ETV Bharat / sports

ಕೋವಿಡ್​​ ಟೆಸ್ಟ್​​​​​​​​ ನೆಗೆಟಿವ್​ ಇದ್ದರೆ ಲಾಲಾರಸ ಬಳಸಬಹುದು: ಅಜಿತ್​ ಅಗರ್ಕರ್​

author img

By

Published : Jun 16, 2020, 8:29 AM IST

ಸದ್ಯದ ಪರಿಸ್ಥಿತಿಯಲ್ಲಿ ಐಸಿಸಿ ಎಂಜಲು ಬಳಕೆ ನಿಷೇಧ ಮಾಡಿರುವುದು ಉತ್ತಮ ನಿರ್ಧಾರವಾಗಿದೆ. ಆದರೆ, ಕೆಲವು ಷರತ್ತುಗಳೊಡನೆ ಲಾಲಾರಸ ಬಳಕೆಗೆ ಅವಕಾಶ ನೀಡಬೇಕು ಎಂದು ಅಜಿತ್​ ಅಗರ್ಕರ್​ ಅಮೂಲ್ಯ ಸಲಹೆ ನೀಡಿದ್ದಾರೆ

Ajit Agarkar
ಅಜಿತ್​ ಅಗರ್ಕರ್​

ಮುಂಬೈ: ಕೊರೊನಾ ವೈರಸ್​ ಭೀತಿಯಿಂದ ಐಸಿಸಿ ಚೆಂಡು ಹೊಳೆಯಲು ಎಂಜಲು ಬಳಕೆ ಮಾಡುವುದನ್ನು ಕ್ರಿಕೆಟ್​ ಸಲಹಾ ಸಮಿತಿಯ ಶಿಫಾರಸಿನ ಮೇಲೆ ನಿಷೇಧ ಹೇರಲಾಗಿದೆ. ಆದರೆ, ಅದಕ್ಕೆ ಪರ ವಿರೋದ ಚರ್ಚೆ ನಡೆಯುತ್ತಿರುವಾಗ ಭಾರತದ ಮಾಜಿ ಕ್ರಿಕೆಟಿಗ ಅಜಿತ್​ ಅಗರ್ಕರ್​ ಅಮೂಲ್ಯ ಸಲಹೆ ನೀಡಿದ್ದಾರೆ.

ಲಾಲಾರಸ ಬಳಕೆ ನಿಷೇಧ ಮಾಡಿದರೆ ಬೌಲರ್​ಗಳಿಗೆ ಕಷ್ಟವಾಗಲಿದೆ ಎಂದು ಕೆಲವು ಮಾಜಿ ಬೌಲರ್​ಗಳು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಚೆಂಡು ಹೊಳೆಯುವಂತೆ ಮಾಡಲು ಎಂಜಲು ಬಳಸಬೇಕೆಂದೇನೂ ಇಲ್ಲ, ಬದಲಾಗಿ ಬೆವರನ್ನೂ ಸಹ ಬಳಸಬಹುದು ಎಂದಿದ್ದರು. ಆದರೆ, ಅಗರ್ಕರ್​ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೊರೊನಾ ಪರೀಕ್ಷೆಯಲ್ಲಿ ವರದಿ ನೆಗೆಟಿವ್​​​​​ ಎಂದು ಬಂದರೆ ಅಂತಹ ಬೌಲರ್​ಗಳು ಎಂಜಲು ಬಳಕೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Ajit Agarkar
ಅಜಿತ್​ ಅಗರ್ಕರ್​

ಸದ್ಯದ ಪರಿಸ್ಥಿತಿಯಲ್ಲಿ ಐಸಿಸಿ ಎಂಜಲು ಬಳಕೆ ನಿಷೇಧ ಮಾಡಿರುವುದು ಉತ್ತಮ ನಿರ್ಧಾರವಾಗಿದೆ. ಆದರೆ ಕೆಲವು ಷರತ್ತುಗಳೊಡನೆ ಲಾಲಾರಸ ಬಳಕೆಗೆ ಅವಕಾಶ ನೀಡಬೇಕು ಎಂದಿದ್ದಾರೆ.

Ajit Agarkar
ಅಜಿತ್​ ಅಗರ್ಕರ್​

ಪಂದ್ಯದ ಆರಂಭಕ್ಕೂ ಮುನ್ನ ಆಟಗಾರರನ್ನು ಪರೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಬಂದರೆ ಎಂಜಲು ಬಳಕೆ ಮಾಡುವುದರಿಂದ ಏನೂ ಅಪಾಯವಾಗುವುದಿಲ್ಲ,. ಈಗಾಗಲೆ ಕ್ರಿಕೆಟ್​ ಬ್ಯಾಟ್ಸ್​ಮನ್​ಗಳ ಪರವಾಗಿದೆ. ಆದರಲ್ಲೂ ಎಂಜಲೂ ಬಳಕೆ ನಿಷೇಧ ಮಾಡಿದರೆ ಬೌಲರ್​ಗಳ ಕೈ ಕತ್ತರಿಸಿದಂತಾಗುತ್ತದೆ ಎಂದು ಅಜಿತ್​ ಅಗರ್ಕರ್​ ಪ್ರತಿಪಾದಿಸಿದ್ದಾರೆ.

ಮುಂಬೈ: ಕೊರೊನಾ ವೈರಸ್​ ಭೀತಿಯಿಂದ ಐಸಿಸಿ ಚೆಂಡು ಹೊಳೆಯಲು ಎಂಜಲು ಬಳಕೆ ಮಾಡುವುದನ್ನು ಕ್ರಿಕೆಟ್​ ಸಲಹಾ ಸಮಿತಿಯ ಶಿಫಾರಸಿನ ಮೇಲೆ ನಿಷೇಧ ಹೇರಲಾಗಿದೆ. ಆದರೆ, ಅದಕ್ಕೆ ಪರ ವಿರೋದ ಚರ್ಚೆ ನಡೆಯುತ್ತಿರುವಾಗ ಭಾರತದ ಮಾಜಿ ಕ್ರಿಕೆಟಿಗ ಅಜಿತ್​ ಅಗರ್ಕರ್​ ಅಮೂಲ್ಯ ಸಲಹೆ ನೀಡಿದ್ದಾರೆ.

ಲಾಲಾರಸ ಬಳಕೆ ನಿಷೇಧ ಮಾಡಿದರೆ ಬೌಲರ್​ಗಳಿಗೆ ಕಷ್ಟವಾಗಲಿದೆ ಎಂದು ಕೆಲವು ಮಾಜಿ ಬೌಲರ್​ಗಳು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಚೆಂಡು ಹೊಳೆಯುವಂತೆ ಮಾಡಲು ಎಂಜಲು ಬಳಸಬೇಕೆಂದೇನೂ ಇಲ್ಲ, ಬದಲಾಗಿ ಬೆವರನ್ನೂ ಸಹ ಬಳಸಬಹುದು ಎಂದಿದ್ದರು. ಆದರೆ, ಅಗರ್ಕರ್​ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೊರೊನಾ ಪರೀಕ್ಷೆಯಲ್ಲಿ ವರದಿ ನೆಗೆಟಿವ್​​​​​ ಎಂದು ಬಂದರೆ ಅಂತಹ ಬೌಲರ್​ಗಳು ಎಂಜಲು ಬಳಕೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Ajit Agarkar
ಅಜಿತ್​ ಅಗರ್ಕರ್​

ಸದ್ಯದ ಪರಿಸ್ಥಿತಿಯಲ್ಲಿ ಐಸಿಸಿ ಎಂಜಲು ಬಳಕೆ ನಿಷೇಧ ಮಾಡಿರುವುದು ಉತ್ತಮ ನಿರ್ಧಾರವಾಗಿದೆ. ಆದರೆ ಕೆಲವು ಷರತ್ತುಗಳೊಡನೆ ಲಾಲಾರಸ ಬಳಕೆಗೆ ಅವಕಾಶ ನೀಡಬೇಕು ಎಂದಿದ್ದಾರೆ.

Ajit Agarkar
ಅಜಿತ್​ ಅಗರ್ಕರ್​

ಪಂದ್ಯದ ಆರಂಭಕ್ಕೂ ಮುನ್ನ ಆಟಗಾರರನ್ನು ಪರೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಬಂದರೆ ಎಂಜಲು ಬಳಕೆ ಮಾಡುವುದರಿಂದ ಏನೂ ಅಪಾಯವಾಗುವುದಿಲ್ಲ,. ಈಗಾಗಲೆ ಕ್ರಿಕೆಟ್​ ಬ್ಯಾಟ್ಸ್​ಮನ್​ಗಳ ಪರವಾಗಿದೆ. ಆದರಲ್ಲೂ ಎಂಜಲೂ ಬಳಕೆ ನಿಷೇಧ ಮಾಡಿದರೆ ಬೌಲರ್​ಗಳ ಕೈ ಕತ್ತರಿಸಿದಂತಾಗುತ್ತದೆ ಎಂದು ಅಜಿತ್​ ಅಗರ್ಕರ್​ ಪ್ರತಿಪಾದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.