ETV Bharat / sports

ಕ್ರಿಕೆಟರ್ ಭುವನೇಶ್ವರ್ ಕುಮಾರ್​ಗೆ ಪಿತೃ ವಿಯೋಗ

author img

By

Published : May 20, 2021, 7:10 PM IST

ಕಿರಣ್ ಪಾಲ್ ಸಿಂಗ್ ನವದೆಹಲಿಯ ಆಲ್ ಇನ್ಸಿಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ಕೀಮೋಥೆರಪಿ ಸೇರಿದಂತೆ ಚಿಕಿತ್ಸೆಗೆ ಒಳಗಾಗಿದ್ದರು. ಇದಕ್ಕೂ ಮುನ್ನ ಕುಟುಂಬ ಇಂಗ್ಲೆಂಡ್​ನಲ್ಲಿ ತಜ್ಞರನ್ನು ಸಂಪರ್ಕಿಸಿತ್ತು ಎಂದು ತಿಳಿದುಬಂದಿದೆ.

ಕ್ರಿಕೆಟರ್ ಭುವನೇಶ್ವರ್ ಕುಮಾರ್ ಪಿತೃ ವಿಯೋಗ
ಕ್ರಿಕೆಟರ್ ಭುವನೇಶ್ವರ್ ಕುಮಾರ್ ಪಿತೃ ವಿಯೋಗ

ನವದೆಹಲಿ: ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್​ ಸಿಂಗ್ ಲಿವರ್​ ಕ್ಯಾನ್ಸರ್​ನಿಂದ ಗುರುವಾರ ಮೀರತ್​ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

63 ವರ್ಷದ ಕಿರಣ್ ಪಾಲ್​ ಸಿಂಗ್ 2020ರ ಸೆಪ್ಟೆಂಬರ್​ನಲ್ಲಿ ಆನಾರೋಗ್ಯಕ್ಕೆ ತುತ್ತಾಗಿದ್ದರು. ಇದೇ ಕಾರಣದಿಂದ ಭುವಿ ಯುಎಇನಲ್ಲಿ ನಡೆಯುತ್ತಿದ್ದ ಐಪಿಎಲ್​ನಿಂದ ಹೊರಬರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಕಿರಣ್ ಪಾಲ್ ಸಿಂಗ್ ನವದೆಹಲಿಯ ಆಲ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ಕೀಮೋಥೆರಪಿ ಸೇರಿದಂತೆ ಚಿಕಿತ್ಸೆಗೆ ಒಳಗಾಗಿದ್ದರು. ಇದಕ್ಕೂ ಮುನ್ನ ಕುಟುಂಬ ಇಂಗ್ಲೆಂಡ್​ನಲ್ಲಿ ತಜ್ಞರನ್ನು ಸಂಪರ್ಕಿಸಿತ್ತು ಎಂದು ತಿಳಿದು ಬಂದಿದೆ.

ತಂದೆ ತಾಯಿಯ  ಜೊತೆ ಭುವನೇಶ್ವರ್ ಕುಮಾರ್
ತಂದೆ ತಾಯಿಯ ಜೊತೆ ಭುವನೇಶ್ವರ್ ಕುಮಾರ್

ಆದರೆ, ಎರಡು ವಾರಗಳ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಅವರು ಮೀರತ್​ನಲ್ಲಿರುವ ಖಾಸಗಿ ಸೌಲಭ್ಯವೊಂದರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಎರಡು ದಿನಗಳ ನಂತರ ಇಹಲೋಕ ತ್ಯಜಿಸಿದ್ದಾರೆ.

ಕಿರಣ್ ಪಾಲ್ ಸಿಂಗ್ ಉತ್ತರ ಪ್ರದೇಶದ ಪೊಲೀಸ್​ ಇಲಾಖೆಯಲ್ಲಿ ಸಬ್​ ಇನ್​ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇದೀಗ ಅವರು ಮಡದಿ ಇಂದ್ರೇಶ್​ ದೇವಿ, ಮಕ್ಕಳಾದ ಭುವನೇಶ್ವರ್​ ಕುಮಾರ್​ ಮತ್ತು ರೇಖಾರನ್ನು ಅಗಲಿದ್ದಾರೆ.

ಇದನ್ನು ಓದಿ:ತಾಯಿ ಕಳೆದುಕೊಂಡ ನೋವಿನಲ್ಲಿರುವ ಮಗಳಿಗೆ ಕೊಹ್ಲಿ ಕಥೆ ಹೇಳಿ ಧೈರ್ಯ ತುಂಬಿದ ಪ್ರಿಯಾ ಪೂನಿಯಾ ತಂದೆ

ನವದೆಹಲಿ: ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರ ತಂದೆ ಕಿರಣ್ ಪಾಲ್​ ಸಿಂಗ್ ಲಿವರ್​ ಕ್ಯಾನ್ಸರ್​ನಿಂದ ಗುರುವಾರ ಮೀರತ್​ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

63 ವರ್ಷದ ಕಿರಣ್ ಪಾಲ್​ ಸಿಂಗ್ 2020ರ ಸೆಪ್ಟೆಂಬರ್​ನಲ್ಲಿ ಆನಾರೋಗ್ಯಕ್ಕೆ ತುತ್ತಾಗಿದ್ದರು. ಇದೇ ಕಾರಣದಿಂದ ಭುವಿ ಯುಎಇನಲ್ಲಿ ನಡೆಯುತ್ತಿದ್ದ ಐಪಿಎಲ್​ನಿಂದ ಹೊರಬರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಕಿರಣ್ ಪಾಲ್ ಸಿಂಗ್ ನವದೆಹಲಿಯ ಆಲ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ಕೀಮೋಥೆರಪಿ ಸೇರಿದಂತೆ ಚಿಕಿತ್ಸೆಗೆ ಒಳಗಾಗಿದ್ದರು. ಇದಕ್ಕೂ ಮುನ್ನ ಕುಟುಂಬ ಇಂಗ್ಲೆಂಡ್​ನಲ್ಲಿ ತಜ್ಞರನ್ನು ಸಂಪರ್ಕಿಸಿತ್ತು ಎಂದು ತಿಳಿದು ಬಂದಿದೆ.

ತಂದೆ ತಾಯಿಯ  ಜೊತೆ ಭುವನೇಶ್ವರ್ ಕುಮಾರ್
ತಂದೆ ತಾಯಿಯ ಜೊತೆ ಭುವನೇಶ್ವರ್ ಕುಮಾರ್

ಆದರೆ, ಎರಡು ವಾರಗಳ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಅವರು ಮೀರತ್​ನಲ್ಲಿರುವ ಖಾಸಗಿ ಸೌಲಭ್ಯವೊಂದರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಎರಡು ದಿನಗಳ ನಂತರ ಇಹಲೋಕ ತ್ಯಜಿಸಿದ್ದಾರೆ.

ಕಿರಣ್ ಪಾಲ್ ಸಿಂಗ್ ಉತ್ತರ ಪ್ರದೇಶದ ಪೊಲೀಸ್​ ಇಲಾಖೆಯಲ್ಲಿ ಸಬ್​ ಇನ್​ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇದೀಗ ಅವರು ಮಡದಿ ಇಂದ್ರೇಶ್​ ದೇವಿ, ಮಕ್ಕಳಾದ ಭುವನೇಶ್ವರ್​ ಕುಮಾರ್​ ಮತ್ತು ರೇಖಾರನ್ನು ಅಗಲಿದ್ದಾರೆ.

ಇದನ್ನು ಓದಿ:ತಾಯಿ ಕಳೆದುಕೊಂಡ ನೋವಿನಲ್ಲಿರುವ ಮಗಳಿಗೆ ಕೊಹ್ಲಿ ಕಥೆ ಹೇಳಿ ಧೈರ್ಯ ತುಂಬಿದ ಪ್ರಿಯಾ ಪೂನಿಯಾ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.