ETV Bharat / sports

IPL 2023: ಸಿಎಸ್​ಕೆ ಸೋತರೂ 'ದೋಣಿ' ಮುಳುಗದು!

author img

By

Published : Apr 13, 2023, 10:07 PM IST

ಧೋನಿ ಮತ್ತು ಜಡೇಜಾ ಅದ್ಭುತ ಬ್ಯಾಟಿಂಗ್​ ಹೊರತಾಗಿಯೂ ರಾಜಸ್ಥಾನ ತಂಡ ಗೆಲುವು ಸಾಧಿಸಿತು. ಸಂದೀಪ್​ ಶರ್ಮಾ ತಮ್ಮ ಅಂತಿಮ ಓವರ್‌ನಲ್ಲಿ ಮಾಸ್ಟರ್ ಫಿನಿಶರ್‌ ಧೋನಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ipl-2023-csk-falter-but-dhonis-goat-it
IPL 2023 : ಸಿಎಸ್​ಕೆ ಸೋತರೂ ಗೆದ್ದ ಬೆಸ್ಟ್​ ಫಿನಿಷರ್​ ಧೋನಿ

ಇಂಡಿಯನ್​​ ಪ್ರೀಮಿಯರ್​ ಲೀಗ್​ 2023ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್​ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್​​ ವಿರುದ್ಧ 72 ರನ್‌ ಗಳಿಂದ ಗೆಲ್ಲುವ ಮೂಲಕ ಶುಭಾರಂಭ ಪಡೆದಿದ್ದ ರಾಜಸ್ಥಾನ ತಂಡವು ಪಂಜಾಬ್​ ವಿರುದ್ಧದ 2 ನೇ ಪಂದ್ಯದಲ್ಲಿ 5 ರನ್​​​ಗಳಿಂದ ಸೋಲು ಅನುಭವಿಸಿತ್ತು. ಮತ್ತೆ ಪುಟಿದೆದ್ದ ರಾಜಸ್ಥಾನ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅ​​ನ್ನು 57 ರನ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 3 ರನ್​​ಗಳ ಗೆಲುವು ಸಾಧಿಸಿದೆ.

ಬುಧವಾರ ಚೆನ್ನೈನ ಎಂ.ಎ.ಚಿದಂಬರಂ​ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯಾಟ ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಚೆನ್ನೈ ತಂಡದ ಅದ್ಭುತ ಪ್ರದರ್ಶನದ ನಡುವೆಯೂ ರಾಜಸ್ಥಾನವು ಗೆಲುವಿನ ನಗೆ ಬೀರಿತು. ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಐಪಿಎಲ್​​ನ 200ನೇ ಪಂದ್ಯವನ್ನು ಆಡಿದ ಧೋನಿ ಚೆನ್ನೈ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಪ್ರಯತ್ನಪಟ್ಟರು. ಆದರೆ ಸಂದೀಪ್​ ಶರ್ಮಾ ಅವರು ತಮ್ಮ ಕರಾರುವಕ್ಕಾದ ಬೌಲಿಂಗ್​​ ದಾಳಿಯಿಂದ ಧೋನಿಯನ್ನು ಕಟ್ಟಿ ಹಾಕುವಲ್ಲಿ ಯಶ ಸಾಧಿಸಿದರು. ಈ ಗೆಲುವಿನೊಂದಿಗೆ ರಾಜಸ್ಥಾನ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಲಕ್ನೋ ಸೂಪರ್​ ಜೈಂಟ್ಸ್​​ ಕೂಡ ರಾಜಸ್ಥಾನದಷ್ಟೇ ಪಂದ್ಯಗಳನ್ನು ಗೆದ್ದಿದ್ದು, ರನ್​ ರೇಟ್​ ಕಡಿಮೆ ಇರುವುದರಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.

ಕೋಲ್ಕತ್ತಾ ಪಂದ್ಯದಲ್ಲಿ ರಿಂಕು ಸಿಂಗ್​ ಕೊನೆಯ ಓವರ್​ನಲ್ಲಿ 5 ಸಿಕ್ಸರ್​​ ಸಿಡಿಸಿ ತಂಡವನ್ನು ಗೆಲ್ಲಿಸಿದಂತೆಯೇ ರಾಜಸ್ಥಾನದ ವಿರುದ್ಧ ಫಿನಿಷರ್​​ ಧೋನಿ ಮ್ಯಾಜಿಕ್​ ಮಾಡಿ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ ಎಂದು ನಂಬಿಕೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಲ್ಲಿ ರಾಜಸ್ಥಾನ ಸಫಲವಾಯಿತು.

ಧೋನಿ ಕ್ರೀಸ್‌ಗೆ ಬಂದಾಗ ಚೆನ್ನೈ ಪರಿಸ್ಥಿತಿ ಹೀಗಿತ್ತು..: ಧೋನಿ ಕ್ರೀಸಿಗೆ ಬಂದಾಗ ಚೆನ್ನೈ ತಂಡಕ್ಕೆ 30 ಎಸೆತಗಳಲ್ಲಿ 63 ರನ್​​ಗಳ ಅಗತ್ಯತೆ ಇತ್ತು. ಧೋನಿ ತಂಡಕ್ಕಾಗಿ ದೊಡ್ಡ ಹೊಡೆತಗಳಿಗೆ ಕೈ ಹಾಕುವ ಅವಶ್ಯಕತೆ ಹೆಚ್ಚಿತ್ತು. ಅಲ್ಲಿಯವರೆಗೆ ಸ್ಪಿನ್​ ಬೌಲರ್​ಗಳು ತಮ್ಮ ಪಾತ್ರ ನಿರ್ವಹಿಸಿ, ಸಿಎಸ್​ಕೆ ಬ್ಯಾಟರ್​ಗಳನ್ನು ಕಾಡುವಲ್ಲಿ ಯಶಸ್ವಿಯಾಗಿದ್ದರು. ಧೋನಿ ಮತ್ತು ಜಡೇಜಾ ಜೊತೆಯಾದಾಗ ಚೆನ್ನೈ ತಂಡಕ್ಕೆ ಅಂತಿಮವಾಗಿ 2 ಓವರ್​​ಗಳಲ್ಲಿ 40 ರನ್​​ಗಳ ಅವಶ್ಯಕತೆ ಇತ್ತು.

19ನೇ ಓವರ್ ಬೌಲ್​ ಮಾಡಿದ್ದ ವೆಸ್ಟ್​ ಇಂಡೀಸ್​​ ಆಲ್‌ ರೌಂಡರ್ ಜೇಸನ್​ ಹೋಲ್ಡರ್ ಅವರ ಎಸತೆಗಳನ್ನು ಜಡೇಜಾ ಬೌಂಡರಿಗಟ್ಟಿ ಗೆಲುವಿನ ವಿಶ್ವಾಸ ಮೂಡಿಸಿದರು. ಜಡೇಜಾ 2 ಸಿಕ್ಸರ್​ ಮತ್ತು ಒಂದು ಬೌಂಡರಿ ಗಳಿಸುವ ಮೂಲಕ ತಂಡಕ್ಕೆ ಅಮೂಲ್ಯ 19 ರನ್​ ತಂದುಕೊಟ್ಟರು. ಕೊನೆ ಓವರ್‌ನಲ್ಲಿ ಗ್ರೇಟ್​ ಫಿನಿಷರ್​ ಧೋನಿ ಅವರಿಗೆ ಅವಕಾಶ ಮಾಡಿಕೊಟ್ಟರು.

ಅಂತಿಮ ಓವರ್‌ನಲ್ಲಿ ಚೆನ್ನೈ ಗೆಲ್ಲಲು 21 ರನ್‌ ಅಗತ್ಯತೆ ಇತ್ತು. ಈ ವೇಳೆ ಸಂದೀಪ್ ಶರ್ಮಾ ಅವರನ್ನು ಬೌಲಿಂಗ್​ ದಾಳಿಗೆ ಕರೆಸಲಾಗಿತ್ತು. ಮೊದಲೆರಡು ವೈಡ್ ಎಸೆದಿದ್ದರಿಂದ ಚೆನ್ನೈ ತಂಡಕ್ಕೆ 19 ರನ್​ ಬೇಕಿತ್ತು. ಯಾರ್ಕರ್​ ಎಸೆಯುವ ಭರದಲ್ಲಿ ನೇರ ಬ್ಯಾಟಿಗೆ ಬೌಲ್​ ಮಾಡಿದ ಸಂದೀಪ್​ ಶರ್ಮಾರ ಎರಡು ಎಸೆತವನ್ನು ಧೋನಿ ಸಿಕ್ಸರ್​ಗಟ್ಟಿದರು. ಈ ಮೂಲಕ ತಂಡಕ್ಕೆ 3 ಎಸೆತಗಳಲ್ಲಿ 7 ರನ್​ಗಳ ಅವಶ್ಯಕತೆ ಇತ್ತು. ಮತ್ತೆ ಯಾರ್ಕರ್​ ದಾಳಿ ನಡೆಸಿದ ಸಂದೀಪ್​ ಶರ್ಮಾ ಧೋನಿ ಅವರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಚೆನ್ನೈ 3 ರನ್​ಗಳಿಂದ ಸೋಲು ಅನುಭವಿಸಿತು.

ಚೆನ್ನೈಗೆ ಮುಳುವಾದ ಎಕ್ಸ್‌ಟ್ರಾ ರನ್​ : ಟಿ20 ಪಂದ್ಯದಲ್ಲಿ ಎಕ್ಸ್​ ಟ್ರಾ ರನ್​ಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಚೆನ್ನೈ ಮತ್ತು ರಾಜಸ್ಥಾನ ಪಂದ್ಯದಲ್ಲಿ ಎರಡೂ ತಂಡಗಳು 10 ಎಕ್ಸ್​ ಟ್ರಾ ರನ್​​ಗಳನ್ನು ನೀಡಿದ್ದವು. ಈ ರನ್​​ಗಳ ನಿಯಂತ್ರಣವು ಪಂದ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ಸಿಎಸ್​ಕೆ ಸೋಲಿಗೆ ಇದೂ ಒಂದು ಕಾರಣ ಎಂದು ಹೇಳಬಹುದು. ಇನ್ನು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕಿಳಿದಿರುವ ಚೆನ್ನೈ ತಂಡ ತನ್ನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯತೆ ಇದೆ.

ಇದನ್ನೂ ಓದಿ : ಸಿಎಸ್​​ಕೆ - ಆರ್​ಆರ್ ಪಂದ್ಯ:​ ನಿಧಾನ ಗತಿಯ ಬೌಲಿಂಗ್​​ಗಾಗಿ ರಾಜಸ್ಥಾನ ರಾಯಲ್ಸ್​​ಗೆ ಬಿತ್ತು ದಂಡ

ಇಂಡಿಯನ್​​ ಪ್ರೀಮಿಯರ್​ ಲೀಗ್​ 2023ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್​ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್​​ ವಿರುದ್ಧ 72 ರನ್‌ ಗಳಿಂದ ಗೆಲ್ಲುವ ಮೂಲಕ ಶುಭಾರಂಭ ಪಡೆದಿದ್ದ ರಾಜಸ್ಥಾನ ತಂಡವು ಪಂಜಾಬ್​ ವಿರುದ್ಧದ 2 ನೇ ಪಂದ್ಯದಲ್ಲಿ 5 ರನ್​​​ಗಳಿಂದ ಸೋಲು ಅನುಭವಿಸಿತ್ತು. ಮತ್ತೆ ಪುಟಿದೆದ್ದ ರಾಜಸ್ಥಾನ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅ​​ನ್ನು 57 ರನ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 3 ರನ್​​ಗಳ ಗೆಲುವು ಸಾಧಿಸಿದೆ.

ಬುಧವಾರ ಚೆನ್ನೈನ ಎಂ.ಎ.ಚಿದಂಬರಂ​ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯಾಟ ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಚೆನ್ನೈ ತಂಡದ ಅದ್ಭುತ ಪ್ರದರ್ಶನದ ನಡುವೆಯೂ ರಾಜಸ್ಥಾನವು ಗೆಲುವಿನ ನಗೆ ಬೀರಿತು. ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಐಪಿಎಲ್​​ನ 200ನೇ ಪಂದ್ಯವನ್ನು ಆಡಿದ ಧೋನಿ ಚೆನ್ನೈ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಪ್ರಯತ್ನಪಟ್ಟರು. ಆದರೆ ಸಂದೀಪ್​ ಶರ್ಮಾ ಅವರು ತಮ್ಮ ಕರಾರುವಕ್ಕಾದ ಬೌಲಿಂಗ್​​ ದಾಳಿಯಿಂದ ಧೋನಿಯನ್ನು ಕಟ್ಟಿ ಹಾಕುವಲ್ಲಿ ಯಶ ಸಾಧಿಸಿದರು. ಈ ಗೆಲುವಿನೊಂದಿಗೆ ರಾಜಸ್ಥಾನ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಲಕ್ನೋ ಸೂಪರ್​ ಜೈಂಟ್ಸ್​​ ಕೂಡ ರಾಜಸ್ಥಾನದಷ್ಟೇ ಪಂದ್ಯಗಳನ್ನು ಗೆದ್ದಿದ್ದು, ರನ್​ ರೇಟ್​ ಕಡಿಮೆ ಇರುವುದರಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.

ಕೋಲ್ಕತ್ತಾ ಪಂದ್ಯದಲ್ಲಿ ರಿಂಕು ಸಿಂಗ್​ ಕೊನೆಯ ಓವರ್​ನಲ್ಲಿ 5 ಸಿಕ್ಸರ್​​ ಸಿಡಿಸಿ ತಂಡವನ್ನು ಗೆಲ್ಲಿಸಿದಂತೆಯೇ ರಾಜಸ್ಥಾನದ ವಿರುದ್ಧ ಫಿನಿಷರ್​​ ಧೋನಿ ಮ್ಯಾಜಿಕ್​ ಮಾಡಿ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ ಎಂದು ನಂಬಿಕೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಲ್ಲಿ ರಾಜಸ್ಥಾನ ಸಫಲವಾಯಿತು.

ಧೋನಿ ಕ್ರೀಸ್‌ಗೆ ಬಂದಾಗ ಚೆನ್ನೈ ಪರಿಸ್ಥಿತಿ ಹೀಗಿತ್ತು..: ಧೋನಿ ಕ್ರೀಸಿಗೆ ಬಂದಾಗ ಚೆನ್ನೈ ತಂಡಕ್ಕೆ 30 ಎಸೆತಗಳಲ್ಲಿ 63 ರನ್​​ಗಳ ಅಗತ್ಯತೆ ಇತ್ತು. ಧೋನಿ ತಂಡಕ್ಕಾಗಿ ದೊಡ್ಡ ಹೊಡೆತಗಳಿಗೆ ಕೈ ಹಾಕುವ ಅವಶ್ಯಕತೆ ಹೆಚ್ಚಿತ್ತು. ಅಲ್ಲಿಯವರೆಗೆ ಸ್ಪಿನ್​ ಬೌಲರ್​ಗಳು ತಮ್ಮ ಪಾತ್ರ ನಿರ್ವಹಿಸಿ, ಸಿಎಸ್​ಕೆ ಬ್ಯಾಟರ್​ಗಳನ್ನು ಕಾಡುವಲ್ಲಿ ಯಶಸ್ವಿಯಾಗಿದ್ದರು. ಧೋನಿ ಮತ್ತು ಜಡೇಜಾ ಜೊತೆಯಾದಾಗ ಚೆನ್ನೈ ತಂಡಕ್ಕೆ ಅಂತಿಮವಾಗಿ 2 ಓವರ್​​ಗಳಲ್ಲಿ 40 ರನ್​​ಗಳ ಅವಶ್ಯಕತೆ ಇತ್ತು.

19ನೇ ಓವರ್ ಬೌಲ್​ ಮಾಡಿದ್ದ ವೆಸ್ಟ್​ ಇಂಡೀಸ್​​ ಆಲ್‌ ರೌಂಡರ್ ಜೇಸನ್​ ಹೋಲ್ಡರ್ ಅವರ ಎಸತೆಗಳನ್ನು ಜಡೇಜಾ ಬೌಂಡರಿಗಟ್ಟಿ ಗೆಲುವಿನ ವಿಶ್ವಾಸ ಮೂಡಿಸಿದರು. ಜಡೇಜಾ 2 ಸಿಕ್ಸರ್​ ಮತ್ತು ಒಂದು ಬೌಂಡರಿ ಗಳಿಸುವ ಮೂಲಕ ತಂಡಕ್ಕೆ ಅಮೂಲ್ಯ 19 ರನ್​ ತಂದುಕೊಟ್ಟರು. ಕೊನೆ ಓವರ್‌ನಲ್ಲಿ ಗ್ರೇಟ್​ ಫಿನಿಷರ್​ ಧೋನಿ ಅವರಿಗೆ ಅವಕಾಶ ಮಾಡಿಕೊಟ್ಟರು.

ಅಂತಿಮ ಓವರ್‌ನಲ್ಲಿ ಚೆನ್ನೈ ಗೆಲ್ಲಲು 21 ರನ್‌ ಅಗತ್ಯತೆ ಇತ್ತು. ಈ ವೇಳೆ ಸಂದೀಪ್ ಶರ್ಮಾ ಅವರನ್ನು ಬೌಲಿಂಗ್​ ದಾಳಿಗೆ ಕರೆಸಲಾಗಿತ್ತು. ಮೊದಲೆರಡು ವೈಡ್ ಎಸೆದಿದ್ದರಿಂದ ಚೆನ್ನೈ ತಂಡಕ್ಕೆ 19 ರನ್​ ಬೇಕಿತ್ತು. ಯಾರ್ಕರ್​ ಎಸೆಯುವ ಭರದಲ್ಲಿ ನೇರ ಬ್ಯಾಟಿಗೆ ಬೌಲ್​ ಮಾಡಿದ ಸಂದೀಪ್​ ಶರ್ಮಾರ ಎರಡು ಎಸೆತವನ್ನು ಧೋನಿ ಸಿಕ್ಸರ್​ಗಟ್ಟಿದರು. ಈ ಮೂಲಕ ತಂಡಕ್ಕೆ 3 ಎಸೆತಗಳಲ್ಲಿ 7 ರನ್​ಗಳ ಅವಶ್ಯಕತೆ ಇತ್ತು. ಮತ್ತೆ ಯಾರ್ಕರ್​ ದಾಳಿ ನಡೆಸಿದ ಸಂದೀಪ್​ ಶರ್ಮಾ ಧೋನಿ ಅವರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಚೆನ್ನೈ 3 ರನ್​ಗಳಿಂದ ಸೋಲು ಅನುಭವಿಸಿತು.

ಚೆನ್ನೈಗೆ ಮುಳುವಾದ ಎಕ್ಸ್‌ಟ್ರಾ ರನ್​ : ಟಿ20 ಪಂದ್ಯದಲ್ಲಿ ಎಕ್ಸ್​ ಟ್ರಾ ರನ್​ಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಚೆನ್ನೈ ಮತ್ತು ರಾಜಸ್ಥಾನ ಪಂದ್ಯದಲ್ಲಿ ಎರಡೂ ತಂಡಗಳು 10 ಎಕ್ಸ್​ ಟ್ರಾ ರನ್​​ಗಳನ್ನು ನೀಡಿದ್ದವು. ಈ ರನ್​​ಗಳ ನಿಯಂತ್ರಣವು ಪಂದ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ಸಿಎಸ್​ಕೆ ಸೋಲಿಗೆ ಇದೂ ಒಂದು ಕಾರಣ ಎಂದು ಹೇಳಬಹುದು. ಇನ್ನು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕಿಳಿದಿರುವ ಚೆನ್ನೈ ತಂಡ ತನ್ನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯತೆ ಇದೆ.

ಇದನ್ನೂ ಓದಿ : ಸಿಎಸ್​​ಕೆ - ಆರ್​ಆರ್ ಪಂದ್ಯ:​ ನಿಧಾನ ಗತಿಯ ಬೌಲಿಂಗ್​​ಗಾಗಿ ರಾಜಸ್ಥಾನ ರಾಯಲ್ಸ್​​ಗೆ ಬಿತ್ತು ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.