ಬಡಿಸಿದೆ.
![A terrible accident in Doddaballapura](https://etvbharatimages.akamaized.net/etvbharat/prod-images/kn-bng-03-accident-av-7208821_02092020212401_0209f_1599062041_0.jpg)
ಪವನ ವಿದ್ಯುತ್ ತಯಾರಿಕೆಗಾಗಿ ಬಳಕೆ ಮಾಡುವ ಭಾರಿ ಉದ್ದನೆಯ ರೆಕ್ಕೆಗಳು ಇವಾಗಿದ್ದರಿಂದ ದೊಡ್ಡಬಳ್ಳಾಪುರ ಹಾಗೂ ದಾಬಸ್ಪೇಟೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಅಪಘಾತ ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.