ETV Bharat / sports

ಮುಷ್ತಾಕ್ ಅಲಿ ಟ್ರೋಫಿ; ಯುಪಿ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ

author img

By

Published : Jan 18, 2021, 4:19 PM IST

ಈಗಾಗಲೇ ಎ ಗುಂಪಿನಲ್ಲಿ ಪಂಜಾಬ್​ ತಂಡ 20 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ. ಕರ್ನಾಟಕ ತಂಡ 16 ಅಂಕ ಪಡೆದಿದ್ದು, ಕ್ವಾರ್ಟರ್​ ಫೈನಲ್ ಪ್ರವೇಶಿಸಲು ನಾಳೆ ನಡೆಯುವ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ.

Syed Mushtaq Ali Trophy
ದೇವದತ್​ ಪಡಿಕ್ಕಲ್​

ಬೆಂಗಳೂರು: ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್​ಗಳ ಅಂತರದಿಂದ ಉತ್ತರ ಪ್ರದೇಶವನ್ನು ಮಣಿಸಿದೆ.

ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಉತ್ತರ ಪ್ರದೇಶ ತಂಡ 20 ಓವರ್​ಗಳಲ್ಲಿ 132 ರನ್​ಗಳಿಸಿತ್ತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದಿದ್ದ ಯುಪಿ ತಂಡ ಮೊದಲ ವಿಕೆಟ್​ಗೆ 69 ರನ್​ ಸೇರಿಸಿ ಅತ್ಯುತ್ತಮ ಆರಂಭ ಪಡೆದಿತ್ತು. ಆದರೆ ಪ್ರವೀಣ್ ದುಬೆ ಮತ್ತು ಸುಚಿತ್ ದಾಳಿಗೆ ಸಿಲುಕಿ ದಿಢೀರ್​ ಕುಸಿತ ಕಂಡು 132ಕ್ಕೆ ತೃಪ್ತಿಪಟ್ಟುಕೊಂಡಿತು.

ಆರಂಭಿಕರಾದ ಅಭಿಷೇಕ್ ಗೋಸ್ವಾಮಿ 47 ಹಾಗೂ ಕರಣ್ ಶರ್ಮಾ 41 ರನ್​ಗಳಿಸಿದ್ದು, ಬಿಟ್ಟರೆ, ಸುರೇಶ್​ ರೈನಾ ಸೇರಿದಂತೆ ಯಾವೊಬ್ಬ ಬ್ಯಾಟ್ಸ್​ಮನ್​ ಎರಡಂಕಿ ಮೊತ್ತ ಗಳಿಸಲು ವಿಫಲರಾದರು.

ಕರ್ನಾಟಕ ಪರ ಪ್ರವೀಣ್ ದುಬೆ 15ಕ್ಕೆ 3, ಜೆ. ಸುಚಿತ್​ 21ಕ್ಕೆ 3, ವಿ. ಕೌಶಿಕ್​ 20ಕ್ಕೆ1, ಗೋಪಾಲ್ 22ಕ್ಕೆ1 ವಿಕೆಟ್​ ಪಡೆದು ಮಿಂಚಿದರು.

ಇನ್ನು 133 ರನ್​ಗಳ ಗುರಿ ಪಡೆದಿದ್ದ ಕರ್ನಾಟಕ ತಂಡ ರನ್ ​ರೇಟ್​ ಹೆಚ್ಚಿಸಿಕೊಳ್ಳುವ ಭರದಲ್ಲಿ 49 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು. ದೇವದತ್​ ಪಡಿಕ್ಕಲ್​ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 34 ರನ್​ಗಳಿಸಿದರೆ, ಕಡಮ್​ 5, ಮತ್ತು ಶ್ರೀಜಿತ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದರು.

ಆದರೆ ಶ್ರೇಯಸ್ ಗೋಪಾಲ್​ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 47 ರನ್​ಗ​ಳಿಸಿ ಕರ್ನಾಟಕಕ್ಕೆ ಸಮಾಧಾನಕರ ಜಯ ತಂದುಕೊಟ್ಟರು. ಅನಿರುದ್ಧ ಜೋಶಿ 32 ಎಸೆತಗಳಲ್ಲಿ 21 ರನ್​ಗಳಿಸಿ ಔಟಾಗಿದ್ದರಿಂದ ತಂಡಕ್ಕೆ ಭಾರಿ ಹಿನ್ನಡೆಯಾಗಿತ್ತು. ಆದರೆ ಗೋಪಾಲ್​ ಸ್ಫೋಟಕ ಬ್ಯಾಟಿಂಗ್ ತಂಡವನ್ನು ಸೋಲಿನಿಂದ ಪಾರು ಮಾಡಿತು

ಈಗಾಗಲೇ ಗುಂಪಿನಲ್ಲಿ ಪಂಜಾಬ್​ ತಂಡ 20 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ. ಕರ್ನಾಟಕ ತಂಡ 16 ಅಂಕ ಪಡೆದಿದ್ದು, ಕ್ವಾರ್ಟರ್​ ಫೈನಲ್ ಪ್ರವೇಶಿಸಲು ನಾಳೆ ನಡೆಯುವ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ.

6 ಗುಂಪುಗಳಲ್ಲಿ ತಲಾ ಒಂದು ತಂಡ ಕ್ವಾರ್ಟರ್ ಫೈನಲ್​ ಪ್ರವೇಶಿಸಲಿವೆ. ಎಲ್ಲಾ ಗುಂಪುಗಳ ಉಳಿದ ತಂಡಗಳಲ್ಲಿ ಹೆಚ್ಚು ಅಂಕಪಡೆದ 2 ತಂಡಗಳಿಗೆ ಕ್ವಾರ್ಟರ್​ ಫೈನಲ್​ಗೇರುವ ಅವಕಾಶ ಸಿಗಲಿದೆ.

ಬೆಂಗಳೂರು: ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್​ಗಳ ಅಂತರದಿಂದ ಉತ್ತರ ಪ್ರದೇಶವನ್ನು ಮಣಿಸಿದೆ.

ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಉತ್ತರ ಪ್ರದೇಶ ತಂಡ 20 ಓವರ್​ಗಳಲ್ಲಿ 132 ರನ್​ಗಳಿಸಿತ್ತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದಿದ್ದ ಯುಪಿ ತಂಡ ಮೊದಲ ವಿಕೆಟ್​ಗೆ 69 ರನ್​ ಸೇರಿಸಿ ಅತ್ಯುತ್ತಮ ಆರಂಭ ಪಡೆದಿತ್ತು. ಆದರೆ ಪ್ರವೀಣ್ ದುಬೆ ಮತ್ತು ಸುಚಿತ್ ದಾಳಿಗೆ ಸಿಲುಕಿ ದಿಢೀರ್​ ಕುಸಿತ ಕಂಡು 132ಕ್ಕೆ ತೃಪ್ತಿಪಟ್ಟುಕೊಂಡಿತು.

ಆರಂಭಿಕರಾದ ಅಭಿಷೇಕ್ ಗೋಸ್ವಾಮಿ 47 ಹಾಗೂ ಕರಣ್ ಶರ್ಮಾ 41 ರನ್​ಗಳಿಸಿದ್ದು, ಬಿಟ್ಟರೆ, ಸುರೇಶ್​ ರೈನಾ ಸೇರಿದಂತೆ ಯಾವೊಬ್ಬ ಬ್ಯಾಟ್ಸ್​ಮನ್​ ಎರಡಂಕಿ ಮೊತ್ತ ಗಳಿಸಲು ವಿಫಲರಾದರು.

ಕರ್ನಾಟಕ ಪರ ಪ್ರವೀಣ್ ದುಬೆ 15ಕ್ಕೆ 3, ಜೆ. ಸುಚಿತ್​ 21ಕ್ಕೆ 3, ವಿ. ಕೌಶಿಕ್​ 20ಕ್ಕೆ1, ಗೋಪಾಲ್ 22ಕ್ಕೆ1 ವಿಕೆಟ್​ ಪಡೆದು ಮಿಂಚಿದರು.

ಇನ್ನು 133 ರನ್​ಗಳ ಗುರಿ ಪಡೆದಿದ್ದ ಕರ್ನಾಟಕ ತಂಡ ರನ್ ​ರೇಟ್​ ಹೆಚ್ಚಿಸಿಕೊಳ್ಳುವ ಭರದಲ್ಲಿ 49 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು. ದೇವದತ್​ ಪಡಿಕ್ಕಲ್​ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 34 ರನ್​ಗಳಿಸಿದರೆ, ಕಡಮ್​ 5, ಮತ್ತು ಶ್ರೀಜಿತ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದರು.

ಆದರೆ ಶ್ರೇಯಸ್ ಗೋಪಾಲ್​ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 47 ರನ್​ಗ​ಳಿಸಿ ಕರ್ನಾಟಕಕ್ಕೆ ಸಮಾಧಾನಕರ ಜಯ ತಂದುಕೊಟ್ಟರು. ಅನಿರುದ್ಧ ಜೋಶಿ 32 ಎಸೆತಗಳಲ್ಲಿ 21 ರನ್​ಗಳಿಸಿ ಔಟಾಗಿದ್ದರಿಂದ ತಂಡಕ್ಕೆ ಭಾರಿ ಹಿನ್ನಡೆಯಾಗಿತ್ತು. ಆದರೆ ಗೋಪಾಲ್​ ಸ್ಫೋಟಕ ಬ್ಯಾಟಿಂಗ್ ತಂಡವನ್ನು ಸೋಲಿನಿಂದ ಪಾರು ಮಾಡಿತು

ಈಗಾಗಲೇ ಗುಂಪಿನಲ್ಲಿ ಪಂಜಾಬ್​ ತಂಡ 20 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ. ಕರ್ನಾಟಕ ತಂಡ 16 ಅಂಕ ಪಡೆದಿದ್ದು, ಕ್ವಾರ್ಟರ್​ ಫೈನಲ್ ಪ್ರವೇಶಿಸಲು ನಾಳೆ ನಡೆಯುವ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ.

6 ಗುಂಪುಗಳಲ್ಲಿ ತಲಾ ಒಂದು ತಂಡ ಕ್ವಾರ್ಟರ್ ಫೈನಲ್​ ಪ್ರವೇಶಿಸಲಿವೆ. ಎಲ್ಲಾ ಗುಂಪುಗಳ ಉಳಿದ ತಂಡಗಳಲ್ಲಿ ಹೆಚ್ಚು ಅಂಕಪಡೆದ 2 ತಂಡಗಳಿಗೆ ಕ್ವಾರ್ಟರ್​ ಫೈನಲ್​ಗೇರುವ ಅವಕಾಶ ಸಿಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.