ETV Bharat / state

4 ಬಾರಿ ಆಯ್ಕೆಯಾದ ಮುಧೋಳ ಕ್ಷೇತ್ರ ಅಭಿವೃದ್ಧಿಪಡಿಸ್ತಾರಾ ಡಿಸಿಎಂ ಕಾರಜೋಳ?

author img

By

Published : Sep 16, 2019, 12:45 PM IST

Updated : Sep 17, 2019, 8:17 AM IST

ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಬಿಜೆಪಿ ಪಕ್ಷದಲ್ಲಿ ಪ್ರಬಲ ಮುಖಂಡರಾಗಿದ್ದು, ಮುಧೋಳ ಮೀಸಲು ಮತ ಕ್ಷೇತ್ರದಲ್ಲಿ ನಾಲ್ಕು ಬಾರಿ ಆಯ್ಕೆ ಆಗಿದ್ದರೂ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಂಡು ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಗೋವಿಂದ ಕಾರಜೋಳ

ಬಾಗಲಕೋಟೆ: ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಬಿಜೆಪಿ ಪಕ್ಷದಲ್ಲಿ ಪ್ರಬಲ ಮುಖಂಡರು. ಮುಧೋಳ ಮೀಸಲು ಮತ ಕ್ಷೇತ್ರದಲ್ಲಿ ನಾಲ್ಕು ಬಾರಿ ಆಯ್ಕೆ ಆಗಿದ್ದರೂ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಂಡು ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಮತಕ್ಷೇತ್ರದಲ್ಲಿ ಸರಿಯಾಗಿ ಅಭಿವೃದ್ಧಿ ಆಗದ ಹಿನ್ನೆಲೆ ಜನರಲ್ಲಿ ನಿರಾಶೆ ಮೂಡಿತ್ತು. ಈಗ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆ ಜನರಲ್ಲಿ ಸಂತಸ ಮೂಡಿದೆ. ನಾಲ್ಕು ಬಾರಿ ಶಾಸಕರಾದ ಗೋವಿಂದ ಕಾರಜೋಳರ ಅದೃಷ್ಟದ ಬಾಗಿಲು ತೆರೆದಿದೆ. ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಲೋಕೋಪಯೋಗಿ ಇಲಾಖೆ ಖಾತೆ ಸಿಕ್ಕಿದೆ. ಇದರಿಂದ ಮುಧೋಳ ಪಟ್ಟಣದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಸುಧಾರಣೆ, ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸೇರಿ ಇತರ ಸೌಲಭ್ಯಗಳು ದೂರಕಲಿವೆ ಎಂದು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಡಾ.ಸಂಜಯ ಗಾರಗೆ ತಿಳಿಸಿದ್ದಾರೆ.

ಮುಧೋಳ ಅಭಿವೃದ್ಧಿ ಕುರಿತು ಪ್ರತಿಕ್ರಿಯೆ

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ರಾಜಕೀಯ ತಿಕ್ಕಾಟದಿಂದ ಇಷ್ಟು ವರ್ಷ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಆಗಿರುವ ಮುಧೋಳದಲ್ಲಿ ರಸ್ತೆ ಅಭಿವೃದ್ಧಿ ಇಲ್ಲ. ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆ ಅನುಭವಿಸುವುದು ಸಾಮಾನ್ಯ. ರಿಂಗ್ ರೋಡ್ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಬೈಪಾಸ್‌ ರಸ್ತೆಗೆ ಚಾಲನೆ ಸಿಕ್ಕಿಲ್ಲ, ಕುಡಿಯುವ ನೀರು ಸೇರಿದಂತೆ ಇತರ ಅಭಿವೃದ್ಧಿ ಕಾರ್ಯ ಮಾಡುವುದು ಅಗತ್ಯವಿದೆ. ಈ ಬಾರಿ ಕಾರಜೋಳ ಅವರು ಡಿಸಿಎಂ ಆಗಿರುವುದರಿಂದ ಎಲ್ಲಾ ಕಾರ್ಯಗಳು ಆಗಲಿವೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅಂತಾರೆ ಸ್ಥಳೀಯರಾದ ರವಿಕುಮಾರ್ ಶಿಂಧೆ.

ಈಗ‌ ಕ್ಷೇತ್ರದ ಜನತೆಯ ಋಣ ತೀರಿಸುವ ಸೌಭಾಗ್ಯ ಗೋವಿಂದ ಕಾರಜೋಳ ಅವರಿಗೆ ಸಿಕ್ಕಿದೆ. ತಮ್ಮ ಅವಧಿಯಲ್ಲಿ ಯಾವ ರೀತಿ ಅಭಿವೃದ್ಧಿ ಪಡಿಸುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ.

ಬಾಗಲಕೋಟೆ: ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಬಿಜೆಪಿ ಪಕ್ಷದಲ್ಲಿ ಪ್ರಬಲ ಮುಖಂಡರು. ಮುಧೋಳ ಮೀಸಲು ಮತ ಕ್ಷೇತ್ರದಲ್ಲಿ ನಾಲ್ಕು ಬಾರಿ ಆಯ್ಕೆ ಆಗಿದ್ದರೂ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಂಡು ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಮತಕ್ಷೇತ್ರದಲ್ಲಿ ಸರಿಯಾಗಿ ಅಭಿವೃದ್ಧಿ ಆಗದ ಹಿನ್ನೆಲೆ ಜನರಲ್ಲಿ ನಿರಾಶೆ ಮೂಡಿತ್ತು. ಈಗ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆ ಜನರಲ್ಲಿ ಸಂತಸ ಮೂಡಿದೆ. ನಾಲ್ಕು ಬಾರಿ ಶಾಸಕರಾದ ಗೋವಿಂದ ಕಾರಜೋಳರ ಅದೃಷ್ಟದ ಬಾಗಿಲು ತೆರೆದಿದೆ. ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಲೋಕೋಪಯೋಗಿ ಇಲಾಖೆ ಖಾತೆ ಸಿಕ್ಕಿದೆ. ಇದರಿಂದ ಮುಧೋಳ ಪಟ್ಟಣದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಸುಧಾರಣೆ, ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸೇರಿ ಇತರ ಸೌಲಭ್ಯಗಳು ದೂರಕಲಿವೆ ಎಂದು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಡಾ.ಸಂಜಯ ಗಾರಗೆ ತಿಳಿಸಿದ್ದಾರೆ.

ಮುಧೋಳ ಅಭಿವೃದ್ಧಿ ಕುರಿತು ಪ್ರತಿಕ್ರಿಯೆ

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ರಾಜಕೀಯ ತಿಕ್ಕಾಟದಿಂದ ಇಷ್ಟು ವರ್ಷ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಆಗಿರುವ ಮುಧೋಳದಲ್ಲಿ ರಸ್ತೆ ಅಭಿವೃದ್ಧಿ ಇಲ್ಲ. ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆ ಅನುಭವಿಸುವುದು ಸಾಮಾನ್ಯ. ರಿಂಗ್ ರೋಡ್ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಬೈಪಾಸ್‌ ರಸ್ತೆಗೆ ಚಾಲನೆ ಸಿಕ್ಕಿಲ್ಲ, ಕುಡಿಯುವ ನೀರು ಸೇರಿದಂತೆ ಇತರ ಅಭಿವೃದ್ಧಿ ಕಾರ್ಯ ಮಾಡುವುದು ಅಗತ್ಯವಿದೆ. ಈ ಬಾರಿ ಕಾರಜೋಳ ಅವರು ಡಿಸಿಎಂ ಆಗಿರುವುದರಿಂದ ಎಲ್ಲಾ ಕಾರ್ಯಗಳು ಆಗಲಿವೆ ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅಂತಾರೆ ಸ್ಥಳೀಯರಾದ ರವಿಕುಮಾರ್ ಶಿಂಧೆ.

ಈಗ‌ ಕ್ಷೇತ್ರದ ಜನತೆಯ ಋಣ ತೀರಿಸುವ ಸೌಭಾಗ್ಯ ಗೋವಿಂದ ಕಾರಜೋಳ ಅವರಿಗೆ ಸಿಕ್ಕಿದೆ. ತಮ್ಮ ಅವಧಿಯಲ್ಲಿ ಯಾವ ರೀತಿ ಅಭಿವೃದ್ಧಿ ಪಡಿಸುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ.

Intro:Anchor


Body:ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಅವರು ಬಿಜೆಪಿ ಪಕ್ಷದಲ್ಲಿ ಪ್ರಭಾವ ಮುಖಂಡರು ಸಹ ಆಗಿದ್ದಾರೆ.ಮುಧೋಳ ಮೀಸಲು ಮತ ಕ್ಷೇತ್ರದಲ್ಲಿ ನಾಲ್ಕು ಭಾರಿ ಆಯ್ಕೆ ಆಗಿರುವ ಕಾರಜೋಳ ಅವರ ಕ್ಷೇತ್ರದಲ್ಲಿಯೇ ನಿರೀಕ್ಷಿತ ಪ್ರಮಾಣ ಅಭಿವೃದ್ಧಿ ಕಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಈಗ ಡಿಸಿಎಂ ಹುದ್ದೆ ಪಡೆದಿರುವ ಹಿನ್ನಲೆ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂದು ಕ್ಷೇತ್ರದ ಜನತೆ ಆಶಾಭಾವನೆ ಇಟ್ಟುಕೊಂಡಿದ್ದಾರೆ.ಎನೆಲ್ಲಾ ಅಭಿವೃದ್ಧಿ ಆಗಬೇಕು ಎಂಬುದನ್ನು ಈ ವಿಶೇಷ ವರದಿ ನೋಡಿ....

ವೈಸ್-- ಬಾಗಲಕೋಟೆ ಜಿಲ್ಲೆಯ ಮುಧೋಳ ಮತಕ್ಷೇತ್ರವು ಸಕ್ಕರೆ ನಾಡು ಎಂದು ಹೆಸರುವಾಸಿ ಆಗಿದೆ.ಆದರೆ ಇಲ್ಲಿ ಸರಿಯಾಗಿ ಅಭಿವೃದ್ಧಿ ಆಗದ ಹಿನ್ನಲೆ ಜನತೆ ಮಾತ್ರ ಕಹಿ ಆಗಿದೆ. ಈಗ ಬಿಜೆಪಿ ಪಕ್ಷದ ಅಧಿಕಾರ ಬಂದ ಹಿನ್ನಲೆ ಜನತೆ ಸಿಹಿ ಸುದ್ದಿ.ಏಕೆಂದರೆ ನಾಲ್ಕು ಭಾರಿ ಶಾಸಕರಾದ ಗೋವಿಂದ ಕಾರಜೋಳ ಅವರಿಗೆ ಈ ಭಾರಿ ಅದೃಷ್ಟ ಬಾಗಿಲು ತೆರೆದಿದ್ದು,ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಪ್ರಮುಖ ಖಾತೆ ಲೋಕೋಪಯೋಗಿ ಇಲಾಖೆ ಸಿಕ್ಕಿದೆ.ಇದರಿಂದ ಮುಧೋಳ ಪಟ್ಟಣದಲ್ಲಿ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದರಿರುವ ರಸ್ತೆ ಸುಧಾರಣೆ,ಬಾಯ್ ಪಾಸ್ ರಸ್ತೆ,ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಇತರ ಸೌಲಭ್ಯಗಳನ್ನು ದೂರಕಲಿದೆ ಎಂದು ಈ ಹಿಂದೆ ಹೋರಾಟ ಮಾಡಿದ್ದ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷರಾದ ಡಾ.ಸಂಜಯ ಗಾರಗೆ ತಿಳಿಸಿದ್ದಾರೆ.

ಬೈಟ್-- ಡಾ ಸಂಜಯ ಗಾರಗೆ( ಹೋರಾಟ ಸಮಿತಿ ಅಧ್ಯಕ್ಷ)

ವೈಸ್--2-- ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ರಾಜಕೀಯ ತಿಕ್ಕಾಟ ದಿಂದ ಇಷ್ಟು ವರ್ಷ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬ ಆರೋಪ ಕೇಳಿ ಬರುತ್ತದೆ.ಪ್ರಮುಖ ವಾಣಿಜ್ಯ ನಗರಿ ಆಗಿರುವ ಮುಧೋಳ ರಸ್ತೆ ಅಭಿವೃದ್ಧಿ ಇಲ್ಲದೆ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆ ಅನುಭವಿಸುವದು ಸಾಮನ್ಯವಾಗಿದೆ.ರಿಂಗ್ ರೋಡ್ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ.ಬಾಯ್ ರಸ್ತೆ ಗೆ ಚಾಲನೆ ಸಿಕ್ಕಿಲ್ಲ.ಕುಡಿಯುವ ನೀರು ಸೇರಿದಂತೆ ಇತರ ಅಭಿವೃದ್ಧಿ ಕಾರ್ಯ ಮಾಡುವದು ಅಗತ್ಯ ವಿದೆ.ಈ ಭಾರಿ ಕಾರಜೋಳ ಅವರು ಡಿಸಿಎಂ ಆಗಿರುವದರಿಂದ ಈ ಎಲ್ಲಾ ಕೆಲಸ ಕಾರ್ಯಗಳು ಆಗಲಿದೆ ಎಂದು ಜನತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬೈಟ್-- ರವಿಕುಮಾರ್ ಶಿಂಧೆ( ಸ್ಥಳೀಯರು)

ವೈಸ್--ಈ ಹಿಂದೆ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ,ಹೋರಾಟ ಸಮಿತಿಯಿಂದ ಸರಣಿ ಪ್ರತಿಭಟನೆ ಹಾಗೂ ಮುಧೋಳ ಪಟ್ಟಣ ಬಂದ್ ಗೆ ಕರೆ ನೀಡಿ ಹೋರಾಟ ಮಾಡಲಾಗಿತ್ತು.ಭರವಸೆ ನಂತರ ಹಿಂದಕ್ಕೆ ಪಡೆಯಲಾಗಿತ್ತು.ಈಗ‌ ಕ್ಷೇತ್ರದ ಜನತೆ ಗೆ ಋಣ ತೀರಿಸುವ ಸೌಭಾಗ್ಯ ಗೋವಿಂದ ಕಾರಜೋಳ ಅವರಿಗೆ ಸಿಕ್ಕಿದ್ದು,ತಮ್ಮ ಅವಧಿಯಲ್ಲಿ ಯಾವ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತಾರೆ ಎಂದು ಕಾಯ್ದು ನೋಡಬೇಕಾಗಿದೆ..


Conclusion:ಈ ಟಿವಿ,ಭಾರತ,ಬಾಗಲಕೋಟೆ.
Last Updated : Sep 17, 2019, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.