ಬಾಗಲಕೋಟೆ: ಬಿಜೆಪಿ ಶಾಸಕರಾದ ಮುರಗೇಶ ನಿರಾಣಿ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಉದ್ಯಮಿ ಹಾಗೂ ಮುರಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಭವಿಷ್ಯ ನುಡಿದಿದ್ದಾರೆ.
ಮುಂದೊಂದು ದಿನ ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ: ಭವಿಷ್ಯ ನುಡಿದ ಸಹೋದರ ಸಂಗಮೇಶ್
ಬಿಜೆಪಿ ಶಾಸಕರಾದ ಮುರಗೇಶ ನಿರಾಣಿ ಅವರು ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಉದ್ಯಮಿ ಹಾಗೂ ಮುರಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಭವಿಷ್ಯ ನುಡಿದಿದ್ದಾರೆ.
![ಮುಂದೊಂದು ದಿನ ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ: ಭವಿಷ್ಯ ನುಡಿದ ಸಹೋದರ ಸಂಗಮೇಶ್](https://etvbharatimages.akamaized.net/etvbharat/prod-images/768-512-4919344-thumbnail-3x2-cm.jpg?imwidth=3840)
ನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುರಗೇಶ್ ನಿರಾಣಿ ರಾಜ್ಯವನ್ನು ಅಭಿವೃದ್ಧಿ ಮಾಡಬೇಕು. ರೈತರ ಆದಾಯ ಹೆಚ್ಚಿಸಬೇಕು. ರಾಜ್ಯದ ಆರ್ಥಿಕ ಉತ್ಪಾದನೆ ಹೆಚ್ಚಾಗಬೇಕು ಎಂಬ ಸಂಕಲ್ಪ ಹೊತ್ತು ರಾಜಕೀಯದಲ್ಲಿ ಧುಮುಕಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ್ಯಕ್ಕೆ ಮಾದರಿ ಆಡಳಿತ ನೀಡಿದರು. ಅದೇ ರೀತಿಯಲ್ಲಿ ಮುರಗೇಶ್ ನಿರಾಣಿ ಕೆಲಸ ಮಾಡಲಿದ್ದಾರೆ. ಮುಂದಿನ ದಿನಮಾನದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದು, ಮಾದರಿ ರಾಜ್ಯವನ್ನಾಗಿ ಮಾಡಲಿದ್ದಾರೆ ಎಂದರು.
ಬಾದಾಮಿಯಲ್ಲಿ ನಾಳೆ ನೂತನ ಸಕ್ಕರೆ ಕಾರ್ಖಾನೆ ಉದ್ಘಾಟನೆ ಆಗಲಿದ್ದು, ಸುಮಾರು 500 ಕೋಟಿಗೂ ಅಧಿಕ ವೆಚ್ಚದ ಆಧುನಿಕ ತಂತ್ರಜ್ಞಾನ ಒಳಗೊಂಡ ಸಕ್ಕರೆ ಕಾರ್ಖಾನೆ ಇದಾಗಿದೆ. ಇದರಿಂದ ಈ ಭಾಗದ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ಬಾಗಲಕೋಟೆ: ಬಿಜೆಪಿ ಶಾಸಕರಾದ ಮುರಗೇಶ ನಿರಾಣಿ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಉದ್ಯಮಿ ಹಾಗೂ ಮುರಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಭವಿಷ್ಯ ನುಡಿದಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುರಗೇಶ್ ನಿರಾಣಿ ರಾಜ್ಯವನ್ನು ಅಭಿವೃದ್ಧಿ ಮಾಡಬೇಕು. ರೈತರ ಆದಾಯ ಹೆಚ್ಚಿಸಬೇಕು. ರಾಜ್ಯದ ಆರ್ಥಿಕ ಉತ್ಪಾದನೆ ಹೆಚ್ಚಾಗಬೇಕು ಎಂಬ ಸಂಕಲ್ಪ ಹೊತ್ತು ರಾಜಕೀಯದಲ್ಲಿ ಧುಮುಕಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ್ಯಕ್ಕೆ ಮಾದರಿ ಆಡಳಿತ ನೀಡಿದರು. ಅದೇ ರೀತಿಯಲ್ಲಿ ಮುರಗೇಶ್ ನಿರಾಣಿ ಕೆಲಸ ಮಾಡಲಿದ್ದಾರೆ. ಮುಂದಿನ ದಿನಮಾನದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದು, ಮಾದರಿ ರಾಜ್ಯವನ್ನಾಗಿ ಮಾಡಲಿದ್ದಾರೆ ಎಂದರು.
ಬಾದಾಮಿಯಲ್ಲಿ ನಾಳೆ ನೂತನ ಸಕ್ಕರೆ ಕಾರ್ಖಾನೆ ಉದ್ಘಾಟನೆ ಆಗಲಿದ್ದು, ಸುಮಾರು 500 ಕೋಟಿಗೂ ಅಧಿಕ ವೆಚ್ಚದ ಆಧುನಿಕ ತಂತ್ರಜ್ಞಾನ ಒಳಗೊಂಡ ಸಕ್ಕರೆ ಕಾರ್ಖಾನೆ ಇದಾಗಿದೆ. ಇದರಿಂದ ಈ ಭಾಗದ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
Body:ಬಿಜೆಪಿ ಶಾಸಕರಾದ ಮುರಗೇಶ ನಿರಾಣಿ ಅವರು ಮುಂದಿನ ದಿನಮಾನದಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಉದ್ಯಮಿ ಹಾಗೂ ಮುರಗೇಶ ಅವರ ಸಹೋದರ ಸಂಗಮೇಶ ನಿರಾಣಿ ಭವಿಷ್ಯ ನುಡಿದಿದ್ದಾರೆ.
ಅವರು ಬಾಗಲಕೋಟೆ ನಗರದ ಪ್ರೇಸ್ ಕಬ್ಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಮುರಗೇಶ ನಿರಾಣಿ ಅವರು,ರಾಜ್ಯವನ್ನು ಅಭಿವೃದ್ಧಿ ಮಾಡಬೇಕು,ರೈತರ ಆದಾಯ ಹೆಚ್ಚಿಸಬೇಕು,ರಾಜ್ಯದ ಆರ್ಥಿಕ ಉತ್ಪಾದನೆ ಹೆಚ್ಚಾಗಬೇಕು ಎಂಬ ಸಂಕಲ್ಪ ಹೊತ್ತು ರಾಜಕೀಯ ದಲ್ಲಿ ಧುಮುಕಿದ್ದಾರೆ.ನಾಲ್ವಡಿ ಕೃಷ್ಣ ರಾಜ ಒಡೆಯರ್,ಈ ರಾಜ್ಯ ಕ್ಕೆ ಮಾದರಿ ಆಗಿ ಆಡಳಿತ ನೀಡಿದರು,ಅದೇ ರೀತಿಯಲ್ಲಿ ಮುರಗೇಶ ನಿರಾಣಿ ಅವರು ಮಾಡುತ್ತಿದ್ದಾರೆ.ಮುಂದಿನ ದಿನಮಾನದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದು,ಮಾದರಿ ರಾಜ್ಯವನ್ನಾಗಿ ಮಾಡಲಿದ್ದಾರೆ ಎಂದರು.ಇನ್ನೂ 25 ವರ್ಷ ಕಾಲ ರಾಜಕೀಯ ಜೀವನ ಮಾಡಲು ಅವಕಾಶ ಇದೆ ಎಂದ ಅವರು,ಮಂತ್ರಿ ಸ್ಥಾನ ಸಿಗದ ಬಗ್ಗೆ ಪ್ರತಿಕ್ರಿಯೆ ನೀಡಿ,ಪಕ್ಷದಲ್ಲಿ ಸಾಕಷ್ಟು ಹಿರಿಯ ರಾಜಕಾರಣಿಗಳು ಇದ್ದಾರೆ.ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.ಹಾಗಾಗಿ ಮತ್ತೊಬ್ಬರಿಗೆ ಬಿಟ್ಟುಕೊಡುವ ಅವಕಾಶ ಬಂದಿದೆ. ಅದಕ್ಕೆ ನಮಗೆ ನೋವು ಇಲ್ಲ , ಮಂತ್ರಿ ಆಗದೆ ರಾಜ್ಯದಲ್ಲಿ ಸಾಕಷ್ಟು ಕೆಲಸ ಮಾಡಲು ಅವಕಾಶ ಇದೆ.ಬೀಳಗಿ ಕ್ಷೇತ್ರದ ಅಭಿವೃದ್ಧಿ ಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದರು. ಇದೇ ಸಮಯದಲ್ಲಿ ಮಾತನಾಡಿ,ಬಾದಾಮಿ ನಾಳೆ ನೂತನ ಸಕ್ಕರೆ ಕಾರ್ಖಾನೆ ಉದ್ಘಾಟನೆ ಆಗಲಿದ್ದು,ಸುಮಾರು 500 ಕೋಟಿಗೂ ಅಧಿಕ ವೆಚ್ಚ ಆಧುನಿಕ ತಂತ್ರಜ್ಞಾನ ಒಳಗೊಂಡ ಸಕ್ಕರೆ,ರೈತರಿಂದ ಸ್ಥಳೀಯ ಶ್ರೀಗಳಿಂದ ಚಾಲನೆ ಸಿಗಲಿದೆ.ಇದರಿಂದ ಈ ಭಾಗದ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು..
ಬೈಟ್-- ಸಂಗಮೇಶ ನಿರಾಣಿ( ಉದ್ಯಮಿ)
Conclusion:ಈ ಟಿ ವಿ,ಭಾರತ,ಬಾಗಲಕೋಟೆ