ETV Bharat / sports

ಟೆಸ್ಟ್, ಟಿ20 ಕ್ರಿಕೆಟ್​ನಲ್ಲಿ ಭಾರತದ ಕೆಲ ಆಟಗಾರರು ಓವರ್​ ರೇಟೆಡ್​​: ಶ್ರೀಕಾಂತ್

author img

By ETV Bharat Karnataka Team

Published : Jan 3, 2024, 7:57 AM IST

ಭಾರತ ಕ್ರಿಕೆಟ್​ ತಂಡದಲ್ಲಿ ಕೆಲ ಆಟಗಾರರಿಗೆ ಹೆಚ್ಚಿನ ಅವಕಾಶ ಮತ್ತು ಪ್ರಾಶಸ್ತ್ಯ ಕೊಡಲಾಗುತ್ತಿದೆ. ಹೀಗಾಗಿ ಓವರ್​ ರೇಟೆಡ್​ ಎಂದು ಹೇಳಬಹುದು ಎಂದು ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Krishnamachari Srikkantha
Krishnamachari Srikkantha

ಹೈದರಾಬಾದ್​​: ಭಾರತ ತಂಡ ಟೆಸ್ಟ್​ ಮತ್ತು ಟಿ20 ಮಾದರಿಯಲ್ಲಿ ಉತ್ತಮವಾಗಿದೆ. ಆದರೆ, ಕೆಲ ಆಟಗಾರರು ಇದರಲ್ಲಿ ಓವರ್​​ ರೇಟೆಡ್​ ಆಗಿದ್ದಾರೆ. ಕೆಲವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಇದರಿಂದ ತಂಡದ ಪ್ರದರ್ಶನವು ಈ ಮಟ್ಟಕ್ಕೆ ತಲುಪಿದೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್​​ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯದಿಂದ ಕಳಪೆ ಪ್ರದರ್ಶನ ತೋರಿದೆ. 2024ರ ಮೊದಲ ಪಂದ್ಯವಾದ ಎರಡನೇ ಟೆಸ್ಟ್​​ನ ಆರಂಭಕ್ಕೂ ಮುನ್ನ ಭಾರತ ತಂಡದ ಹಿಂದಿನ ವರ್ಷಗಳ ಸಾಧನೆಯನ್ನು ಪರಿಗಣಿಸಿ ಯೂಟ್ಯೂನ್​ ಚಾನೆಲ್​ವೊಂಂದರಲ್ಲಿ ಮಾತನಾಡಿದ ಅವರು, "ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ನಾವು 2-3 ವರ್ಷಗಳ ಕಾಲ ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ನಾವು ಇಂಗ್ಲೆಂಡ್‌ನಲ್ಲಿಯೂ ಪ್ರಾಬಲ್ಯ ಸಾಧಿಸಿದ್ದೇವೆ, ದಕ್ಷಿಣ ಆಫ್ರಿಕಾದಲ್ಲೂ ಪ್ರಬಲ ಹೋರಾಟ ನಡೆಸಿದ್ದೇವೆ. ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸಿದ್ದೇವೆ"ಎಂದು ಹೇಳಿದರು.

ಐಸಿಸಿ ಶ್ರೇಯಾಂಕವನ್ನು ಭಾರತವು ಕಡೆಗಣಿಸುವ ಬಗ್ಗೆ ಶ್ರೀಕಾಂತ್ ಒತ್ತಿ ಹೇಳಿದರು. ಭಾರತ ತಂಡದಲ್ಲಿನ ಹಲವಾರು ಆಟಗಾರರು ಅತಿಯಾಗಿ ಮೌಲ್ಯಮಾಪನಗೊಂಡಿದ್ದಾರೆ ಎಂದು ಪ್ರತಿಪಾದಿಸಿದರು. ಗುಣಮಟ್ಟದ ಆಟಗಾರರನ್ನು ಪ್ರಸ್ತುತ ತಂಡದಿಂದ ಹೊರಗಿಡಲಾಗಿದೆ. ಟೆಸ್ಟ್ ತಂಡದಿಂದ ಕೆಲವರು ಹೊರಗೆ ಕುಳಿತಿದ್ದಾರೆ ಎಂದು ಶ್ರೀಕಾಂತ್ ವಾದಿಸಿದರು.

"ನಾವು ಐಸಿಸಿ ಶ್ರೇಯಾಂಕವನ್ನು ಮರೆತುಬಿಡಬೇಕು. ನಾವು ಯಾವಾಗಲೂ 1-2ನೇ ಸ್ಥಾನದಲ್ಲಿದ್ದೇವೆ. ತಂಡವು ಓವರ್-ರೇಟ್ ಮಾಡಿದ ಕ್ರಿಕೆಟಿಗರು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡದ ಆಟಗಾರರನ್ನು ಹೊಂದಿರುವ ಸಂಯೋಜನೆಯಾಗಿದೆ. ಕುಲದೀಪ್ ಯಾದವ್ ಅವರಂತಹ ಸಾಕಷ್ಟು ಅವಕಾಶಗಳನ್ನು ಪಡೆಯದ ಆಟಗಾರರೂ ಇದ್ದಾರೆ" ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟರು.

ಏಕದಿನ ಮತ್ತು ಟಿ20 ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಶ್ರೀಕಾಂತ್, ಟೀಮ್ ಇಂಡಿಯಾ ಏಕದಿನ ಕ್ರಿಕೆಟ್​ನಲ್ಲಿ ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಕ್ರಿಕೆಟ್​ ಆಡಿದೆ. ಆದರೆ ಟಿ20 ಸ್ವರೂಪದಲ್ಲಿ, ನಾವು ಹೆಚ್ಚಿನ ನಿರೀಕ್ಷೆಗಳು ಮತ್ತು ಭರವಸೆ ಇಟ್ಟಿದ್ದೇವೆ ಎಂದಿದ್ದಾರೆ.

"ಟಿ 20 ಕ್ರಿಕೆಟ್‌ನಲ್ಲಿ ಭಾರತವು ಓವರ್​ ರೇಟೆಡ್​ ಆಗಿದೆ. ಏಕದಿನ ಕ್ರಿಕೆಟ್​​ನಲ್ಲಿ ನಮ್ಮದು ಅದ್ಭುತ ತಂಡ. ಏಕದಿನದಲ್ಲಿ ತಂಡ ಸೆಮಿಫೈನಲ್‌, ಫೈನಲ್‌ ತಲುಪುತ್ತದೆ. ಆದರೆ ಒಂದು ನಿರ್ಣಾಯಕ ಪಂದ್ಯದಲ್ಲಿ ಎಡವುತ್ತಿದೆ. ಇದು ಅದೃಷ್ಟದ ಅಂಶವಾಗಿದೆ, ಬಹಳಷ್ಟು ಅದೃಷ್ಟವನ್ನು ಅವಲಂಬಿಸಿರುತ್ತದೆ. ಈ ವಿಚಾರವಾಗಿ ನಾನು ನಾಯಕ ರೋಹಿತ್ ಶರ್ಮಾ ಹೇಳಿಕೆಯನ್ನು ಒಪ್ಪುತ್ತೇನೆ. ನಾಕೌಟ್ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ನಾವು ಕೆಲವೊಮ್ಮೆ ಕಳಪೆ ಪ್ರದರ್ಶನ ನೀಡಿದ್ದೇವೆ. ಆದರೂ ಏಕದಿನದಲ್ಲಿ ಭಾರತ ಬಲಿಷ್ಠ ತಂಡವಾಗಿದೆ" ಎಂದಿದ್ದಾರೆ.

ವಿರಾಟ್ - ರಾಹುಲ್​ ಬಲಿಷ್ಠರು: ವಿರಾಟ್​ ಕೊಹ್ಲಿ ಪ್ರದರ್ಶನದಿಂದಲೇ ಅವರನ್ನು ಕಿಂಗ್​ ಕೊಹ್ಲಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಅವರ ಅಂಕಿ ಅಂಶಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಇತ್ತೀಚೆಗೆ ಕೆ ಎಲ್​ ರಾಹುಲ್ ಕೂಡ​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ರಾಹುಲ್​ ಬೆಸ್ಟ್​ ಪ್ಲೇಯರ್​ ಆಗಿದ್ದಾರೆ. ರಿಷಬ್​ ಪಂತ್​ ಇಲ್ಲ, ಅವರೂ ಸಾಮರ್ಥ್ಯ ಇರುವ ಆಟಗಾರ ಎಂದು ಶ್ರೀಕಾಂತ್​ ಹೇಳಿದರು.

ಇದನ್ನೂ ಓದಿ: 148ಕ್ಕೆ ಮಹಿಳಾ ಟೀಂ ಇಂಡಿಯಾ ಆಲೌಟ್​; ಸರಣಿ ಕ್ಲೀನ್​ ಸ್ವೀಪ್​ ಮಾಡಿದ ಆಸ್ಟ್ರೇಲಿಯಾ

ಹೈದರಾಬಾದ್​​: ಭಾರತ ತಂಡ ಟೆಸ್ಟ್​ ಮತ್ತು ಟಿ20 ಮಾದರಿಯಲ್ಲಿ ಉತ್ತಮವಾಗಿದೆ. ಆದರೆ, ಕೆಲ ಆಟಗಾರರು ಇದರಲ್ಲಿ ಓವರ್​​ ರೇಟೆಡ್​ ಆಗಿದ್ದಾರೆ. ಕೆಲವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಇದರಿಂದ ತಂಡದ ಪ್ರದರ್ಶನವು ಈ ಮಟ್ಟಕ್ಕೆ ತಲುಪಿದೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್​​ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯದಿಂದ ಕಳಪೆ ಪ್ರದರ್ಶನ ತೋರಿದೆ. 2024ರ ಮೊದಲ ಪಂದ್ಯವಾದ ಎರಡನೇ ಟೆಸ್ಟ್​​ನ ಆರಂಭಕ್ಕೂ ಮುನ್ನ ಭಾರತ ತಂಡದ ಹಿಂದಿನ ವರ್ಷಗಳ ಸಾಧನೆಯನ್ನು ಪರಿಗಣಿಸಿ ಯೂಟ್ಯೂನ್​ ಚಾನೆಲ್​ವೊಂಂದರಲ್ಲಿ ಮಾತನಾಡಿದ ಅವರು, "ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ನಾವು 2-3 ವರ್ಷಗಳ ಕಾಲ ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ನಾವು ಇಂಗ್ಲೆಂಡ್‌ನಲ್ಲಿಯೂ ಪ್ರಾಬಲ್ಯ ಸಾಧಿಸಿದ್ದೇವೆ, ದಕ್ಷಿಣ ಆಫ್ರಿಕಾದಲ್ಲೂ ಪ್ರಬಲ ಹೋರಾಟ ನಡೆಸಿದ್ದೇವೆ. ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸಿದ್ದೇವೆ"ಎಂದು ಹೇಳಿದರು.

ಐಸಿಸಿ ಶ್ರೇಯಾಂಕವನ್ನು ಭಾರತವು ಕಡೆಗಣಿಸುವ ಬಗ್ಗೆ ಶ್ರೀಕಾಂತ್ ಒತ್ತಿ ಹೇಳಿದರು. ಭಾರತ ತಂಡದಲ್ಲಿನ ಹಲವಾರು ಆಟಗಾರರು ಅತಿಯಾಗಿ ಮೌಲ್ಯಮಾಪನಗೊಂಡಿದ್ದಾರೆ ಎಂದು ಪ್ರತಿಪಾದಿಸಿದರು. ಗುಣಮಟ್ಟದ ಆಟಗಾರರನ್ನು ಪ್ರಸ್ತುತ ತಂಡದಿಂದ ಹೊರಗಿಡಲಾಗಿದೆ. ಟೆಸ್ಟ್ ತಂಡದಿಂದ ಕೆಲವರು ಹೊರಗೆ ಕುಳಿತಿದ್ದಾರೆ ಎಂದು ಶ್ರೀಕಾಂತ್ ವಾದಿಸಿದರು.

"ನಾವು ಐಸಿಸಿ ಶ್ರೇಯಾಂಕವನ್ನು ಮರೆತುಬಿಡಬೇಕು. ನಾವು ಯಾವಾಗಲೂ 1-2ನೇ ಸ್ಥಾನದಲ್ಲಿದ್ದೇವೆ. ತಂಡವು ಓವರ್-ರೇಟ್ ಮಾಡಿದ ಕ್ರಿಕೆಟಿಗರು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡದ ಆಟಗಾರರನ್ನು ಹೊಂದಿರುವ ಸಂಯೋಜನೆಯಾಗಿದೆ. ಕುಲದೀಪ್ ಯಾದವ್ ಅವರಂತಹ ಸಾಕಷ್ಟು ಅವಕಾಶಗಳನ್ನು ಪಡೆಯದ ಆಟಗಾರರೂ ಇದ್ದಾರೆ" ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟರು.

ಏಕದಿನ ಮತ್ತು ಟಿ20 ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಶ್ರೀಕಾಂತ್, ಟೀಮ್ ಇಂಡಿಯಾ ಏಕದಿನ ಕ್ರಿಕೆಟ್​ನಲ್ಲಿ ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಕ್ರಿಕೆಟ್​ ಆಡಿದೆ. ಆದರೆ ಟಿ20 ಸ್ವರೂಪದಲ್ಲಿ, ನಾವು ಹೆಚ್ಚಿನ ನಿರೀಕ್ಷೆಗಳು ಮತ್ತು ಭರವಸೆ ಇಟ್ಟಿದ್ದೇವೆ ಎಂದಿದ್ದಾರೆ.

"ಟಿ 20 ಕ್ರಿಕೆಟ್‌ನಲ್ಲಿ ಭಾರತವು ಓವರ್​ ರೇಟೆಡ್​ ಆಗಿದೆ. ಏಕದಿನ ಕ್ರಿಕೆಟ್​​ನಲ್ಲಿ ನಮ್ಮದು ಅದ್ಭುತ ತಂಡ. ಏಕದಿನದಲ್ಲಿ ತಂಡ ಸೆಮಿಫೈನಲ್‌, ಫೈನಲ್‌ ತಲುಪುತ್ತದೆ. ಆದರೆ ಒಂದು ನಿರ್ಣಾಯಕ ಪಂದ್ಯದಲ್ಲಿ ಎಡವುತ್ತಿದೆ. ಇದು ಅದೃಷ್ಟದ ಅಂಶವಾಗಿದೆ, ಬಹಳಷ್ಟು ಅದೃಷ್ಟವನ್ನು ಅವಲಂಬಿಸಿರುತ್ತದೆ. ಈ ವಿಚಾರವಾಗಿ ನಾನು ನಾಯಕ ರೋಹಿತ್ ಶರ್ಮಾ ಹೇಳಿಕೆಯನ್ನು ಒಪ್ಪುತ್ತೇನೆ. ನಾಕೌಟ್ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ನಾವು ಕೆಲವೊಮ್ಮೆ ಕಳಪೆ ಪ್ರದರ್ಶನ ನೀಡಿದ್ದೇವೆ. ಆದರೂ ಏಕದಿನದಲ್ಲಿ ಭಾರತ ಬಲಿಷ್ಠ ತಂಡವಾಗಿದೆ" ಎಂದಿದ್ದಾರೆ.

ವಿರಾಟ್ - ರಾಹುಲ್​ ಬಲಿಷ್ಠರು: ವಿರಾಟ್​ ಕೊಹ್ಲಿ ಪ್ರದರ್ಶನದಿಂದಲೇ ಅವರನ್ನು ಕಿಂಗ್​ ಕೊಹ್ಲಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಅವರ ಅಂಕಿ ಅಂಶಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಇತ್ತೀಚೆಗೆ ಕೆ ಎಲ್​ ರಾಹುಲ್ ಕೂಡ​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ರಾಹುಲ್​ ಬೆಸ್ಟ್​ ಪ್ಲೇಯರ್​ ಆಗಿದ್ದಾರೆ. ರಿಷಬ್​ ಪಂತ್​ ಇಲ್ಲ, ಅವರೂ ಸಾಮರ್ಥ್ಯ ಇರುವ ಆಟಗಾರ ಎಂದು ಶ್ರೀಕಾಂತ್​ ಹೇಳಿದರು.

ಇದನ್ನೂ ಓದಿ: 148ಕ್ಕೆ ಮಹಿಳಾ ಟೀಂ ಇಂಡಿಯಾ ಆಲೌಟ್​; ಸರಣಿ ಕ್ಲೀನ್​ ಸ್ವೀಪ್​ ಮಾಡಿದ ಆಸ್ಟ್ರೇಲಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.