ಬಾಗಲಕೋಟೆ : ಕೊರೊನಾ ಲಸಿಕೆ ಹೊತ್ತು ತಂದ ವ್ಯಾನ್ನ್ನು ಜಿಲ್ಲಾಡಳಿತ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಲಸಿಕೆ ಸಂಸ್ಕರಣ ಘಟಕಕ್ಕೆ ಬಲೂನ್ ಹಾಗೂ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಕೊರೊನಾ ಲಸಿಕೆ ಬಾಕ್ಸ್ಗಳಿಗೆ ಮಹಿಳೆಯರು ಆರತಿ ಮಾಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮಾತನಾಡಿ, ಬೆಳಗಾವಿಯಿಂದ ಬಂದಿರುವ ಈ ವಾಹನದಲ್ಲಿ 30 ಸಾವಿರ ಲಸಿಕೆಗಳಿವೆ. ಇಲ್ಲಿಂದ ವಿಜಯಪುರ, ಗದಗ ಹಾಗೂ ಕೊಪ್ಪಳಕ್ಕೆ ಕಳುಹಿಸಲಾಗುತ್ತದೆ. ನಮ್ಮ ಜಿಲ್ಲೆಗೆ 8 500 ಲಸಿಕೆ ಮೀಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿಗೆ ಬರುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 17,600 ಜನರಿಗೆ ಲಸಿಕೆ ಕೂಡಬೇಕಾಗಿದೆ.ಈಗಾಗಲೇ ಒಂಭತ್ತು ಕಡೆಯಲ್ಲಿ ಲಸಿಕೆ ನೀಡುವ ಬಗ್ಗೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.