ETV Bharat / state

16 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಹಳೆ ಚಾಳಿ ಬಿಡಲಿಲ್ಲ... ಕಾಮುಕ ಮತ್ತೆ ಅಂದರ್​!

author img

By

Published : Oct 1, 2019, 1:34 PM IST

ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಕಾಮುಕನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆ ಆಗಿದ್ದ ಈತ, ಜೈಲಿನಿಂದ ಬಂದು ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಸಿಕ್ಕಿಬಿದ್ದಿದ್ದಾನೆ.

ಅತ್ಯಾಚಾರ ಆರೋಪಿ

ಬಾಗಲಕೋಟೆ: ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಕಾಮುಕನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆ ಆಗಿದ್ದ ಈತ, ಜೈಲಿನಿಂದ ಬಂದು ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಸಿಕ್ಕಿಬಿದ್ದು ಮರಳಿ ಕಂಬಿ ಎಣಿಸುವಂತಾಗಿದೆ.

ಕುಡ್ಡನಿಂಗಪ್ಪ ಕರಿಯಪ್ಪ ಮಾದರ (42) ಎಂಬಾತನೆ ಬಂಧಿತ ಆರೋಪಿ. ಈತ ನಗರದ ಅಪ್ರಾಪ್ತೆಯೊಬ್ಬಳಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದ, ಬಳಿಕ ಆತನಿಂದ ಬಾಲಕಿಯು ತಪ್ಪಿಸಿಕೊಂಡು ಬಂದ‌ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಪರಾಧಿಯನ್ನು ಬಂಧಿಸಿದ್ದಾರೆ.

ಕುಡ್ಡನಿಂಗಪ್ಪ ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಕಿಡ್ನಾಪ್ ಪ್ರಕರಣಗಳಲ್ಲಿ ಮೂರು ಸಲ ಆರೋಪ ಸಾಬೀತಾಗಿ 16 ವರ್ಷ ಜೈಲು ಶಿಕ್ಷೆ ಅನುಭವಿಸಿ,14 ತಿಂಗಳ ಹಿಂದೆ ಹೊರಬಂದಿದ್ದ. ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿ ಸಿಕ್ಕಿಬಿದ್ದಿದ್ದಾನೆ.

ಅತ್ಯಾಚಾರ ಆರೋಪಿ ಬಂಧನ

ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ನಿಂಗಪ್ಪ ಸೆ. 28ರಂದು ಬಾಗಲಕೋಟೆ ನಗರಕ್ಕೆ ಬಂದಿದ್ದ. ಮಧ್ಯಾಹ್ನ ಇಬ್ಬರು ಅಪ್ರಾಪ್ತೆಯರನ್ನು ಬಲೆಗೆ ಕೆಡವಲು ಹೋಗಿ ವಿಫಲನಾಗಿದ್ದ. ಬಳಿಕ ಮತ್ತೊಬ್ಬ ಬಾಲಕಿಗೆ ಆಕೆಯ ತಂದೆ ಹೇಳಿದ್ದಾನೆ ಎಂದು ಸುಳ್ಳು ಹೇಳಿ ಗುಲಾಬಿ ಹೂವಿನ ಕುಂಡಲಿ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರಕ್ಕೆ ಮುಂದಾಗಿದ್ದ. ಈ ಸಮಯದಲ್ಲಿ ವೃದ್ಧರೊಬ್ಬರು ಅಲ್ಲಿಗೆ ಬಂದಿದ್ದರಿಂದ ಬಾಲಕಿ ಕಾಮುಕನಿಂದ ಪಾರಾಗಿ ಬಂದು ಮನೆಯಲ್ಲಿ ವಿಷಯ ತಿಳಿಸಿದ್ದಳು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಲ್ಲದೆ ಪೊಲೀಸರ ಕ್ಷಿಪ್ರ ಕಾರ್ಯಚರಣೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

ಬಾಗಲಕೋಟೆ: ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಕಾಮುಕನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆ ಆಗಿದ್ದ ಈತ, ಜೈಲಿನಿಂದ ಬಂದು ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಸಿಕ್ಕಿಬಿದ್ದು ಮರಳಿ ಕಂಬಿ ಎಣಿಸುವಂತಾಗಿದೆ.

ಕುಡ್ಡನಿಂಗಪ್ಪ ಕರಿಯಪ್ಪ ಮಾದರ (42) ಎಂಬಾತನೆ ಬಂಧಿತ ಆರೋಪಿ. ಈತ ನಗರದ ಅಪ್ರಾಪ್ತೆಯೊಬ್ಬಳಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದ, ಬಳಿಕ ಆತನಿಂದ ಬಾಲಕಿಯು ತಪ್ಪಿಸಿಕೊಂಡು ಬಂದ‌ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಪರಾಧಿಯನ್ನು ಬಂಧಿಸಿದ್ದಾರೆ.

ಕುಡ್ಡನಿಂಗಪ್ಪ ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಕಿಡ್ನಾಪ್ ಪ್ರಕರಣಗಳಲ್ಲಿ ಮೂರು ಸಲ ಆರೋಪ ಸಾಬೀತಾಗಿ 16 ವರ್ಷ ಜೈಲು ಶಿಕ್ಷೆ ಅನುಭವಿಸಿ,14 ತಿಂಗಳ ಹಿಂದೆ ಹೊರಬಂದಿದ್ದ. ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿ ಸಿಕ್ಕಿಬಿದ್ದಿದ್ದಾನೆ.

ಅತ್ಯಾಚಾರ ಆರೋಪಿ ಬಂಧನ

ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ನಿಂಗಪ್ಪ ಸೆ. 28ರಂದು ಬಾಗಲಕೋಟೆ ನಗರಕ್ಕೆ ಬಂದಿದ್ದ. ಮಧ್ಯಾಹ್ನ ಇಬ್ಬರು ಅಪ್ರಾಪ್ತೆಯರನ್ನು ಬಲೆಗೆ ಕೆಡವಲು ಹೋಗಿ ವಿಫಲನಾಗಿದ್ದ. ಬಳಿಕ ಮತ್ತೊಬ್ಬ ಬಾಲಕಿಗೆ ಆಕೆಯ ತಂದೆ ಹೇಳಿದ್ದಾನೆ ಎಂದು ಸುಳ್ಳು ಹೇಳಿ ಗುಲಾಬಿ ಹೂವಿನ ಕುಂಡಲಿ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರಕ್ಕೆ ಮುಂದಾಗಿದ್ದ. ಈ ಸಮಯದಲ್ಲಿ ವೃದ್ಧರೊಬ್ಬರು ಅಲ್ಲಿಗೆ ಬಂದಿದ್ದರಿಂದ ಬಾಲಕಿ ಕಾಮುಕನಿಂದ ಪಾರಾಗಿ ಬಂದು ಮನೆಯಲ್ಲಿ ವಿಷಯ ತಿಳಿಸಿದ್ದಳು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಲ್ಲದೆ ಪೊಲೀಸರ ಕ್ಷಿಪ್ರ ಕಾರ್ಯಚರಣೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

Intro:AnchorBody:ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ವಿಕೃತ ಕಾಮಿಯನ್ನು ಬಾಗಲಕೋಟೆ ನಗರದ ಪೊಲೀಸ್ ರು ಬಂಧಿಸುವಲ್ಲಿ ಯಶಸ್ಸು ಆಗಿದ್ದಾರೆ. ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆ ಆಗಿದ್ದ ಅಪರಾಧಿ,ಜೈಲು ನಿಂದ ಬಂದು ಮತ್ತೆ ಅತ್ಯಾಚಾರ ಯತ್ನಿಸಿದ ವೇಳೆ ಸಿಕ್ಕು ಬಿದ್ದು ಮರಳಿ ಕಂಬಿ ಎಣಿಸುವಂತಾಗಿದೆ.
ನಗರದ ಅಪ್ರಾಪ್ತೆಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದ ವಿಕೃತ ಕಾಮುಕನ ಕೈಯಿಂದ ತಪ್ಪಿಸಿಕೊಂಡು ಬಂದ‌ ನಂತರ ಪ್ರಕರಣ ಬೆಳೆಕಿಗೆ ಬಂದಿದೆ.ವಿಷಯ ತಿಳಿದ ಪೊಲೀಸ್ ರು ಕ್ಷಿಪ್ರ ಕಾರ್ಯಾಚರಣೆ ನಡೆಸಿ,ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ಸು ಹೊಂದಿದ್ದಾರೆ.
ಕುಡ್ಡನಿಂಗಪ್ಪ ಕರಿಯಪ್ಪ ಮಾದರ (42) ಎಂಬುವ ವಿಕೃತ ಕಾಮುಕನಿಗೆ ಬಂಧಿಸಿದ್ದಾರೆ.ಅಪ್ರಾಪ್ತರ ಮೇಲೆ ಅತ್ಯಾಚಾರ,ಕಿಡ್ನಾಪ್ ಪ್ರಕರಣಗಳಲ್ಲಿ ಮೂರು ಸಲ ಆರೋಪ ಸಾಬೀತಾಗಿ 16 ವರ್ಷ ಜೈಲು ಶಿಕ್ಷೆ ಅನುಭವಿಸಿ,14 ತಿಂಗಳ ಹಿಂದೆ ಹೊರಬಂದಿದ್ದ ನಿಂಗಪ್ಪ ಮತ್ತೆ ತನ್ನ ಹಳೆಯ ಚಾಲಿ ಮುಂದುವರೆಸಿ,ಸಿಕ್ಕಿ ಬಿದ್ದಿದ್ದಾನೆ.
ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ನಿಂಗಪ್ಪ ಸೆ.28 ರಂದು ಬಾಗಲಕೋಟೆ ನಗರಕ್ಕೆ ಬಂದಿದ್ದ,ಮಧ್ಯಾನ್ಹ ಇಬ್ಬರು ಅಪ್ರಾಪ್ತೆಯರನ್ನು ಬಲೆಗೆ ಕೆಡವಲು ಹೋಗಿ ವಿಫಲನಾಗಿದ್ದ,ಬಳಿಕ ಮತ್ತೊಬ್ಬ ಬಾಲಕಿಗೆ ಆಕೆಯ ತಂದೆ ಹೇಳಿದ್ದಾನೆ ಎಂದು ಸುಳ್ಳು ಹೇಳಿ ಗುಲಾಬಿ ಹೂವಿನ ಕುಂಡಲಿ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರ ಕ್ಕೆ ಮುಂದಾಗಿದ್ದ.ಈ ಸಮಯದಲ್ಲಿ ವೃದ್ದರೊಬ್ಬರು ಅಲ್ಲಿಗೆ ಬಂದಿದ್ದರಿಂದ ಬಾಲಕಿ ಕಾಮುಕನಿಂದ ಪಾರಾಗಿ ಬಂದು ಮನೆಯಲ್ಲಿ ವಿಷಯ ತಿಳಿಸಿದ್ದಳು.ಪೊಲೀಸ್ ಎಚ್ಚೆತ್ತು ಬಲೆ ಬೀಸಿ ಕಾಮುಕನಿಗೆ ಹಿಡಿಯುವಲ್ಲಿ ಯಶಸ್ಸು ಹೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದು,ಪೊಲೀಸ್ ಕಾರ್ಯಚರಣೆಗೆ ಪ್ರಶಂಸೆ ವ್ಯಕ್ತಪಡಿಸಿ,ಬಹುಮಾನ ಘೋಷಣೆ ಮಾಡಿದ್ದಾರೆ..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.