ETV Bharat / state

ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಚಾಲುಕ್ಯ ಅರಸರ ಸಮಾಧಿಗಳು ಪತ್ತೆ!

ಇಡೀ ದೇಶದಲ್ಲಿಯೇ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನವನ್ನು ಆರಂಭಿಸಿದ್ದ ಖ್ಯಾತ ಚಾಲುಕ್ಯ ರಾಜರ ಸಮಾಧಿಗಳು ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ತಿಳಿಸಿದ್ದಾರೆ.

author img

By

Published : Oct 10, 2019, 8:29 PM IST

ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಚಾಲುಕ್ಯ ರಾಜರ ಸಮಾಧಿ ಸ್ಥಳಗಳು ಪತ್ತೆ..!

ಬಾಗಲಕೋಟೆ: ಇಡೀ ದೇಶದಲ್ಲಿಯೇ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನವನ್ನು ಆರಂಭಿಸಿದ್ದ ಚಾಲುಕ್ಯ ರಾಜರ ಸಮಾಧಿಗಳು ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಮುಂಬರುವ ಅಂತಾರಾಷ್ಟ್ರೀಯಮಟ್ಟದ “ಎಕ್ಸಪ್ಲೋರಿಂಗ್ ದಿ ಚಾಲುಕ್ಯನ್​ ಲ್ಯಾಂಡ್, ಎ ಲಾರ್ಜೆಸ್ಟ್ ಟೆಂಪಲ್ ಮೂಮೆಂಟ್ ಆಫ್​ ಇಂಡಿಯಾ” ಎಂಬ 2ನೇ ಪುಸ್ತಕದಲ್ಲಿ ದಾಖಲಿಸಲಿದ್ದು, ಬರುವ ಡಿಸೆಂಬರ್​ ಕೊನೆಯ ವಾರದಲ್ಲಿ ದೆಹಲಿಯಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಐಹೊಳೆ, ಬಾದಾಮಿ, ಪಟ್ಟದಕಲ್ಲು, ಮಹಾಕೂಟ ದೇವಾಲಯಗಳನ್ನು ನಿರ್ಮಿಸಿ “ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ ಅಥವಾ ಹಿಂದೂ ವಾಸ್ತುಶಿಲ್ಪದ ತೊಟ್ಟಿಲು” ಎಂದೇ ಪ್ರಸಿದ್ಧಿಯಾಗಿರುವ ಚಾಲುಕ್ಯರ ಆಡಳಿತದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಅನೇಕ ವಿದ್ವಾಂಸರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಆದರೆ ಈ ವಾಸ್ತುಶಿಲ್ಪದ ಪರಂಪರೆಯನ್ನು ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತಗೊಳಿಸಿ ದಕ್ಷಿಣ ಭಾರತದ ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ ಎಂದು ಪರಿಗಣಿಸಿದ್ದರು.

ಕೇವಲ 20 ಕಿ.ಮೀ. ಅಂತರಗಳಲ್ಲಿ ಇಷ್ಟೊಂದು ಪ್ರಮಾಣದ ವಿವಿಧ ಪದ್ಧತಿಯ ದೇವಾಲಯಗಳು ಇಡೀ ದೇಶದಲ್ಲಿ ಕಂಡು ಬರುವುದು ಈ ಚಾಲುಕ್ಯರ ನಾಡಿನಲ್ಲಿ ಮಾತ್ರ. ಹೀಗಾಗಿ ಇಡೀ ಭಾರತದಲ್ಲಿಯೇ ಇದೊಂದು ಅತಿ ದೊಡ್ಡ ದೇವಾಲಯ ನಿರ್ಮಾಣಗಳ ಆಂದೋಲನವಾಗಿ ರೂಪಗೊಂಡಿತು. ವಿಶ್ವಮಟ್ಟದಲ್ಲಿಯೇ ಹಿಂದೂ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪ ಎರಡರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ, 6ನೇ ಶತಮಾನದಿಂದ 8ನೇ ಶತಮಾನದವರೆಗೆ ನಡೆದ ಈ ದೇವಾಲಯಗಳ ನಿರ್ಮಾಣದ ಆಂದೋಲನ ಹೊಸ ಶಿಲ್ಪಕಲಾ ಪರಂಪರೆಗೆ ದಾರಿದೀಪವಾಯಿತು. ದ್ರಾವಿಡ ಹಾಗೂ ನಾಗರ ಶೈಲಿಯ ಈ ದೇವಾಲಯಗಳು ಚಾಲುಕ್ಯರ ಶಿಲ್ಪಕಲೆ ಪರಂಪರೆಯ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತವೆ.

ಬಾಗಲಕೋಟೆ: ಇಡೀ ದೇಶದಲ್ಲಿಯೇ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನವನ್ನು ಆರಂಭಿಸಿದ್ದ ಚಾಲುಕ್ಯ ರಾಜರ ಸಮಾಧಿಗಳು ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಮುಂಬರುವ ಅಂತಾರಾಷ್ಟ್ರೀಯಮಟ್ಟದ “ಎಕ್ಸಪ್ಲೋರಿಂಗ್ ದಿ ಚಾಲುಕ್ಯನ್​ ಲ್ಯಾಂಡ್, ಎ ಲಾರ್ಜೆಸ್ಟ್ ಟೆಂಪಲ್ ಮೂಮೆಂಟ್ ಆಫ್​ ಇಂಡಿಯಾ” ಎಂಬ 2ನೇ ಪುಸ್ತಕದಲ್ಲಿ ದಾಖಲಿಸಲಿದ್ದು, ಬರುವ ಡಿಸೆಂಬರ್​ ಕೊನೆಯ ವಾರದಲ್ಲಿ ದೆಹಲಿಯಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಐಹೊಳೆ, ಬಾದಾಮಿ, ಪಟ್ಟದಕಲ್ಲು, ಮಹಾಕೂಟ ದೇವಾಲಯಗಳನ್ನು ನಿರ್ಮಿಸಿ “ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ ಅಥವಾ ಹಿಂದೂ ವಾಸ್ತುಶಿಲ್ಪದ ತೊಟ್ಟಿಲು” ಎಂದೇ ಪ್ರಸಿದ್ಧಿಯಾಗಿರುವ ಚಾಲುಕ್ಯರ ಆಡಳಿತದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಅನೇಕ ವಿದ್ವಾಂಸರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಆದರೆ ಈ ವಾಸ್ತುಶಿಲ್ಪದ ಪರಂಪರೆಯನ್ನು ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತಗೊಳಿಸಿ ದಕ್ಷಿಣ ಭಾರತದ ಹಿಂದೂ ವಾಸ್ತುಶಿಲ್ಪದ ಪ್ರಯೋಗ ಶಾಲೆ ಎಂದು ಪರಿಗಣಿಸಿದ್ದರು.

ಕೇವಲ 20 ಕಿ.ಮೀ. ಅಂತರಗಳಲ್ಲಿ ಇಷ್ಟೊಂದು ಪ್ರಮಾಣದ ವಿವಿಧ ಪದ್ಧತಿಯ ದೇವಾಲಯಗಳು ಇಡೀ ದೇಶದಲ್ಲಿ ಕಂಡು ಬರುವುದು ಈ ಚಾಲುಕ್ಯರ ನಾಡಿನಲ್ಲಿ ಮಾತ್ರ. ಹೀಗಾಗಿ ಇಡೀ ಭಾರತದಲ್ಲಿಯೇ ಇದೊಂದು ಅತಿ ದೊಡ್ಡ ದೇವಾಲಯ ನಿರ್ಮಾಣಗಳ ಆಂದೋಲನವಾಗಿ ರೂಪಗೊಂಡಿತು. ವಿಶ್ವಮಟ್ಟದಲ್ಲಿಯೇ ಹಿಂದೂ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪ ಎರಡರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ, 6ನೇ ಶತಮಾನದಿಂದ 8ನೇ ಶತಮಾನದವರೆಗೆ ನಡೆದ ಈ ದೇವಾಲಯಗಳ ನಿರ್ಮಾಣದ ಆಂದೋಲನ ಹೊಸ ಶಿಲ್ಪಕಲಾ ಪರಂಪರೆಗೆ ದಾರಿದೀಪವಾಯಿತು. ದ್ರಾವಿಡ ಹಾಗೂ ನಾಗರ ಶೈಲಿಯ ಈ ದೇವಾಲಯಗಳು ಚಾಲುಕ್ಯರ ಶಿಲ್ಪಕಲೆ ಪರಂಪರೆಯ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತವೆ.

Intro:AnchorBody:
ಚಾಲುಕ್ಯ ರಾಜರ ಸಮಾಧಿ ಸ್ಥಳಗಳ ಪತ್ತೆ

ಬಾಗಲಕೋಟೆ--ಇಡೀ ಭಾರತ ದೇಶದಲ್ಲಿಯೇ ಹಿಂದೂ
ದೇವಾಲಯಗಳ ನಿರ್ಮಾಣದ ಅತೀದೊಡ್ಡ ಆಂದೋಲನವನ್ನು ಆರಂಭಿಸಿದ್ದ ಖ್ಯಾತ ಚಾಲುಕ್ಯರ ರಾಜರ
ಸಮಾಧಿಗಳು ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿರುತ್ತವೆಯೆಂದು ಜಿಲ್ಲಾ
ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಮುಂಬರುವ ಅಂತರರಾಷ್ಟ್ರೀಯ ಮಟ್ಟದ “ಎಕ್ಸಪ್ಲೋರಿಂಗ್ ದಿ ಚಾಲುಕ್ಯನ
ಲ್ಯಾಂಡ್, ಎ ಲಾರ್ಜೆಸ್ಟ್ ಟೆಂಪಲ್ ಮೂವಮೆಂಟ್ ಆಪ್ ಇಂಡಿಯಾ” ಎಂಬ 2ನೇ ಪುಸ್ತಕದಲ್ಲಿ
ದಾಖಲಿಸಿದ್ದು, ಬರುವ ಡಿಸೆಂಬರ ಕೊನೆಯ ವಾರದಲ್ಲಿ ದೆಹಲಿಯಲ್ಲಿ ಈ ಪುಸ್ತಕ ಬಿಡುಗಡೆಗೊಳ್ಳಲಿದೆ
ಎಂದು ತಿಳಿಸಿದ್ದಾರೆ.
ಐಹೊಳೆ, ಬಾದಾಮಿ, ಪಟ್ಟದಕಲ್ಲು, ಮಹಾಕೂಟ ದೇವಾಲಯಗಳನ್ನು ನಿರ್ಮಿಸಿ “ಹಿಂದೂ
ವಾಸ್ತು ಶಿಲ್ಪದ ಪ್ರಯೋಗ ಶಾಲೆ ಅಥವಾ ಹಿಂದೂ ವಾಸ್ತು ಶಿಲ್ಪದ ತೊಟ್ಟಿಲು” ಎಂದೇ ಪ್ರಸಿ
ದ್ಧಿಯಾಗಿರುವ ಚಾಲುಕ್ಯರ ಆಡಳಿತದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಅನೇಕ ವಿದ್ವಾಂಸರು
ಸಂಶೋದನೆಯಲ್ಲಿ ತೊಡಗಿಕೊಂಡಿದ್ದರು. ಆದರೆ ಈ ವಾಸ್ತುಶಿಲ್ಪದ ಪರಂಪರೆಯನ್ನು ಕೇವಲ ದಕ್ಷಿಣ
ಭಾರತಕ್ಕೆ ಮಾತ್ರ ಸೀಮಿತಗೊಳಿಸಿ ದಕ್ಷಿಣ ಭಾರತದ ಹಿಂದೂ ವಾಸ್ತು ಶಿಲ್ಪದ ಪ್ರಯೋಗ ಶಾಲೆ ಎಂದು
ಪರಿಗಣಿಸಿದ್ದರು. ಕೇವಲ 20 ಕಿ.ಮೀ ಅಂತರಗಳಲ್ಲಿ ಇಷ್ಟೊಂದು ಪ್ರಮಾಣ ವಿವಿಧ ಪದ್ಧತಿಯ
ದೇವಾಲಯಗಳು ಇಡೀ ದೇಶದಲ್ಲಿ ಕಂಡು ಬರುವುದು ಈ ಚಾಲುಕ್ಯರ ನಾಡಿನಲ್ಲಿ ಮಾತ್ರ.
ಹೀಗಾಗಿ ಇಡೀ ಭಾರತದಲ್ಲಿಯೇ ಇದೊಂದು ಅತೀ ದೊಡ್ಡ ದೇವಾಲಯ ನಿರ್ಮಾಣಗಳ
ಅಂದೋಲನವಾಗಿ ರೂಪಗೊಂಡಿತು ಇಡೀ ವಿಶ್ವ ಮಟ್ಟದಲ್ಲಿಯೇ ಹಿಂದೂ ವಾಸ್ತುಶಿಲ್ಪ ಹಾಗೂ
ಮೂರ್ತಿಶಿಲ್ಪ ಎರಡರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ 6ನೇ ಶತಮಾನದಿಂದ 8ನೇ
ಶತಮಾನದವರಿಗೆ ನಡೆದ ಈ ದೇವಾಲಯಗಳ ನಿರ್ಮಾಣದ ಅಂದೋಲನ ಹೊಸ ಶಿಲ್ಪಕಲಾ
ಪರಂಪರೆಗೆ ದಾರಿದೀಪವಾಯಿತು. ದ್ರಾವಿಡ ಹಾಗೂ ನಾಗರ ಶೈಲಿಯ ಈ ದೇವಾಲಯಗಳು
ಚಾಲುಕ್ಯರ ಶಿಲ್ಪ ಕಲೆ ಪರಂಪರಯ ಪರಾಕಾಷ್ಟೆಯನ್ನು ಎತ್ತಿ ತೋರುತ್ತವೆ. ಇಂತಹ ಮಹಾನ್
ರಾಜರುಗಳು ಬದುಕಿ ಬಾಳಿದ ಜೀವನ ವೃತ್ತಾಂತವೆ ಅತೀ ರೋಚಕ ಹಾಗೂ ರಹಸ್ಯಮಯ.
ಚಾಲುಕ್ಯರ ತಾವು ಬಾಳಿದ ಅರಮನೆಗಳ ಬಗ್ಗೆ ಯಾವ ಉಲ್ಲೆಖವು ಇಲ್ಲ ಮತ್ತು ಅರಮನೆಗಳ
ಯಾವುದೇ ಕುರುಹುಗಳು ಇಲ್ಲ. ತಮ್ಮ ಸಾವಿನ ನಂತರ ಆಡಂಬರದ ಸಾಮಾಧಿಗಳನ್ನು ಸಹ
ಕೆತ್ತಿಸಲಿಲ್ಲ. ಇವರ ಸಮಾಧಿಗಳೆಲ್ಲಿ ಎಂಬುವುದರ ಬಗ್ಗೆ ನೂರಾರು ಸಂಶೋಧಕರಿಗೆ ಸವಾಲಾಗಿಯೇ
ಉಳಿದಿತ್ತು. ಶಿವನನ್ನು ವಿಷ್ಣುವನ್ನು ನಂಬಿದ ಈ ಮಹಾನ ರಾಜರು ತಮ್ಮ ಸಾವನ್ನು ಸಹ
ರಹಸ್ಯಮಯಗೊಳಿಸಿರುವುದು ಆಶ್ಚರ್ಯವಾದರೂ ಸತ್ಯ.
ಚಾಲುಕ್ಯ ನಾಡಿಲ್ಲಿ 2005 ರಿಂದ ಸತತ ಹದಿನಾಲ್ಕು ವರ್ಷಗಳ ತಮ್ಮ ಚಾಲುಕ್ಯರ ನಾಡಿನ
ಸಂಶೋಧನೆಯ ಹಾಗೂ ಛಾಯಾಗ್ರಹಣದ ಹಾದಿಯಲ್ಲಿ ಅನೇಕ ರೋಚಕ ವಿಷಯಗಳು ಕಂಡುಬಂ
ದಿದ್ದು, ಚಾಲುಕ್ಯರ ನಾಡಿನಲ್ಲಿ ಬೆಳಕಿಗೆ ಬಾರದ ಶಕ್ತಿ ಆರಾಧನೆ ತಂತ್ರಸಾಧನೆಗಳು ಅನೇಕ
ಅಚ್ಚರಿಯನ್ನುಂಟು ಮಾಡಿವೆ ಎಂದು ಮಂಜುನಾಥ ಸುಳ್ಳೊಳ್ಳಿ ತಿಳಿಸಿದ್ದಾರೆ.
ಚಾಲುಕ್ಯರ ರಾಜವಂಶಸ್ಥರ ಮೂಲ ಸ್ಥಾನ ಹಾಗೂ ಇತಿಹಾಸದ ಬಗ್ಗೆ ಅನೇಕ
ಸಂಶೋಧನಾಕಾರರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ತುಂಗಭದ್ರಾ ಸುತ್ತಮುತ್ತಲಿನವರೆಂದು
ಸ್ಥಳಿಯ ಆಂಧ್ರದ ಗಡಿ ಭಾಗದವರೆಂದು ಅಲ್ಲದೆ ಇವರು ಸ್ಥಳಿಯ ಪಾಳೆಗಾರರೆಂದು ತಿಳಿಸಲಾಗಿದೆ.
ಡಾ.ಶೀಲಾಕಾಂತ ಪತ್ತಾರ ಅವರ ಪ್ರಕಾರ ಚಾಲುಕ್ಯರು ಕನ್ನಡನಾಡಿನವರು. ಸ್ಥಳಿಯ ಚಲಕಿ, ಸಲುಕಿ,
ಸಲಕಿ, ಎಲ್ಲವೂ ದೇಶಿಯ ನಾಮಗಳಿದ್ದು ಇವರೆಲ್ಲರೂ ಕೃಷಿಕರಾಗಿದ್ದರೆಂದು ತಿಳಿಸಿರುತ್ತಾರೆ. ಚಾಲುಕ್ಯರ
ನಾಡಿನಲ್ಲಿ ಸತತ ಮೂವತ್ತು ವರ್ಷಗಳ ಸಂಶೋಧನೆ ಕೈಗೊಂಡಿರುವ ವಿದೇಶಿ ವಿದ್ವಾಂಸ ಲಂಡನ್ನಿನ
ಡಾ. ಜಾರ್ಜ ಮಿಶೆಲ್ ಪ್ರಕಾರ ಒಟ್ಟು 16 ರಾಜವಂಶಸ್ಥರ ಪೀಳಿಗೆಯಲ್ಲಿ 7 ಪ್ರಮುಖರನ್ನು
ಉಲ್ಲೆಖಿಸಿರುತ್ತಾರೆ. 6ನೇ ಶತಮಾನದ ಆರಂಭದಲ್ಲಿ ಜಯಸಿಂಹನಿಂದ ಆರಂಭಗೊಂಡ ಈ ವಂಶ
757ರಲ್ಲಿ ಕೀರ್ತಿವರ್ಮನಿಂದ ಮುಕ್ತಾಯಗೊಳ್ಳುತ್ತದೆ.
ಹುಲಗೆಮ್ಮನ ಕೊಳ್ಳದ ಸಮಾಧಿ ರೂಪದ ದೇವಾಲಯಗಳು ಪಟ್ಟದಕಲ್ಲು ಹತ್ತಿರದ ಭದ್ರ
ನಾಯಕನ ಜಾಲಿಹಾಳ ಹತ್ತಿರದಲ್ಲಿವೆ. ಹುಲಗೆಮ್ಮನ ಕೊಳ್ಳದ ಗುಡ್ಡದಲ್ಲಿ 2ನೇ ಪುಲಿಕೇಶಿ ಕೆಲಕಾಲ
ವಾಸಿಸಿರುವುದರ ಬಗ್ಗೆ ಕೆಲ ಸಂಶೋಧನೆಕಾರರು ಉಲ್ಲೆಖಿಸಿರುತ್ತಾರೆ. ಇಲ್ಲಿರುವ 11 ಚಿಕ್ಕ ಚಿಕ್ಕ
ದೇವಾಲಯಗಳು ಹನ್ನೊಂದು ರಾಜರ ಸಮಾಧಿಗಳು ದೇಶದ ಪ್ರಮುಖ 12 ಜ್ಯೋತೀರ್ಲಿಂಗಗಳ
ರೂಪವೆಂದು ಸ್ಥಳೀಯರು ತಪ್ಪಾಗಿ ಅರ್ಥೈಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಒಂದೇ ವಂಶಸ್ಥರ
ಅಂತ್ಯಕ್ರಿಯೆಗಳನ್ನು ಒಂದೆಡೆ ಮಾಡುವುದು ಪರಂಪರಾಗತ ರೂಢಿ. ಅಲ್ಲದೆ ಚಾಲುಕ್ಯ ರಾಜರುಗಳ
ಅಸ್ತಿಗಳ ಅಂತ್ಯಕ್ರಿಯೆಗಳನ್ನು ಹುಲಗೆಮ್ಮನ ಕೊಳ್ಳದ ಬೆಟ್ಟದಲ್ಲಿ ಮಾಡಿ ಅದರ ಮೇಲೆ ಲಿಂಗಗಳನ್ನು
ಸ್ಥಾಪಿಸಿ ಚಿಕ್ಕ ಚಿಕ್ಕ ದೇವಸ್ಥಾನ ನಿರ್ಮಿಸಿಲಾಗಿದೆ.
ಈ ರಾಜ ವಂಶಸ್ಥರ ರುಧ್ರಭೂಮಿ ಇಲ್ಲಿರುವುದರ ಬಗ್ಗೆ ಅನೇಕ ಐತಿಹಗಳಿವೆ. ಇದಕ್ಕೆ
ಪುಷ್ಠಿಕರಿಸುವಂತೆ ಶಿಖರವಲ್ಲದ ಒಂದು ದೇವಾಲಯದ ಪಂಟಪದಲ್ಲಿ 2ನೇ ವಿಕ್ರಮಾದಿತ್ಯನ ಅಸ್ತಿಗಳನ್ನು
ಸಮಾಧಿ ಮಾಡಲಾಗಿರುವ ಬಗ್ಗೆ ಅಲ್ಲಿರುವ ಶಾಸನದಲ್ಲಿ ಉಲ್ಲೇಖಿಸಲಾಗಿದೆಯೆಂದು ಡಾ. ಜಾರ್ಜ್
ಮಿಶೆಲ್ ಸಂಶೋಧಿಸಿದ್ದಾರೆ.
ಉಳಿದ ಯಾವ ರಾಜರುಗಳ ಸಮಾಧಿಗಳ ಬಗ್ಗೆ ಉಲ್ಲೇಖವಿಲ್ಲವಾದರೂ ಸಹ ಹಿಂದೂ
ಸಂಪ್ರದಾಯದಂತೆ ರಾಜವಂಶಸ್ಥರ ಸಮಾಧಿಗಳನ್ನು ಒಂದಡೆ ನಿರ್ಮಿಸುವುದು ಹಾಗೂ ಸಮಾಧಿಗಳ
ಮೇಲೆ ಲಿಂಗಗಳನ್ನು ಇಡುವುದು ಧಾರ್ಮಿಕ ಪರಂಪರೆಯಾಗಿದೆ. ಈ ಹಿನ್ನೆಯಲ್ಲಿ ಹೆಚ್ಚಿನ
ಸಂಶೋಧನೆಯ ಅಗತ್ಯವಿದ್ದು ಪ್ರಾಚ್ಯ ಹಾಗೂ ಪುರಾತತ್ವ ಇಲಾಖೆಗಳು ಇಲ್ಲಿರುವ ಸಮಾಧಿಗಳ
ಉತ್ಖನನ ನಡೆಸಿದಲ್ಲಿ ಸತ್ಯಾಸತ್ಯತೆ ಗೊತ್ತಾಗುವುದೆಂದು ಮಂಜುನಾಥ ತಿಳಿಸಿದ್ದಾರೆ.
ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಕಾರ್ಬನ್ ಡೇಟಿಂಗ್ ಪ್ರಕಾರ ಆದಿಮಾನವನ ಅಸ್ತಿ ಪಂಜರಗಳ
ಕಾಲವನ್ನು ಗುರುತಿಸಲಾಗಿದೆ. ಈ ಹಿನ್ನಲೆಯಲ್ಲಿ ಇಡೀ ದೇಶದಲ್ಲಿಯೇ ಅತೀ ದೊಡ್ಡ ಹಿಂದೂ
ದೇವಾಲಯಗಳ ನಿರ್ಮಾಣದ ಆಂದೋಲನ ಆರಂಭಿಸಿದ ಚಾಲುಕ್ಯರ ಸಮಾಧಿಗಳ ಉತ್ಖನನ
ನಡೆಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.Conclusion:ETV-Bharat-Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.