ETV Bharat / sports

ರಾಯಲ್ ಲಂಡನ್ ಒಂಡೇ ಕಪ್​ನಿಂದ ಹೊರ ಬಂದ ಶ್ರೇಯಸ್ ಅಯ್ಯರ್ : ಬೇಸರ ವ್ಯಕ್ತಪಡಿಸಿದ ಲಂಕಾಶೈರ್ ಕ್ಲಬ್​

author img

By

Published : Jul 19, 2021, 8:31 PM IST

ನಾವು ಲಂಕಾಷೈರ್‌ನ ಕ್ರಿಕೆಟ್ ನಿರ್ದೇಶಕ ಪಾಲ್ ಅಲೋಟ್ ಹೀಗೆ ಹೇಳಿದರು. ನಾವು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ಗೆ ಶ್ರೇಯಾಸ್ ಅವರನ್ನು ಸ್ವಾಗತಿಸಲು ಸಂಪೂರ್ಣವಾಗಿ ಎದುರು ನೋಡುತ್ತಿದ್ದರಿಂದ, ನಾವೀಗ ತುಂಬಾ ನಿರಾಶೆಗೊಂಡಿದ್ದೇವೆ..

Shreyas Iyer ruled out of Lancashire
ಶ್ರೇಯಸ್ ಅಯ್ಯರ್

ಮ್ಯಾಂಚೆಸ್ಟರ್​ : ಭಾರತ ತಂಡದ ವೈಟ್ ಬಾಲ್ ಸ್ಪೆಷಲಿಸ್ಟ್​ ಶ್ರೇಯಸ್ ಅಯ್ಯರ್ ಭುಜದ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆ ಅವರು ಲಂಕಾಶೈರ್ ತಂಡದ ಪರ ರಾಯಲ್​ ಲಂಡನ್ ಕಪ್​ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

ಶ್ರೇಯಸ್ ಅಯ್ಯರ್ ಇಂಗ್ಲೆಂಡ್​ ವಿರುದ್ಧ ಪುಣೆಯಲ್ಲಿ ನಡೆದಿದ್ದ ಏಕದಿನ ಪಂದ್ಯದ ವೇಳೆ ಭುಜದ ನೋವಿಗೆ ತುತ್ತಾಗಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಐಪಿಎಲ್​ನಿಂದಲೂ ಹೊರ ಬಿದ್ದಿದ್ದರು.

ಈಗಾಗಲೇ ಅಯ್ಯರ್ ನೆಟ್ಸ್​ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಆದರೆ, ಜುಲೈ 22ರಿಂದ ಆರಂಭವಾಗಲಿರುವ ಟೂರ್ನಿಗೆ ಸಂಪೂರ್ಣ ಸಿದ್ಧರಾಗಿಲ್ಲ. ಹಾಗಾಗಿ, ಟೂರ್ನಿಯಿಂದ ಹೊರ ಬಂದಿದ್ದಾರೆ. ಲಂಕಾಶೈರ್ ಕ್ಲಬ್​ ಈ ವಿಚಾರವನ್ನು ಪ್ರಕಟಣೆ ಮೂಲಕ ತಿಳಿಸಿದೆ.

ಕ್ಲಬ್ ಮತ್ತು ಬಿಸಿಸಿಐ ನಡುವಿನ ಚರ್ಚೆಯ ನಂತರ ಆಟಗಾರರ ಪ್ರತಿನಿಧಿಗಳಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಯ್ಯರ್ ಕ್ರಿಕೆಟ್​ಗೆ ಮರಳುವ ಮುನ್ನ ಪುನಶ್ಚೇತನ ಕಾರ್ಯಕ್ಕಾಗಿ ಭಾರತದಲ್ಲೇ ಉಳಿಯಲಿದ್ದಾರೆ" ಎಂದು ಕ್ಲಬ್​ ಹೇಳಿಕೆ ಬಿಡುಗಡೆ ಮಾಡಿದೆ.

ನಾವು ಲಂಕಾಷೈರ್‌ನ ಕ್ರಿಕೆಟ್ ನಿರ್ದೇಶಕ ಪಾಲ್ ಅಲೋಟ್ ಹೀಗೆ ಹೇಳಿದರು: "ನಾವು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ಗೆ ಶ್ರೇಯಾಸ್ ಅವರನ್ನು ಸ್ವಾಗತಿಸಲು ಸಂಪೂರ್ಣವಾಗಿ ಎದುರು ನೋಡುತ್ತಿದ್ದರಿಂದ, ನಾವೀಗ ತುಂಬಾ ನಿರಾಶೆಗೊಂಡಿದ್ದೇವೆ."

"ನಾವು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್​ನಲ್ಲಿ ಶ್ರೇಯಾಸ್ ಅವರನ್ನು ಸ್ವಾಗತಿಸಲು ಸಂಪೂರ್ಣವಾಗಿ ಎದುರು ನೋಡುತ್ತಿದ್ದೆವು. ಆದರೆ, ಅವರ ಟೂರ್ನಿಗೆ ಅಲಭ್ಯರಾಗುತ್ತಿರುವುದು ನಮಗೆ ತುಂಬಾ ನಿರಾಶೆ ತಂದಿದೆ" ಎಂದು ಲಂಕಾಶೈರ್​ನ ಕ್ರಿಕೆಟ್ ನಿರ್ದೇಶಕ ಪಾಲ್ ಅಲೋಟ್ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಅಂತಿಮವಾಗಿ ಶ್ರೇಯಸ್ ಅವರ ದೀರ್ಘಾವಧಿಯ ಫಿಟ್ನೆಸ್ ಅತ್ಯಂತ ಮಹತ್ವದ್ದಾಗಿದೆ ಮತ್ತು ಲಂಕಾಷೈರ್ ಕ್ರಿಕೆಟ್ ಈ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಎಂದಿದ್ದಾರೆ.

ಈ ಬೇಸಿಗೆಯಲ್ಲಿ ನಾನು ಲಂಕಾಶೈರ್ ಅಂತಹ ಇತಿಹಾಸ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕ್ಲಬ್ ಪರ ಆಡಲು ಸಾಧ್ಯವಾಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲಿ ಕೆಲವು ಹಂತದಲ್ಲಿ ಲ್ಯಾಂಕಾಶೈರ್​ಗಾಗಿ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್​ನಲ್ಲಿ ಆಡಲು ನಾನು ಆಶಿಸುತ್ತೇನೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇದನ್ನು ಓದಿ:ಭಾರತ ತಂಡದ ಮುಖ್ಯ ಕೋಚ್ ಆಗಲು ದ್ರಾವಿಡ್ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ : ಅಗರ್ಕರ್​

ಮ್ಯಾಂಚೆಸ್ಟರ್​ : ಭಾರತ ತಂಡದ ವೈಟ್ ಬಾಲ್ ಸ್ಪೆಷಲಿಸ್ಟ್​ ಶ್ರೇಯಸ್ ಅಯ್ಯರ್ ಭುಜದ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆ ಅವರು ಲಂಕಾಶೈರ್ ತಂಡದ ಪರ ರಾಯಲ್​ ಲಂಡನ್ ಕಪ್​ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

ಶ್ರೇಯಸ್ ಅಯ್ಯರ್ ಇಂಗ್ಲೆಂಡ್​ ವಿರುದ್ಧ ಪುಣೆಯಲ್ಲಿ ನಡೆದಿದ್ದ ಏಕದಿನ ಪಂದ್ಯದ ವೇಳೆ ಭುಜದ ನೋವಿಗೆ ತುತ್ತಾಗಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಐಪಿಎಲ್​ನಿಂದಲೂ ಹೊರ ಬಿದ್ದಿದ್ದರು.

ಈಗಾಗಲೇ ಅಯ್ಯರ್ ನೆಟ್ಸ್​ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಆದರೆ, ಜುಲೈ 22ರಿಂದ ಆರಂಭವಾಗಲಿರುವ ಟೂರ್ನಿಗೆ ಸಂಪೂರ್ಣ ಸಿದ್ಧರಾಗಿಲ್ಲ. ಹಾಗಾಗಿ, ಟೂರ್ನಿಯಿಂದ ಹೊರ ಬಂದಿದ್ದಾರೆ. ಲಂಕಾಶೈರ್ ಕ್ಲಬ್​ ಈ ವಿಚಾರವನ್ನು ಪ್ರಕಟಣೆ ಮೂಲಕ ತಿಳಿಸಿದೆ.

ಕ್ಲಬ್ ಮತ್ತು ಬಿಸಿಸಿಐ ನಡುವಿನ ಚರ್ಚೆಯ ನಂತರ ಆಟಗಾರರ ಪ್ರತಿನಿಧಿಗಳಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಯ್ಯರ್ ಕ್ರಿಕೆಟ್​ಗೆ ಮರಳುವ ಮುನ್ನ ಪುನಶ್ಚೇತನ ಕಾರ್ಯಕ್ಕಾಗಿ ಭಾರತದಲ್ಲೇ ಉಳಿಯಲಿದ್ದಾರೆ" ಎಂದು ಕ್ಲಬ್​ ಹೇಳಿಕೆ ಬಿಡುಗಡೆ ಮಾಡಿದೆ.

ನಾವು ಲಂಕಾಷೈರ್‌ನ ಕ್ರಿಕೆಟ್ ನಿರ್ದೇಶಕ ಪಾಲ್ ಅಲೋಟ್ ಹೀಗೆ ಹೇಳಿದರು: "ನಾವು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ಗೆ ಶ್ರೇಯಾಸ್ ಅವರನ್ನು ಸ್ವಾಗತಿಸಲು ಸಂಪೂರ್ಣವಾಗಿ ಎದುರು ನೋಡುತ್ತಿದ್ದರಿಂದ, ನಾವೀಗ ತುಂಬಾ ನಿರಾಶೆಗೊಂಡಿದ್ದೇವೆ."

"ನಾವು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್​ನಲ್ಲಿ ಶ್ರೇಯಾಸ್ ಅವರನ್ನು ಸ್ವಾಗತಿಸಲು ಸಂಪೂರ್ಣವಾಗಿ ಎದುರು ನೋಡುತ್ತಿದ್ದೆವು. ಆದರೆ, ಅವರ ಟೂರ್ನಿಗೆ ಅಲಭ್ಯರಾಗುತ್ತಿರುವುದು ನಮಗೆ ತುಂಬಾ ನಿರಾಶೆ ತಂದಿದೆ" ಎಂದು ಲಂಕಾಶೈರ್​ನ ಕ್ರಿಕೆಟ್ ನಿರ್ದೇಶಕ ಪಾಲ್ ಅಲೋಟ್ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಅಂತಿಮವಾಗಿ ಶ್ರೇಯಸ್ ಅವರ ದೀರ್ಘಾವಧಿಯ ಫಿಟ್ನೆಸ್ ಅತ್ಯಂತ ಮಹತ್ವದ್ದಾಗಿದೆ ಮತ್ತು ಲಂಕಾಷೈರ್ ಕ್ರಿಕೆಟ್ ಈ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಎಂದಿದ್ದಾರೆ.

ಈ ಬೇಸಿಗೆಯಲ್ಲಿ ನಾನು ಲಂಕಾಶೈರ್ ಅಂತಹ ಇತಿಹಾಸ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕ್ಲಬ್ ಪರ ಆಡಲು ಸಾಧ್ಯವಾಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲಿ ಕೆಲವು ಹಂತದಲ್ಲಿ ಲ್ಯಾಂಕಾಶೈರ್​ಗಾಗಿ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್​ನಲ್ಲಿ ಆಡಲು ನಾನು ಆಶಿಸುತ್ತೇನೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇದನ್ನು ಓದಿ:ಭಾರತ ತಂಡದ ಮುಖ್ಯ ಕೋಚ್ ಆಗಲು ದ್ರಾವಿಡ್ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ : ಅಗರ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.