ETV Bharat / sports

IND Vs BAN: ಮೊದಲ ಟೆಸ್ಟ್​ನಿಂದ ರೋಹಿತ್​ ಔಟ್​​, 12 ವರ್ಷಗಳ ಬಳಿಕ ವೇಗಿ ಉನದ್ಕತ್ ಕಮ್​ಬ್ಯಾಕ್​

author img

By

Published : Dec 11, 2022, 8:05 PM IST

Updated : Dec 11, 2022, 8:52 PM IST

ಬಾಂಗ್ಲಾದೇಶ ಹಾಗೂ ಭಾರತ​ ತಂಡಗಳ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಕೆಎಲ್​ ರಾಹುಲ್​ ತಂಡವನ್ನು ಮುನ್ನಡೆಸಲಿದ್ದಾರೆ.

Rohit Sharma ruled out of 1st Test and fast bowler Jaydev Unadkat added  to squad
IND Vs BNG: ಮೊದಲ ಟೆಸ್ಟ್​ನಿಂದ ರೋಹಿತ್​ ಔಟ್​​, ಜಯದೇವ್ ಉನದ್ಕತ್ ಕಮ್​ಬ್ಯಾಕ್​

ಬಾಂಗ್ಲಾದೇಶ ಹಾಗೂ ಭಾರತ ಕ್ರಿಕೆಟ್​ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಿಂದ ಗಾಯಾಳು ನಾಯಕ ರೋಹಿತ್​ ಶರ್ಮಾ ಹೊರಬಿದ್ದಿದ್ದಾರೆ. ಸರಣಿಯಲ್ಲಿ ಇತರ ಕೆಲ ಗಾಯಾಳುಗಳ ಬದಲಿಗೆ ಬೇರೆ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಈ ಬಗ್ಗೆ ಬಿಸಿಸಿಐ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದೆ. ರೋಹಿತ್​ ಶರ್ಮಾ ಹೆಬ್ಬೆರಳಿನ ಗಾಯದಿಂದ ತವರಿಗೆ ಮರಳಿರುವ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ನಾಯಕತ್ವವು ಕೆಎಲ್ ರಾಹುಲ್ ಹೆಗಲಿಗೇರಿದ್ದು, ಬದಲಿ ಆಟಗಾರನಾಗಿ ಅಭಿಮನ್ಯು ಈಶ್ವರನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

The selection committee has also added fast bowler Jaydev Unadkat to India’s squad for the Test series.

More details here - https://t.co/LDfGOYmMkz #BANvIND https://t.co/beOdgO2SYX

— BCCI (@BCCI) December 11, 2022

ಅಲ್ಲದೆ, ಗಾಯಗೊಂಡಿರುವ ವೇಗದ ಬೌಲರ್​ ಮೊಹಮ್ಮದ್ ಶಮಿ ಮತ್ತು ಆಲ್​ರೌಂಡರ್​ ರವೀಂದ್ರ ಜಡೇಜಾ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ವೇಗಿ ನವದೀಪ್ ಸೈನಿ ಮತ್ತು ಸೌರಭ್ ಕುಮಾರ್ ತಂಡ ಸೇರಿಕೊಳ್ಳಲಿದ್ದಾರೆ.

ವಿಶೇಷವೆಂದರೆ ಆಯ್ಕೆ ಸಮಿತಿಯು ವೇಗದ ಬೌಲರ್ ಜಯದೇವ್ ಉನದ್ಕತ್ ಅವರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡಿದೆ. ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಉನದ್ಕತ್ 12 ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ. ಉನದ್ಕತ್ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿದ್ದರು. ಬಳಿಕ 7 ಅಂತಾರಾಷ್ಟ್ರೀಯ ಏಕದಿನ ಹಾಗೂ 10 ಟಿ20 ಪಂದ್ಯಗಳಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಮೊದಲ ಟೆಸ್ಟ್​ ಪಂದ್ಯವು ಡಿ.14ರಿಂದ ಚಿತ್ತಗಾಂಗ್​ನಲ್ಲಿ ಆರಂಭವಾಗಲಿದ್ದು, ಡಿ. 22ರಿಂದ ಢಾಕಾದಲ್ಲಿ ದ್ವಿತೀಯ ಟೆಸ್ಟ್​ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಕ್ರಿಕೆಟ್​ಗೆ ಮರಳಲು ಕಾತರ: ಭಾವನಾತ್ಮಕ ಟ್ವೀಟ್​ ಮಾಡಿದ ಕರುಣ್​ ನಾಯರ್​

ಬಾಂಗ್ಲಾದೇಶ ಹಾಗೂ ಭಾರತ ಕ್ರಿಕೆಟ್​ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಿಂದ ಗಾಯಾಳು ನಾಯಕ ರೋಹಿತ್​ ಶರ್ಮಾ ಹೊರಬಿದ್ದಿದ್ದಾರೆ. ಸರಣಿಯಲ್ಲಿ ಇತರ ಕೆಲ ಗಾಯಾಳುಗಳ ಬದಲಿಗೆ ಬೇರೆ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಈ ಬಗ್ಗೆ ಬಿಸಿಸಿಐ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದೆ. ರೋಹಿತ್​ ಶರ್ಮಾ ಹೆಬ್ಬೆರಳಿನ ಗಾಯದಿಂದ ತವರಿಗೆ ಮರಳಿರುವ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ನಾಯಕತ್ವವು ಕೆಎಲ್ ರಾಹುಲ್ ಹೆಗಲಿಗೇರಿದ್ದು, ಬದಲಿ ಆಟಗಾರನಾಗಿ ಅಭಿಮನ್ಯು ಈಶ್ವರನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಲ್ಲದೆ, ಗಾಯಗೊಂಡಿರುವ ವೇಗದ ಬೌಲರ್​ ಮೊಹಮ್ಮದ್ ಶಮಿ ಮತ್ತು ಆಲ್​ರೌಂಡರ್​ ರವೀಂದ್ರ ಜಡೇಜಾ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ವೇಗಿ ನವದೀಪ್ ಸೈನಿ ಮತ್ತು ಸೌರಭ್ ಕುಮಾರ್ ತಂಡ ಸೇರಿಕೊಳ್ಳಲಿದ್ದಾರೆ.

ವಿಶೇಷವೆಂದರೆ ಆಯ್ಕೆ ಸಮಿತಿಯು ವೇಗದ ಬೌಲರ್ ಜಯದೇವ್ ಉನದ್ಕತ್ ಅವರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡಿದೆ. ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಉನದ್ಕತ್ 12 ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ. ಉನದ್ಕತ್ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿದ್ದರು. ಬಳಿಕ 7 ಅಂತಾರಾಷ್ಟ್ರೀಯ ಏಕದಿನ ಹಾಗೂ 10 ಟಿ20 ಪಂದ್ಯಗಳಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಮೊದಲ ಟೆಸ್ಟ್​ ಪಂದ್ಯವು ಡಿ.14ರಿಂದ ಚಿತ್ತಗಾಂಗ್​ನಲ್ಲಿ ಆರಂಭವಾಗಲಿದ್ದು, ಡಿ. 22ರಿಂದ ಢಾಕಾದಲ್ಲಿ ದ್ವಿತೀಯ ಟೆಸ್ಟ್​ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಕ್ರಿಕೆಟ್​ಗೆ ಮರಳಲು ಕಾತರ: ಭಾವನಾತ್ಮಕ ಟ್ವೀಟ್​ ಮಾಡಿದ ಕರುಣ್​ ನಾಯರ್​

Last Updated : Dec 11, 2022, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.