ETV Bharat / sports

ತಂಡ ಏನು ಬಯಸುತ್ತಿದಿಯೋ ಅದನ್ನು ನೆರವೇರಿಸಲು ಪಾಂಡ್ಯ ಸಿದ್ಧ: ಹಿಟ್​ಮ್ಯಾನ್​

author img

By

Published : Mar 10, 2021, 10:01 PM IST

ಹಾರ್ದಿಕ್​ ಪಾಂಡ್ಯ 2019ರಲ್ಲಿ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರು 2020ರ ಐಪಿಎಲ್​ಗೆ ಕಮ್​ಬ್ಯಾಕ್ ಮಾಡಿದ್ದರು. ಆದರೆ ಐಪಿಎಲ್​ನಲ್ಲಿ ಬೌಲಿಂಗ್​ನಿಂದ ದೂರ ಉಳಿದಿದ್ದರು. ನಂತರ ಸೀಮಿತ ಓವರ್​ಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಉತ್ತಮ ಪ್ರದರ್ಶನ ತೋರಿದ್ದರು. ಆದರೆ 6 ಪಂದ್ಯಗಳಲ್ಲಿನ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಬೌಲಿಂಗ್ ಮಾಡಿದ್ದರು.

ರೋಹಿತ್​ ಶರ್ಮಾ ಹಾರ್ದಿಕ್ ಪಾಂಡ್ಯ
ರೋಹಿತ್​ ಶರ್ಮಾ ಹಾರ್ದಿಕ್ ಪಾಂಡ್ಯ

ಅಹ್ಮದಾಬಾದ್​: ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಗಣನೀಯ ಕೊಡುಗೆ ನೀಡಲು ಸಿದ್ಧರಿದ್ದಾರೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಬನ್ನಿನ ಶಸ್ತ್ರ ಚಿಕಿತ್ಸೆಯ ನಂತರ ಅತ್ಯುತ್ತಮ ಸ್ಥಿತಿಗೆ ಮರಳಲು ಅವರುವ ತಮ್ಮಿಂದಾಗುವ ಎಲ್ಲವನ್ನು ಮಾಡುತ್ತಿದ್ದಾರೆ ಎಂದು ಟೀಮ್​ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಹಾರ್ದಿಕ್​ ಪಾಂಡ್ಯ 2019ರಲ್ಲಿ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರು 2020ರ ಐಪಿಎಲ್​ಗೆ ಕಮ್​ಬ್ಯಾಕ್ ಮಾಡಿದ್ದರು. ಆದರೆ ಐಪಿಎಲ್​ನಲ್ಲಿ ಬೌಲಿಂಗ್​ನಿಂದ ದೂರ ಉಳಿದಿದ್ದರು. ನಂತರ ಸೀಮಿತ ಓವರ್​ಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಉತ್ತಮ ಪ್ರದರ್ಶನ ತೋರಿದ್ದರು. ಆದರೆ 6 ಪಂದ್ಯಗಳಲ್ಲಿನ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಬೌಲಿಂಗ್ ಮಾಡಿದ್ದರು.

ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ತಂಡಕ್ಕೆ ಮರಳಿದರಾದರೂ 4 ಪಂದ್ಯಗಳಲ್ಲೂ ಬೆಂಚ್​ ಕಾಯ್ದಿದ್ದರು. ಆದರೆ ರೋಹಿತ್ ಪ್ರಕಾರ ಟೆಸ್ಟ್​ ಸರಣಿಯಲ್ಲಿ ತಂಡದ ಜೊತೆ ಕಾಲ ಕಳೆದಿರುವುದು ಪಾಂಡ್ಯಗೆ ವೈಟ್ ಬಾಲ್​ ಕ್ರಿಕೆಟ್​ನಲ್ಲಿ ತಮ್ಮಿಂದ ತಂಡ ಬಯಸಿದ್ದನ್ನು ನೀಡಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.

" ಖಂಡಿತವಾಗಿಯೂ ಅವರು(ಪಾಂಡ್ಯ) ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ಆ ಕೌಶಲ್ಯವನ್ನು ತೀಕ್ಷ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸೀಮಿತ ಸರಣಿಗೆ ತಯಾರಾಗುವುದಕ್ಕೆ ಅವರು ತಂಡದೊಂದಿಗೆ ಒಂದೂವರೆ ತಿಂಗಳು ಕಾಲ ಇದ್ದದ್ದೂ ಅವರಿಗೆ ನೆರವಾಗಿದೆ " ಎಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅವರಿಂದ ತಂಡ ಏನನ್ನು ಬಯಸುತ್ತಿದಿಯೋ ಅದನ್ನು ಮಾಡಲು ಪಾಂಡ್ಯ ಸಿದ್ಧರಿದ್ದಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಬ್ಯಾಟಿಂಗ್ ಅಲ್ಲದೆ ಕಳೆದ ಕೆಲವು ವಾರಗಳಿಂದ ಬೌಲಿಂಗ್​ನಲ್ಲು ಕೆಲಸ ಮಾಡುತ್ತಿದ್ದಾರೆ. ಖಂಡಿತ ಅವರು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿದ್ದಾರೆ ಎಂದು ನನಗೆ ವಿಶ್ವಾಸವಿದೆ ಎಂದು ರೋಹಿತ್ ತಿಳಿಸಿದ್ದಾರೆ.

ಇದನ್ನು ಓದಿ:ಐಸಿಸಿ ವಿಶ್ವಕಪ್​ಗಳ ನಡುವೆ​ ಅಂತರ ಕಾಯ್ದುಕೊಳ್ಳುವ ಮೂಲಕ ಅದರ ಮೋಡಿ ಕಾಪಾಡಿಕೊಳ್ಳಬೇಕು: ರೋಹಿತ್ ಶರ್ಮಾ

ಅಹ್ಮದಾಬಾದ್​: ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಗಣನೀಯ ಕೊಡುಗೆ ನೀಡಲು ಸಿದ್ಧರಿದ್ದಾರೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಬನ್ನಿನ ಶಸ್ತ್ರ ಚಿಕಿತ್ಸೆಯ ನಂತರ ಅತ್ಯುತ್ತಮ ಸ್ಥಿತಿಗೆ ಮರಳಲು ಅವರುವ ತಮ್ಮಿಂದಾಗುವ ಎಲ್ಲವನ್ನು ಮಾಡುತ್ತಿದ್ದಾರೆ ಎಂದು ಟೀಮ್​ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಹಾರ್ದಿಕ್​ ಪಾಂಡ್ಯ 2019ರಲ್ಲಿ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರು 2020ರ ಐಪಿಎಲ್​ಗೆ ಕಮ್​ಬ್ಯಾಕ್ ಮಾಡಿದ್ದರು. ಆದರೆ ಐಪಿಎಲ್​ನಲ್ಲಿ ಬೌಲಿಂಗ್​ನಿಂದ ದೂರ ಉಳಿದಿದ್ದರು. ನಂತರ ಸೀಮಿತ ಓವರ್​ಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಉತ್ತಮ ಪ್ರದರ್ಶನ ತೋರಿದ್ದರು. ಆದರೆ 6 ಪಂದ್ಯಗಳಲ್ಲಿನ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಬೌಲಿಂಗ್ ಮಾಡಿದ್ದರು.

ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ತಂಡಕ್ಕೆ ಮರಳಿದರಾದರೂ 4 ಪಂದ್ಯಗಳಲ್ಲೂ ಬೆಂಚ್​ ಕಾಯ್ದಿದ್ದರು. ಆದರೆ ರೋಹಿತ್ ಪ್ರಕಾರ ಟೆಸ್ಟ್​ ಸರಣಿಯಲ್ಲಿ ತಂಡದ ಜೊತೆ ಕಾಲ ಕಳೆದಿರುವುದು ಪಾಂಡ್ಯಗೆ ವೈಟ್ ಬಾಲ್​ ಕ್ರಿಕೆಟ್​ನಲ್ಲಿ ತಮ್ಮಿಂದ ತಂಡ ಬಯಸಿದ್ದನ್ನು ನೀಡಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.

" ಖಂಡಿತವಾಗಿಯೂ ಅವರು(ಪಾಂಡ್ಯ) ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ಆ ಕೌಶಲ್ಯವನ್ನು ತೀಕ್ಷ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸೀಮಿತ ಸರಣಿಗೆ ತಯಾರಾಗುವುದಕ್ಕೆ ಅವರು ತಂಡದೊಂದಿಗೆ ಒಂದೂವರೆ ತಿಂಗಳು ಕಾಲ ಇದ್ದದ್ದೂ ಅವರಿಗೆ ನೆರವಾಗಿದೆ " ಎಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅವರಿಂದ ತಂಡ ಏನನ್ನು ಬಯಸುತ್ತಿದಿಯೋ ಅದನ್ನು ಮಾಡಲು ಪಾಂಡ್ಯ ಸಿದ್ಧರಿದ್ದಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಬ್ಯಾಟಿಂಗ್ ಅಲ್ಲದೆ ಕಳೆದ ಕೆಲವು ವಾರಗಳಿಂದ ಬೌಲಿಂಗ್​ನಲ್ಲು ಕೆಲಸ ಮಾಡುತ್ತಿದ್ದಾರೆ. ಖಂಡಿತ ಅವರು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿದ್ದಾರೆ ಎಂದು ನನಗೆ ವಿಶ್ವಾಸವಿದೆ ಎಂದು ರೋಹಿತ್ ತಿಳಿಸಿದ್ದಾರೆ.

ಇದನ್ನು ಓದಿ:ಐಸಿಸಿ ವಿಶ್ವಕಪ್​ಗಳ ನಡುವೆ​ ಅಂತರ ಕಾಯ್ದುಕೊಳ್ಳುವ ಮೂಲಕ ಅದರ ಮೋಡಿ ಕಾಪಾಡಿಕೊಳ್ಳಬೇಕು: ರೋಹಿತ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.