ETV Bharat / sports

ಆತ ವಿಶ್ವದ ಅತ್ಯುತ್ತಮ ಆಫ್​ ಸ್ಪಿನ್ನರ್, ಹೆಚ್ಚು ವಿಕೆಟ್​ ಪಡೆದವರ ಸಾಲಿನಲ್ಲಿ ನಿಲ್ಲುತ್ತಾನೆ​: ಹರ್ಭಜನ್​ ಸಿಂಗ್ ವಿಶ್ವಾಸ - ಹರ್ಭಜನ್​ ಸಿಂಗ್​- ರವಿಚಂದ್ರನ್​ ಅಶ್ವಿನ್

ಪ್ರಸ್ತುತ ಕ್ರಿಕೆಟ್​ನಲ್ಲಿ ಅಶ್ವಿನ್​ ವಿಶ್ವದ ಅತ್ಯುತ್ತಮ ಆಫ್​ ಸ್ಪಿನ್ನರ್​ ಎಂದು ಹರ್ಜಭಜನ್​ ಸಿಂಗ್​​​​ ಹೇಳಿದ್ದಾರೆ. "ತುಂಬಾ ಜನ ನಮ್ಮಿಬ್ಬರ ಮಧ್ಯೆ ತುಂಬಾ ಹೊಟ್ಟೆಕಿಚ್ಚಿದ ಎಂದು ಹೇಳುತ್ತಾರೆ. ಆದರೆ ನನ್ನ ಮತ್ತು ಅಶ್ವಿನ್​ ನಡುವೆ ಅಂತಹದ್ದೇನೂ ಇಲ್ಲ ಎಂದು ವಿರೋಧಿಗಳಿಗೆ ಹೇಳಲು ಇಷ್ಟಪಡುತ್ತೇನೆ. ಅಶ್ವಿನ್​ ಪ್ರಸ್ತುತ ವಿಶ್ವದ ಅತ್ಯುತ್ತಮ ಆಫ್​ ಸ್ಪಿನ್ನರ್​. ಇವರ ಜೊತೆಗೆ ಆಸೀಸ್​ನ ನಥನ್​ ಲಿಯಾನ್​ರನ್ನು ಆಯ್ಕೆ ಮಾಡುತ್ತೇನೆ." ಎಂದಿದ್ದಾರೆ ಭಜ್ಜಿ

ರವಿಚಂದ್ರನ್​ ಅಶ್ವಿನ್
ರವಿಚಂದ್ರನ್​ ಅಶ್ವಿನ್
author img

By

Published : May 5, 2020, 2:55 PM IST

ಚೆನ್ನೈ: ಭಾರತ ತಂಡದ ಸೂಪರ್ ಆಫ್ ಸ್ಪಿನ್ನರ್​ ಜೋಡಿಯಾಗಿ ಹರ್ಭಜನ್​ ಸಿಂಗ್​ ಹಾಗೂ ರವಿಚಂದ್ರನ್​ ಅಶ್ವಿನ್​ 5-6 ವರ್ಷದಗಳ ಕಾಲ ​ಮಿಂಚಿದ್ದರು. ಭಾರತವನ್ನು ಮೊದಲ ಬಾರಿಗೆ ಮೊದಲ ಶ್ರೇಯಾಂಕಕ್ಕೆ ಕೊಂಡೊಯ್ಯಲು ಇವರಿಬ್ಬರ ಪಾತ್ರ ಮಹತ್ವದ್ದಾಗಿತ್ತು.

ಸೋಮವಾರ ಅಶ್ವಿನ್​, ತಮ್ಮ ‘ರೆಮಿನಿಶ್​ ವಿತ್​ ಆ್ಯಶ್’ ಎಂಬ ಇನ್​​ಸ್ಟಾಗ್ರಾಮ್​ ಶೋನಲ್ಲಿ ಹರ್ಭಜನ್​ ಜೊತೆ ಕೆಲವು ಕ್ರಿಕೆಟ್​ಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಂಡರು.

2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಹರ್ಭಜನ್​ ಸಿಂಗ್​ ಸೈರಾಜ್​ ಬಹುತಲೆ ಬೌಲಿಂಗ್​ನಲ್ಲಿ ಆಸೀಸ್​ ಸ್ಫೋಟಕ ಬ್ಯಾಟ್ಸ್​ಮನ್​ ಮ್ಯಾಥ್ಯೂ ಹೇಡನ್​ ಅವರ ಕ್ಯಾಚ್​ ಬಿಟ್ಟಿದ್ದರು. ತಕ್ಷಣ ಭಜ್ಜಿ ಸೈರಾಜ್​ ಬಳಿ ತೆರಳಿ ಕ್ಷಮೆ ಕೇಳಿದ್ದರು. ಅಲ್ಲದೇ ನಂತರ ತಮ್ಮ ಓವರ್​ನಲ್ಲಿ ಕಾಲಿನ್​ ಮಿಲ್ಲರ್​ ಕ್ಯಾಚ್​ ಅನ್ನು ಸೈರಾಜ್​ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಈ ಇಬ್ಬರು ಆಟಗಾರರ ನಡುವೆ ನಡೆದಿದ್ದ ಕ್ರೀಡಾಸ್ಫೂರ್ತಿಯ ಸನ್ನಿವೇಶವನ್ನುಅಶ್ವಿನ್​ ನೆನೆಪಿಸಿದರು.

ಹರ್ಭಜನ್​ ಸಿಂಗ್
ಹರ್ಭಜನ್​ ಸಿಂಗ್

"ನಾನು ಚೆಪಾಕ್​ ಟೆಸ್ಟ್​ ಪಂದ್ಯಗಳನ್ನು ಎಂದಿಗೂ ಮರೆಯುವುದಿಲ್ಲ. ನಾನು ಅಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದೇನೆ, ಇನ್ನು ಕೆಲವುನ್ನು ಸ್ಟ್ಯಾಂಡ್​ನಲ್ಲಿ ನಿಂತು ನೋಡಿದ್ದೇನೆ. ಆಸೀಸ್​ ವಿರುದ್ಧದ ಆ ಪಂದ್ಯದಲ್ಲಿ ನೀವು ಬಹುತಲೇ ಬಳಿ ಹೇಡನ್​ ಕ್ಯಾಚ್​ ಕೈಚೆಲ್ಲಿದ್ದಕ್ಕೆ ಕ್ಷಮೇ ಕೇಳಿದ್ದನ್ನು ನಾನು ನೋಡಿದ್ದೆ. ಈ ಸನ್ನಿವೇಶವನ್ನು ನನ್ನ ತಂದೆ ನನಗೆ ತೋರಿಸಿ ಬೌಲರ್​ ಮುಂದಿನ ಎಸೆತಕ್ಕೆ ಸಿದ್ದವಾಗಬೇಕಾದರೆ ಇಬ್ಬರು ಕ್ರೀಡಾಪಟುಗಳ ನಡುವಿನ ಕ್ರೀಡಾಸ್ಪೂರ್ತಿ ಆಟದಲ್ಲಿ ಎಷ್ಟು ಮುಖ್ಯ ಎಂಬುದುನ್ನು ನನಗೆ ತಿಳಿಸಿದ್ದರು. ಇದು ನನ್ನ ಜೀವನದಲ್ಲಿ ದೊಡ್ಡ ಪರಿಣಾಮ ಬೀರಿತು" ಎಂದು ನೆನೆಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಭಜ್ಜಿ ಕೂಡ ಅಂದಿನ ಆ ಘಟನೆಗೆ ಬೇಸರ ವ್ಯಕ್ತಪಡಿಸಿದರು. "ನನಗೂ ಕೂಡ ಬೇಸರವಾಗಿತ್ತು, ಏಕೆಂದರೆ ಹೇಡನ್​ ಡಬಲ್​ ಸೆಂಚುರಿ ಬಾರಿಸಿದ್ದರು. ಆದರೆ ಬಹುತಲೆ ಚೆನ್ನಾಗಿ ಬೌಲಿಂಗ್​ ಮಾಡಿದರು ಹೆಚ್ಚಿನ ವಿಕೆಟ್​ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಆತ ಇದೆಲ್ಲ ಆಟದಲ್ಲಿ ನಡೆಯುತ್ತಿರುತ್ತದೆ, ಚಿಂತೆ ಬಿಡು ಎಂದು ತಿಳಿಸಿದ್ದರು. ಅವರು ನನ್ನ ರೂಮ್​ಮೇಟ್​ ಸಹಾ ಆಗಿದ್ದರೂ ಪಂದ್ಯದ ನಂತರ ಈ ಘಟನೆಯ ಬಗ್ಗೆ ಕಿಂಚಿತ್ತು ಮಾತನಾಡಿರಲಿಲ್ಲ" ಎಂದು ಭಜ್ಜಿ 19 ವರ್ಷಗಳ ಹಿಂದಿನ ಘಟನೆಯನ್ನು ನೆನೆಪಿಸಿಕೊಂಡರು.

ಹಾಗೆಯೇ ಮುಂದುವರಿಸಿದ ಭಜ್ಜಿ ಪ್ರಸ್ತುತ ಕ್ರಿಕೆಟ್​ನಲ್ಲಿ ಅಶ್ವಿನ್​ ವಿಶ್ವದ ಅತ್ಯುತ್ತಮ ಆಫ್​ ಸ್ಪಿನ್ನರ್​ ಎಂದು ಹೇಳಿದ್ದಾರೆ. "ತುಂಬಾ ಜನ ನಮ್ಮಿಬ್ಬರ ಮಧ್ಯೆ ತುಂಬಾ ಹೊಟ್ಟೆಕಿಚ್ಚಿದ ಎಂದು ಹೇಳುತ್ತಾರೆ. ಆದರೆ ನನ್ನ ಮತ್ತು ಅಶ್ವಿನ್​ ನಡುವೆ ಅಂತಹದ್ದೇನು ಇಲ್ಲ ಎಂದು ವಿರೋಧಿಗಳಿಗೆ ಹೇಳಲು ಇಷ್ಟಪಡುತ್ತೇನೆ. ಅಶ್ವಿನ್​ ಪ್ರಸ್ತುತ ವಿಶ್ವದ ಅತ್ಯುತ್ತಮ ಆಫ್​ ಸ್ಪಿನ್ನರ್​. ಇವರ ಜೊತೆಗೆ ಆಸೀಸ್​ನ ನಥನ್​ ಲಿಯಾನ್​ರನ್ನು ಆಯ್ಕೆ ಮಾಡುತ್ತೇನೆ." ಎಂದಿದ್ದಾರೆ ಹರ್ಭಜನ್​

ನಥನ್​ ಲಿಯಾನ್​ ಕೂಡ ಬೆಸ್ಟ್​ ಆಫ್​ ಸ್ಪಿನ್ನರ್ ಎಂದು ಹೇಳುತ್ತೇನೆ ಏಕೆಂದರೆ, ಅವರು ಸ್ಪಿನ್​ಗೆ ಕಂಟಕಪ್ರಾಯವಾಗಿರುವ ಪಿಚ್​ಗಳಿರುವ ಆಸ್ಟ್ರೇಲಿಯಾದಿಂದ ಹೊರಬಂದಿರುವ ಸ್ಪಿನ್ನರ್​ ಆಗಿದ್ದಾರೆ. ಆದರೆ, ಅಶ್ವಿನ್​ ದಂತಕತೆಯಾಗಿದ್ದಾರೆ. ನಾನು ಬಯಸುವುದೇನೆಂದರೆ ಅವರು ಹೆಚ್ಚು ವಿಕೆಟ್​ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.​ ಇನ್ನಷ್ಟು ವರ್ಷಗಳ ಕಾಲ ಫಿಟ್​ ಆಗಿದ್ದರೆ ವಿಶ್ವದ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಸಾಲಿನಲ್ಲಿ ಖಂಡಿತ ನಿಲ್ಲಬಹುದು ಎಂದು ಭಜ್ಜಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಚೆನ್ನೈ: ಭಾರತ ತಂಡದ ಸೂಪರ್ ಆಫ್ ಸ್ಪಿನ್ನರ್​ ಜೋಡಿಯಾಗಿ ಹರ್ಭಜನ್​ ಸಿಂಗ್​ ಹಾಗೂ ರವಿಚಂದ್ರನ್​ ಅಶ್ವಿನ್​ 5-6 ವರ್ಷದಗಳ ಕಾಲ ​ಮಿಂಚಿದ್ದರು. ಭಾರತವನ್ನು ಮೊದಲ ಬಾರಿಗೆ ಮೊದಲ ಶ್ರೇಯಾಂಕಕ್ಕೆ ಕೊಂಡೊಯ್ಯಲು ಇವರಿಬ್ಬರ ಪಾತ್ರ ಮಹತ್ವದ್ದಾಗಿತ್ತು.

ಸೋಮವಾರ ಅಶ್ವಿನ್​, ತಮ್ಮ ‘ರೆಮಿನಿಶ್​ ವಿತ್​ ಆ್ಯಶ್’ ಎಂಬ ಇನ್​​ಸ್ಟಾಗ್ರಾಮ್​ ಶೋನಲ್ಲಿ ಹರ್ಭಜನ್​ ಜೊತೆ ಕೆಲವು ಕ್ರಿಕೆಟ್​ಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಂಡರು.

2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಹರ್ಭಜನ್​ ಸಿಂಗ್​ ಸೈರಾಜ್​ ಬಹುತಲೆ ಬೌಲಿಂಗ್​ನಲ್ಲಿ ಆಸೀಸ್​ ಸ್ಫೋಟಕ ಬ್ಯಾಟ್ಸ್​ಮನ್​ ಮ್ಯಾಥ್ಯೂ ಹೇಡನ್​ ಅವರ ಕ್ಯಾಚ್​ ಬಿಟ್ಟಿದ್ದರು. ತಕ್ಷಣ ಭಜ್ಜಿ ಸೈರಾಜ್​ ಬಳಿ ತೆರಳಿ ಕ್ಷಮೆ ಕೇಳಿದ್ದರು. ಅಲ್ಲದೇ ನಂತರ ತಮ್ಮ ಓವರ್​ನಲ್ಲಿ ಕಾಲಿನ್​ ಮಿಲ್ಲರ್​ ಕ್ಯಾಚ್​ ಅನ್ನು ಸೈರಾಜ್​ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಈ ಇಬ್ಬರು ಆಟಗಾರರ ನಡುವೆ ನಡೆದಿದ್ದ ಕ್ರೀಡಾಸ್ಫೂರ್ತಿಯ ಸನ್ನಿವೇಶವನ್ನುಅಶ್ವಿನ್​ ನೆನೆಪಿಸಿದರು.

ಹರ್ಭಜನ್​ ಸಿಂಗ್
ಹರ್ಭಜನ್​ ಸಿಂಗ್

"ನಾನು ಚೆಪಾಕ್​ ಟೆಸ್ಟ್​ ಪಂದ್ಯಗಳನ್ನು ಎಂದಿಗೂ ಮರೆಯುವುದಿಲ್ಲ. ನಾನು ಅಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದೇನೆ, ಇನ್ನು ಕೆಲವುನ್ನು ಸ್ಟ್ಯಾಂಡ್​ನಲ್ಲಿ ನಿಂತು ನೋಡಿದ್ದೇನೆ. ಆಸೀಸ್​ ವಿರುದ್ಧದ ಆ ಪಂದ್ಯದಲ್ಲಿ ನೀವು ಬಹುತಲೇ ಬಳಿ ಹೇಡನ್​ ಕ್ಯಾಚ್​ ಕೈಚೆಲ್ಲಿದ್ದಕ್ಕೆ ಕ್ಷಮೇ ಕೇಳಿದ್ದನ್ನು ನಾನು ನೋಡಿದ್ದೆ. ಈ ಸನ್ನಿವೇಶವನ್ನು ನನ್ನ ತಂದೆ ನನಗೆ ತೋರಿಸಿ ಬೌಲರ್​ ಮುಂದಿನ ಎಸೆತಕ್ಕೆ ಸಿದ್ದವಾಗಬೇಕಾದರೆ ಇಬ್ಬರು ಕ್ರೀಡಾಪಟುಗಳ ನಡುವಿನ ಕ್ರೀಡಾಸ್ಪೂರ್ತಿ ಆಟದಲ್ಲಿ ಎಷ್ಟು ಮುಖ್ಯ ಎಂಬುದುನ್ನು ನನಗೆ ತಿಳಿಸಿದ್ದರು. ಇದು ನನ್ನ ಜೀವನದಲ್ಲಿ ದೊಡ್ಡ ಪರಿಣಾಮ ಬೀರಿತು" ಎಂದು ನೆನೆಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಭಜ್ಜಿ ಕೂಡ ಅಂದಿನ ಆ ಘಟನೆಗೆ ಬೇಸರ ವ್ಯಕ್ತಪಡಿಸಿದರು. "ನನಗೂ ಕೂಡ ಬೇಸರವಾಗಿತ್ತು, ಏಕೆಂದರೆ ಹೇಡನ್​ ಡಬಲ್​ ಸೆಂಚುರಿ ಬಾರಿಸಿದ್ದರು. ಆದರೆ ಬಹುತಲೆ ಚೆನ್ನಾಗಿ ಬೌಲಿಂಗ್​ ಮಾಡಿದರು ಹೆಚ್ಚಿನ ವಿಕೆಟ್​ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಆತ ಇದೆಲ್ಲ ಆಟದಲ್ಲಿ ನಡೆಯುತ್ತಿರುತ್ತದೆ, ಚಿಂತೆ ಬಿಡು ಎಂದು ತಿಳಿಸಿದ್ದರು. ಅವರು ನನ್ನ ರೂಮ್​ಮೇಟ್​ ಸಹಾ ಆಗಿದ್ದರೂ ಪಂದ್ಯದ ನಂತರ ಈ ಘಟನೆಯ ಬಗ್ಗೆ ಕಿಂಚಿತ್ತು ಮಾತನಾಡಿರಲಿಲ್ಲ" ಎಂದು ಭಜ್ಜಿ 19 ವರ್ಷಗಳ ಹಿಂದಿನ ಘಟನೆಯನ್ನು ನೆನೆಪಿಸಿಕೊಂಡರು.

ಹಾಗೆಯೇ ಮುಂದುವರಿಸಿದ ಭಜ್ಜಿ ಪ್ರಸ್ತುತ ಕ್ರಿಕೆಟ್​ನಲ್ಲಿ ಅಶ್ವಿನ್​ ವಿಶ್ವದ ಅತ್ಯುತ್ತಮ ಆಫ್​ ಸ್ಪಿನ್ನರ್​ ಎಂದು ಹೇಳಿದ್ದಾರೆ. "ತುಂಬಾ ಜನ ನಮ್ಮಿಬ್ಬರ ಮಧ್ಯೆ ತುಂಬಾ ಹೊಟ್ಟೆಕಿಚ್ಚಿದ ಎಂದು ಹೇಳುತ್ತಾರೆ. ಆದರೆ ನನ್ನ ಮತ್ತು ಅಶ್ವಿನ್​ ನಡುವೆ ಅಂತಹದ್ದೇನು ಇಲ್ಲ ಎಂದು ವಿರೋಧಿಗಳಿಗೆ ಹೇಳಲು ಇಷ್ಟಪಡುತ್ತೇನೆ. ಅಶ್ವಿನ್​ ಪ್ರಸ್ತುತ ವಿಶ್ವದ ಅತ್ಯುತ್ತಮ ಆಫ್​ ಸ್ಪಿನ್ನರ್​. ಇವರ ಜೊತೆಗೆ ಆಸೀಸ್​ನ ನಥನ್​ ಲಿಯಾನ್​ರನ್ನು ಆಯ್ಕೆ ಮಾಡುತ್ತೇನೆ." ಎಂದಿದ್ದಾರೆ ಹರ್ಭಜನ್​

ನಥನ್​ ಲಿಯಾನ್​ ಕೂಡ ಬೆಸ್ಟ್​ ಆಫ್​ ಸ್ಪಿನ್ನರ್ ಎಂದು ಹೇಳುತ್ತೇನೆ ಏಕೆಂದರೆ, ಅವರು ಸ್ಪಿನ್​ಗೆ ಕಂಟಕಪ್ರಾಯವಾಗಿರುವ ಪಿಚ್​ಗಳಿರುವ ಆಸ್ಟ್ರೇಲಿಯಾದಿಂದ ಹೊರಬಂದಿರುವ ಸ್ಪಿನ್ನರ್​ ಆಗಿದ್ದಾರೆ. ಆದರೆ, ಅಶ್ವಿನ್​ ದಂತಕತೆಯಾಗಿದ್ದಾರೆ. ನಾನು ಬಯಸುವುದೇನೆಂದರೆ ಅವರು ಹೆಚ್ಚು ವಿಕೆಟ್​ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.​ ಇನ್ನಷ್ಟು ವರ್ಷಗಳ ಕಾಲ ಫಿಟ್​ ಆಗಿದ್ದರೆ ವಿಶ್ವದ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಸಾಲಿನಲ್ಲಿ ಖಂಡಿತ ನಿಲ್ಲಬಹುದು ಎಂದು ಭಜ್ಜಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.