ಬಾಗಲಕೋಟೆ: ಈಗ ಬೆಂಗಳೂರು ಮಾತ್ರವಲ್ಲ ಪ್ರತಿಯೊಂದು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಗಳಿಗೆ ಕೊರೊನಾ ಸೋಂಕು ತಗುಲಿದ್ದು, ಅದರಿಂದ ಅವರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈಗ ಬಾಗಲಕೋಟೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕೊರೊನಾ ಬಲಿ ಪಡೆದಿದೆ.
ಕೊರೊನಾಗೆ ಪೊಲೀಸ್ ಸಿಬ್ಬಂದಿ ಬಲಿ ಆಗಿದ್ದಾರೆ. ಕೋವಿಡ್ಗೆ ಡಿಎಆರ್ ಕಾನ್ಸ್ಟೇಬಲ್ ಸಾವನ್ನಪ್ಪಿದ್ದು, ಪೊಲೀಸ್ ಇಲಾಖೆಯಲ್ಲಿ ಆತಂಕ ಮೂಡಿಸಿದೆ.
ಹನುಮಂತಪ್ಪ ಬಿರಾದಾರ (45) ಎರಡನೇ ಅಲೆ ಕೋವಿಡ್ಗೆ ಬಲಿಯಾದ ಮೊದಲ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಅನಾರೋಗ್ಯದ ಕಾರಣ ಏಪ್ರಿಲ್ 22ರಿಂದ ರಜೆಯಲ್ಲಿದ್ದ ಹನುಮಂತಪ್ಪ ಕೋವಿಡ್ ದೃಢಪಟ್ಟ ಹಿನ್ನೆಲೆ 24ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆದ್ರೆ ಕೋವಿಡ್ ಚಿಕಿತ್ಸೆ ಫಲಿಸದೆ ಹನುಮಂತಪ್ಪ ಮೃತಪಟ್ಟಿದ್ದಾರೆ. ಈ ಬಗ್ಗೆ ಎಸ್ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.
ಕೊರೊನಾ ಹತೋಟಿಗೆ ಬರದಿದ್ದಲ್ಲಿ ಸಾಲುಗಟ್ಟಿ ಪ್ರಾಣ ಕಳೆದುಕೊಳ್ಳುವ ಭೀತಿ ಈಗ ಜನರಲ್ಲಿ ಮೂಡುತ್ತಿದೆ.