ETV Bharat / sports

ಮಹಾರಾಜ ಟ್ರೋಫಿ.. ಫೈನಲ್‌ ತಲುಪಿದ ಬೆಂಗಳೂರು ಬ್ಲಾಸ್ಟರ್ಸ್‌, ಹುಬ್ಬಳ್ಳಿ ಟೈಗರ್ಸ್​ ಟೂರ್ನಿಯಿಂದ ಔಟ್​

ಮಹಾರಾಜ ಟ್ರೋಫಿಯ ಕ್ವಾಲಿಫೈಯರ್​ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್​ ವಿರುದ್ಧ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್​ ತಂಡ ಫೈನಲ್​ ತಲುಪಿತು. ಇನ್ನೊಂದು ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ವಿರುದ್ಧ ಸೋತ ಹುಬ್ಬಳ್ಳಿ ಟೈಗರ್ಸ್​ ಟೂರ್ನಿಯಿಂದ ಹೊರಬಿದ್ದಿದೆ.

author img

By

Published : Aug 24, 2022, 7:18 AM IST

Updated : Aug 24, 2022, 9:17 AM IST

maharaja-trophy
ಮಹಾರಾಜ ಟ್ರೋಫಿ

ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ಮಂಗಳವಾರ ನಡೆದ ಮಹಾರಾಜ ಕಪ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ನಾಯಕ ಮಯಾಂಕ್‌ ಅಗರ್ವಾಲ್‌ ಶತಕ ಮತ್ತು ಎಲ್‌.ಆರ್‌. ಚೇತನ್​ರ ಅರ್ಧಶತಕದ ಬಲದಿಂದ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 44 ರನ್​ಗಳ ಜಯ ಗಳಿಸಿ ಬೆಂಗಳೂರು ಬ್ಲಾಸ್ಟರ್ಸ್‌ ಫೈನಲ್‌ ತಲುಪಿತು. ಇನ್ನೊಂದೆಡೆ ಎಲಿಮಿನೇಟರ್​ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಸೋತ ಹುಬ್ಬಳ್ಳಿ ಟೈಗರ್ಸ್​ ಟೂರ್ನಿಯಿಂದ ಹೊರಬಿದ್ದಿದೆ.

ಮೊದಲು ಬ್ಯಾಟ್​ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್​ ತಂಡ ನಾಯಕ ಮಯಾಂಕ್​ ಅಗರ್ವಾಲ್​ರ ಅಬ್ಬರದ ಶತಕ (112) ಮತ್ತು ಚೇತನ್​ (88) ಅರ್ಧಶತಕದಿಂದಾಗಿ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 227 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಕೊನೆಯಲ್ಲಿ ಅನಿರುದ್ಧ್​ ಜೋಶಿ 20 ರನ್​ ಚಚ್ಚಿದರು.

ಬೃಹತ್​ ಮೊತ್ತ ಬೆನ್ನತ್ತಿದ ಗುಲ್ಬರ್ಗ ಮಿಸ್ಟಿಕ್ಸ್‌ ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ಆದರೆ, ರೋಹನ್‌ ಪಾಟೀಲ್‌ ಗಟ್ಟಿಯಾಗಿ ನೆಲೆಯೂರಿ 108 ರನ್‌ ಗಳಿಸಿದರು. ಏಕಾಂಗಿಯಾಗಿ ಹೋರಾಟ ನಡೆಸಿದ ಪಾಟೀಲ್​ ಶತಕಕ್ಕೆ ಗೆಲುವು ಮಾತ್ರ ಧಕ್ಕಲಿಲ್ಲ. 44 ರನ್​ಗಳಿಂದ ಗೆಲುವು ಕಂಡ ಬೆಂಗಳೂರು ತಂಡ ಫೈನಲ್​ ತಲುಪಿತು.

ಟೂರ್ನಿಯಲ್ಲೇ ಅತ್ಯಧಿಕ ಮೊತ್ತ: ಬೆಂಗಳೂರು ಬ್ಲಾಸ್ಟರ್ಸ್ ತಂಡ ಗಳಿಸಿದ 227 ರನ್​ಗಳು ಮಹಾರಾಜ ಟ್ರೋಫಿಯಲ್ಲೇ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿದೆ. ಅಂತಾರಾಷ್ಟ್ರೀಯ ಆಟಗಾರ ಮಯಾಂಕ್‌ ಅಗರ್ವಾಲ್‌ ಕೇವಲ 61 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿನಿಂದ ಅಜೇಯ 112 ರನ್‌ ಗಳಿಸಿ ಟೂರ್ನಿಯಲ್ಲಿ ವೈಯಕ್ತಿಕ ಎರಡನೇ ಶತಕ ದಾಖಲಿಸಿದರು.

ದುಬಾರಿ ಬೌಲರ್‌: ಗುಲ್ಬರ್ಗ ಮಿಸ್ಟಿಕ್ಸ್​ನ ಬೌಲರ್​ಗಳಾದ ಧನುಶ್‌ ಗೌಡ ಎರಡೇ ಓವರ್‌ನಲ್ಲಿ 38 ರನ್‌ ನೀಡಿದರೆ, ಅಜಯ್‌ ಗೌಡ 4 ಓವರ್‌ಗಳಲ್ಲಿ 59 ರನ್‌ ನೀಡಿ ಟೂರ್ನಿಯಲ್ಲಿಯೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್‌ ನೀಡಿದ ಬೌಲರ್‌ ಎನಿಸಿದರು.

ಹುಬ್ಭಳ್ಳಿ ಟೈಗರ್ಸ್​ ಔಟ್​: ಇದಕ್ಕೂ ಮೊದಲು ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡ ಹುಬ್ಬಳ್ಳಿ ಟೈಗರ್ಸ್​ ವಿರುದ್ಧ 5 ವಿಕೆಟ್ ಜಯ ಸಾಧಿಸಿತು. ಹುಬ್ಬಳ್ಳಿ ಟೈಗರ್ಸ್​ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 164 ರನ್ ಗಳಿಸಿತು. ಸಾಧಾರಣ ಗುರಿ ಹೊತ್ತ ಮೈಸೂರು ವಾರಿಯರ್ಸ್​ ನಿಹಾಲ್​ ಉಲ್ಲಾಲ್​ರ (77) ಅರ್ಧಶತಕದ ನೆರವಿನಿಂದ 5 ಬೌಲ್​ ಉಳಿದಿರುವಂತೆಯೇ ಗೆಲುವಿನ ನಗೆ ಬೀರಿತು.

ಇದರಿಂದ ಹುಬ್ಬಳ್ಳಿ ಟೈಗರ್ಸ್​ ಟೂರ್ನಿಯಿಂದ ಹೊರಬಿದ್ದರೆ, ಮೈಸೂರು ವಾರಿಯರ್ಸ್​ ಎರಡನೇ ಕ್ವಾಲಿಫೈಯರ್​ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿತು. ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ಮತ್ತು ಮೈಸೂರು ವಾರಿಯರ್ಸ್‌ ತಂಡಗಳು ಸೆಣಸಾಡಲಿವೆ. ಇಲ್ಲಿ ಗೆದ್ದ ತಂಡ ಬೆಂಗಳೂರು ಬ್ಲಾಸ್ಟರ್ಸ್​ ಎದುರು ಫೈನಲ್​ ಆಡಲಿದೆ.

ಓದಿ: ಚೊಚ್ಚಲ ಶತಕ ತಂದೆಗೆ ಅರ್ಪಿಸಿದ ಗಿಲ್​​.. ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಯುವಿ ಭೇಟಿಯಾಗಿದ್ದರಂತೆ ಶುಭಮನ್

ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ಮಂಗಳವಾರ ನಡೆದ ಮಹಾರಾಜ ಕಪ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ನಾಯಕ ಮಯಾಂಕ್‌ ಅಗರ್ವಾಲ್‌ ಶತಕ ಮತ್ತು ಎಲ್‌.ಆರ್‌. ಚೇತನ್​ರ ಅರ್ಧಶತಕದ ಬಲದಿಂದ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 44 ರನ್​ಗಳ ಜಯ ಗಳಿಸಿ ಬೆಂಗಳೂರು ಬ್ಲಾಸ್ಟರ್ಸ್‌ ಫೈನಲ್‌ ತಲುಪಿತು. ಇನ್ನೊಂದೆಡೆ ಎಲಿಮಿನೇಟರ್​ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಸೋತ ಹುಬ್ಬಳ್ಳಿ ಟೈಗರ್ಸ್​ ಟೂರ್ನಿಯಿಂದ ಹೊರಬಿದ್ದಿದೆ.

ಮೊದಲು ಬ್ಯಾಟ್​ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್​ ತಂಡ ನಾಯಕ ಮಯಾಂಕ್​ ಅಗರ್ವಾಲ್​ರ ಅಬ್ಬರದ ಶತಕ (112) ಮತ್ತು ಚೇತನ್​ (88) ಅರ್ಧಶತಕದಿಂದಾಗಿ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 227 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಕೊನೆಯಲ್ಲಿ ಅನಿರುದ್ಧ್​ ಜೋಶಿ 20 ರನ್​ ಚಚ್ಚಿದರು.

ಬೃಹತ್​ ಮೊತ್ತ ಬೆನ್ನತ್ತಿದ ಗುಲ್ಬರ್ಗ ಮಿಸ್ಟಿಕ್ಸ್‌ ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ಆದರೆ, ರೋಹನ್‌ ಪಾಟೀಲ್‌ ಗಟ್ಟಿಯಾಗಿ ನೆಲೆಯೂರಿ 108 ರನ್‌ ಗಳಿಸಿದರು. ಏಕಾಂಗಿಯಾಗಿ ಹೋರಾಟ ನಡೆಸಿದ ಪಾಟೀಲ್​ ಶತಕಕ್ಕೆ ಗೆಲುವು ಮಾತ್ರ ಧಕ್ಕಲಿಲ್ಲ. 44 ರನ್​ಗಳಿಂದ ಗೆಲುವು ಕಂಡ ಬೆಂಗಳೂರು ತಂಡ ಫೈನಲ್​ ತಲುಪಿತು.

ಟೂರ್ನಿಯಲ್ಲೇ ಅತ್ಯಧಿಕ ಮೊತ್ತ: ಬೆಂಗಳೂರು ಬ್ಲಾಸ್ಟರ್ಸ್ ತಂಡ ಗಳಿಸಿದ 227 ರನ್​ಗಳು ಮಹಾರಾಜ ಟ್ರೋಫಿಯಲ್ಲೇ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿದೆ. ಅಂತಾರಾಷ್ಟ್ರೀಯ ಆಟಗಾರ ಮಯಾಂಕ್‌ ಅಗರ್ವಾಲ್‌ ಕೇವಲ 61 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿನಿಂದ ಅಜೇಯ 112 ರನ್‌ ಗಳಿಸಿ ಟೂರ್ನಿಯಲ್ಲಿ ವೈಯಕ್ತಿಕ ಎರಡನೇ ಶತಕ ದಾಖಲಿಸಿದರು.

ದುಬಾರಿ ಬೌಲರ್‌: ಗುಲ್ಬರ್ಗ ಮಿಸ್ಟಿಕ್ಸ್​ನ ಬೌಲರ್​ಗಳಾದ ಧನುಶ್‌ ಗೌಡ ಎರಡೇ ಓವರ್‌ನಲ್ಲಿ 38 ರನ್‌ ನೀಡಿದರೆ, ಅಜಯ್‌ ಗೌಡ 4 ಓವರ್‌ಗಳಲ್ಲಿ 59 ರನ್‌ ನೀಡಿ ಟೂರ್ನಿಯಲ್ಲಿಯೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್‌ ನೀಡಿದ ಬೌಲರ್‌ ಎನಿಸಿದರು.

ಹುಬ್ಭಳ್ಳಿ ಟೈಗರ್ಸ್​ ಔಟ್​: ಇದಕ್ಕೂ ಮೊದಲು ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡ ಹುಬ್ಬಳ್ಳಿ ಟೈಗರ್ಸ್​ ವಿರುದ್ಧ 5 ವಿಕೆಟ್ ಜಯ ಸಾಧಿಸಿತು. ಹುಬ್ಬಳ್ಳಿ ಟೈಗರ್ಸ್​ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 164 ರನ್ ಗಳಿಸಿತು. ಸಾಧಾರಣ ಗುರಿ ಹೊತ್ತ ಮೈಸೂರು ವಾರಿಯರ್ಸ್​ ನಿಹಾಲ್​ ಉಲ್ಲಾಲ್​ರ (77) ಅರ್ಧಶತಕದ ನೆರವಿನಿಂದ 5 ಬೌಲ್​ ಉಳಿದಿರುವಂತೆಯೇ ಗೆಲುವಿನ ನಗೆ ಬೀರಿತು.

ಇದರಿಂದ ಹುಬ್ಬಳ್ಳಿ ಟೈಗರ್ಸ್​ ಟೂರ್ನಿಯಿಂದ ಹೊರಬಿದ್ದರೆ, ಮೈಸೂರು ವಾರಿಯರ್ಸ್​ ಎರಡನೇ ಕ್ವಾಲಿಫೈಯರ್​ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿತು. ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ಮತ್ತು ಮೈಸೂರು ವಾರಿಯರ್ಸ್‌ ತಂಡಗಳು ಸೆಣಸಾಡಲಿವೆ. ಇಲ್ಲಿ ಗೆದ್ದ ತಂಡ ಬೆಂಗಳೂರು ಬ್ಲಾಸ್ಟರ್ಸ್​ ಎದುರು ಫೈನಲ್​ ಆಡಲಿದೆ.

ಓದಿ: ಚೊಚ್ಚಲ ಶತಕ ತಂದೆಗೆ ಅರ್ಪಿಸಿದ ಗಿಲ್​​.. ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಯುವಿ ಭೇಟಿಯಾಗಿದ್ದರಂತೆ ಶುಭಮನ್

Last Updated : Aug 24, 2022, 9:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.