ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಿದ್ದು, ಹೊಸ ಹೊಸ ಪ್ರತಿಭೆಗಳು ಕಣಕ್ಕಿಳಿದು ತಮ್ಮ ಸಾಮರ್ಥ್ಯ ಹೊರ ಹಾಕುತ್ತಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅಡುವ ಅವಕಾಶ ಪಡೆದುಕೊಂಡಿರುವ 22 ವರ್ಷದ ಸೌರಾಷ್ಟ್ರ ಎಡಗೈ ವೇಗಿ ಚೇತನ ಸಕಾರಿಯಾ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ.
-
Chetan Sakariya opens his account with the wicket of Mayank Agarwal.#PBKS 22/1
— IndianPremierLeague (@IPL) April 12, 2021 " class="align-text-top noRightClick twitterSection" data="
Live - https://t.co/PhX8FyJiZZ #RRvPBKS #VIVOIPL pic.twitter.com/AgH2ZiqgmM
">Chetan Sakariya opens his account with the wicket of Mayank Agarwal.#PBKS 22/1
— IndianPremierLeague (@IPL) April 12, 2021
Live - https://t.co/PhX8FyJiZZ #RRvPBKS #VIVOIPL pic.twitter.com/AgH2ZiqgmMChetan Sakariya opens his account with the wicket of Mayank Agarwal.#PBKS 22/1
— IndianPremierLeague (@IPL) April 12, 2021
Live - https://t.co/PhX8FyJiZZ #RRvPBKS #VIVOIPL pic.twitter.com/AgH2ZiqgmM
ಪಂಜಾಬ್ ವಿರುದ್ಧ ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4 ಓವರ್ ಎಸೆದ ಚೇತನ್ ಕೇವಲ 31ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಇಂದಿನ ಪಂದ್ಯದಲ್ಲಿ ಕನ್ನಡಿಗರಾದ ಮಯಾಂಕ್ ಅಗರವಾಲ್, ಕೆ.ಎಲ್ ರಾಹುಲ್ ಹಾಗೂ ರಿಚರ್ಡ್ಸಸನ್ ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ. ಇದರ ಜತೆಗೆ ಕ್ಷೇತ್ರ ರಕ್ಷಣೆ ವೇಳೆ ಅದ್ಭುತ ಕ್ಯಾಚ್ ಪಡೆದುಕೊಳ್ಳುವ ಮೂಲಕ ನಿಕೋಲಸ್ ಪೂರನ್ ಔಟ್ ಆಗಲು ಕಾರಣರಾದರು.
What a catch Sakariya pic.twitter.com/t81Qx33riZ
— viva (@vivawho) April 12, 2021 " class="align-text-top noRightClick twitterSection" data="">What a catch Sakariya pic.twitter.com/t81Qx33riZ
— viva (@vivawho) April 12, 2021
What a catch Sakariya pic.twitter.com/t81Qx33riZ
— viva (@vivawho) April 12, 2021
ದೇಶಿಯ ಟೂರ್ನಿಗಳಲ್ಲಿ ಮಿಂಚು ಹರಿಸಿದ್ದ ಸಕಾರಿಯಾಗೆ ರಾಜಸ್ಥಾನ ರಾಯಲ್ಸ್ 1.2 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಟೆಂಪೋ ಡ್ರೈವರ್ ಮಗನಾಗಿರುವ ಚೇತನ ಅತ್ಯಂತ ಕಡು ಬಡತನದಲ್ಲಿ ಬೆಳೆದ ಪ್ರತಿಭೆಯಾಗಿದೆ. ಸೌರಾಷ್ಟ್ರ ತಂಡದ ಪರ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚೇತನ ಸಕಾರಿಯಾ ಭಾಗಿಯಾಗಿದ್ದ ವೇಳೆ ಇವರ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದು, ಇವರಿಗೆ ಮತ್ತಷ್ಟು ಆಘಾತಕ್ಕೊಳಗಾಗುವಂತೆ ಮಾಡಿತ್ತು.
ಇದನ್ನೂ ಓದಿ: ಐಪಿಎಲ್ನಲ್ಲಿ 350 ಸಿಕ್ಸರ್ ಸಿಡಿಸಿ ದಾಖಲೆ ಬರೆದ 41 ವರ್ಷದ ಯುನಿವರ್ಸಲ್ ಬಾಸ್!
ಆದರೆ, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಾವು ಪದಾರ್ಪಣೆ ಮಾಡಿರುವ ಪಂದ್ಯದಲ್ಲೇ ಕೇವಲ 7.8 ಎಕಾನಮಿಯಲ್ಲಿ ರನ್ ನೀಡಿ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದು, ಮುಂದಿನ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ.