ಮುಂಬೈ: ಭಾರತ ತಂಡದ ರವಿಚಂದ್ರನ್ ಮೂರು ವರ್ಷಗಳ ನಂತರ ಭಾರತ ತಂಡದ ಸೀಮಿತ ಓವರ್ಗಳ ಕ್ರಿಕೆಟ್ ತಂಡಕ್ಕೆ ಮರಳಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿರುವ ಅಶ್ವಿನ್ ಸೀಮಿತ ಓವರ್ಗಳ ಕ್ರಿಕೆಟ್ ಆಡಿ ಮೂರು ವರ್ಷಗಳೇ ಉರುಳಿವೆ. ಚಹಾಲ್ ಹಾಗೂ ಕುಲ್ದೀಪ್ ಯಾದವ್ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರಿಂದ ಅಶ್ವಿನ್ಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಕುಲ್ದೀಪ್ ಫಾರ್ಮ್ನಲ್ಲಿಲ್ಲದಿರುವುದರಿಂದ ಆಯ್ಕೆ ಸಮಿತಿ ಅನುಭವಿ ಅಶ್ವಿನ್ರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡುವ ಇರಾದೆಯಲ್ಲಿದೆ ಎಂದು ಟೆಲಿಗ್ರಾಫ್ ವೆಬ್ಸೈಟ್ ವರದಿ ಮಾಡಿದೆ.