ETV Bharat / sports

ಸಿಡ್ನಿಯಲ್ಲಿ ಟೀಂ ಇಂಡಿಯಾಗೆ ರೋಹಿತ್ ಬಲ; ಬಾರ್ಡರ್‌-ಗಾವಸ್ಕರ್‌ ಟ್ರೋಫಿ ಉಳಿಸಿಕೊಳ್ಳುವುದೇ ಭಾರತ?

author img

By

Published : Jan 6, 2021, 10:55 PM IST

ಭಾರತ ಸಿಡ್ನಿ ಟೆಸ್ಟ್​ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದರೆ ಬಾರ್ಡರ್​-ಗಾವಸ್ಕರ್​ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇನಾದರೂ ನಿಜವಾದರೆ ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ರಹಾನೆ ಬಳಗದಿಂದ ಅತ್ಯುತ್ತಮ ಮೈಲುಗಲ್ಲಾಗಿ ಉಳಿದುಕೊಳ್ಳಲಿದೆ. ಅತ್ಯುತ್ತಮ ವೇಗದ ಬೌಲರ್​ಗಳ ಅನುಪಸ್ಥಿತಿಯಲ್ಲಿ ಗೆದ್ದರಂತೂ ಈ ನೆನಪು ವಿಶೇಷವಾಗಿ ಉಳಿದುಕೊಳ್ಳಲಿದೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್​
ಭಾರತ vs ಆಸ್ಟ್ರೇಲಿಯಾ ಟೆಸ್ಟ್​

ಸಿಡ್ನಿ: ಆತಿಥೇಯ ಆಸ್ಟ್ರೇಲಿಯ ವಿರುದ್ಧ ಬಾಕ್ಸಿಂಗ್​ ಡೇ ಟೆಸ್ಟ್​ ಗೆದ್ದ ಉತ್ಸಾಹದಲ್ಲಿ 10 ದಿನ ಕಳೆದಿರುವ ರಹಾನೆ ಬಳಗ ಗುರುವಾರ 3ನೇ ಟೆಸ್ಟ್​ ಪಂದ್ಯವನ್ನಾಡಲಿದೆ. ಆರಂಭಿಕನಾಗಿ ಬಿಗ್​ ಹಿಟ್ಟರ್​ ರೋಹಿತ್ ಶರ್ಮಾ ತಂಡಕ್ಕೆ ಸೇರ್ಪಡೆಗೊಂಡಿರುವುದು ಮೂರನೇ ಟೆಸ್ಟ್‌ಗೆ ಭಾರತಕ್ಕೆ ಭರವಸೆ ತಂದುಕೊಟ್ಟಿದ್ದರೆ, ಭಾರತೀಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಸಿಡ್ನಿ ಕ್ರಿಕೆಟ್​ ಗ್ರೌಂಡ್‌ನಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳ ಅಸಾಧಾರಣ ಬ್ಯಾಟಿಂಗ್​ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದರೂ ಸಹ ಈ ಕ್ರೀಡಾಂಗಣದಲ್ಲಿ ಭಾರತೀಯರು 6 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಬಂದಿರುವ ಏಕೈಕ ಗೆಲುವು ಕೂಡ 42 ವರ್ಷಗಳ ಹಿಂದೆ ಎನ್ನುವುದು ವಾಸ್ತವ.

ಭಾರತ ಸಿಡ್ನಿ ಟೆಸ್ಟ್​ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದರೆ ಬಾರ್ಡರ್​ ಗಾವಸ್ಕರ್​ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇನಾದರೂ ನಿಜವಾದರೆ ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ರಹಾನೆ ಬಳಗದಿಂದ ಅತ್ಯುತ್ತಮ ಮೈಲುಗಲ್ಲಾಗಿ ಉಳಿದುಕೊಳ್ಳಲಿದೆ. ಅತ್ಯುತ್ತಮ ವೇಗದ ಬೌಲರ್​ಗಳ ಅನುಪಸ್ಥಿತಿಯಲ್ಲಿ ಗೆದ್ದರಂತೂ ಈ ನೆನಪು ವಿಶೇಷವಾಗಿ ಉಳಿದುಕೊಳ್ಳಲಿದೆ.

ಹಿಂದೆಂದಿಗಿಂತಲೂ ಬಲಹೀನವಾಗಿ ಕಾಣುತ್ತಿರುವ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳನ್ನು ಭಾರತೀಯ ಬೌಲರ್​ಗಳು ಬೆದರಿಸುತ್ತಿದ್ದಾರೆ. ಅದರಲ್ಲೂ ಸ್ಟೀವ್ ಸ್ಮಿತ್‌ರಂಥ ಸ್ಟಾರ್​ ಬ್ಯಾಟ್ಸ್​ಮನ್​ ಭಾರತದ ಬೌಲಿಂಗ್​ ಎದುರು ಮಂಕಾಗಿ ಹೋಗಿದ್ದಾರೆ. ಆದರೆ 3ನೇ ಪಂದ್ಯದಲ್ಲಿ ಉಮೇಶ್​ ಯಾದವ್​ ಅನುಪಸ್ಥಿತಿಯಲ್ಲಿ ಭಾರತ ನವ್​ದೀಪ್​ ಸೈನಿಯನ್ನು ಕಣಕ್ಕಿಳಿಸುತ್ತಿದೆ. ಈ ಪಂದ್ಯದಲ್ಲಿ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಸಿರಾಜ್​ ಹಾಗೂ ನಾಳೆ ಪದಾರ್ಪಣೆ ಮಾಡುತ್ತಿರುವ ನವದೀಪ್​ ಸೈನಿಯನ್ನು ತನ್ನ ಜೊತೆಯಲ್ಲಿ ಮುನ್ನಡೆಸುವ ಜವಾಬ್ದಾರಿ ಜಸ್ಪ್ರೀತ್ ಬುಮ್ರಾ ಹೆಗೆಲ ಮೇಲೇರಿದೆ.

ಆದರೆ ಸ್ಮಿತ್​ ವಿಭಾಗದಲ್ಲಿ ಟೂರ್ನಿಯಲ್ಲಿ 10 ವಿಕೆಟ್​ ಪಡೆದಿರುವ ಅನುಭವಿ ಅಶ್ವಿನ್​ ಮತ್ತು ಜಡೇಜಾ ಅತ್ಯುತ್ತಮ ಫಾರ್ಮ್​​ನಲ್ಲಿರುವುದರಿಂದ ಹೊಸಬರಿಗೆ ಹೆಚ್ಚೇನು ಸಮಸ್ಯೆಯಾಗುವುದಿಲ್ಲ ಎಂದು ಹೇಳಬಹುದಾಗಿದೆ.

  • No matter where you are, you can help keep the pink in the Vodafone Pink Test! 💕

    Grab your virtual Pink Seats at https://t.co/PurRwU2aRQ to help raise $1 million to fund seven McGrath Breast Care Nurses, who will support 700 families through breast cancer! #AUSvIND pic.twitter.com/Hs0T0t0MGh

    — Cricket Australia (@CricketAus) January 5, 2021 " class="align-text-top noRightClick twitterSection" data=" ">

ಬ್ಯಾಟಿಂಗ್ ವಿಭಾಗದಲ್ಲಿ ನೋಡುವುದಾದರೆ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಯುವ ಬ್ಯಾಟ್ಸ್​ಮನ್​ ಶುಬ್ಮನ್​ ಗಿಲ್​ ಜೊತೆಗೆ ವಿದೇಶಿ ಪಿಚ್​ನಲ್ಲಿ ಆರಂಭಿಕನಾಗಿ ಸಾಮರ್ಥ್ಯ ಸಾಬೀತುಪಡಿಸಲು ರೋಹಿತ್​ ಕಣಕ್ಕಿಳಿಯಲಿದ್ದಾರೆ. ಐಪಿಎಲ್​ ನಂತರ ಇದೇ ಮೊದಲ ಸ್ಪರ್ಧಾತ್ಮಕ ಪಂದ್ಯ ಹಾಗೂ ವರ್ಷದ ನಂತರ ಮೊದಲ ಟೆಸ್ಟ್​ ಪಂದ್ಯವಾಗಿದೆ.

ಎರಡು ವಾರಗಳ ಕ್ವಾರಂಟೈನ್​ ನಂತರ ತಂಡವನ್ನು ಸೇರಿಕೊಂಡು ಉಪನಾಯಕನ ಜವಾಬ್ದಾರಿ ನಿರ್ವಹಿಸಲು ಸಜ್ಜಾಗಿರುವ ರೋಹಿತ್​ ಶರ್ಮಾ ಮಂಗಳವಾರ ನೆಟ್ಸ್​ನಲ್ಲಿ ಅಶ್ವಿನ್, ಸಿರಾಜ್​ ಮತ್ತು ಸೈನಿ ಬೌಲಿಂಗ್​ಗೆ ಅತ್ಯುತ್ತಮವಾಗಿ ಬ್ಯಾಟಿಂಗ್ ಆಡುವ ಮೂಲಕ ಆತ್ಮವಿಶ್ವಾಸದಲ್ಲಿದ್ದಾರೆ. ಅಲ್ಲದೇ ತಂಡಕ್ಕೆ ಸೇರಿಕೊಳ್ಳುವುದರಿಂದ ಬ್ಯಾಟಿಂಗ್ ವಿಭಾಗದಲ್ಲಷ್ಟೇ ಅಲ್ಲದೆ, ಇತರೆ ಆಟಗಾರರಿಗೂ ಅವರು ಉತ್ಸಾಹ ತುಂಬಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ನಾಯಕ ರಹಾನೆ ಕೂಡ ಉಲ್ಲೇಖಿಸಿದ್ದಾರೆ.

ಸಿಡ್ನಿ ಟೆಸ್ಟ್​ ಸುನೀಲ್​ ಗಾವಸ್ಕರ್​, ರವಿಶಾಸ್ತ್ರಿ, ಸಚಿನ್​ ತೆಂಡೂಲ್ಕರ್​ ಅಂತಹ ಬ್ಯಾಟ್ಸ್​ಮನ್​ಗಳಿಗೆ ನೆಚ್ಚಿನದ್ದಾಗಿದೆ. ಪ್ರಸ್ತುತ ತಂಡದಲ್ಲಿರುವ ಪೂಜಾರ ಮತ್ತು ರಿಷಭ್ ಪಂತ್​ ಕೂಡ ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.

ಗಿಲ್​ ಮತ್ತು ರೋಹಿತ್​ ಉತ್ತಮ ಆರಂಭ ನೀಡಿದರೆ ಪೂಜಾರ ಮೇಲಿನ ಒತ್ತಡ ಕಡಿಮೆಯಾಗಿ ತಮ್ಮ ನೈಜ ಆಟವನ್ನು ತೋರಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಉಳಿದಂತೆ ರಹಾನೆ ಅತ್ಯುತ್ತಮ ಫಾರ್ಮ್​ನಲ್ಲಿದ್ದು, ಕಳೆದ ಪಂದ್ಯದಲ್ಲಿ ಸ್ಟಾರ್ಕ್​, ಕಮ್ಮಿನ್ಸ್​ ಹೇಜಲ್​ವುಡ್​ ದಾಳಿಯನ್ನು ಸಮರ್ಥವಾಗಿ ಎದುರಿಸಿರುವುದರಿಂದ 3ನೇ ಟೆಸ್ಟ್​ನಲ್ಲೂ ಇದೇ ಪ್ರದರ್ಶನವನ್ನು ಅವರಿಂದ ನಿರೀಕ್ಷಿಸಬಹುದಾಗಿದೆ.

ಆಸ್ಟ್ರೇಲಿಯಾ ತಂಡದ ಆರಂಭಿಕರು ಸತತ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಶೇ 70 ರಷ್ಟು ಫಿಟ್​ ಇರುವ ವಾರ್ನರ್​ರನ್ನು ಬಲವಂತವಾಗಿ ಕಣಕ್ಕಿಳಿಸಲು ಮುಂದಾಗಿದೆ. ವಾರ್ನರ್​ ತಂಡಕ್ಕೆ ಆಗಮಿಸುವುದರಿಂದ ತಂಡದ ಬ್ಯಾಟಿಂಗ್ ಜೊತೆಗೆ ಮೈದಾನದಲ್ಲಿ ಎಲ್ಲಾ ಆಟಗಾರರಗಲ್ಲೂ ಆತ್ಮವಿಶ್ವಾಸ ತುಂಬಲು ನೆರವಾಗಬಲ್ಲರು ಎಂದು ನಾಯಕ ಟಿಮ್​ ಪೇನ್​ ಬುದವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆತಿಥೇಯ ತಂಡ ಆರಂಭಿಕ ಸ್ಥಾನದ ಬದಲಾವಣೆಯೊಂದನ್ನು ಬಿಟ್ಟರೆ ಕಳೆದ ಪಂದ್ಯದಲ್ಲಿದ್ದ ಬಹುತೇಕ ಎಲ್ಲಾ ಆಟಗಾರರನ್ನು ಸಿಡ್ನಿಯಲ್ಲಿ ಕಣಕ್ಕಿಳಿಸಲಿದೆ ಎನ್ನಲಾಗಿದೆ.

ಸಿಡ್ನಿ: ಆತಿಥೇಯ ಆಸ್ಟ್ರೇಲಿಯ ವಿರುದ್ಧ ಬಾಕ್ಸಿಂಗ್​ ಡೇ ಟೆಸ್ಟ್​ ಗೆದ್ದ ಉತ್ಸಾಹದಲ್ಲಿ 10 ದಿನ ಕಳೆದಿರುವ ರಹಾನೆ ಬಳಗ ಗುರುವಾರ 3ನೇ ಟೆಸ್ಟ್​ ಪಂದ್ಯವನ್ನಾಡಲಿದೆ. ಆರಂಭಿಕನಾಗಿ ಬಿಗ್​ ಹಿಟ್ಟರ್​ ರೋಹಿತ್ ಶರ್ಮಾ ತಂಡಕ್ಕೆ ಸೇರ್ಪಡೆಗೊಂಡಿರುವುದು ಮೂರನೇ ಟೆಸ್ಟ್‌ಗೆ ಭಾರತಕ್ಕೆ ಭರವಸೆ ತಂದುಕೊಟ್ಟಿದ್ದರೆ, ಭಾರತೀಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಸಿಡ್ನಿ ಕ್ರಿಕೆಟ್​ ಗ್ರೌಂಡ್‌ನಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳ ಅಸಾಧಾರಣ ಬ್ಯಾಟಿಂಗ್​ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದರೂ ಸಹ ಈ ಕ್ರೀಡಾಂಗಣದಲ್ಲಿ ಭಾರತೀಯರು 6 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಬಂದಿರುವ ಏಕೈಕ ಗೆಲುವು ಕೂಡ 42 ವರ್ಷಗಳ ಹಿಂದೆ ಎನ್ನುವುದು ವಾಸ್ತವ.

ಭಾರತ ಸಿಡ್ನಿ ಟೆಸ್ಟ್​ ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದರೆ ಬಾರ್ಡರ್​ ಗಾವಸ್ಕರ್​ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇನಾದರೂ ನಿಜವಾದರೆ ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ರಹಾನೆ ಬಳಗದಿಂದ ಅತ್ಯುತ್ತಮ ಮೈಲುಗಲ್ಲಾಗಿ ಉಳಿದುಕೊಳ್ಳಲಿದೆ. ಅತ್ಯುತ್ತಮ ವೇಗದ ಬೌಲರ್​ಗಳ ಅನುಪಸ್ಥಿತಿಯಲ್ಲಿ ಗೆದ್ದರಂತೂ ಈ ನೆನಪು ವಿಶೇಷವಾಗಿ ಉಳಿದುಕೊಳ್ಳಲಿದೆ.

ಹಿಂದೆಂದಿಗಿಂತಲೂ ಬಲಹೀನವಾಗಿ ಕಾಣುತ್ತಿರುವ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳನ್ನು ಭಾರತೀಯ ಬೌಲರ್​ಗಳು ಬೆದರಿಸುತ್ತಿದ್ದಾರೆ. ಅದರಲ್ಲೂ ಸ್ಟೀವ್ ಸ್ಮಿತ್‌ರಂಥ ಸ್ಟಾರ್​ ಬ್ಯಾಟ್ಸ್​ಮನ್​ ಭಾರತದ ಬೌಲಿಂಗ್​ ಎದುರು ಮಂಕಾಗಿ ಹೋಗಿದ್ದಾರೆ. ಆದರೆ 3ನೇ ಪಂದ್ಯದಲ್ಲಿ ಉಮೇಶ್​ ಯಾದವ್​ ಅನುಪಸ್ಥಿತಿಯಲ್ಲಿ ಭಾರತ ನವ್​ದೀಪ್​ ಸೈನಿಯನ್ನು ಕಣಕ್ಕಿಳಿಸುತ್ತಿದೆ. ಈ ಪಂದ್ಯದಲ್ಲಿ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಸಿರಾಜ್​ ಹಾಗೂ ನಾಳೆ ಪದಾರ್ಪಣೆ ಮಾಡುತ್ತಿರುವ ನವದೀಪ್​ ಸೈನಿಯನ್ನು ತನ್ನ ಜೊತೆಯಲ್ಲಿ ಮುನ್ನಡೆಸುವ ಜವಾಬ್ದಾರಿ ಜಸ್ಪ್ರೀತ್ ಬುಮ್ರಾ ಹೆಗೆಲ ಮೇಲೇರಿದೆ.

ಆದರೆ ಸ್ಮಿತ್​ ವಿಭಾಗದಲ್ಲಿ ಟೂರ್ನಿಯಲ್ಲಿ 10 ವಿಕೆಟ್​ ಪಡೆದಿರುವ ಅನುಭವಿ ಅಶ್ವಿನ್​ ಮತ್ತು ಜಡೇಜಾ ಅತ್ಯುತ್ತಮ ಫಾರ್ಮ್​​ನಲ್ಲಿರುವುದರಿಂದ ಹೊಸಬರಿಗೆ ಹೆಚ್ಚೇನು ಸಮಸ್ಯೆಯಾಗುವುದಿಲ್ಲ ಎಂದು ಹೇಳಬಹುದಾಗಿದೆ.

  • No matter where you are, you can help keep the pink in the Vodafone Pink Test! 💕

    Grab your virtual Pink Seats at https://t.co/PurRwU2aRQ to help raise $1 million to fund seven McGrath Breast Care Nurses, who will support 700 families through breast cancer! #AUSvIND pic.twitter.com/Hs0T0t0MGh

    — Cricket Australia (@CricketAus) January 5, 2021 " class="align-text-top noRightClick twitterSection" data=" ">

ಬ್ಯಾಟಿಂಗ್ ವಿಭಾಗದಲ್ಲಿ ನೋಡುವುದಾದರೆ ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಯುವ ಬ್ಯಾಟ್ಸ್​ಮನ್​ ಶುಬ್ಮನ್​ ಗಿಲ್​ ಜೊತೆಗೆ ವಿದೇಶಿ ಪಿಚ್​ನಲ್ಲಿ ಆರಂಭಿಕನಾಗಿ ಸಾಮರ್ಥ್ಯ ಸಾಬೀತುಪಡಿಸಲು ರೋಹಿತ್​ ಕಣಕ್ಕಿಳಿಯಲಿದ್ದಾರೆ. ಐಪಿಎಲ್​ ನಂತರ ಇದೇ ಮೊದಲ ಸ್ಪರ್ಧಾತ್ಮಕ ಪಂದ್ಯ ಹಾಗೂ ವರ್ಷದ ನಂತರ ಮೊದಲ ಟೆಸ್ಟ್​ ಪಂದ್ಯವಾಗಿದೆ.

ಎರಡು ವಾರಗಳ ಕ್ವಾರಂಟೈನ್​ ನಂತರ ತಂಡವನ್ನು ಸೇರಿಕೊಂಡು ಉಪನಾಯಕನ ಜವಾಬ್ದಾರಿ ನಿರ್ವಹಿಸಲು ಸಜ್ಜಾಗಿರುವ ರೋಹಿತ್​ ಶರ್ಮಾ ಮಂಗಳವಾರ ನೆಟ್ಸ್​ನಲ್ಲಿ ಅಶ್ವಿನ್, ಸಿರಾಜ್​ ಮತ್ತು ಸೈನಿ ಬೌಲಿಂಗ್​ಗೆ ಅತ್ಯುತ್ತಮವಾಗಿ ಬ್ಯಾಟಿಂಗ್ ಆಡುವ ಮೂಲಕ ಆತ್ಮವಿಶ್ವಾಸದಲ್ಲಿದ್ದಾರೆ. ಅಲ್ಲದೇ ತಂಡಕ್ಕೆ ಸೇರಿಕೊಳ್ಳುವುದರಿಂದ ಬ್ಯಾಟಿಂಗ್ ವಿಭಾಗದಲ್ಲಷ್ಟೇ ಅಲ್ಲದೆ, ಇತರೆ ಆಟಗಾರರಿಗೂ ಅವರು ಉತ್ಸಾಹ ತುಂಬಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ನಾಯಕ ರಹಾನೆ ಕೂಡ ಉಲ್ಲೇಖಿಸಿದ್ದಾರೆ.

ಸಿಡ್ನಿ ಟೆಸ್ಟ್​ ಸುನೀಲ್​ ಗಾವಸ್ಕರ್​, ರವಿಶಾಸ್ತ್ರಿ, ಸಚಿನ್​ ತೆಂಡೂಲ್ಕರ್​ ಅಂತಹ ಬ್ಯಾಟ್ಸ್​ಮನ್​ಗಳಿಗೆ ನೆಚ್ಚಿನದ್ದಾಗಿದೆ. ಪ್ರಸ್ತುತ ತಂಡದಲ್ಲಿರುವ ಪೂಜಾರ ಮತ್ತು ರಿಷಭ್ ಪಂತ್​ ಕೂಡ ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.

ಗಿಲ್​ ಮತ್ತು ರೋಹಿತ್​ ಉತ್ತಮ ಆರಂಭ ನೀಡಿದರೆ ಪೂಜಾರ ಮೇಲಿನ ಒತ್ತಡ ಕಡಿಮೆಯಾಗಿ ತಮ್ಮ ನೈಜ ಆಟವನ್ನು ತೋರಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಉಳಿದಂತೆ ರಹಾನೆ ಅತ್ಯುತ್ತಮ ಫಾರ್ಮ್​ನಲ್ಲಿದ್ದು, ಕಳೆದ ಪಂದ್ಯದಲ್ಲಿ ಸ್ಟಾರ್ಕ್​, ಕಮ್ಮಿನ್ಸ್​ ಹೇಜಲ್​ವುಡ್​ ದಾಳಿಯನ್ನು ಸಮರ್ಥವಾಗಿ ಎದುರಿಸಿರುವುದರಿಂದ 3ನೇ ಟೆಸ್ಟ್​ನಲ್ಲೂ ಇದೇ ಪ್ರದರ್ಶನವನ್ನು ಅವರಿಂದ ನಿರೀಕ್ಷಿಸಬಹುದಾಗಿದೆ.

ಆಸ್ಟ್ರೇಲಿಯಾ ತಂಡದ ಆರಂಭಿಕರು ಸತತ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಶೇ 70 ರಷ್ಟು ಫಿಟ್​ ಇರುವ ವಾರ್ನರ್​ರನ್ನು ಬಲವಂತವಾಗಿ ಕಣಕ್ಕಿಳಿಸಲು ಮುಂದಾಗಿದೆ. ವಾರ್ನರ್​ ತಂಡಕ್ಕೆ ಆಗಮಿಸುವುದರಿಂದ ತಂಡದ ಬ್ಯಾಟಿಂಗ್ ಜೊತೆಗೆ ಮೈದಾನದಲ್ಲಿ ಎಲ್ಲಾ ಆಟಗಾರರಗಲ್ಲೂ ಆತ್ಮವಿಶ್ವಾಸ ತುಂಬಲು ನೆರವಾಗಬಲ್ಲರು ಎಂದು ನಾಯಕ ಟಿಮ್​ ಪೇನ್​ ಬುದವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆತಿಥೇಯ ತಂಡ ಆರಂಭಿಕ ಸ್ಥಾನದ ಬದಲಾವಣೆಯೊಂದನ್ನು ಬಿಟ್ಟರೆ ಕಳೆದ ಪಂದ್ಯದಲ್ಲಿದ್ದ ಬಹುತೇಕ ಎಲ್ಲಾ ಆಟಗಾರರನ್ನು ಸಿಡ್ನಿಯಲ್ಲಿ ಕಣಕ್ಕಿಳಿಸಲಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.