ETV Bharat / sports

ಐಸಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ ಯೋಜನೆ ರೂಪಿಸುವ ಅಗತ್ಯವಿದೆ: ಪಠಾಣ್

author img

By

Published : Jun 15, 2020, 12:02 PM IST

ಭಾರತ ತಂಡ 2013ರಲ್ಲಿ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ನಂತರ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. 2015 ಹಾಗೂ 2019ರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಹಾಗೂ 2016ರ ಟಿ-20 ವಿಶ್ವಕಪ್​ನಲ್ಲಿ ಸೆಮಿಫೈನಲ್​ನಲ್ಲಿ ಸೋಲು ಕಂಡರೆ, 2017ರ ಚಾಂಪಿಯನ್​ ಟ್ರೋಫಿ ಫೈನಲ್​ನಲ್ಲಿ ಪಾಕ್​ ವಿರುದ್ಧ ಸೋಲು ಕಂಡಿತ್ತು.

ಐಸಿಸಿ ಟೂರ್ನಿಮೆಂಟ್​
ಇರ್ಫಾನ್​ ಪಠಾಣ್

ಮುಂಬೈ: ಭಾರತ ತಂಡ ಐಸಿಸಿ ಇವೆಂಟ್​ಗಳಲ್ಲಿ ಪಾಲ್ಗೊಳ್ಳುವ ಮುನ್ನ ಉತ್ತಮ ಯೋಜನೆಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಆಲ್​ರೌಂಡರ್​ ಇರ್ಫಾನ್ ಪಠಾಣ್​ ಅಭಿಪ್ರಾಯ ಪಟ್ಟಿದ್ದಾರೆ. ನೀವು 2019 ವಿಶ್ವಕಪ್​ ಗಮನಿಸಿ, ಅದು ತಂಡದ ಕೆಟ್ಟ ಯೋಜನೆಯಾಗಿತ್ತು. ನನ್ನ ಪ್ರಕಾರ್ ಉತ್ತಮ ಯೋಜನೆ ಮಾಡಿಕೊಳ್ಳಬಹುದಿತ್ತು ಎಂದು ಇರ್ಪಾನ್​ ಪಠಾಣ್​ ಭಾವಿಸಿದ್ದಾರೆ.

ಭಾರತ ತಂಡ 2013ರಲ್ಲಿ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ನಂತರ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. 2015 ಹಾಗೂ 2019ರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಹಾಗೂ 2016ರ ಟಿ-20 ವಿಶ್ವಕಪ್​ನಲ್ಲಿ ಸೆಮಿಫೈನಲ್​ನಲ್ಲಿ ಸೋಲು ಕಂಡರೆ, 2017ರ ಚಾಂಪಿಯನ್​ ಟ್ರೋಫಿ ಫೈನಲ್​ನಲ್ಲಿ ಪಾಕ್​ ವಿರುದ್ಧ ಸೋಲು ಕಂಡಿತ್ತು.

ಇರ್ಫಾನ್​ ಪಠಾಣ್
ಇರ್ಫಾನ್​ ಪಠಾಣ್

ನೋಡಿ, ನೀವು ವಿಶ್ವಚಾಂಪಿಯನ್​ ಆಗಲು ಸಂಪನ್ಮೂಲಗಳಿವೆ. ನಮ್ಮಲ್ಲಿ ಆಟಗಾರರಿದ್ದಾರೆ. ನಮಗೆ ಫಿಟ್​ನೆಸ್​ ಇದೆ, ನಮಗೆ ವಿಶ್ವ ಚಾಂಪಿಯನ್​ ಆಗಲು ನಮಗೆ ಎಲ್ಲವೂ ಇದೆ. ಕೊರತೆ ಇದ್ದರೆ ವಿಶ್ವಕಪ್​ಗೆ ಮುನ್ನ ನಮ್ಮ ನಾಲ್ಕನೇ ಕ್ರಮಾಂಕ ಬ್ಯಾಟ್ಸ್​ಮನ್ ಇರಲಿಲ್ಲ. ನಾವು ಸರಿಯಾದ ಹನ್ನೊಂದರ ಬಳಗವನ್ನು ಹೊಂದಲು ಹೆಣಗಾಡುತ್ದಿದ್ದೇವೆ ಎಂದು ಪಠಾಣ್​ ತಿಳಿಸಿದ್ದಾರೆ.

ವಿಶ್ವಕಪ್​ನಂತಹ ಐಸಿಸಿ ಟೂರ್ನಿಗಳಿಗೆ ಹೋಗುವ ಮುನ್ನ ನಾವು ಉತ್ತಮ ಯೋಜನೆಯನ್ನು ರೂಪಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಭಾವಿಸುತ್ತೇನೆ. ನಮ್ಮಲ್ಲಿ ಉತ್ತಮ ಯೋಜನೆ ಇದ್ದರೆ ಚಾಂಪಿಯನ್​ ಆಗಲು ನಮಗೆ ಎಲ್ಲ ಸಂಪನ್ಮೂಲಗಳಿವೆ ಎಂದು ಭಾರತ ತಂಡಕ್ಕೆ 120 ಏಕದಿನ ಮತ್ತು 29 ಟೆಸ್ಟ್​ ಪಂದ್ಯಗಳನ್ನಾಡಿರುವ 35 ವರ್ಷ ವಯಸ್ಸಿನ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ: ಭಾರತ ತಂಡ ಐಸಿಸಿ ಇವೆಂಟ್​ಗಳಲ್ಲಿ ಪಾಲ್ಗೊಳ್ಳುವ ಮುನ್ನ ಉತ್ತಮ ಯೋಜನೆಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಆಲ್​ರೌಂಡರ್​ ಇರ್ಫಾನ್ ಪಠಾಣ್​ ಅಭಿಪ್ರಾಯ ಪಟ್ಟಿದ್ದಾರೆ. ನೀವು 2019 ವಿಶ್ವಕಪ್​ ಗಮನಿಸಿ, ಅದು ತಂಡದ ಕೆಟ್ಟ ಯೋಜನೆಯಾಗಿತ್ತು. ನನ್ನ ಪ್ರಕಾರ್ ಉತ್ತಮ ಯೋಜನೆ ಮಾಡಿಕೊಳ್ಳಬಹುದಿತ್ತು ಎಂದು ಇರ್ಪಾನ್​ ಪಠಾಣ್​ ಭಾವಿಸಿದ್ದಾರೆ.

ಭಾರತ ತಂಡ 2013ರಲ್ಲಿ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ನಂತರ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. 2015 ಹಾಗೂ 2019ರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಹಾಗೂ 2016ರ ಟಿ-20 ವಿಶ್ವಕಪ್​ನಲ್ಲಿ ಸೆಮಿಫೈನಲ್​ನಲ್ಲಿ ಸೋಲು ಕಂಡರೆ, 2017ರ ಚಾಂಪಿಯನ್​ ಟ್ರೋಫಿ ಫೈನಲ್​ನಲ್ಲಿ ಪಾಕ್​ ವಿರುದ್ಧ ಸೋಲು ಕಂಡಿತ್ತು.

ಇರ್ಫಾನ್​ ಪಠಾಣ್
ಇರ್ಫಾನ್​ ಪಠಾಣ್

ನೋಡಿ, ನೀವು ವಿಶ್ವಚಾಂಪಿಯನ್​ ಆಗಲು ಸಂಪನ್ಮೂಲಗಳಿವೆ. ನಮ್ಮಲ್ಲಿ ಆಟಗಾರರಿದ್ದಾರೆ. ನಮಗೆ ಫಿಟ್​ನೆಸ್​ ಇದೆ, ನಮಗೆ ವಿಶ್ವ ಚಾಂಪಿಯನ್​ ಆಗಲು ನಮಗೆ ಎಲ್ಲವೂ ಇದೆ. ಕೊರತೆ ಇದ್ದರೆ ವಿಶ್ವಕಪ್​ಗೆ ಮುನ್ನ ನಮ್ಮ ನಾಲ್ಕನೇ ಕ್ರಮಾಂಕ ಬ್ಯಾಟ್ಸ್​ಮನ್ ಇರಲಿಲ್ಲ. ನಾವು ಸರಿಯಾದ ಹನ್ನೊಂದರ ಬಳಗವನ್ನು ಹೊಂದಲು ಹೆಣಗಾಡುತ್ದಿದ್ದೇವೆ ಎಂದು ಪಠಾಣ್​ ತಿಳಿಸಿದ್ದಾರೆ.

ವಿಶ್ವಕಪ್​ನಂತಹ ಐಸಿಸಿ ಟೂರ್ನಿಗಳಿಗೆ ಹೋಗುವ ಮುನ್ನ ನಾವು ಉತ್ತಮ ಯೋಜನೆಯನ್ನು ರೂಪಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಭಾವಿಸುತ್ತೇನೆ. ನಮ್ಮಲ್ಲಿ ಉತ್ತಮ ಯೋಜನೆ ಇದ್ದರೆ ಚಾಂಪಿಯನ್​ ಆಗಲು ನಮಗೆ ಎಲ್ಲ ಸಂಪನ್ಮೂಲಗಳಿವೆ ಎಂದು ಭಾರತ ತಂಡಕ್ಕೆ 120 ಏಕದಿನ ಮತ್ತು 29 ಟೆಸ್ಟ್​ ಪಂದ್ಯಗಳನ್ನಾಡಿರುವ 35 ವರ್ಷ ವಯಸ್ಸಿನ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.