ETV Bharat / state

ಲಾರಿ ಚಾಲಕನ ಅಜಾಗರೂಕತೆ: ಬಾದಾಮಿ ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆ

author img

By

Published : Oct 15, 2019, 6:05 PM IST

ಲಾರಿ ಚಾಲಕನ ನಿರ್ಲಕ್ಷ್ಯದಿಂದ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಸ್ಮಾರಕಕ್ಕೆ ಧಕ್ಕೆಯಾಗಿರುವ ಘಟನೆ ಬಾದಾಮಿಯಲ್ಲಿ ನಡೆದಿದೆ.

ಬಾದಾಮಿ ಐತಿಹಾಸಿಕ ಸ್ಮಾರಕ

ಬಾಗಲಕೋಟೆ: ಭಾರಿ ವಾಹನ ಪ್ರವೇಶ ನಿಷೇಧವಿದ್ದರೂ ಕೂಡ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಸ್ಮಾರಕಕ್ಕೆ ಧಕ್ಕೆ ಉಂಟಾದ ಘಟನೆ ಬಾದಾಮಿಯಲ್ಲಿ ನಡೆದಿದೆ.

ಲಾರಿ ಚಾಲಕನ ಅಜಾಗರೂಕತೆ: ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆ

ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರ ಆಗಿರುವ ಬಾದಾಮಿಯ ಬನಶಂಕರಿ ದೇವಸ್ಥಾನ ಮುಂದೆ ಭಾರಿ ವಾಹನ ಪ್ರವೇಶಕ್ಕೆ ನಿಷೇಧವಿದೆ. ಆದರೂ ಬಾದಾಮಿ ಮೂಲಕ ಬಾಗಲಕೋಟೆ ‌ನಗರಕ್ಕೆ ಬರುತ್ತಿದ್ದ ಮಹಾರಾಷ್ಟ್ರದ ಲಾರಿಯು ತಗಲಿ ಇಲ್ಲಿನ ಬನಶಂಕರಿ ಹೊಂಡ ಹಾಗೂ ದೇವಸ್ಥಾನದ ಪ್ರಮುಖ ದ್ವಾರಬಾಗಿಲಿಗೆ ಹಾನಿಯಾಗಿದೆ.

historic monument
ಲಾರಿ ಚಾಲಕನ ಅಜಾಗರೂಕತೆ: ಬಾದಾಮಿ ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆ

ಕಿರಿದಾದ ರಸ್ತೆಯಲ್ಲಿ ಚಾಲಕ ಅಜಾಗರೂಕತೆಯಿಂದ ಬೃಹತ್​ ಲಾರಿಯನ್ನು ಕೊಂಡೊಯ್ದಿರುವುದೇ ಘಟನೆಗೆ ಕಾರಣವಾಗಿದೆ. ಇಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.

ಲಾರಿ ತಗುಲಿದ್ದರಿಂದ ದ್ವಾರಬಾಗಿಲಿಗೆ ಆಧಾರವಾಗಿದ್ದ ಕಲ್ಲಿನ ಕಂಬ ಬೀಳುವ ಸ್ಥಿತಿಗೆ ತಲುಪಿದೆ. ಸ್ಥಳಕ್ಕೆ ಪೊಲೀಸರು, ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬಾಗಲಕೋಟೆ: ಭಾರಿ ವಾಹನ ಪ್ರವೇಶ ನಿಷೇಧವಿದ್ದರೂ ಕೂಡ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಸ್ಮಾರಕಕ್ಕೆ ಧಕ್ಕೆ ಉಂಟಾದ ಘಟನೆ ಬಾದಾಮಿಯಲ್ಲಿ ನಡೆದಿದೆ.

ಲಾರಿ ಚಾಲಕನ ಅಜಾಗರೂಕತೆ: ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆ

ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರ ಆಗಿರುವ ಬಾದಾಮಿಯ ಬನಶಂಕರಿ ದೇವಸ್ಥಾನ ಮುಂದೆ ಭಾರಿ ವಾಹನ ಪ್ರವೇಶಕ್ಕೆ ನಿಷೇಧವಿದೆ. ಆದರೂ ಬಾದಾಮಿ ಮೂಲಕ ಬಾಗಲಕೋಟೆ ‌ನಗರಕ್ಕೆ ಬರುತ್ತಿದ್ದ ಮಹಾರಾಷ್ಟ್ರದ ಲಾರಿಯು ತಗಲಿ ಇಲ್ಲಿನ ಬನಶಂಕರಿ ಹೊಂಡ ಹಾಗೂ ದೇವಸ್ಥಾನದ ಪ್ರಮುಖ ದ್ವಾರಬಾಗಿಲಿಗೆ ಹಾನಿಯಾಗಿದೆ.

historic monument
ಲಾರಿ ಚಾಲಕನ ಅಜಾಗರೂಕತೆ: ಬಾದಾಮಿ ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆ

ಕಿರಿದಾದ ರಸ್ತೆಯಲ್ಲಿ ಚಾಲಕ ಅಜಾಗರೂಕತೆಯಿಂದ ಬೃಹತ್​ ಲಾರಿಯನ್ನು ಕೊಂಡೊಯ್ದಿರುವುದೇ ಘಟನೆಗೆ ಕಾರಣವಾಗಿದೆ. ಇಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.

ಲಾರಿ ತಗುಲಿದ್ದರಿಂದ ದ್ವಾರಬಾಗಿಲಿಗೆ ಆಧಾರವಾಗಿದ್ದ ಕಲ್ಲಿನ ಕಂಬ ಬೀಳುವ ಸ್ಥಿತಿಗೆ ತಲುಪಿದೆ. ಸ್ಥಳಕ್ಕೆ ಪೊಲೀಸರು, ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Intro:AnchorBody:ಬಾಗಲಕೋಟೆ-- ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಆಗಿರುವ ಐತಿಹಾಸಿಕ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರ ಆಗಿರುವ ಬಾದಾಮಿ -ಬನಶಂಕರಿ ದೇವಸ್ಥಾನ ಮುಂದೆ ಭಾರಿ ವಾಹನ ಪ್ರವೇಶ ನಿಷೇಧಿಸಲಾಗಿದೆ.ಆದರೆ ಚಾಲಕ ನಿರ್ಲಕ್ಷ್ಯತನ ದಿಂದ ಪ್ರವೇಶ ಮಾಡಿ ಭಾರಿ ವಾಹನ ಲಾರಿಯಿಂದ ಸ್ಮಾರಕ ಕ್ಕೆ ಧಕ್ಕೆ ಉಂಟಾಗಿರುವ ಘಟನೆ ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಲಾರಿಯು ಚಾಲಕನ ಅಜಾಗೃತ ಯಿಂದಾಗಿ ಕಿರಿದಾದ ರಸ್ತೆಯಲ್ಲಿ ಸಂಚಾರ ಮಾಡಿ,ಈಗ ಸಿಕ್ಕಿಕೊಂಡಿದೆ.ಗದಗ ಜಿಲ್ಲೆಯಿಂದ ಆಗಮಿಸಿದ ಲಾರಿಯು,ಬಾದಾಮಿ ಪಟ್ಟಣದ ಮೂಲಕ ಬಾಗಲಕೋಟೆ ‌ನಗರಕ್ಕೆ ಆಗಮಿಸುತ್ತಿತ್ತು.ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಇದು ವರೆಗೂ ಅದೇ ಸ್ಥಳದಲ್ಲಿ ನಿಂತಿದೆ.ಬನಶಂಕರಿ ಹೊಂಡ ಹಾಗೂ ದೇವಸ್ಥಾನ ಪ್ರಮುಖ ದ್ವಾರ ಬಾಗಿಲು ಇದ್ದು,ಚಾಲುಕ್ಯ ಕಾಲದ ನಿರ್ಮಾಣ ವಾದ ಸ್ಮಾರಕಕ್ಕೆ ಲಾರಿ ಹಿಂಬಾಗ ತಾಗಿ ಹಾನಿ ಉಂಟಾಗಿದೆ.ಸಪೋಟ್ ಆಗಿದ್ದ ಕಲ್ಲಿನ ಕಂಬ ಈಗ ಬೀಳುವ ಸ್ಥಿತಿಯಲ್ಲಿ ಇದೆ.ಬೆಳಗಿನ ಜಾವ ಯಾರೂ ಇಲ್ಲದ ಕಾರಣ ಈ ಘಟನೆ ನಡೆದಿದೆ.ಈಗ ಸ್ಥಳಕ್ಕೆ ಪೊಲೀಸ್ ರು,ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟ್ಟಿ ನೀಡಿ,ಪರಿಶೀಲನೆ ನಡೆಸಲಾಗಿದೆ.ಚಿಕ್ಕಪುಟ್ಟ ವಾಹನ ಹಾಗೂ ಬೈಕ್ ಮಾತ್ರ ಸಂಚಾರಿಸುವ ರಸ್ತೆ ಯ ಮೇಲೆ ಭಾರಿ ವಾಹನ ಬಂದು ಜನತೆಗೆ ಹಾಗೂ ಸ್ಮಾರಕಕ್ಕೆ ತೊಂದರೆ ಉಂಟಾಗುವಂತಾಗಿದೆ..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.