ETV Bharat / sports

ಸಿಎಸ್​ಕೆ ಆಟಗಾರರಿಗೆ ಕೊರೊನಾ... ಐಪಿಎಲ್ ವೇಳಪಟ್ಟಿ ಬಿಡುಗಡೆಗೆ ತಡೆ!

ಸಿಎಸ್​ಕೆ ಆಟಗಾರರಿಗೆ ಸೋಂಕು ತಗುಲಿರುವುದರಿಂದ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತಕ್ಷಣ ಯಾವುದೇ ಆಪತ್ತು ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.

author img

By

Published : Aug 29, 2020, 11:47 AM IST

IPL schedule on hold as CSK members test positive for COVID
ಐಪಿಎಲ್ ವೇಳಪಟ್ಟಿ ಬಿಡುಗಡೆಗೆ ತಡೆ

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರರು ಮತ್ತು ಇತರೆ ಸಿಬ್ಬಂದಿ ಸೇರಿದಂತೆ 12 ಮಂದಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಐಪಿಎಲ್ ವೇಳಾಪಟ್ಟಿ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ.

ಸಿಎಸ್​ಕೆ ಆಟಗಾರರಿಗೆ ಸೋಂಕು ತಗುಲಿರುವುದರಿಂದ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತಕ್ಷಣ ಯಾವುದೇ ಆಪತ್ತು ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.

ನಿಯಮದ ಪ್ರಕಾರ, ಸೋಂಕಿಗೆ ತುತ್ತಾದ ಆಟಗಾರ 14 ದಿನಗಳ ಕಾಲ ಕ್ವಾರಂಟೈನ್​ ಅವಧಿ ಮುಗಿದ ನಂತರವೇ ತರಬೇತಿಗೆ ಮರಳಬಹುದು. ತನ್ನ ಸಂಪರ್ಕ ತಡೆಯನ್ನು ಪೂರ್ಣಗೊಳಿಸಿದ ನಂತರ ಜೈವಿಕ-ಸುರಕ್ಷಿತ ವಲಯವನ್ನು ಮತ್ತೆ ಪ್ರವೇಶಿಸಲು ಅನುಮತಿಸುವ ಮೊದಲು ಆಟಗಾರನನ್ನು ಮತ್ತೆ ಪರೀಕ್ಷಿಸಲಾಗುತ್ತದೆ.

"ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕ್ರಮಗಳು ಜಾರಿಯಲ್ಲಿವೆ ಮತ್ತು ಪಂದ್ಯಾವಳಿಗೆ ತಕ್ಷಣದ ಆಪತ್ತಿಲ್ಲ. ಆದರೆ ಈ ಬೆಳವಣಿಗೆಯಿಂದಾಗಿ ವೇಳಾಪಟ್ಟಿ ಘೋಷಣೆ ವಿಳಂಬವಾಗಿದೆ” ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿವೆ.

ಮೂರು ಬಾರಿ ಐಪಿಎಲ್ ಚಾಂಪಿಯನ್ ಸಿಎಸ್​ಕೆ ತಂಡ ಯುಎಇಗೆ ತೆರಳುವ ಮೊದಲು ಭಾರತದಲ್ಲಿ ತಮ್ಮದೇ ಆದ ಶಿಬಿರವನ್ನು ಆಯೋಜಿಸಿತ್ತು. ಈ ಕ್ರಮ ಬಿಸಿಸಿಐಗೆ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.

"ಭಾರತದಲ್ಲಿ ಅಂತಹ ಶಿಬಿರವನ್ನು ನಡೆಸುವ ಅಪಾಯಗಳ ಬಗ್ಗೆ ಹಿರಿಯ ಬಿಸಿಸಿಐ ಅಧಿಕಾರಿಗಳು ಸಿಎಸ್​ಕೆಗೆ ಎಚ್ಚರಿಕೆ ನೀಡಿದ್ದರು" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರರು ಮತ್ತು ಇತರೆ ಸಿಬ್ಬಂದಿ ಸೇರಿದಂತೆ 12 ಮಂದಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಐಪಿಎಲ್ ವೇಳಾಪಟ್ಟಿ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ.

ಸಿಎಸ್​ಕೆ ಆಟಗಾರರಿಗೆ ಸೋಂಕು ತಗುಲಿರುವುದರಿಂದ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತಕ್ಷಣ ಯಾವುದೇ ಆಪತ್ತು ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.

ನಿಯಮದ ಪ್ರಕಾರ, ಸೋಂಕಿಗೆ ತುತ್ತಾದ ಆಟಗಾರ 14 ದಿನಗಳ ಕಾಲ ಕ್ವಾರಂಟೈನ್​ ಅವಧಿ ಮುಗಿದ ನಂತರವೇ ತರಬೇತಿಗೆ ಮರಳಬಹುದು. ತನ್ನ ಸಂಪರ್ಕ ತಡೆಯನ್ನು ಪೂರ್ಣಗೊಳಿಸಿದ ನಂತರ ಜೈವಿಕ-ಸುರಕ್ಷಿತ ವಲಯವನ್ನು ಮತ್ತೆ ಪ್ರವೇಶಿಸಲು ಅನುಮತಿಸುವ ಮೊದಲು ಆಟಗಾರನನ್ನು ಮತ್ತೆ ಪರೀಕ್ಷಿಸಲಾಗುತ್ತದೆ.

"ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕ್ರಮಗಳು ಜಾರಿಯಲ್ಲಿವೆ ಮತ್ತು ಪಂದ್ಯಾವಳಿಗೆ ತಕ್ಷಣದ ಆಪತ್ತಿಲ್ಲ. ಆದರೆ ಈ ಬೆಳವಣಿಗೆಯಿಂದಾಗಿ ವೇಳಾಪಟ್ಟಿ ಘೋಷಣೆ ವಿಳಂಬವಾಗಿದೆ” ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿವೆ.

ಮೂರು ಬಾರಿ ಐಪಿಎಲ್ ಚಾಂಪಿಯನ್ ಸಿಎಸ್​ಕೆ ತಂಡ ಯುಎಇಗೆ ತೆರಳುವ ಮೊದಲು ಭಾರತದಲ್ಲಿ ತಮ್ಮದೇ ಆದ ಶಿಬಿರವನ್ನು ಆಯೋಜಿಸಿತ್ತು. ಈ ಕ್ರಮ ಬಿಸಿಸಿಐಗೆ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.

"ಭಾರತದಲ್ಲಿ ಅಂತಹ ಶಿಬಿರವನ್ನು ನಡೆಸುವ ಅಪಾಯಗಳ ಬಗ್ಗೆ ಹಿರಿಯ ಬಿಸಿಸಿಐ ಅಧಿಕಾರಿಗಳು ಸಿಎಸ್​ಕೆಗೆ ಎಚ್ಚರಿಕೆ ನೀಡಿದ್ದರು" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.