ETV Bharat / sports

ನಾನು ನಿಮ್ಮನ್ನು ಪ್ರತಿದಿನ ಮಿಸ್​ ಮಾಡಿಕೊಳ್ಳುತ್ತೇನೆ.. ಅಪ್ಪನನ್ನು ನೆನೆದು ಹಾರ್ದಿಕ್ ಭಾವುಕ - Krunal Pandya's father passes away

ಶನಿವಾರ ಬರೋಡ ತಂಡದ ನಾಯಕರಾಗಿದ್ದ ಹಾರ್ದಿಕ್ ಸಹೋದರ, ಕೃನಾಲ್ ಪಾಂಡ್ಯ ತಮ್ಮ ತಂದೆಯ ಸಾವಿನ ಸುದ್ದಿ ತಿಳಿದು, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಬಯೋಬಬಲ್​ನಿಂದ ಹೊರ ಬಂದಿದ್ದರು.

ಹಾರ್ದಿಕ್ ಪಾಂಡ್ಯ ತಂದೆ ನಿಧನ
ಹಾರ್ದಿಕ್ ಪಾಂಡ್ಯ ತಂದೆ ನಿಧನ
author img

By

Published : Jan 17, 2021, 4:53 PM IST

ನವದೆಹಲಿ : ಭಾರತ ತಂಡದ ಆಲ್​ರೌಂಡರ್​ಗಳಾದ ಪಾಂಡ್ಯ ಸಹೋರರ ತಂದೆ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಟ್ವಿಟರ್‌ನಲ್ಲಿ ತಂದೆಯ ಬಗ್ಗೆ ಭಾವುಕವಾಗಿ ಬರೆದುಕೊಂಡಿರುವ ಅವರು, ತಮ್ಮ ತಂದೆಯನ್ನು ಪ್ರತಿದಿನ ಮಿಸ್​ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

"ಅಪ್ಪ, ನಾನು ನಿನ್ನೆ ಹೇಳಿದಂತೆ, ಅದು ನಿಮ್ಮ ಕೊನೆಯ ಸವಾರಿಯಾಗಿದೆ. ನೀವು ನನ್ನ ರಾಜ, ನಿಮ್ಮ ಆತ್ಮಕ್ಕೆ ಶಾಂತಿಸಿಗಲಿ, ನಿಮ್ಮದು ಸಂತೋಷದ ಆತ್ಮ" ಎಂದು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

  • My daddy
    As I said to your yesterday
    Your last one ride.
    Now rest in peace my king
    You were a Happy soul!

    I will miss you everyday dad
    Love you always pic.twitter.com/hUipWOdjxL

    — hardik pandya (@hardikpandya7) January 17, 2021 " class="align-text-top noRightClick twitterSection" data=" ">

ಶನಿವಾರ ಬರೋಡ ತಂಡದ ನಾಯಕರಾಗಿದ್ದ ಹಾರ್ದಿಕ್ ಸಹೋದರ, ಕೃನಾಲ್ ಪಾಂಡ್ಯ ತಮ್ಮ ತಂದೆಯ ಸಾವಿನ ಸುದ್ದಿ ತಿಳಿದು, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಬಯೋಬಬಲ್​ನಿಂದ ಹೊರ ಬಂದಿದ್ದರು.

ತಂಡದ ನಾಯಕರಾಗಿದ್ದ ಅವರು ಟೂರ್ನಿಯ ಮುಂದಿನ ಭಾಗವನ್ನು ತಪ್ಪಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಬರೋಡ ಕ್ರಿಕೆಟ್​ ಅಸೋಸಿಯೇಷನ್​ನ ಸಿಇಒ ಶಿಶಿರ್ ಹತ್ತಂಗಡಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಟೂರ್ನಿ ಮುಗಿಯುತ್ತಿದ್ದಂತೆ ತವರಿಗೆ ಮರಳಿರುವ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್​ ವಿರುದ್ಧದ ಸರಣಿಯ ತಯಾರಿಯಲ್ಲಿದ್ದಾರೆ.

ನವದೆಹಲಿ : ಭಾರತ ತಂಡದ ಆಲ್​ರೌಂಡರ್​ಗಳಾದ ಪಾಂಡ್ಯ ಸಹೋರರ ತಂದೆ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಟ್ವಿಟರ್‌ನಲ್ಲಿ ತಂದೆಯ ಬಗ್ಗೆ ಭಾವುಕವಾಗಿ ಬರೆದುಕೊಂಡಿರುವ ಅವರು, ತಮ್ಮ ತಂದೆಯನ್ನು ಪ್ರತಿದಿನ ಮಿಸ್​ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

"ಅಪ್ಪ, ನಾನು ನಿನ್ನೆ ಹೇಳಿದಂತೆ, ಅದು ನಿಮ್ಮ ಕೊನೆಯ ಸವಾರಿಯಾಗಿದೆ. ನೀವು ನನ್ನ ರಾಜ, ನಿಮ್ಮ ಆತ್ಮಕ್ಕೆ ಶಾಂತಿಸಿಗಲಿ, ನಿಮ್ಮದು ಸಂತೋಷದ ಆತ್ಮ" ಎಂದು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

  • My daddy
    As I said to your yesterday
    Your last one ride.
    Now rest in peace my king
    You were a Happy soul!

    I will miss you everyday dad
    Love you always pic.twitter.com/hUipWOdjxL

    — hardik pandya (@hardikpandya7) January 17, 2021 " class="align-text-top noRightClick twitterSection" data=" ">

ಶನಿವಾರ ಬರೋಡ ತಂಡದ ನಾಯಕರಾಗಿದ್ದ ಹಾರ್ದಿಕ್ ಸಹೋದರ, ಕೃನಾಲ್ ಪಾಂಡ್ಯ ತಮ್ಮ ತಂದೆಯ ಸಾವಿನ ಸುದ್ದಿ ತಿಳಿದು, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಬಯೋಬಬಲ್​ನಿಂದ ಹೊರ ಬಂದಿದ್ದರು.

ತಂಡದ ನಾಯಕರಾಗಿದ್ದ ಅವರು ಟೂರ್ನಿಯ ಮುಂದಿನ ಭಾಗವನ್ನು ತಪ್ಪಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಬರೋಡ ಕ್ರಿಕೆಟ್​ ಅಸೋಸಿಯೇಷನ್​ನ ಸಿಇಒ ಶಿಶಿರ್ ಹತ್ತಂಗಡಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಟೂರ್ನಿ ಮುಗಿಯುತ್ತಿದ್ದಂತೆ ತವರಿಗೆ ಮರಳಿರುವ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್​ ವಿರುದ್ಧದ ಸರಣಿಯ ತಯಾರಿಯಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.