ಸಿಡ್ನಿ: ಭಾನುವಾರ ಭಾರತದ ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಪ್ರೇಕ್ಷಕರ ಗುಂಪೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿತ್ತು. ನಂತರ ಭದ್ರತಾ ಸಿಬ್ಬಂದಿ 6 ಮಂದಿಯನ್ನು ಮೈದಾನದಿಂದ ಹೊರ ಹಾಕಿ ನ್ಯೂ ಸೌತ್ ವೇಲ್ಸ್ ಪೊಲೀಸರಿಗೆ ಒಪ್ಪಿಸಿದ್ದರು.
ಈ ಘಟನೆಯನ್ನು ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಖಂಡಿಸಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಆಟಗಾರರ ಮೇಲೆ, ವಿಶೇಷವಾಗಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಖಂಡನಿಯ. ಪ್ರೇಕ್ಷಕರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="
">
"ಮೊಹಮ್ಮದ್ ಸಿರಾಜ್ ಅವರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಖಂಡನಿಯ. ಸಿರಾಜ್ ಮತ್ತು ಭಾರತೀಯ ತಂಡವನ್ನು ನಾನು ಕ್ಷಮೆ ಕೇಳುತ್ತೇನೆ. ಪ್ರೇಕ್ಷಕರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ನಮ್ಮ ದೇಶದ ಜನರಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ" ಎಂದು ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಓದಿ : ಇದು ನಾಚಿಕೆಗೇಡು, ನನ್ನ ಜೀವನದಲ್ಲಿ ಕಾಡುವ ಘಟನೆ.. ಜನಾಂಗೀಯ ನಿಂದನೆ ಬಗ್ಗೆ ಲ್ಯಾಂಗರ್ ಕಿಡಿ
"ಭಾರತ ತಂಡ ಪಂದ್ಯ ಡ್ರಾ ಮಾಡಿಕೊಳ್ಳೋದಕ್ಕಾಗಿ ಕಠಿಣವಾಗಿ ಹೋರಾಡಿದ ರೀತಿ ನನಗೆ ಮೆಚ್ಚುಗೆ ಆಯಿತು, ಭಾರತಕ್ಕೆ ಅಭಿನಂದನೆಗಳು. ಅದಕ್ಕಾಗಿಯೇ ನಾವು ಈ ಆಟವನ್ನು ಪ್ರೀತಿಸುತ್ತೇವೆ, ಅದು ಸುಲಭವಲ್ಲ. ನಿರ್ಣಾಯಕ ಪಂದ್ಯಕ್ಕಾಗಿ ಈಗ ಬ್ರಿಸ್ಬೇನ್ಗೆ ತೆರಳಲಿದ್ದೇವೆ " ಎಂದು ಅವರು ಹೇಳಿದರು.