ETV Bharat / state

ಸಚಿವ ನಿರಾಣಿ ಭಾವಚಿತ್ರ ಇರುವ 21 ಲಕ್ಷ ರೂ ಮೌಲ್ಯದ 963 ಬೆಳ್ಳಿ ದೀಪಗಳ ವಶ

author img

By

Published : Apr 22, 2023, 12:12 PM IST

Updated : Apr 22, 2023, 1:14 PM IST

ಸಚಿವ ಮುರಗೇಶ ನಿರಾಣಿ ಭಾವಚಿತ್ರ ಇರುವ ಸುಮಾರು 963 ಬೆಳ್ಳಿ ದೀಪಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

963 ಬೆಳ್ಳಿ ದೀಪಗಳ ವಶ
963 ಬೆಳ್ಳಿ ದೀಪಗಳ ವಶ

ಬಾಗಲಕೋಟೆ: ಮುಧೋಳ ಪಟ್ಟಣ ವಸತಿ ನಿಲಯದಲ್ಲಿ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿ ಬೆಳ್ಳಿಯ ದೀಪಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖಚಿತ ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು, ಸಚಿವ ನಿರಾಣಿ ಅವರ ಸಕ್ಕರೆ ಕಾರ್ಖಾನೆ ಸಿಬ್ಬಂದಿಯ ವಸತಿ ನಿಲಯದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು 963 ಬೆಳ್ಳಿಯ ಕಾಮಾಕ್ಷಿ ದೀಪಗಳು ಪತ್ತೆಯಾಗಿವೆ. ಇದರ ಮೌಲ್ಯ 21,45,652 ಮೌಲ್ಯ ಆಗಿದೆ. ಕಾಮಾಕ್ಷಿ ದೀಪಗಳಲ್ಲಿ ಸಚಿವ ಭಾವಚಿತ್ರ ಕಂಡುಬಂದ ಹಿನ್ನೆಲೆಯಲ್ಲಿ ಹಲವು ಅನುಮಾನ ಮೂಡಿಸಿದೆ.

ಸ್ಥಳೀಯ ಚುನಾವಣಾಧಿಕಾರಿ ಪ್ರಸನ್ ಜೀವನ ಮಾನೆ ಎಂಬುವವರು ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ದಾಳಿ ನಡೆಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಡಿ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ನಗದು ಮಧ್ಯ ಸೇರಿ 187 ಕೋಟಿ ವಶ, ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಹಿನ್ನೆಲೆ ನಗದು, ಮದ್ಯ, ಉಡುಗೊರೆಗಳ ಸೇರಿ ಏ.17ರ ವೇಳೆಗೆ 187 ಕೋಟಿ ರೂ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಮಾ.29 ರಿಂದ ಏ.17ರ ವರೆಗೆ ವಶಪಡಿಸಿಕೊಂಡಿರುವ ನಗದು, ಮಾದಕ ದ್ರವ್ಯಗಳು, ಮದ್ಯ, ಬೆಲೆ ಬಾಳುವ ಲೋಹಗಳು ಮತ್ತು ಉಚಿತ ಉಡುಗೊರೆಗಳ ಒಟ್ಟು ಮೊತ್ತ 187.17 ಕೋಟಿ ರೂ. ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು 2018ರ ಚುನಾವಣೆಯಲ್ಲಿ ಜಪ್ತಿ ಮಾಡಲಾಗಿದ್ದ ಮದ್ಯ, ಉಡುಗೊರೆ, ನಗದು ಮೊತ್ತ 185.74 ಕೋಟಿ ರೂ. ಆಗಿತ್ತು. 2023ರ ಚುನಾವಣೆಯಲ್ಲಿ ಏ.17ರ ವರೆಗೆ ವಶಪಡೆದ ಒಟ್ಟು ಸಂಚಿತ ಮೌಲ್ಯ 2018ರ ಚುನಾವಣೆಯ ಮೂರು ಪಟ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ವಶಪಡಿಸಕೊಂಡ ವಸ್ತುಗಳ ವಿವರ: ಉಚಿತ ಕೊಡುಗೆ ರೂಪದಲ್ಲಿ 19.05 ಕೋಟಿ ರೂ. ಜಪ್ತಿ ಮಾಡಲಾಗಿದ್ದು, 15.2 ಕೋಟಿ ರೂ. ಮೊತ್ತದ 908 ಕೆ.ಜಿ. ಡ್ರಗ್ಸ್, ಒಟ್ಟು 40.93 ಕೋಟಿ ಮೌಲ್ಯದ 9,82,756 ಲೀಟರ್ ಮದ್ಯ, 3.21 ಕೋಟಿ ಮೊತ್ತದ 454.707 ಕೆ.ಜಿ. ಬೆಳ್ಳಿ, 33.61 ಕೋಟಿ ಮೌಲ್ಯದ 75.30 ಕೆ‌.ಜಿ. ಬಂಗಾರ ವಶಪಡಿಸಿಕೊಳ್ಳಲಾಗಿದೆ.

1,550ಕ್ಕೂ ಹೆಚ್ಚು ಎಫ್​ಐಆರ್ ದಾಖಲು​: ಮದ್ಯ, ಮಾದಕ ದ್ರವ್ಯ, ನಗದು, ಉಡುಗೊರೆ ವಸ್ತು ಮತ್ತು ಬೆಲೆಬಾಳುವ ಲೋಹ ವಶಪಡಿಸಿಕೊಂಡಿರುವ ಸ್ಥಿರ ಕಣ್ಗಾವಲು ತಂಡ, ವಿಚಕ್ಷಣ ದಳ ಮತ್ತು ಪೊಲೀಸ್ ಅಧಿಕಾರಿಗಳು 1,550 ಎಫ್​ಐಆರ್​ ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದಗಿನಿಂದ ಈ ವರೆಗೇ ಒಟ್ಟಾರೆ 69,104 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. ಅಲ್ಲದೇ 18 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದು 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದು ಪಡಿಸಲಾಗಿದೆ.

ಸಿಆರ್‌ಪಿಸಿ ಕಾಯ್ದೆಯಡಿ 4,253 ಪ್ರಕರಣ: ಸಿಆರ್‌ಪಿಸಿ ಕಾಯ್ದೆಯಡಿ ಒಟ್ಟು 4,253 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ 6,468 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಈವರೆಗೂ 10,817 ಜಾಮೀನು ರಹಿತ ವಾರಂಟ್​ಗಳನ್ನು ಜಾರಿಗೊಳಿಸಲಾಗಿದೆ. ಇನ್ನು ಅಬಕಾರಿ ಇಲಾಖೆ 1,494 ಮದ್ಯದ ಪರವಾನಗಿ ಉಲ್ಲಂಘಿಸಿದ ಪ್ರಕರಣ, 1,984 ಗಂಭೀರ ಪ್ರಕರಣ, 69 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 10,193 ಪ್ರಕರಣಗಳನ್ನು ದಾಖಲಿಸಿದೆ ಮತ್ತು 1,338 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆದಾಯ ತೆರಿಗೆ ಇಲಾಖೆ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ರೂ. 55,83,905 ಮೌಲ್ಯದ 1.457 ಕೆ.ಜಿ ಬಂಗಾರ, ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ರೂ. 67,54,049 ಬೆಲೆಯ 1,448 ಕೆ.ಜಿ ಬಂಗಾರವನ್ನು ವಶಪಡಿಸಿಕೊಂಡಿದೆ. ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ವಿಚಕ್ಷಣ ದಳ ರೂ. 4,79,64,024 ಮೌಲ್ಯದ 7.999 ಕೆ.ಜಿ ಬಂಗಾರವನ್ನ ವಶಪಡಿಸಿಕೊಂಡರೆ, ಬೆಂಗಳೂರು ಜಿಲ್ಲೆಯಲ್ಲಿ ಸ್ಥಿರ ಕಣ್ಗಾವಲು ತಂಡ ರೂ. 30,00,000 ನಗದು, ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ರೂ. 26,62,521 ನಗದು ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ರೂ. 1.97 ಕೋಟಿ ನಗದು ವಶಪಡಿಸಿಕೊಂಡಿರುವ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟ ಆಯೋಗ: 72.30 ಲಕ್ಷ ನಗದು, 23 ಸಾವಿರ ಲೀಟರ್ ಮದ್ಯ ವಶ

ಬಾಗಲಕೋಟೆ: ಮುಧೋಳ ಪಟ್ಟಣ ವಸತಿ ನಿಲಯದಲ್ಲಿ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿ ಬೆಳ್ಳಿಯ ದೀಪಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖಚಿತ ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು, ಸಚಿವ ನಿರಾಣಿ ಅವರ ಸಕ್ಕರೆ ಕಾರ್ಖಾನೆ ಸಿಬ್ಬಂದಿಯ ವಸತಿ ನಿಲಯದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು 963 ಬೆಳ್ಳಿಯ ಕಾಮಾಕ್ಷಿ ದೀಪಗಳು ಪತ್ತೆಯಾಗಿವೆ. ಇದರ ಮೌಲ್ಯ 21,45,652 ಮೌಲ್ಯ ಆಗಿದೆ. ಕಾಮಾಕ್ಷಿ ದೀಪಗಳಲ್ಲಿ ಸಚಿವ ಭಾವಚಿತ್ರ ಕಂಡುಬಂದ ಹಿನ್ನೆಲೆಯಲ್ಲಿ ಹಲವು ಅನುಮಾನ ಮೂಡಿಸಿದೆ.

ಸ್ಥಳೀಯ ಚುನಾವಣಾಧಿಕಾರಿ ಪ್ರಸನ್ ಜೀವನ ಮಾನೆ ಎಂಬುವವರು ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ದಾಳಿ ನಡೆಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಡಿ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ನಗದು ಮಧ್ಯ ಸೇರಿ 187 ಕೋಟಿ ವಶ, ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಹಿನ್ನೆಲೆ ನಗದು, ಮದ್ಯ, ಉಡುಗೊರೆಗಳ ಸೇರಿ ಏ.17ರ ವೇಳೆಗೆ 187 ಕೋಟಿ ರೂ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಮಾ.29 ರಿಂದ ಏ.17ರ ವರೆಗೆ ವಶಪಡಿಸಿಕೊಂಡಿರುವ ನಗದು, ಮಾದಕ ದ್ರವ್ಯಗಳು, ಮದ್ಯ, ಬೆಲೆ ಬಾಳುವ ಲೋಹಗಳು ಮತ್ತು ಉಚಿತ ಉಡುಗೊರೆಗಳ ಒಟ್ಟು ಮೊತ್ತ 187.17 ಕೋಟಿ ರೂ. ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು 2018ರ ಚುನಾವಣೆಯಲ್ಲಿ ಜಪ್ತಿ ಮಾಡಲಾಗಿದ್ದ ಮದ್ಯ, ಉಡುಗೊರೆ, ನಗದು ಮೊತ್ತ 185.74 ಕೋಟಿ ರೂ. ಆಗಿತ್ತು. 2023ರ ಚುನಾವಣೆಯಲ್ಲಿ ಏ.17ರ ವರೆಗೆ ವಶಪಡೆದ ಒಟ್ಟು ಸಂಚಿತ ಮೌಲ್ಯ 2018ರ ಚುನಾವಣೆಯ ಮೂರು ಪಟ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ವಶಪಡಿಸಕೊಂಡ ವಸ್ತುಗಳ ವಿವರ: ಉಚಿತ ಕೊಡುಗೆ ರೂಪದಲ್ಲಿ 19.05 ಕೋಟಿ ರೂ. ಜಪ್ತಿ ಮಾಡಲಾಗಿದ್ದು, 15.2 ಕೋಟಿ ರೂ. ಮೊತ್ತದ 908 ಕೆ.ಜಿ. ಡ್ರಗ್ಸ್, ಒಟ್ಟು 40.93 ಕೋಟಿ ಮೌಲ್ಯದ 9,82,756 ಲೀಟರ್ ಮದ್ಯ, 3.21 ಕೋಟಿ ಮೊತ್ತದ 454.707 ಕೆ.ಜಿ. ಬೆಳ್ಳಿ, 33.61 ಕೋಟಿ ಮೌಲ್ಯದ 75.30 ಕೆ‌.ಜಿ. ಬಂಗಾರ ವಶಪಡಿಸಿಕೊಳ್ಳಲಾಗಿದೆ.

1,550ಕ್ಕೂ ಹೆಚ್ಚು ಎಫ್​ಐಆರ್ ದಾಖಲು​: ಮದ್ಯ, ಮಾದಕ ದ್ರವ್ಯ, ನಗದು, ಉಡುಗೊರೆ ವಸ್ತು ಮತ್ತು ಬೆಲೆಬಾಳುವ ಲೋಹ ವಶಪಡಿಸಿಕೊಂಡಿರುವ ಸ್ಥಿರ ಕಣ್ಗಾವಲು ತಂಡ, ವಿಚಕ್ಷಣ ದಳ ಮತ್ತು ಪೊಲೀಸ್ ಅಧಿಕಾರಿಗಳು 1,550 ಎಫ್​ಐಆರ್​ ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದಗಿನಿಂದ ಈ ವರೆಗೇ ಒಟ್ಟಾರೆ 69,104 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. ಅಲ್ಲದೇ 18 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದು 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದು ಪಡಿಸಲಾಗಿದೆ.

ಸಿಆರ್‌ಪಿಸಿ ಕಾಯ್ದೆಯಡಿ 4,253 ಪ್ರಕರಣ: ಸಿಆರ್‌ಪಿಸಿ ಕಾಯ್ದೆಯಡಿ ಒಟ್ಟು 4,253 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ 6,468 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಈವರೆಗೂ 10,817 ಜಾಮೀನು ರಹಿತ ವಾರಂಟ್​ಗಳನ್ನು ಜಾರಿಗೊಳಿಸಲಾಗಿದೆ. ಇನ್ನು ಅಬಕಾರಿ ಇಲಾಖೆ 1,494 ಮದ್ಯದ ಪರವಾನಗಿ ಉಲ್ಲಂಘಿಸಿದ ಪ್ರಕರಣ, 1,984 ಗಂಭೀರ ಪ್ರಕರಣ, 69 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 10,193 ಪ್ರಕರಣಗಳನ್ನು ದಾಖಲಿಸಿದೆ ಮತ್ತು 1,338 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆದಾಯ ತೆರಿಗೆ ಇಲಾಖೆ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ರೂ. 55,83,905 ಮೌಲ್ಯದ 1.457 ಕೆ.ಜಿ ಬಂಗಾರ, ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ರೂ. 67,54,049 ಬೆಲೆಯ 1,448 ಕೆ.ಜಿ ಬಂಗಾರವನ್ನು ವಶಪಡಿಸಿಕೊಂಡಿದೆ. ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ವಿಚಕ್ಷಣ ದಳ ರೂ. 4,79,64,024 ಮೌಲ್ಯದ 7.999 ಕೆ.ಜಿ ಬಂಗಾರವನ್ನ ವಶಪಡಿಸಿಕೊಂಡರೆ, ಬೆಂಗಳೂರು ಜಿಲ್ಲೆಯಲ್ಲಿ ಸ್ಥಿರ ಕಣ್ಗಾವಲು ತಂಡ ರೂ. 30,00,000 ನಗದು, ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ರೂ. 26,62,521 ನಗದು ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ರೂ. 1.97 ಕೋಟಿ ನಗದು ವಶಪಡಿಸಿಕೊಂಡಿರುವ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟ ಆಯೋಗ: 72.30 ಲಕ್ಷ ನಗದು, 23 ಸಾವಿರ ಲೀಟರ್ ಮದ್ಯ ವಶ

Last Updated : Apr 22, 2023, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.