ಅಹಮದಾಬಾದ್ (ಗುಜರಾತ್): ಕಳೆದ ಮೂರು ವಿಶ್ವಕಪ್ಗಳನ್ನು ಆತಿಥ್ಯ ವಹಿಸಿದ ದೇಶಗಳು ಗೆದ್ದುಕೊಂಡಿವೆ ಎಂದು ಟ್ರೋಫಿ ಗೆಲ್ಲುವ ಕನಸಿನ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಆಯೋಜಿಸಿದ್ದ 'ಕ್ಯಾಪ್ಟನ್ಸ್ ಡೇ' ಕಾರ್ಯಕ್ರಮದಲ್ಲಿ ಹೇಳಿದರು. ಈ ಮೂಲಕ 140 ಕೋಟಿ ಭಾರತೀಯರ ನಿರೀಕ್ಷೆಗಳು ಗರಿಗೆದರಿವೆ.
"ತಂಡದ ಪ್ರತಿಯೊಬ್ಬ ಆಟಗಾರನಿಗೂ ತನ್ನ ಪಾತ್ರ ಮತ್ತು ಜವಾಬ್ದಾರಿಯ ಅರಿವಿದೆ. ನಾವೆಲ್ಲರೂ ಒಂದು ವಿಚಾರವನ್ನು ಕೇಂದ್ರೀಕರಿಸಬೇಕಿದೆ. ಎಲ್ಲರೂ ತಂಡವಾಗಿ ಪ್ರದರ್ಶನ ನೀಡುವುದು ಮುಖ್ಯ. ಇದು ಸುದೀರ್ಘ ಟೂರ್ನಿ. ನಾವು ಪ್ರತಿ ಪಂದ್ಯದ ಫಲಿತಾಂಶವನ್ನು ಅಂದು ಏನು ನಡೆಯಿತು ಎಂಬುದನ್ನು ಅರಿತು ಮುಂದೆ ಸಾಗಬೇಕಿರುತ್ತದೆ. ನಮ್ಮ ಗುರಿ ಮತ್ತು ಉದ್ದೇಶ ಒಂದೇ ಕಡೆಗೆ ಕೇಂದ್ರೀಕೃತವಾಗಿರುತ್ತವೆ" ಎಂದರು.
-
𝟭𝟬 𝗖𝗮𝗽𝘁𝗮𝗶𝗻𝘀. 𝟭 𝗚𝗼𝗮𝗹 🏆#CWC23 | #TeamIndia pic.twitter.com/ivQ0lsT9mp
— BCCI (@BCCI) October 4, 2023 " class="align-text-top noRightClick twitterSection" data="
">𝟭𝟬 𝗖𝗮𝗽𝘁𝗮𝗶𝗻𝘀. 𝟭 𝗚𝗼𝗮𝗹 🏆#CWC23 | #TeamIndia pic.twitter.com/ivQ0lsT9mp
— BCCI (@BCCI) October 4, 2023𝟭𝟬 𝗖𝗮𝗽𝘁𝗮𝗶𝗻𝘀. 𝟭 𝗚𝗼𝗮𝗹 🏆#CWC23 | #TeamIndia pic.twitter.com/ivQ0lsT9mp
— BCCI (@BCCI) October 4, 2023
ಭಾರತ ತಂಡ ಅಕ್ಟೋಬರ್ 8 ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಪಂದ್ಯ ಆಡಲಿದೆ. ಇತ್ತೀಚಿನ ಏಷ್ಯಾಕಪ್ ವಿಜಯದ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಂಡಿದೆ. ರೋಹಿತ್ ಶರ್ಮಾ ಟೀಂ ಈ ಸರಣಿಯ ಫಲಿತಾಂಶ ಮತ್ತು ಏಷ್ಯಾಕಪ್ ಗೆಲುವಿನಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇನ್ನೊಂದೆಡೆ, ಭಾರತದ ಎರಡು ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದ್ದು, ರದ್ದಾಗಿತ್ತು.