ETV Bharat / sports

ಸಿಎಸ್​​ಕೆ ವಿರುದ್ಧ ಸಿಕ್ಸರ್​ ಸುರಿಮಳೆ... 'ಸ್ಟ್ಯಾಂಡ್ ಅಂಡ್ ಡೆಲಿವರ್' ನನ್ನ ಯೋಜನೆ ಎಂದ ಸ್ಯಾಮ್ಸನ್​​

ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಕೀಪಿಂಗ್​ನಲ್ಲೂ ಮಿಂಚಿದ ಸಂಜು ಸ್ಯಾಮ್ಸನ್​ ಕಳೆದ 5 ತಿಂಗಳಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾಗಿ ತಿಳಿಸಿದ್ದಾರೆ.

author img

By

Published : Sep 23, 2020, 9:51 AM IST

Updated : Sep 25, 2020, 5:59 PM IST

Sanju Samson
ಸಂಜು ಸ್ಯಾಮ್ಸನ್

ಶಾರ್ಜಾ: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸಿಕ್ಸರ್‌ಗಳ ಸುರಿಮಳೆಗೈದ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌, ಪವರ್ ಹಿಟ್ಟಿಂಗ್​ಗಾಗಿ ಸಾಕಷ್ಟು ಶ್ರಮ ವಹಿಸಿದ್ದಾಗಿ ಹೇಳಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ 9 ಸಿಕ್ಸರ್​ ಸಿಡಿಸಿದ ಯುವ ವಿಕೆಟ್ ಕೀಪರ್, ಬ್ಯಾಟ್ಸ್​​ಮನ್​ ಸಂಜು ಸ್ಯಾಮ್ಸನ್‌ 32 ಎಸೆತಗಳಲ್ಲಿ 74 ರನ್ ಗಳಿಸಿ ರಾಜಸ್ಥಾನ ತಂಡ ಬಿಗ್ ಸ್ಕೋರ್​ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

  • ' class='align-text-top noRightClick twitterSection' data=''>

ಪಂದ್ಯ ಮುಗಿದ ನಂತರ ತಮ್ಮ ಬ್ಯಾಟಿಂಗ್​ ಬಗ್ಗೆ ಮಾತನಾಡಿರುವ ಸ್ಯಾಮ್ಸನ್​, ನನ್ನ ಫಿಟ್‌ನೆಸ್, ಡಯಟ್ ಮತ್ತು ತರಬೇತಿ ಮತ್ತು ನನ್ನ ಸಾಮರ್ಥ್ಯದ ಮೇಲೆ ನಾನು ಶ್ರಮಿಸುತ್ತಿದ್ದೇನೆ. ಏಕೆಂದರೆ ನನ್ನ ಆಟವು ಪವರ್ ಹಿಟ್ಟಿಂಗ್​ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಪೀಳಿಗೆಯಲ್ಲಿ ರೇಂಜ್-ಹಿಟ್ಟಿಂಗ್​ ಆಟ ಬೇಕಾಗುತ್ತದೆ ಎಂದು ಭಾವಿಸುತ್ತೇನೆ. ನನಗೆ ಈ ವಿಷಯದಲ್ಲಿ ಕೆಲಸ ಮಾಡಲು ಸಮಯವಿತ್ತು. ಈ 5 ತಿಂಗಳಲ್ಲಿ ನಾನು ಆ ಸಾಮರ್ಥ್ಯವನ್ನು ಹೆಚ್ಚಿಸಿದ್ದೇನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

  • ' class='align-text-top noRightClick twitterSection' data=''>

ಕೇವಲ ಬ್ಯಾಟಿಂಗ್ ಅಷ್ಟ್ರೇ ಅಲ್ಲದೆ ಕೀಪಿಂಗ್​ನಲ್ಲೂ ಸಮ್ಸನ್​ ಕಮಾಲ್​ ಮಾಡಿದ್ರು. ಎರಡು ಅದ್ಭುತ ಕ್ಯಾಚ್​ ಪಡೆಯುವುದಲ್ಲದೆ, ಇಬ್ಬರನ್ನು ಸ್ಟಂಪ್​ ಔಟ್ ​​ಮಾಡಿ ಪೆವಿಲಿಯನ್ ಸೇರಿಸಿದ್ರು.

ರಾಜಸ್ಥಾನ ತಂಡದಲ್ಲಿ ಉತ್ತಪ್ಪ ಮತ್ತು ಬಟ್ಲರ್​ ಅವರಂತಹ ಇಬ್ಬರು ವಿಕೆಟ್ ಕೀಪರ್​​ಗಳಿದ್ದಾರೆ. ಅವರ ಬಗ್ಗೆ ಮಾತನಾಡಿದ ಸ್ಯಾಮ್ಸನ್​, ಪ್ರತಿಯೊಬ್ಬರೂ ವಿಕೆಟ್‌ಗಳನ್ನು ಉಳಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾರೂ ಔಟಾಗಲು ಇಷ್ಟಪಡುವುದಿಲ್ಲ. ಆದರೆ ಇದು ತರಬೇತುದಾರನಿಗೆ ಬಿಟ್ಟದ್ದು. ಅಭಿಮಾನಿಗಳ ಮುಖದಲ್ಲಿ ಮಂದಹಾಸ ತರಲು ಇಷ್ಟಪಡುತ್ತೇವೆ ಮತ್ತು ಅದನ್ನು ಮುಂದುವರೆಸುತ್ತೇವೆ ಎಂದು ಸ್ಯಾಮ್ಸನ್​​ ಹೇಳಿದ್ದಾರೆ.

ಶಾರ್ಜಾ: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸಿಕ್ಸರ್‌ಗಳ ಸುರಿಮಳೆಗೈದ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌, ಪವರ್ ಹಿಟ್ಟಿಂಗ್​ಗಾಗಿ ಸಾಕಷ್ಟು ಶ್ರಮ ವಹಿಸಿದ್ದಾಗಿ ಹೇಳಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ 9 ಸಿಕ್ಸರ್​ ಸಿಡಿಸಿದ ಯುವ ವಿಕೆಟ್ ಕೀಪರ್, ಬ್ಯಾಟ್ಸ್​​ಮನ್​ ಸಂಜು ಸ್ಯಾಮ್ಸನ್‌ 32 ಎಸೆತಗಳಲ್ಲಿ 74 ರನ್ ಗಳಿಸಿ ರಾಜಸ್ಥಾನ ತಂಡ ಬಿಗ್ ಸ್ಕೋರ್​ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

  • ' class='align-text-top noRightClick twitterSection' data=''>

ಪಂದ್ಯ ಮುಗಿದ ನಂತರ ತಮ್ಮ ಬ್ಯಾಟಿಂಗ್​ ಬಗ್ಗೆ ಮಾತನಾಡಿರುವ ಸ್ಯಾಮ್ಸನ್​, ನನ್ನ ಫಿಟ್‌ನೆಸ್, ಡಯಟ್ ಮತ್ತು ತರಬೇತಿ ಮತ್ತು ನನ್ನ ಸಾಮರ್ಥ್ಯದ ಮೇಲೆ ನಾನು ಶ್ರಮಿಸುತ್ತಿದ್ದೇನೆ. ಏಕೆಂದರೆ ನನ್ನ ಆಟವು ಪವರ್ ಹಿಟ್ಟಿಂಗ್​ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಪೀಳಿಗೆಯಲ್ಲಿ ರೇಂಜ್-ಹಿಟ್ಟಿಂಗ್​ ಆಟ ಬೇಕಾಗುತ್ತದೆ ಎಂದು ಭಾವಿಸುತ್ತೇನೆ. ನನಗೆ ಈ ವಿಷಯದಲ್ಲಿ ಕೆಲಸ ಮಾಡಲು ಸಮಯವಿತ್ತು. ಈ 5 ತಿಂಗಳಲ್ಲಿ ನಾನು ಆ ಸಾಮರ್ಥ್ಯವನ್ನು ಹೆಚ್ಚಿಸಿದ್ದೇನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

  • ' class='align-text-top noRightClick twitterSection' data=''>

ಕೇವಲ ಬ್ಯಾಟಿಂಗ್ ಅಷ್ಟ್ರೇ ಅಲ್ಲದೆ ಕೀಪಿಂಗ್​ನಲ್ಲೂ ಸಮ್ಸನ್​ ಕಮಾಲ್​ ಮಾಡಿದ್ರು. ಎರಡು ಅದ್ಭುತ ಕ್ಯಾಚ್​ ಪಡೆಯುವುದಲ್ಲದೆ, ಇಬ್ಬರನ್ನು ಸ್ಟಂಪ್​ ಔಟ್ ​​ಮಾಡಿ ಪೆವಿಲಿಯನ್ ಸೇರಿಸಿದ್ರು.

ರಾಜಸ್ಥಾನ ತಂಡದಲ್ಲಿ ಉತ್ತಪ್ಪ ಮತ್ತು ಬಟ್ಲರ್​ ಅವರಂತಹ ಇಬ್ಬರು ವಿಕೆಟ್ ಕೀಪರ್​​ಗಳಿದ್ದಾರೆ. ಅವರ ಬಗ್ಗೆ ಮಾತನಾಡಿದ ಸ್ಯಾಮ್ಸನ್​, ಪ್ರತಿಯೊಬ್ಬರೂ ವಿಕೆಟ್‌ಗಳನ್ನು ಉಳಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾರೂ ಔಟಾಗಲು ಇಷ್ಟಪಡುವುದಿಲ್ಲ. ಆದರೆ ಇದು ತರಬೇತುದಾರನಿಗೆ ಬಿಟ್ಟದ್ದು. ಅಭಿಮಾನಿಗಳ ಮುಖದಲ್ಲಿ ಮಂದಹಾಸ ತರಲು ಇಷ್ಟಪಡುತ್ತೇವೆ ಮತ್ತು ಅದನ್ನು ಮುಂದುವರೆಸುತ್ತೇವೆ ಎಂದು ಸ್ಯಾಮ್ಸನ್​​ ಹೇಳಿದ್ದಾರೆ.

Last Updated : Sep 25, 2020, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.