ETV Bharat / sports

ಬಿಸಿಸಿಐಗೆ ಹೊಸ ನಿಯಮ ರೂಪಿಸಲು ಇದು ಸೂಕ್ತ ಸಮಯ: ಶಾರ್ಟ್​ ರನ್​ ತೀರ್ಪಿಗೆ ಪ್ರೀತಿ ಬೇಸರ - DC vs KXIP IPL update

ಅಂಪೈರ್​ ನೀಡಿದ ತಪ್ಪು ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದರುವ ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಬಿಸಿಸಿಐಗೆ ಹೊಸ ನಿಯಮ ಜಾರಿಗೆ ತರುವ ಮೂಲಕ ಇಂತಹ ತಪ್ಪುಗಳನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ.

ಶಾರ್ಟ್​ ರನ್​ ತೀರ್ಪಿಗೆ ಪ್ರೀತಿ ಬೇಸರ
ಶಾರ್ಟ್​ ರನ್​ ತೀರ್ಪಿಗೆ ಪ್ರೀತಿ ಬೇಸರ
author img

By

Published : Sep 21, 2020, 6:47 PM IST

ದುಬೈ: ಭಾನುವಾರ ನಡೆದ 2ನೇ ಐಪಿಎಲ್​ ಪಂದ್ಯದಲ್ಲಿ ಅಂಪೈರ್​ ಶಾರ್ಟ್​ ರನ್​ ತೀರ್ಪು ನೀಡಿ ಒಂದು ರನ್​ ಕಡಿತಗೊಳಿಸಿದ್ದರಿಂದ ಪಂಜಾಬ್​ ತಂಡ ಡೆಲ್ಲಿ ವಿರುದ್ಧ ಸೋಲಲು ಪ್ರಮುಖ ಕಾರಣವಾಯಿತು. ಅಂಪೈರ್​ರ ಈ ತೀರ್ಪಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಸಹಿತ ಹಲವಾರು ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದರು.

ಅಂಪೈರ್​ ನೀಡಿದ ತಪ್ಪು ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದರುವ ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಬಿಸಿಸಿಐಗೆ ಹೊಸ ನಿಯಮ ಜಾರಿಗೆ ತರುವ ಮೂಲಕ ಇಂತಹ ತಪ್ಪುಗಳನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ.

  • I travelled enthusiastically during a pandemic,did 6 days of Quarantine & 5covid tests with a smile but that one Short Run hit me hard. What’s the point of technology if it cannot be used? It’s time @BCCI introduces new rules.This cannot happen every year. #DCvKXIP @lionsdenkxip https://t.co/uNMXFJYfpe

    — Preity G Zinta (@realpreityzinta) September 21, 2020 " class="align-text-top noRightClick twitterSection" data=" ">

" ಸಾಂಕ್ರಾಮಿಕ ಕೊರೊನಾದ ನಡುವೆಯೂ ನಾನು ಉತ್ಸಾಹದಿಂದ ಪ್ರಯಾಣಿಸಿದೆ. 6 ದಿನಗಳ ಕಾಲ ಕ್ವಾರಂಟೈನ್ ಮತ್ತು ಐದು ಕೋವಿಡ್​ ಪರೀಕ್ಷೆಗಳನ್ನು ಖುಷಿಯಿಂದಲೇ ಎದುರಿಸಿದ್ದೇನೆ. ಆದರೆ ಈ ಒಂದು ಶಾರ್ಟ್ ರನ್ ನನಗೆ ತೀವ್ರವಾದ ನೋವು ತಂದಿದೆ. ಈ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಬಳಸದಿದ್ದರೆ ಅರ್ಥವೇನು? ಬಿಸಿಸಿಐ ಹೊಸ ನಿಯಮಗಳನ್ನು ಪರಿಚಯಿಸುವ ಮೂಲಕ ಇದು ಸರಿಯಾದ ಸಮಯ" ಎಂದು ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

  • I’ve always believed in being graceful in a win or loss & in the spirit of the game but it’s also important to ask for policy changes that improve the game in the future for everyone. The past has happened and it’s imp to move on. So Looking ahead & being positive as always 👍

    — Preity G Zinta (@realpreityzinta) September 21, 2020 " class="align-text-top noRightClick twitterSection" data=" ">

ನಿನ್ನೆಯ ಪಂದ್ಯದ 18ನೇ ಓವರ್​ನಲ್ಲಿ ಅಂಪೈರ್ ನೀಡಿದ್ದ ಶಾರ್ಟ್ ರನ್ ತೀರ್ಪು ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಓವರಿನ 3ನೇ ಎಸೆತದಲ್ಲಿ ಮಯಾಂಕ್ ಅಗರ್​ವಾಲ್​ ಕವರ್ ಡ್ರೈವ್ ಕಡೆ ಚೆಂಡನ್ನು ಬಾರಿಸಿ 2 ರನ್ ಓಡಿದ್ದರು. ಆದರೆ ಲೆಗ್-ಅಂಪೈರ್ ನಾನ್ ಸ್ಟ್ರೈಕ್​ನಲ್ಲಿದ್ದ ಕ್ರಿಸ್ ಜೋರ್ಡನ್ ಮೊದಲ ರನ್ ಪಡೆಯುವ ವೇಳೆ ಕ್ರಿಸ್ ಮುಟ್ಟಿಸಿಲ್ಲ ಎಂದು ನಿರ್ಧರಿಸಿ ಶಾರ್ಟ್ ರನ್ ಎಂದು ತೀರ್ಪು ನೀಡಿದ್ದರು. ಆದರೆ ರಿಪ್ಲೇನಲ್ಲಿ ಜೋರ್ಡಾನ್​ ಕ್ರೀಸ್ ಮುಟ್ಟಿ ಬಂದಿದ್ದರು.

ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಸೆಹ್ವಾಗ್, ಶಾರ್ಟ್ ರನ್ ತೀರ್ಪು ನೀಡಿದ್ದ ಅಂಪೈರ್​ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಬೇಕು ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ದುಬೈ: ಭಾನುವಾರ ನಡೆದ 2ನೇ ಐಪಿಎಲ್​ ಪಂದ್ಯದಲ್ಲಿ ಅಂಪೈರ್​ ಶಾರ್ಟ್​ ರನ್​ ತೀರ್ಪು ನೀಡಿ ಒಂದು ರನ್​ ಕಡಿತಗೊಳಿಸಿದ್ದರಿಂದ ಪಂಜಾಬ್​ ತಂಡ ಡೆಲ್ಲಿ ವಿರುದ್ಧ ಸೋಲಲು ಪ್ರಮುಖ ಕಾರಣವಾಯಿತು. ಅಂಪೈರ್​ರ ಈ ತೀರ್ಪಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಸಹಿತ ಹಲವಾರು ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದರು.

ಅಂಪೈರ್​ ನೀಡಿದ ತಪ್ಪು ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದರುವ ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಬಿಸಿಸಿಐಗೆ ಹೊಸ ನಿಯಮ ಜಾರಿಗೆ ತರುವ ಮೂಲಕ ಇಂತಹ ತಪ್ಪುಗಳನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ.

  • I travelled enthusiastically during a pandemic,did 6 days of Quarantine & 5covid tests with a smile but that one Short Run hit me hard. What’s the point of technology if it cannot be used? It’s time @BCCI introduces new rules.This cannot happen every year. #DCvKXIP @lionsdenkxip https://t.co/uNMXFJYfpe

    — Preity G Zinta (@realpreityzinta) September 21, 2020 " class="align-text-top noRightClick twitterSection" data=" ">

" ಸಾಂಕ್ರಾಮಿಕ ಕೊರೊನಾದ ನಡುವೆಯೂ ನಾನು ಉತ್ಸಾಹದಿಂದ ಪ್ರಯಾಣಿಸಿದೆ. 6 ದಿನಗಳ ಕಾಲ ಕ್ವಾರಂಟೈನ್ ಮತ್ತು ಐದು ಕೋವಿಡ್​ ಪರೀಕ್ಷೆಗಳನ್ನು ಖುಷಿಯಿಂದಲೇ ಎದುರಿಸಿದ್ದೇನೆ. ಆದರೆ ಈ ಒಂದು ಶಾರ್ಟ್ ರನ್ ನನಗೆ ತೀವ್ರವಾದ ನೋವು ತಂದಿದೆ. ಈ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಬಳಸದಿದ್ದರೆ ಅರ್ಥವೇನು? ಬಿಸಿಸಿಐ ಹೊಸ ನಿಯಮಗಳನ್ನು ಪರಿಚಯಿಸುವ ಮೂಲಕ ಇದು ಸರಿಯಾದ ಸಮಯ" ಎಂದು ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

  • I’ve always believed in being graceful in a win or loss & in the spirit of the game but it’s also important to ask for policy changes that improve the game in the future for everyone. The past has happened and it’s imp to move on. So Looking ahead & being positive as always 👍

    — Preity G Zinta (@realpreityzinta) September 21, 2020 " class="align-text-top noRightClick twitterSection" data=" ">

ನಿನ್ನೆಯ ಪಂದ್ಯದ 18ನೇ ಓವರ್​ನಲ್ಲಿ ಅಂಪೈರ್ ನೀಡಿದ್ದ ಶಾರ್ಟ್ ರನ್ ತೀರ್ಪು ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಓವರಿನ 3ನೇ ಎಸೆತದಲ್ಲಿ ಮಯಾಂಕ್ ಅಗರ್​ವಾಲ್​ ಕವರ್ ಡ್ರೈವ್ ಕಡೆ ಚೆಂಡನ್ನು ಬಾರಿಸಿ 2 ರನ್ ಓಡಿದ್ದರು. ಆದರೆ ಲೆಗ್-ಅಂಪೈರ್ ನಾನ್ ಸ್ಟ್ರೈಕ್​ನಲ್ಲಿದ್ದ ಕ್ರಿಸ್ ಜೋರ್ಡನ್ ಮೊದಲ ರನ್ ಪಡೆಯುವ ವೇಳೆ ಕ್ರಿಸ್ ಮುಟ್ಟಿಸಿಲ್ಲ ಎಂದು ನಿರ್ಧರಿಸಿ ಶಾರ್ಟ್ ರನ್ ಎಂದು ತೀರ್ಪು ನೀಡಿದ್ದರು. ಆದರೆ ರಿಪ್ಲೇನಲ್ಲಿ ಜೋರ್ಡಾನ್​ ಕ್ರೀಸ್ ಮುಟ್ಟಿ ಬಂದಿದ್ದರು.

ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಸೆಹ್ವಾಗ್, ಶಾರ್ಟ್ ರನ್ ತೀರ್ಪು ನೀಡಿದ್ದ ಅಂಪೈರ್​ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಬೇಕು ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.