ETV Bharat / sports

ಕರ್ನಾಟಕ ಬೌಲರ್​ಗಳ ದಾಳಿಗೆ ತತ್ತರಿಸಿದ ಬರೋಡಾ: 85ಕ್ಕೆ ಆಲೌಟ್​ - ಕರ್ನಾಟಕ ಬೌಲರ್​ಗಳ ಮಾರಕ ದಾಳಿಗೆ ಬರೋಡ ತತ್ತರ

ಕ್ವಾರ್ಟರ್​ ಫೈನಲ್​ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್​ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದು ಬರೋಡಾ ತಂಡವನ್ನು ಕೇವಲ 85ಕ್ಕೆ ಕಟ್ಟಿಹಾಲುವಲ್ಲಿ ಸಫಲರಾಗಿದ್ದಾರೆ.

Karnataka vs Baroda
ಕರ್ನಾಟಕ- ಬರೋಡ
author img

By

Published : Feb 12, 2020, 1:00 PM IST

ಬೆಂಗಳೂರು: ಅಭಿಮನ್ಯು ಮಿಥುನ್​ ಹಾಗೂ ಕೆ ಗೌತಮ್​ ಬೌಲಿಂಗ್​ ದಾಳಿಗೆ ತತ್ತರಿಸಿದ ಬರೋಡಾ ತಂಡ ಕೇವಲ 85 ರನ್​ಗಳಿ ಆಲೌಟ್​ ಆಗಿದೆ.

ಕ್ವಾರ್ಟರ್​ ಫೈನಲ್​ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್​ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದು, ಬರೋಡಾ ತಂಡವನ್ನು ಕೇವಲ 85ಕ್ಕೆ ಕಟ್ಟಿಹಾಲುವಲ್ಲಿ ಸಫಲರಾಗಿದ್ದಾರೆ.

ಟಾಸ್​ ಗೆದ್ದು ಆಯ್ದುಕೊಂಡ ಕರ್ನಾಟಕ ಎದುರಾಳಿಯನ್ನು ಬ್ಯಾಟಿಂಗ್ ಆಹ್ವಾನಿಸಿತು. ಇದೇ ಮೊದಲ ಪಂದ್ಯದಲ್ಲಿ ದಾಳಿಗಿಳಿದ ಪ್ರಸಿದ್​ ಕೃಷ್ಣ ಬರೋಡಾದ ಆರಂಭಿಕ ಬ್ಯಾಟ್ಸ್​ಮನ್​ ಕೇದಾರ್​ ದೇವಧರ್(3) ಹಾಗೂ​ ವಿಷ್ಣು ಸೋಲಂಕಿ(0) ವಿಕೆಟ್ ಪಡೆದು ಆರಂಭಿಕ ಮುನ್ನಡೆ ದೊರಕಿಸಿಕೊಟ್ಟರು.

ಪ್ರಸಿದ್​ ಕೃಷ್ಣ ನಂತರ ಬರೋಡಕ್ಕೆ ಶಾಕ್​ ಕೊಟ್ಟ ಮಿಥುನ್​ ದೀಪಕ್​ ಹೂಡಾ(20), ಕೃನಾಲ್ ಪಾಂಡ್ಯ(0) ಹಾಗೂ ಅಭಿಮನ್ಯು ರಜಪೂತ್​(0) ವಿಕೆಟ್​ ಪಡೆದು ಬರೋಡ ಆಘಾತ ನೀಡಿದರು. ಇವರಿಬ್ಬರು ಆರಂಭಿಕರನ್ನು ಪೆವಿಲಿಯನ್​ಗಟ್ಟಿದರೆ, ಕೆ ಗೌತಮ್​ 45 ರನ್​ಗಳಿಸಿ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಅಹ್ಮದ್​ನೂರ್​ ಪಠಾಣ್, ವಿಕೆಟ್​ ಕೀಪರ್​ ವಿರಾಜ್​ ಭೋಸ್ಲೆ(3) ಹಾಗೂ ಪಾರ್ಥ್​ ಕೊಹ್ಲಿ(0) ವಿಕೆಟ್​ ಪಡೆದರೆ, ಶ್ರೇಯಸ್ ಗೋಪಾಲ್​ ಸೊಯೆಬ್​ ಸೊಪಾರಿಯಾ ವಿಕೆಟ್​ ಪಡೆಯುವ ಮೂಲಕ ಬರೋಡಾ ಇನ್ನಿಂಗ್ಸ್​ಗೆ ಇತಿಶ್ರೀ ಹಾಡಿದರು.

ಬರೋಡಾ ಪರ ಆರಂಭಿಕ ಅಹ್ಮದ್​ನೂರ್​ ಪಠಾಣ್​(45), ದೀಪಕ್ ಹೂಡ(20) ಮಾತ್ರ ಎರಡಂಕಿ ಮೊತ್ತ ಕಲೆಹಾಕಿದರು. 5 ಬ್ಯಾಟ್ಸ್​ಮನ್​ಗಳು ಸೊನ್ನೆ ಸುತ್ತಿದರೆ, 4 ಬ್ಯಾಟ್ಸ್​ಮನ್​ಗಳು ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

ಬೆಂಗಳೂರು: ಅಭಿಮನ್ಯು ಮಿಥುನ್​ ಹಾಗೂ ಕೆ ಗೌತಮ್​ ಬೌಲಿಂಗ್​ ದಾಳಿಗೆ ತತ್ತರಿಸಿದ ಬರೋಡಾ ತಂಡ ಕೇವಲ 85 ರನ್​ಗಳಿ ಆಲೌಟ್​ ಆಗಿದೆ.

ಕ್ವಾರ್ಟರ್​ ಫೈನಲ್​ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್​ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದು, ಬರೋಡಾ ತಂಡವನ್ನು ಕೇವಲ 85ಕ್ಕೆ ಕಟ್ಟಿಹಾಲುವಲ್ಲಿ ಸಫಲರಾಗಿದ್ದಾರೆ.

ಟಾಸ್​ ಗೆದ್ದು ಆಯ್ದುಕೊಂಡ ಕರ್ನಾಟಕ ಎದುರಾಳಿಯನ್ನು ಬ್ಯಾಟಿಂಗ್ ಆಹ್ವಾನಿಸಿತು. ಇದೇ ಮೊದಲ ಪಂದ್ಯದಲ್ಲಿ ದಾಳಿಗಿಳಿದ ಪ್ರಸಿದ್​ ಕೃಷ್ಣ ಬರೋಡಾದ ಆರಂಭಿಕ ಬ್ಯಾಟ್ಸ್​ಮನ್​ ಕೇದಾರ್​ ದೇವಧರ್(3) ಹಾಗೂ​ ವಿಷ್ಣು ಸೋಲಂಕಿ(0) ವಿಕೆಟ್ ಪಡೆದು ಆರಂಭಿಕ ಮುನ್ನಡೆ ದೊರಕಿಸಿಕೊಟ್ಟರು.

ಪ್ರಸಿದ್​ ಕೃಷ್ಣ ನಂತರ ಬರೋಡಕ್ಕೆ ಶಾಕ್​ ಕೊಟ್ಟ ಮಿಥುನ್​ ದೀಪಕ್​ ಹೂಡಾ(20), ಕೃನಾಲ್ ಪಾಂಡ್ಯ(0) ಹಾಗೂ ಅಭಿಮನ್ಯು ರಜಪೂತ್​(0) ವಿಕೆಟ್​ ಪಡೆದು ಬರೋಡ ಆಘಾತ ನೀಡಿದರು. ಇವರಿಬ್ಬರು ಆರಂಭಿಕರನ್ನು ಪೆವಿಲಿಯನ್​ಗಟ್ಟಿದರೆ, ಕೆ ಗೌತಮ್​ 45 ರನ್​ಗಳಿಸಿ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಅಹ್ಮದ್​ನೂರ್​ ಪಠಾಣ್, ವಿಕೆಟ್​ ಕೀಪರ್​ ವಿರಾಜ್​ ಭೋಸ್ಲೆ(3) ಹಾಗೂ ಪಾರ್ಥ್​ ಕೊಹ್ಲಿ(0) ವಿಕೆಟ್​ ಪಡೆದರೆ, ಶ್ರೇಯಸ್ ಗೋಪಾಲ್​ ಸೊಯೆಬ್​ ಸೊಪಾರಿಯಾ ವಿಕೆಟ್​ ಪಡೆಯುವ ಮೂಲಕ ಬರೋಡಾ ಇನ್ನಿಂಗ್ಸ್​ಗೆ ಇತಿಶ್ರೀ ಹಾಡಿದರು.

ಬರೋಡಾ ಪರ ಆರಂಭಿಕ ಅಹ್ಮದ್​ನೂರ್​ ಪಠಾಣ್​(45), ದೀಪಕ್ ಹೂಡ(20) ಮಾತ್ರ ಎರಡಂಕಿ ಮೊತ್ತ ಕಲೆಹಾಕಿದರು. 5 ಬ್ಯಾಟ್ಸ್​ಮನ್​ಗಳು ಸೊನ್ನೆ ಸುತ್ತಿದರೆ, 4 ಬ್ಯಾಟ್ಸ್​ಮನ್​ಗಳು ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.