ETV Bharat / sports

ನನ್ನನ್ನು ನಿಂದಿಸಿದ್ದಕ್ಕಾಗಿ ಸ್ಟೋಕ್ಸ್​ ಜೊತೆ ಕೊಹ್ಲಿ ವಾಗ್ವಾದಕ್ಕಿಳಿದರು: ಸಿರಾಜ್​​

ನಾಲ್ಕನೇ ಟೆಸ್ಟ್​ನಲ್ಲಿ ಸಿರಾಜ್​ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರಾದ ಜೋ ರೂಟ್ ಮತ್ತು ಜಾನಿ ಬೈರ್ಸ್ಟೋವ್‌‌ ​ವಿಕೆಟ್​ ಪಡೆದಿದ್ದರು. ಇಂಗ್ಲೆಂಡ್​ ತಂಡವನ್ನು ಆಲೌಟ್ ಮಾಡಿದ ನಂತರ ವರ್ಚುವಲ್​ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಹ್ಲಿ- ಸ್ಟೋಕ್ಸ್ ಮಾತಿನ ಚಕಮಕಿಯ ಬಗ್ಗೆ ತಿಳಿಸಿದ್ದಾರೆ.

author img

By

Published : Mar 4, 2021, 7:10 PM IST

ವಿರಾಟ್ ಕೊಹ್ಲಿ -ಬೆನ್​ ಸ್ಟೋಕ್ಸ್​
ವಿರಾಟ್ ಕೊಹ್ಲಿ -ಬೆನ್​ ಸ್ಟೋಕ್ಸ್​

ಅಹ್ಮದಾಬಾದ್​: ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್​ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್​ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಪ್ರವಾಸಿ ತಂಡದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮೈದಾನದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಇದೀಗ ಈ ಘಟನೆಗೆ ಕಾರಣ ಏನೆಂಬುದನ್ನು ವೇಗಿ ಮೊಹಮ್ಮದ್ ಸಿರಾಜ್ ಬಹಿರಂಗಪಡಿಸಿದ್ದಾರೆ.

ನಾಲ್ಕನೇ ಟೆಸ್ಟ್​ನಲ್ಲಿ ಸಿರಾಜ್​ ಇಂಗ್ಲೆಂಡ್ ತಂಡ ಪ್ರಮುಖ ಆಟಗಾರರಾದ ಜೋ ರೂಟ್ ಮತ್ತು ಜಾನಿ ಬೈರ್ಸ್ಟೋವ್‌ ​ವಿಕೆಟ್​ ಪಡೆದಿದ್ದರು. ಇಂಗ್ಲೆಂಡ್​ ತಂಡವನ್ನು ಆಲೌಟ್ ಮಾಡಿದ ನಂತರ ವರ್ಚುವಲ್​ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಹ್ಲಿ- ಸ್ಟೋಕ್ಸ್ ಮಾತಿನ ಚಕಮಕಿಯ ಬಗ್ಗೆ ತಿಳಿಸಿದ್ದಾರೆ.

"ಬೆನ್​ ಸ್ಟೋಕ್ಸ್​ ನನ್ನನ್ನು ನಿಂದಿಸಿದರು. ಹಾಗಾಗಿ, ವಿರಾಟ್ ಭಾಯ್​ ಮಧ್ಯಪ್ರವೇಶಿಸಿದರು. ನಂತರ ಪರಿಸ್ಥಿತಿ ನಿಭಾಯಿಸಿದರು" ಎಂದು ಸಿರಾಜ್​ ಹೇಳಿದ್ದಾರೆ.

ಸ್ಟೋಕ್ಸ್​ ಮತ್ತು ಕೊಹ್ಲಿ ಮಾತುಕತೆ ದೊಡ್ಡದಾಗುತ್ತಿದ್ದಂತೆ ಮೈದಾನದ ಅಂಪೈರ್​ಗಳಾದ ನಿತಿನ್ ಮೆನನ್​ ಮತ್ತು ವೀರೇಂದ್ರ ಶರ್ಮಾ ಮಧ್ಯ ಪ್ರವೇಶಿಸಿ ಇಬ್ಬರನ್ನು ಶಾಂತಗೊಳಿಸಿದರು.

ಇನ್ನು ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿ, ಇದು ಬ್ಯಾಟಿಂಗ್‌ಸ್ನೇಹಿ ವಿಕೆಟ್​ ಆಗಿದ್ದರಿಂದ ಮೊದಲೇ ಹೇಗೆ ಬೌಲಿಂಗ್ ಮಾಡಬೇಕೆಂದು ಕೊಹ್ಲಿಯೊಂದಿಗೆ ಚರ್ಚಿಸಲಾಗಿತ್ತು. ಸಾಕಷ್ಟು ತಾಳ್ಮೆಯಿಂದ ಬೌಲಿಂಗ್ ಮಾಡಲು ಮತ್ತು ಅದೇ ಸ್ಥಳದಲ್ಲಿ ಚೆಂಡನ್ನು ಪ್ರಯೋಗಿಸಲು ಯೋಜನೆ ರೂಪಿಸಿದ್ದೆವು. ನಾವು ಕೇವಲ 2 ವೇಗಿಗಳನ್ನು ಹೊಂದಿದ್ದೇವೆ. ರೋಟೇಶನ್ ಕೂಡ ಮುಖ್ಯವಾಗಿದೆ ಎಂದು ವಿರಾಟ್​ ಭಾಯ್​ ನನಗೆ ಹೇಳಿದ್ದರು. ನಾನು ರಿಲಯನ್ಸ್​ ಎಂಡ್​ನಿಂದ ಬೌಲಿಂಗ್ ಮಾಡಿದಾಗ ಸ್ವಲ್ಪ ಬೌನ್ಸ್​ ಹಾಗೂ ಉತ್ತಮ ಮೂವ್​ಮೆಂಟ್​ ಹೊಂದಿದ್ದರಿಂದ ವಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ಸಿರಾಜ್​ ಹೇಳಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​ 205ಕ್ಕೆ ಆಲೌಟ್​: ಮೊದಲ ದಿನ ಗಿಲ್ ವಿಕೆಟ್ ಕಳೆದುಕೊಂಡು 24 ರನ್​ಗಳಿಸಿದ ಭಾರತ

ಅಹ್ಮದಾಬಾದ್​: ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್​ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್​ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಪ್ರವಾಸಿ ತಂಡದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮೈದಾನದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಇದೀಗ ಈ ಘಟನೆಗೆ ಕಾರಣ ಏನೆಂಬುದನ್ನು ವೇಗಿ ಮೊಹಮ್ಮದ್ ಸಿರಾಜ್ ಬಹಿರಂಗಪಡಿಸಿದ್ದಾರೆ.

ನಾಲ್ಕನೇ ಟೆಸ್ಟ್​ನಲ್ಲಿ ಸಿರಾಜ್​ ಇಂಗ್ಲೆಂಡ್ ತಂಡ ಪ್ರಮುಖ ಆಟಗಾರರಾದ ಜೋ ರೂಟ್ ಮತ್ತು ಜಾನಿ ಬೈರ್ಸ್ಟೋವ್‌ ​ವಿಕೆಟ್​ ಪಡೆದಿದ್ದರು. ಇಂಗ್ಲೆಂಡ್​ ತಂಡವನ್ನು ಆಲೌಟ್ ಮಾಡಿದ ನಂತರ ವರ್ಚುವಲ್​ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಹ್ಲಿ- ಸ್ಟೋಕ್ಸ್ ಮಾತಿನ ಚಕಮಕಿಯ ಬಗ್ಗೆ ತಿಳಿಸಿದ್ದಾರೆ.

"ಬೆನ್​ ಸ್ಟೋಕ್ಸ್​ ನನ್ನನ್ನು ನಿಂದಿಸಿದರು. ಹಾಗಾಗಿ, ವಿರಾಟ್ ಭಾಯ್​ ಮಧ್ಯಪ್ರವೇಶಿಸಿದರು. ನಂತರ ಪರಿಸ್ಥಿತಿ ನಿಭಾಯಿಸಿದರು" ಎಂದು ಸಿರಾಜ್​ ಹೇಳಿದ್ದಾರೆ.

ಸ್ಟೋಕ್ಸ್​ ಮತ್ತು ಕೊಹ್ಲಿ ಮಾತುಕತೆ ದೊಡ್ಡದಾಗುತ್ತಿದ್ದಂತೆ ಮೈದಾನದ ಅಂಪೈರ್​ಗಳಾದ ನಿತಿನ್ ಮೆನನ್​ ಮತ್ತು ವೀರೇಂದ್ರ ಶರ್ಮಾ ಮಧ್ಯ ಪ್ರವೇಶಿಸಿ ಇಬ್ಬರನ್ನು ಶಾಂತಗೊಳಿಸಿದರು.

ಇನ್ನು ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿ, ಇದು ಬ್ಯಾಟಿಂಗ್‌ಸ್ನೇಹಿ ವಿಕೆಟ್​ ಆಗಿದ್ದರಿಂದ ಮೊದಲೇ ಹೇಗೆ ಬೌಲಿಂಗ್ ಮಾಡಬೇಕೆಂದು ಕೊಹ್ಲಿಯೊಂದಿಗೆ ಚರ್ಚಿಸಲಾಗಿತ್ತು. ಸಾಕಷ್ಟು ತಾಳ್ಮೆಯಿಂದ ಬೌಲಿಂಗ್ ಮಾಡಲು ಮತ್ತು ಅದೇ ಸ್ಥಳದಲ್ಲಿ ಚೆಂಡನ್ನು ಪ್ರಯೋಗಿಸಲು ಯೋಜನೆ ರೂಪಿಸಿದ್ದೆವು. ನಾವು ಕೇವಲ 2 ವೇಗಿಗಳನ್ನು ಹೊಂದಿದ್ದೇವೆ. ರೋಟೇಶನ್ ಕೂಡ ಮುಖ್ಯವಾಗಿದೆ ಎಂದು ವಿರಾಟ್​ ಭಾಯ್​ ನನಗೆ ಹೇಳಿದ್ದರು. ನಾನು ರಿಲಯನ್ಸ್​ ಎಂಡ್​ನಿಂದ ಬೌಲಿಂಗ್ ಮಾಡಿದಾಗ ಸ್ವಲ್ಪ ಬೌನ್ಸ್​ ಹಾಗೂ ಉತ್ತಮ ಮೂವ್​ಮೆಂಟ್​ ಹೊಂದಿದ್ದರಿಂದ ವಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ಸಿರಾಜ್​ ಹೇಳಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​ 205ಕ್ಕೆ ಆಲೌಟ್​: ಮೊದಲ ದಿನ ಗಿಲ್ ವಿಕೆಟ್ ಕಳೆದುಕೊಂಡು 24 ರನ್​ಗಳಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.