ETV Bharat / sports

ಧೋನಿ ಬೆಂಬಲಕ್ಕೆ ನಿಂತ ಭಾರತೀಯ ಮಾಧ್ಯಮಗಳು: ಪಾಕ್​ ಸಚಿವರ​ ಆಕ್ರೋಶ - undefined

ಧೋನಿ ಗ್ಲೌಸ್ ಕುರಿತಾಗಿ ಭಾರತೀಯ ಸುದ್ದಿ ಮಾದ್ಯಮಗಳು ಮೂರ್ಖರಂತೆ ಚರ್ಚೆ ಮಾಡುತ್ತಿವೆ ಎಂದು ಪಾಕಿಸ್ತಾನ ಸರ್ಕಾರದ ಸಚಿವ ತನ್ನ ನಾಲಿಗೆ ಹರಿಬಿಟ್ಟಿದ್ದಾರೆ.

ಪಾಕ್​ ಮಿನಿಸ್ಟರ್​ ಉವಾಚ
author img

By

Published : Jun 7, 2019, 7:16 PM IST

ನವದೆಹಲಿ: ದಕ್ಷಿಣ ​ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ ವೇಳೆ ಧೋನಿ ಭಾರತೀಯ ಸೇನೆಯ ತುಕಡಿ ಪ್ಯಾರಾ ಸ್ಪೆಷಲ್ ಫೋರ್ಸ್​ನ ‘ಬಲಿದಾನ’ ಲಾಂಛನವಿರುವ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್‌​ ತೆಗದುಹಾಕುವಂತೆ ಐಸಿಸಿ, ಬಿಸಿಸಿಐಗೆ ಸೂಚಿಸಿದ್ದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಸಚಿವರೊಬ್ಬರು ತನ್ನ ನಾಲಿಗೆ ಹರಿಬಿಟ್ಟಿದ್ದಾರೆ.

SPORTS
ಫವಾದ್​ ಚೌಧರಿ ಟ್ವೀಟ್​

ಟ್ವಿಟರ್​​ನಲ್ಲಿ ಧೋನಿ ಬೆಂಬಲಿಸಿದ ದೇಶದ ಜನತೆ...! ಮಾಹಿಗೆ ಬಿಸಿಸಿಐ ಫುಲ್ ಸಫೋರ್ಟ್​

ಮಾಧ್ಯಮಗಳಲ್ಲಿ ಧೋನಿ ಧರಿಸಿದ್ದ ಗ್ಲೌಸ್​ ವಿಚಾರ ಸುದ್ದಿಯಾಗುತ್ತಿರೋದಕ್ಕೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್​ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿ ಇಂಗ್ಲೆಂಡ್​ಗೆ ಹೋಗಿರುವುದು ಕ್ರಿಕೆಟ್​ ಆಡಲು, ಮಹಾಭಾರತ ಯುದ್ದಕ್ಕೆ ಅಲ್ಲ. ಭಾರತದ ಮಾಧ್ಯಮಗಳು ಮೂರ್ಖರಂತೆ ಚರ್ಚೆ ನಡೆಸುತ್ತಿವೆ. ಭಾರತದ ಕೆಲವು ಮಾದ್ಯಮಗಳು ಯುದ್ಧವನ್ನ ಪ್ರಚೋದಿಸಿತ್ತವೆ. ಅಂತವರನ್ನೆಲ್ಲ ಸಿರಿಯಾ, ಅಫ್ಘಾನಿಸ್ತಾನ, ಅಥವಾ ರವಾಂಡಾಗೆ ಕೂಲಿ ಸೈನಿಕರನ್ನಾಗಿ ಕಳುಹಿಸಬೇಕು ಎಂದು ಕಿಡಿಕಾರಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್​ ಮಾಡಿರುವ ಭಾರತ ಕ್ರೀಡಾಸಚಿವ ಕಿರಣ್​ ರಿಜುಜು​, ಕ್ರೀಡಾ ಸಂಸ್ಥೆಗಳ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ, ಏಕೆಂದರೆ ನಿರ್ಣಯ ತೆಗೆದುಕೊಳ್ಳಲು ಅವರು ಸ್ವತಂತ್ರರಿರುತ್ತಾರೆ. ಆದರೆ, ಈ ಸಮಸ್ಯೆಯು ದೇಶದ ಭಾವನೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ರಾಷ್ಟ್ರದ ಆಸಕ್ತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಹೇಂದ್ರ ಸಿಂಗ್ ಧೋನಿ ಪ್ರಕರಣದಲ್ಲಿ ಬಿಸಿಸಿಐ ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ನವದೆಹಲಿ: ದಕ್ಷಿಣ ​ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ ವೇಳೆ ಧೋನಿ ಭಾರತೀಯ ಸೇನೆಯ ತುಕಡಿ ಪ್ಯಾರಾ ಸ್ಪೆಷಲ್ ಫೋರ್ಸ್​ನ ‘ಬಲಿದಾನ’ ಲಾಂಛನವಿರುವ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್‌​ ತೆಗದುಹಾಕುವಂತೆ ಐಸಿಸಿ, ಬಿಸಿಸಿಐಗೆ ಸೂಚಿಸಿದ್ದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಸಚಿವರೊಬ್ಬರು ತನ್ನ ನಾಲಿಗೆ ಹರಿಬಿಟ್ಟಿದ್ದಾರೆ.

SPORTS
ಫವಾದ್​ ಚೌಧರಿ ಟ್ವೀಟ್​

ಟ್ವಿಟರ್​​ನಲ್ಲಿ ಧೋನಿ ಬೆಂಬಲಿಸಿದ ದೇಶದ ಜನತೆ...! ಮಾಹಿಗೆ ಬಿಸಿಸಿಐ ಫುಲ್ ಸಫೋರ್ಟ್​

ಮಾಧ್ಯಮಗಳಲ್ಲಿ ಧೋನಿ ಧರಿಸಿದ್ದ ಗ್ಲೌಸ್​ ವಿಚಾರ ಸುದ್ದಿಯಾಗುತ್ತಿರೋದಕ್ಕೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್​ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿ ಇಂಗ್ಲೆಂಡ್​ಗೆ ಹೋಗಿರುವುದು ಕ್ರಿಕೆಟ್​ ಆಡಲು, ಮಹಾಭಾರತ ಯುದ್ದಕ್ಕೆ ಅಲ್ಲ. ಭಾರತದ ಮಾಧ್ಯಮಗಳು ಮೂರ್ಖರಂತೆ ಚರ್ಚೆ ನಡೆಸುತ್ತಿವೆ. ಭಾರತದ ಕೆಲವು ಮಾದ್ಯಮಗಳು ಯುದ್ಧವನ್ನ ಪ್ರಚೋದಿಸಿತ್ತವೆ. ಅಂತವರನ್ನೆಲ್ಲ ಸಿರಿಯಾ, ಅಫ್ಘಾನಿಸ್ತಾನ, ಅಥವಾ ರವಾಂಡಾಗೆ ಕೂಲಿ ಸೈನಿಕರನ್ನಾಗಿ ಕಳುಹಿಸಬೇಕು ಎಂದು ಕಿಡಿಕಾರಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್​ ಮಾಡಿರುವ ಭಾರತ ಕ್ರೀಡಾಸಚಿವ ಕಿರಣ್​ ರಿಜುಜು​, ಕ್ರೀಡಾ ಸಂಸ್ಥೆಗಳ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ, ಏಕೆಂದರೆ ನಿರ್ಣಯ ತೆಗೆದುಕೊಳ್ಳಲು ಅವರು ಸ್ವತಂತ್ರರಿರುತ್ತಾರೆ. ಆದರೆ, ಈ ಸಮಸ್ಯೆಯು ದೇಶದ ಭಾವನೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ರಾಷ್ಟ್ರದ ಆಸಕ್ತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಹೇಂದ್ರ ಸಿಂಗ್ ಧೋನಿ ಪ್ರಕರಣದಲ್ಲಿ ಬಿಸಿಸಿಐ ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

Intro:Body:

m,/


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.