ETV Bharat / sports

ಭಾರತದ ಪರ ಮಾತನಾಡುವ ರಮೀಜ್​​​​ಗೆ ಪಿಸಿಬಿ ಮುಖ್ಯಸ್ಥ ಸ್ಥಾನ ನೀಡಬೇಡಿ: ಸರ್ಫರಾಜ್​

author img

By

Published : Aug 24, 2021, 3:12 PM IST

Updated : Aug 24, 2021, 3:22 PM IST

ಸರ್ಫರಾಜ್​ ನವಾಜ್​, ಪ್ರಧಾನ ಮಂತ್ರಿ ಇಮ್ರಾನ್ ಖಾನ್​ ಅವರಿಗೆ ಪತ್ರ ಬರೆದಿದ್ದು, ಜಹೀರ್​ ಅಬ್ಬಾಸ್​ ಅಥವಾ ಮಜೀದ್​ ಖಾನ್​ ಅವರನ್ನು ಮುಂದಿನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಮನವಿ ಮಾಡಿ, ರಮೀಜ್​ ರಾಜಾ ಅವರ ವಿರುದ್ಧ ತಮ್ಮ ನಿಲುವು ಪ್ರತಿಪಾದಿಸಿದ್ದಾರೆ.

ರಮೀಜ್ ರಾಜಾ
ರಮೀಜ್ ರಾಜಾ

ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೆ ಮಾಜಿ ಕ್ರಿಕೆಟಿಗ ರಮೀಜ್​ ರಾಜಾ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವುದು ಬೇಡ, ಅವರು ಈ ಹಿಂದೆ ಪಾಕಿಸ್ತಾನ ಕುರಿತು ಅವಹೇಳನಕಾರಿಯಾಗಿ , ಭಾರತದ ಪರವಾಗಿ ಮಾತನಾಡಿದ್ದಾರೆ ಎಂದು ಮಾಜಿ ವೇಗಿ ಸರ್ಫರಾಜ್​ ನವಾಜ್​ ಹೇಳಿದ್ದಾರೆ.

ಸರ್ಫರಾಜ್​ ನವಾಜ್​, ಪ್ರಧಾನ ಮಂತ್ರಿ ಇಮ್ರಾನ್ ಖಾನ್​ ಅವರಿಗೆ ಪತ್ರ ಬರೆದಿದ್ದು, ಜಹೀರ್​ ಅಬ್ಬಾಸ್​ ಅಥವಾ ಮಜೀದ್​ ಖಾನ್​ ಅವರನ್ನು ಮುಂದಿನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಮನವಿ ಮಾಡಿ, ರಮೀಜ್​ ರಾಜಾ ಅವರ ವಿರುದ್ಧ ತಮ್ಮ ನಿಲುವು ಪ್ರತಿಪಾದಿಸಿದ್ದಾರೆ.

ಹಲವು ಮಾಧ್ಯಮಗಳಲ್ಲಿ ನೀವು ಎಹ್ಶಾನ್​ ಮಣಿ ಜಾಗಕ್ಕೆ ರಮೀಜ್ ರಾಜಾ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ರವಾನೆಯಾಗುತ್ತಿದೆ. ಈ ವಿಷಯದಲ್ಲಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಪೋಷಕರಾಗಿರುವ ನಿಮಗೆ ಯಾರನ್ನಾದರೂ ಪಿಸಿಬಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಕ್ಕಿದೆ ಎಂದು ಪತ್ರದಲ್ಲಿ ಲಂಡನ್​ ಮೂಲದ ಸರ್ಫರಾಜ್​ ಬರೆದಿದ್ದಾರೆ.

ಆದರೆ, ರಾಷ್ಟ್ರೀಯ ಸಂಸ್ಥೆಯ ಪೋಷಕರಾಗಿ, ನೀವು ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆತ ಯಾವ ಮನಸ್ಥಿತಿಯವನು ಎಂಬ ಅರಿವಿದ್ದರೆ ಒಳ್ಳೆಯದು. ಅವರು(ರಾಜಾ) ಭಾರತದ ಪರವಾಗಿ ಮಾತನಾಡುವ ವೇಳೆ ಪಾಕಿಸ್ತಾನದ ವಿರುದ್ಧ ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸರ್ಫರಾಜ್​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಐಸಿಸಿಯಲ್ಲಿ ಭಾರತೀಯ ಕ್ರಿಕೆಟ್​ನ ಪ್ರಾಬಲ್ಯವನ್ನು ಒಪ್ಪಿಕೊಳ್ಳಬೇಕೆಂದು ರಮೀಜ್ ರಾಜಾ ನಾಚಿಕೆಯಿಲ್ಲದೇ ಮತ್ತು ನಿರ್ಧಯವಾಗಿ ಹೇಳಿದ್ದಾರೆ. ಆದರೆ, ಇದನ್ನು ಹಲವಾರು ಪಾಕಿಸ್ತಾನ ಕ್ರಿಕೆಟಿಗರು ವಿರೋಧಿಸಿದ್ದರು. ಜೊತೆಗೆ ಐಸಿಸಿಯಲ್ಲಿ ಏಕಸ್ವಾಮ್ಯದ ಮೂಲಕ ಕ್ರಿಕೆಟ್​ ಜಗತ್ತನ್ನು ಆಳುವ ಭಾರತೀಯ ಪ್ರಾಬಲ್ಯವಾದಿ ಯೋಜನೆಯ ವಿರುದ್ಧ ಪಾಕಿಸ್ತಾನ ಹೋಗಬಾರದು ಎಂದು ಅವರು ಹೇಳಿದ್ದಾರೆ.

ಹಾಗಾಗಿ ನೀವೊಬ್ಬ ಗೌರವಾನ್ವಿತ ಕ್ರಿಕೆಟ್​​ ಪೋಷಕರಾಗಿ ಐಸಿಸಿ ಸದಸ್ಯರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವ ಲೆಜೆಂಡ್ ಮಜೀದ್ ಖಾನ್ ಮತ್ತು ಮಾಜಿ ಐಸಿಸಿ ಪ್ರೆಸಿಡೆಂಟ್ ಆಗಿರುವ ಜಹೀರ್ ಅಬ್ಬಾಸ್​ ಅವರನ್ನು ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರೆ ಉತ್ತಮ ಎಂದು ಸರ್ಫರಾಜ್ ತಿಳಿಸಿದ್ದಾರೆ.

ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೆ ಮಾಜಿ ಕ್ರಿಕೆಟಿಗ ರಮೀಜ್​ ರಾಜಾ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವುದು ಬೇಡ, ಅವರು ಈ ಹಿಂದೆ ಪಾಕಿಸ್ತಾನ ಕುರಿತು ಅವಹೇಳನಕಾರಿಯಾಗಿ , ಭಾರತದ ಪರವಾಗಿ ಮಾತನಾಡಿದ್ದಾರೆ ಎಂದು ಮಾಜಿ ವೇಗಿ ಸರ್ಫರಾಜ್​ ನವಾಜ್​ ಹೇಳಿದ್ದಾರೆ.

ಸರ್ಫರಾಜ್​ ನವಾಜ್​, ಪ್ರಧಾನ ಮಂತ್ರಿ ಇಮ್ರಾನ್ ಖಾನ್​ ಅವರಿಗೆ ಪತ್ರ ಬರೆದಿದ್ದು, ಜಹೀರ್​ ಅಬ್ಬಾಸ್​ ಅಥವಾ ಮಜೀದ್​ ಖಾನ್​ ಅವರನ್ನು ಮುಂದಿನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಮನವಿ ಮಾಡಿ, ರಮೀಜ್​ ರಾಜಾ ಅವರ ವಿರುದ್ಧ ತಮ್ಮ ನಿಲುವು ಪ್ರತಿಪಾದಿಸಿದ್ದಾರೆ.

ಹಲವು ಮಾಧ್ಯಮಗಳಲ್ಲಿ ನೀವು ಎಹ್ಶಾನ್​ ಮಣಿ ಜಾಗಕ್ಕೆ ರಮೀಜ್ ರಾಜಾ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ರವಾನೆಯಾಗುತ್ತಿದೆ. ಈ ವಿಷಯದಲ್ಲಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಪೋಷಕರಾಗಿರುವ ನಿಮಗೆ ಯಾರನ್ನಾದರೂ ಪಿಸಿಬಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಕ್ಕಿದೆ ಎಂದು ಪತ್ರದಲ್ಲಿ ಲಂಡನ್​ ಮೂಲದ ಸರ್ಫರಾಜ್​ ಬರೆದಿದ್ದಾರೆ.

ಆದರೆ, ರಾಷ್ಟ್ರೀಯ ಸಂಸ್ಥೆಯ ಪೋಷಕರಾಗಿ, ನೀವು ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆತ ಯಾವ ಮನಸ್ಥಿತಿಯವನು ಎಂಬ ಅರಿವಿದ್ದರೆ ಒಳ್ಳೆಯದು. ಅವರು(ರಾಜಾ) ಭಾರತದ ಪರವಾಗಿ ಮಾತನಾಡುವ ವೇಳೆ ಪಾಕಿಸ್ತಾನದ ವಿರುದ್ಧ ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸರ್ಫರಾಜ್​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಐಸಿಸಿಯಲ್ಲಿ ಭಾರತೀಯ ಕ್ರಿಕೆಟ್​ನ ಪ್ರಾಬಲ್ಯವನ್ನು ಒಪ್ಪಿಕೊಳ್ಳಬೇಕೆಂದು ರಮೀಜ್ ರಾಜಾ ನಾಚಿಕೆಯಿಲ್ಲದೇ ಮತ್ತು ನಿರ್ಧಯವಾಗಿ ಹೇಳಿದ್ದಾರೆ. ಆದರೆ, ಇದನ್ನು ಹಲವಾರು ಪಾಕಿಸ್ತಾನ ಕ್ರಿಕೆಟಿಗರು ವಿರೋಧಿಸಿದ್ದರು. ಜೊತೆಗೆ ಐಸಿಸಿಯಲ್ಲಿ ಏಕಸ್ವಾಮ್ಯದ ಮೂಲಕ ಕ್ರಿಕೆಟ್​ ಜಗತ್ತನ್ನು ಆಳುವ ಭಾರತೀಯ ಪ್ರಾಬಲ್ಯವಾದಿ ಯೋಜನೆಯ ವಿರುದ್ಧ ಪಾಕಿಸ್ತಾನ ಹೋಗಬಾರದು ಎಂದು ಅವರು ಹೇಳಿದ್ದಾರೆ.

ಹಾಗಾಗಿ ನೀವೊಬ್ಬ ಗೌರವಾನ್ವಿತ ಕ್ರಿಕೆಟ್​​ ಪೋಷಕರಾಗಿ ಐಸಿಸಿ ಸದಸ್ಯರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವ ಲೆಜೆಂಡ್ ಮಜೀದ್ ಖಾನ್ ಮತ್ತು ಮಾಜಿ ಐಸಿಸಿ ಪ್ರೆಸಿಡೆಂಟ್ ಆಗಿರುವ ಜಹೀರ್ ಅಬ್ಬಾಸ್​ ಅವರನ್ನು ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರೆ ಉತ್ತಮ ಎಂದು ಸರ್ಫರಾಜ್ ತಿಳಿಸಿದ್ದಾರೆ.

Last Updated : Aug 24, 2021, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.