ETV Bharat / sports

‘‘ಧೋನಿ ಮೆಂಟರ್ ಆಗಿ ​ಹಾಗೂ ರಾಹುಲ್ ಕೋಚ್ ಸ್ಥಾನದಲ್ಲಿ ನೋಡಲು ಬಯಸುತ್ತೇನೆ‘‘: ಹೀಗೆ ಹೇಳಿದ್ಯಾರು?

author img

By

Published : Oct 1, 2021, 12:43 PM IST

ರವಿಶಾಸ್ತ್ರಿ ಬಳಿಕ ಭಾರತ ಕ್ರಿಕೆಟ್ ತಂಡದ ಕೋಚ್​ ಆಗಿ ಯಾರು ನೇಮಕವಾಗಲಿದ್ದಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಮಾಜಿ ಆಟಗಾರ ಕನ್ನಡಿಗ ರಾಹುಲ್ ದ್ರಾವಿಡ್ ಈ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯೂ ಹೆಚ್ಚಿದ್ದು, ಈ ನಡುವೆ ಎಂಎಸ್​​ಕೆ ಸಹ ದ್ರಾವಿಡ್ ಕೋಚ್ ಆಗಲಿ ಎಂದಿದ್ದಾರೆ.

Rahul AND Dhoni
ರಾಹುಲ್ ದ್ರಾವಿಡ್ ಮತ್ತು ಧೋನಿ

ನವದೆಹಲಿ: ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರಿ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಈ ಹಿನ್ನೆಲೆ ಆ ಜಾಗಕ್ಕೆ ಹಲವರ ಹೆಸರು ಕೇಳಿ ಬರುತ್ತಿದೆ. ಇದೀಗ ಟೀಂ ಇಂಡಿಯಾ ತಂಡದ ಮುಖ್ಯ ಆಯ್ಕೆಗಾರರಾಗಿದ್ದ ಎಂಎಸ್​​​ಕೆ ಪ್ರಸಾದ್​ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಲಿ ಎಂದು ಸಲಹೆ ನೀಡಿದ್ದಾರೆ.

ಐಪಿಎಲ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಕೋಚ್ ಹುದ್ದೆಗೆ ದ್ರಾವಿಡ್ ಸೂಕ್ತ ವ್ಯಕ್ತಿ ಎನಿಸುತ್ತಾರೆ. ರವಿ ಭಾಯ್ ಬಳಿಕ ಆ ಜಾಗದಲ್ಲಿ ರಾಹುಲ್ ಹಾಗೂ ಮೆಂಟರ್​ ಆಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೋಡಲು ಬಯಸಿದ್ದೇನೆ. ರಾಹುಲ್ ದ್ರಾವಿಡ್​ಗೆ ಆಟದ ವಿಚಾರದಲ್ಲಿ ಅನುಭವವಿದೆ. ಭಾರತ ತಂಡಕ್ಕೆ ಹೆಚ್ಚಿನ ಮೌಲ್ಯ ತಂದುಕೊಡಲಿದ್ದಾರೆ ಎಂದೆನಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಹುಲ್ ಕೋಚ್ ಆಗಿ, ಎಂಎಸ್ ಮಾರ್ಗದರ್ಶಕರಾಗಿ ಭಾರತೀಯ ಕ್ರಿಕೆಟ್​ಗೆ ವರದಾನವಾಗುತ್ತಾರೆ. ಇಬ್ಬರೂ ಶಾಂತ ಮತ್ತು ಶ್ರಮಜೀವಿಗಳು. ಹೆಚ್ಚು ಮುಖ್ಯವಾಗಿ ಈ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಹೆಚ್ಚಾಗಿ ರಾಹುಲ್‌ ತಿದ್ದುತ್ತಾರೆ. ರಾಹುಲ್ ಕೋಚ್ ಹುದ್ದೆ ಅಲಂಕರಿಸದಿದ್ದರೆ ಬೇಸರಗೊಳ್ಳುವವರಲ್ಲಿ ನಾನು ಮೊದಲಿಗನಾಗುತ್ತೇನೆ ಎಂದಿದ್ದಾರೆ ಎಂಎಸ್​​ಕೆ ಪ್ರಸಾದ್​​.

ಇದನ್ನೂ ಓದಿ: ಟಿ-20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗುವುದು ಉತ್ತಮ: ಗವಾಸ್ಕರ್ ಅಭಿಪ್ರಾಯ

ನವದೆಹಲಿ: ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರಿ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಈ ಹಿನ್ನೆಲೆ ಆ ಜಾಗಕ್ಕೆ ಹಲವರ ಹೆಸರು ಕೇಳಿ ಬರುತ್ತಿದೆ. ಇದೀಗ ಟೀಂ ಇಂಡಿಯಾ ತಂಡದ ಮುಖ್ಯ ಆಯ್ಕೆಗಾರರಾಗಿದ್ದ ಎಂಎಸ್​​​ಕೆ ಪ್ರಸಾದ್​ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಲಿ ಎಂದು ಸಲಹೆ ನೀಡಿದ್ದಾರೆ.

ಐಪಿಎಲ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಕೋಚ್ ಹುದ್ದೆಗೆ ದ್ರಾವಿಡ್ ಸೂಕ್ತ ವ್ಯಕ್ತಿ ಎನಿಸುತ್ತಾರೆ. ರವಿ ಭಾಯ್ ಬಳಿಕ ಆ ಜಾಗದಲ್ಲಿ ರಾಹುಲ್ ಹಾಗೂ ಮೆಂಟರ್​ ಆಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೋಡಲು ಬಯಸಿದ್ದೇನೆ. ರಾಹುಲ್ ದ್ರಾವಿಡ್​ಗೆ ಆಟದ ವಿಚಾರದಲ್ಲಿ ಅನುಭವವಿದೆ. ಭಾರತ ತಂಡಕ್ಕೆ ಹೆಚ್ಚಿನ ಮೌಲ್ಯ ತಂದುಕೊಡಲಿದ್ದಾರೆ ಎಂದೆನಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಹುಲ್ ಕೋಚ್ ಆಗಿ, ಎಂಎಸ್ ಮಾರ್ಗದರ್ಶಕರಾಗಿ ಭಾರತೀಯ ಕ್ರಿಕೆಟ್​ಗೆ ವರದಾನವಾಗುತ್ತಾರೆ. ಇಬ್ಬರೂ ಶಾಂತ ಮತ್ತು ಶ್ರಮಜೀವಿಗಳು. ಹೆಚ್ಚು ಮುಖ್ಯವಾಗಿ ಈ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಹೆಚ್ಚಾಗಿ ರಾಹುಲ್‌ ತಿದ್ದುತ್ತಾರೆ. ರಾಹುಲ್ ಕೋಚ್ ಹುದ್ದೆ ಅಲಂಕರಿಸದಿದ್ದರೆ ಬೇಸರಗೊಳ್ಳುವವರಲ್ಲಿ ನಾನು ಮೊದಲಿಗನಾಗುತ್ತೇನೆ ಎಂದಿದ್ದಾರೆ ಎಂಎಸ್​​ಕೆ ಪ್ರಸಾದ್​​.

ಇದನ್ನೂ ಓದಿ: ಟಿ-20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗುವುದು ಉತ್ತಮ: ಗವಾಸ್ಕರ್ ಅಭಿಪ್ರಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.