ETV Bharat / sports

ಕೊನೆ ಓವರ್​​ ಜಡೇಜಾಗೆ ನೀಡಿದ್ದೇ ಚೆನ್ನೈ ಸೋಲಿಗೆ ಕಾರಣವಾಯ್ತಾ!... ಧೋನಿ ಹೇಳಿದ್ದೇನು!?

author img

By

Published : Oct 18, 2020, 1:40 PM IST

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತೊಂದು ಸೋಲು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

CSK team
CSK team

ಶಾರ್ಜಾ: ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಚೆನ್ನೈ ಸೂಪರ್​ ತಂಡದ ಸೋಲಿನ ನಾಗಾಲೋಟ ಮುಂದುವರೆದಿದೆ. ನಿನ್ನೆ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲೂ ಧೋನಿ ಪಡೆ ಸೋಲುವ ಮೂಲಕ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.

ಈ ಹಿಂದಿನ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದ ಚೆನ್ನೈ ಸೂಪರ್​​ ಕಿಂಗ್ಸ್​ ಈ ಸಲ ಸಂಪೂರ್ಣವಾಗಿ ಮುಗ್ಗರಿಸಿದ್ದು, ತಂಡದ ಕ್ಯಾಪ್ಟನ್​ ಧೋನಿ ತೆಗೆದುಕೊಳ್ಳುತ್ತಿರುವ ಕೆಲವೊಂದು ನಿರ್ಧಾರಗಳು ತಂಡದ ಸೋಲಿಗೆ ಕಾರಣವಾಗುತ್ತಿದೆ ಎಂಬ ಮಾತು ಕೇಳಿ ಬಂದಿವೆ.

CSK Team
ಚೆನ್ನೈ ಸೂಪರ್​ ಕಿಂಗ್ಸ್​ ತಂಡ

ಈ ಹಿಂದೆ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 168ರನ್​ಗಳ ಗುರಿ ಬೆನ್ನಟ್ಟಿದ ತಂಡ ಸುಲಭ ಗೆಲುವು ಸಾಧಿಸಬೇಕಾಗಿತ್ತು. ಆದರೆ ರವೀಂದ್ರ ಜಡೇಜಾ ಬದಲಿಗೆ ಕೇದಾರ್ ಜಾಧವ್​ಗೆ ಬ್ಯಾಟಿಂಗ್​ ಮಾಡಲು ಕಳುಹಿಸಿದ್ದರಿಂದ ತಂಡ ಸೋಲು ಕಂಡಿತ್ತು. ನಿನ್ನೆಯ ಪಂದ್ಯದಲ್ಲಿ ಬ್ರಾವೋ ಬದಲಿಗೆ ಕೊನೆ ಓವರ್​​ ಜಡೇಜಾಗೆ ನೀಡಿದ್ದು ತಂಡದ ಸೋಲಿಗೆ ಮುಖ್ಯ ಕಾರಣ ಎಂದು ಕೇಳಿ ಬಂದಿತ್ತು.

ಇದೇ ವಿಚಾರವಾಗಿ ಮಾತನಾಡಿರುವ ಧೋನಿ, ಬ್ರಾವೋ ಫಿಟ್​ ಆಗಿರಲಿಲ್ಲ. ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದ ಅವರು ವಾಪಸ್​ ಬರಲಿಲ್ಲ. ಹೀಗಾಗಿ ನಮ್ಮ ಬಳಿ ಕರ್ರನ್​ ಹಾಗೂ ಜಡೇಜಾ ಆಯ್ಕೆ ಉಳಿದುಕೊಂಡಿತ್ತು. ಇದೇ ಕಾರಣಕ್ಕಾಗಿ ನಾವು ಜಡೇಜಾಗೆ ಅವಕಾಶ ನೀಡಿದ್ದೆವು ಎಂದಿದ್ದಾರೆ. ಸುದ್ದಿಗೋಷ್ಠಿ ವೇಳೆ ತಂಡದ ಕೋಚ್​​ ಸ್ಟಿಫನ್​ ಫ್ಲೇಮಿಂಗ್​ ಕೂಡ ಇದೇ ಮಾತು ಹೇಳಿದ್ದಾರೆ.

ಡೆಲ್ಲಿ ತಂಡಕ್ಕೆ ಕೊನೆಯ ಎರಡು ಓವರ್​​ಗಳಲ್ಲಿ 21ರನ್​ಗಳ ಅವಶ್ಯಕತೆ ಇತ್ತು. 19ನೇ ಓವರ್​ ಎಸೆದ ಕರನ್ ಕೇವಲ 4ರನ್​ ನೀಡಿದ್ದರಿಂದ ಫೈನಲ್​ ಓವರ್​​ನಲ್ಲಿ 17ರನ್​ಗಳ ಅವಶ್ಯಕತೆ ಇತ್ತು. ಜಡೇಜಾ ಬೌಲಿಂಗ್​ನಲ್ಲಿ ಅಕ್ಸರ್​ ಪಟೇಲ್​ ಮೂರು ಸಿಕ್ಸರ್​ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದಿಟ್ಟರು.

ಶಾರ್ಜಾ: ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಚೆನ್ನೈ ಸೂಪರ್​ ತಂಡದ ಸೋಲಿನ ನಾಗಾಲೋಟ ಮುಂದುವರೆದಿದೆ. ನಿನ್ನೆ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲೂ ಧೋನಿ ಪಡೆ ಸೋಲುವ ಮೂಲಕ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.

ಈ ಹಿಂದಿನ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದ ಚೆನ್ನೈ ಸೂಪರ್​​ ಕಿಂಗ್ಸ್​ ಈ ಸಲ ಸಂಪೂರ್ಣವಾಗಿ ಮುಗ್ಗರಿಸಿದ್ದು, ತಂಡದ ಕ್ಯಾಪ್ಟನ್​ ಧೋನಿ ತೆಗೆದುಕೊಳ್ಳುತ್ತಿರುವ ಕೆಲವೊಂದು ನಿರ್ಧಾರಗಳು ತಂಡದ ಸೋಲಿಗೆ ಕಾರಣವಾಗುತ್ತಿದೆ ಎಂಬ ಮಾತು ಕೇಳಿ ಬಂದಿವೆ.

CSK Team
ಚೆನ್ನೈ ಸೂಪರ್​ ಕಿಂಗ್ಸ್​ ತಂಡ

ಈ ಹಿಂದೆ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 168ರನ್​ಗಳ ಗುರಿ ಬೆನ್ನಟ್ಟಿದ ತಂಡ ಸುಲಭ ಗೆಲುವು ಸಾಧಿಸಬೇಕಾಗಿತ್ತು. ಆದರೆ ರವೀಂದ್ರ ಜಡೇಜಾ ಬದಲಿಗೆ ಕೇದಾರ್ ಜಾಧವ್​ಗೆ ಬ್ಯಾಟಿಂಗ್​ ಮಾಡಲು ಕಳುಹಿಸಿದ್ದರಿಂದ ತಂಡ ಸೋಲು ಕಂಡಿತ್ತು. ನಿನ್ನೆಯ ಪಂದ್ಯದಲ್ಲಿ ಬ್ರಾವೋ ಬದಲಿಗೆ ಕೊನೆ ಓವರ್​​ ಜಡೇಜಾಗೆ ನೀಡಿದ್ದು ತಂಡದ ಸೋಲಿಗೆ ಮುಖ್ಯ ಕಾರಣ ಎಂದು ಕೇಳಿ ಬಂದಿತ್ತು.

ಇದೇ ವಿಚಾರವಾಗಿ ಮಾತನಾಡಿರುವ ಧೋನಿ, ಬ್ರಾವೋ ಫಿಟ್​ ಆಗಿರಲಿಲ್ಲ. ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದ ಅವರು ವಾಪಸ್​ ಬರಲಿಲ್ಲ. ಹೀಗಾಗಿ ನಮ್ಮ ಬಳಿ ಕರ್ರನ್​ ಹಾಗೂ ಜಡೇಜಾ ಆಯ್ಕೆ ಉಳಿದುಕೊಂಡಿತ್ತು. ಇದೇ ಕಾರಣಕ್ಕಾಗಿ ನಾವು ಜಡೇಜಾಗೆ ಅವಕಾಶ ನೀಡಿದ್ದೆವು ಎಂದಿದ್ದಾರೆ. ಸುದ್ದಿಗೋಷ್ಠಿ ವೇಳೆ ತಂಡದ ಕೋಚ್​​ ಸ್ಟಿಫನ್​ ಫ್ಲೇಮಿಂಗ್​ ಕೂಡ ಇದೇ ಮಾತು ಹೇಳಿದ್ದಾರೆ.

ಡೆಲ್ಲಿ ತಂಡಕ್ಕೆ ಕೊನೆಯ ಎರಡು ಓವರ್​​ಗಳಲ್ಲಿ 21ರನ್​ಗಳ ಅವಶ್ಯಕತೆ ಇತ್ತು. 19ನೇ ಓವರ್​ ಎಸೆದ ಕರನ್ ಕೇವಲ 4ರನ್​ ನೀಡಿದ್ದರಿಂದ ಫೈನಲ್​ ಓವರ್​​ನಲ್ಲಿ 17ರನ್​ಗಳ ಅವಶ್ಯಕತೆ ಇತ್ತು. ಜಡೇಜಾ ಬೌಲಿಂಗ್​ನಲ್ಲಿ ಅಕ್ಸರ್​ ಪಟೇಲ್​ ಮೂರು ಸಿಕ್ಸರ್​ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದಿಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.