ETV Bharat / sports

ಕರಿಯ ಎಂದಿದ್ದಕ್ಕೆ ಇಶಾಂತ್​​ ಕ್ಷಮೆಯಾಚನೆ: ಆತ ನನ್ನ ಸಹೋದರನಿದ್ದಂತೆ ಎಂದ ಸಾಮಿ

ಇಶಾಂತ್​, ಸಾಮಿ ಸೇರಿದಂತೆ ಇತರ ಆಟಗಾರರಿರುವ ಒಂದು ಪೋಸ್ಟ್​ ವೈರಲ್​ ಆಗಿತ್ತು ಅದರಲ್ಲಿ ಸಾಮಿಯನ್ನು ಇಸಾಂತ್​ ಕಲು( ಕರಿಯ) ಎಂದು ಕರೆದಿದ್ದದ್ದು ಸ್ಪಷ್ಟವಾಗಿತ್ತು. ಇದೀಗ ಇಶಾಂತ್​ ಶರ್ಮಾ ಡರೇನ್​ ಸಾಮಿಗೆ ಕರೆಮಾಡಿ ಕ್ಷಮೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.

author img

By

Published : Jul 2, 2020, 2:50 PM IST

Ishant  sharma-darren sammy
ಇಶಾಂತ್​ ಶರ್ಮಾ- ಸಾಮಿ

ನವದೆಹಲಿ: ಅಮೆರಿಕದಲ್ಲಿ ಕರಿಯ ಜನಾಂಗದ ವ್ಯಕ್ತಿಯೊಬ್ಬ ಪೊಲೀಸರಿಂದ ಹತ್ಯೆಯಾದ ನಂತರ ವರ್ಣಭೇದದ ವಿರುದ್ಧ ಧನಿ ಎತ್ತಿದ್ದ ಕ್ರಿಕೆಟಿಗ ಡರೇನ್​ ಸಾಮಿ ಐಪಿಎಲ್​ನಲ್ಲಿ ನನ್ನನ್ನು ಕಲು(ಕರಿಯ) ಎಂದು ಕರೆಯಲಾಗುತ್ತಿತ್ತು ಎಂದು ಆರೋಪಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.

ಇದಾದ ಬಳಿಕ ಇಶಾಂತ್​ ಸಾಮಿ ಸೇರಿದಂತೆ ಇತರ ಆಟಗಾರರಿರುವ ಒಂದು ಪೋಸ್ಟ್​ ವೈರಲ್​ ಆಗಿತ್ತು ಅದರಲ್ಲಿ ಸಾಮಿಯನ್ನು ಇಸಾಂತ್​ ಕಲು ಎಂದು ಕರೆದಿದ್ದದ್ದು ಸ್ಪಷ್ಟವಾಗಿತ್ತು. ಇದೀಗ ಇಶಾಂತ್ ​ಶರ್ಮಾ ಡರೇನ್​ ಸಾಮಿಗೆ ಕರೆಮಾಡಿ ಕ್ಷಮೆ ಕೋರಿದ್ದಾರೆ ಎಂದು ತಿಳಿದುಬಂದಿದೆ.

" ಇಶಾಂತ್​ ನನಗೆ ಕರೆಮಾಡಿ ಕಲು(ಕರಿಯ) ಎಂದಿದ್ದಕ್ಕೆ ಕ್ಷಮೆ ಕೋರಿದ್ದಾರೆ. ಅವರು ಹಾಗೆ ಕರೆಯುವುದರ ಹಿಂದೆ ದುರದ್ದೇಶವಿರಲಿಲ್ಲ ಎಂದೆನಿಸುತ್ತಿದೆ. ಕಪ್ಪು ವರ್ಣಿಯರನ್ನು ಗೌರವಿಸುವ ಹಾಗೂ ಸಮಾನತೆಯಿಂದ ಕಾಣುವ ಅವಶ್ಯಕತೆ ಇಂದಿನ ಸಮಾಜದಲ್ಲಿದೆ. ಅದೇ ನನ್ನ ಆರೋಪದ ಉದ್ದೇಶವಾಗಿತ್ತು. ಇಲ್ಲಿಗೆ ಈ ವಿಚಾರವನ್ನು ಬಿಡುತ್ತಿದ್ದೇನೆ" ಎಂದು ಸಾಮಿ ತಿಳಿಸಿದ್ದಾರೆ.

ಇಶಾಂತ್​ ಮೇಲೆ ನನಗೆ ಯಾವುದೇ ಕೋಪವಿಲ್ಲ. ಅವರನ್ನು ಭೇಟಿ ಮಾಡಿದ ವೇಳೆ ಅಪ್ಪಿಕೊಳ್ಳುವುದಾಗಿ, ಹಾಗೂ ಆತ ನನ್ನ ಸಹೋದರನಿದ್ದಂತೆ ಎಂದು ಹೇಳಿದ್ದಾರೆ.

ಇನ್ನು ಆಟಗಾರ , ಕೋಚ್​, ಮೆಂಟರ್​ ಅಥವಾ ಯಾವುದಾದರೂ ಪಾತ್ರದಲ್ಲಿ ಭಾರತಕ್ಕೆ ಬರುವ ಹಂಬಲವನ್ನು ಸಾಮಿ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಹಲವಾರು ಮಧುರ ನೆನಪುಗಳಿವೆ. ಇಶಾಂತ್​ ಮನೆಯಲ್ಲಿ ನಾವೆಲ್ಲರೂ ಇರುವ ಒಂದು ಫೋಟೋವಿದೆ. ಅದರಲ್ಲಿ ನಾವೆಲ್ಲರೂ ಸಹೋದರರು ಎಂದು ಬರೆದಿದೆ. ಅದಕ್ಕೆ ನಾನು ಸಹಿ ಮಾಡಿದ್ದೇನೆ. ಈ ವಿಚಾರವನ್ನು ಮುಂದಕ್ಕೆ ಎಳೆದೊಯ್ಯಲು ನಾನು ಬಯಸುವುದಿಲ್ಲ ಎಂದು ಸಾಮಿ ಐಪಿಎಲ್​ನ ವರ್ಣಭೇದ ವಿವಾದವನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ.

ನವದೆಹಲಿ: ಅಮೆರಿಕದಲ್ಲಿ ಕರಿಯ ಜನಾಂಗದ ವ್ಯಕ್ತಿಯೊಬ್ಬ ಪೊಲೀಸರಿಂದ ಹತ್ಯೆಯಾದ ನಂತರ ವರ್ಣಭೇದದ ವಿರುದ್ಧ ಧನಿ ಎತ್ತಿದ್ದ ಕ್ರಿಕೆಟಿಗ ಡರೇನ್​ ಸಾಮಿ ಐಪಿಎಲ್​ನಲ್ಲಿ ನನ್ನನ್ನು ಕಲು(ಕರಿಯ) ಎಂದು ಕರೆಯಲಾಗುತ್ತಿತ್ತು ಎಂದು ಆರೋಪಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.

ಇದಾದ ಬಳಿಕ ಇಶಾಂತ್​ ಸಾಮಿ ಸೇರಿದಂತೆ ಇತರ ಆಟಗಾರರಿರುವ ಒಂದು ಪೋಸ್ಟ್​ ವೈರಲ್​ ಆಗಿತ್ತು ಅದರಲ್ಲಿ ಸಾಮಿಯನ್ನು ಇಸಾಂತ್​ ಕಲು ಎಂದು ಕರೆದಿದ್ದದ್ದು ಸ್ಪಷ್ಟವಾಗಿತ್ತು. ಇದೀಗ ಇಶಾಂತ್ ​ಶರ್ಮಾ ಡರೇನ್​ ಸಾಮಿಗೆ ಕರೆಮಾಡಿ ಕ್ಷಮೆ ಕೋರಿದ್ದಾರೆ ಎಂದು ತಿಳಿದುಬಂದಿದೆ.

" ಇಶಾಂತ್​ ನನಗೆ ಕರೆಮಾಡಿ ಕಲು(ಕರಿಯ) ಎಂದಿದ್ದಕ್ಕೆ ಕ್ಷಮೆ ಕೋರಿದ್ದಾರೆ. ಅವರು ಹಾಗೆ ಕರೆಯುವುದರ ಹಿಂದೆ ದುರದ್ದೇಶವಿರಲಿಲ್ಲ ಎಂದೆನಿಸುತ್ತಿದೆ. ಕಪ್ಪು ವರ್ಣಿಯರನ್ನು ಗೌರವಿಸುವ ಹಾಗೂ ಸಮಾನತೆಯಿಂದ ಕಾಣುವ ಅವಶ್ಯಕತೆ ಇಂದಿನ ಸಮಾಜದಲ್ಲಿದೆ. ಅದೇ ನನ್ನ ಆರೋಪದ ಉದ್ದೇಶವಾಗಿತ್ತು. ಇಲ್ಲಿಗೆ ಈ ವಿಚಾರವನ್ನು ಬಿಡುತ್ತಿದ್ದೇನೆ" ಎಂದು ಸಾಮಿ ತಿಳಿಸಿದ್ದಾರೆ.

ಇಶಾಂತ್​ ಮೇಲೆ ನನಗೆ ಯಾವುದೇ ಕೋಪವಿಲ್ಲ. ಅವರನ್ನು ಭೇಟಿ ಮಾಡಿದ ವೇಳೆ ಅಪ್ಪಿಕೊಳ್ಳುವುದಾಗಿ, ಹಾಗೂ ಆತ ನನ್ನ ಸಹೋದರನಿದ್ದಂತೆ ಎಂದು ಹೇಳಿದ್ದಾರೆ.

ಇನ್ನು ಆಟಗಾರ , ಕೋಚ್​, ಮೆಂಟರ್​ ಅಥವಾ ಯಾವುದಾದರೂ ಪಾತ್ರದಲ್ಲಿ ಭಾರತಕ್ಕೆ ಬರುವ ಹಂಬಲವನ್ನು ಸಾಮಿ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಹಲವಾರು ಮಧುರ ನೆನಪುಗಳಿವೆ. ಇಶಾಂತ್​ ಮನೆಯಲ್ಲಿ ನಾವೆಲ್ಲರೂ ಇರುವ ಒಂದು ಫೋಟೋವಿದೆ. ಅದರಲ್ಲಿ ನಾವೆಲ್ಲರೂ ಸಹೋದರರು ಎಂದು ಬರೆದಿದೆ. ಅದಕ್ಕೆ ನಾನು ಸಹಿ ಮಾಡಿದ್ದೇನೆ. ಈ ವಿಚಾರವನ್ನು ಮುಂದಕ್ಕೆ ಎಳೆದೊಯ್ಯಲು ನಾನು ಬಯಸುವುದಿಲ್ಲ ಎಂದು ಸಾಮಿ ಐಪಿಎಲ್​ನ ವರ್ಣಭೇದ ವಿವಾದವನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.