ETV Bharat / sports

ನಿವೃತ್ತಿ ವಾಪಸ್ ಪಡೆದು ಕ್ರಿಕೆಟ್​ಗೆ ಮರಳಲಿರುವ ಅಂಬಾಟಿ ರಾಯುಡು... ಬಿಸಿಸಿಐಗೆ ಪತ್ರ

ಕ್ರಿಕೆಟ್​ ಬಿಟ್ಟಿರಲಾಗದ ಅಂಬಾಟಿ ರಾಯುಡು ತಮ್ಮ ನಿವೃತ್ತಿಯನ್ನು ವಾಪಸ್​ ಪಡೆಯಲು ನಿರ್ಧರಿಸಿದ್ದು, ಈ ಕುರಿತು ಬಿಸಿಸಿಐಗೆ ಪತ್ರದ ಮೂಲಕ ಕ್ರಿಕೆಟ್ ಆಡಲು ಅನುಮತಿ ಕೋರಿದ್ದಾರೆ.

author img

By

Published : Aug 24, 2019, 11:43 AM IST

Ambati Rayudu

ಹೈದರಾಬಾದ್​: 2019ರ ವಿಶ್ವಕಪ್​ನಿಂದ ಅವಕಾಶವಂಚಿತನಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಹೈದರಾಬಾದ್​ನ ಅಂಬಾಟಿ ರಾಯುಡು ದಿಢೀರ್​ ನಿವೃತ್ತಿ ಘೋಷಿಸಿದ್ದರು.

ಆದರೆ, ಇದೀಗ ಕ್ರಿಕೆಟ್​ ಬಿಟ್ಟಿರಲಾಗದ ಅವರು ಮತ್ತೆ ಕ್ರಿಕೆಟ್​ ಆಡಲು ನಿರ್ಧರಿಸಿದ್ದಾರೆ. ಐಪಿಎಲ್​ನಲ್ಲಿ ಆಡುವುದರ ಜೊತೆಗೆ ದೇಶಿ ಕ್ರಿಕೆಟ್​ಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆದಷ್ಟು ಬೇಗ ಬಿಸಿಸಿಐಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ದಿಢೀರ್​ ನಿವೃತ್ತಿ ಘೋಷಿಸಲು ಕಾರಣ ಕೇಳಿದ್ದಕ್ಕೆ " ನಾನು ವಿಶ್ವಕಪ್​ ಆಡುವುದಕ್ಕಾಗಿ 4 ವರ್ಷ ಬಹಳ ಕಷ್ಟ ಪಟ್ಟಿದ್ದೆ. ಆದರೆ, ನನಗೆ ವಿಶ್ವಕಪ್​ ತಂಡದಲ್ಲಿ ಅವಕಾಶ ಸಿಗದಿದ್ದರಿಂದ ಇದೇ ನಿವೃತ್ತಿಗೆ ಒಳ್ಳೆಯ ಸಮಯ ಎಂದು ಅನಿಸಿತು ಅದಕ್ಕೆ ಆ ನಿರ್ಧಾರ ತೆಗೆದುಕೊಂಡೆ" ಎಂದಿದ್ದಾರೆ.

ಮತ್ತೆ ನಿರ್ಧಾರ ಬದಲಿಸಿಕೊಂಡಿದ್ದೇಕೆ ಎಂಬುದಕ್ಕೆ ಉತ್ತರಿಸಿರುವ ರಾಯುಡು" ನನಗೆ ಚೆನ್ನೈ ಸೂಪರ್​ ತುಂಬಾ ಬೆಂಬಲ ನೀಡಿದೆ. ಸಿಎಸ್​ಕೆ ಅಧಿಕಾರಿಗಳು ನನಗೆ ಕ್ರಿಕೆಟ್​ನಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದಾರೆ. ನನಗೂ ಕ್ರಿಕೆಟ್​ ಮೇಲೆ ಪ್ರಿತಿಯಿದೆ, ಆಟವನ್ನು ಎಂಜಾಯ್​ ಮಾಡುವ ಬಯಕೆಯಿಂದ ನಿರ್ಧಾರ ಬದಲಿಸಿಕೊಂಡಿದ್ದೇನೆ" ಎಂದು ರಾಯುಡು ತಿಳಿಸಿದ್ದಾರೆ.

ನಾನು ಮೊದಲು ಫಿಟ್​ನೆಸ್​ ಕಡೆಗೆ ಮೊದಲ ಆದ್ಯತೆ ನೀಡುತ್ತೇನೆ, ವಿದೇಶಿ ಲೀಗ್​ಗಳಲ್ಲಿ ಆಡುವುದಿಲ್ಲ, ಭಾರತ ತಂಡಕ್ಕೆ ಮತ್ತೆ ಆಡುತ್ತೇನೆ ಎಂಬುದು ಸದ್ಯಕ್ಕೆ ದೂರದ ಮಾತು. ಆದರೆ, ಹಂತ ಹಂತವಾಗಿ ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿ ನಂತರ ಭಾರತ ತಂಡದಲ್ಲಿ ಅವಕಾಶ ಪಡೆಯಲು ಇಚ್ಛಿಸುತ್ತೇನೆ ಎಂದು 33 ವರ್ಷದ ರಾಯುಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್​: 2019ರ ವಿಶ್ವಕಪ್​ನಿಂದ ಅವಕಾಶವಂಚಿತನಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಹೈದರಾಬಾದ್​ನ ಅಂಬಾಟಿ ರಾಯುಡು ದಿಢೀರ್​ ನಿವೃತ್ತಿ ಘೋಷಿಸಿದ್ದರು.

ಆದರೆ, ಇದೀಗ ಕ್ರಿಕೆಟ್​ ಬಿಟ್ಟಿರಲಾಗದ ಅವರು ಮತ್ತೆ ಕ್ರಿಕೆಟ್​ ಆಡಲು ನಿರ್ಧರಿಸಿದ್ದಾರೆ. ಐಪಿಎಲ್​ನಲ್ಲಿ ಆಡುವುದರ ಜೊತೆಗೆ ದೇಶಿ ಕ್ರಿಕೆಟ್​ಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆದಷ್ಟು ಬೇಗ ಬಿಸಿಸಿಐಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ದಿಢೀರ್​ ನಿವೃತ್ತಿ ಘೋಷಿಸಲು ಕಾರಣ ಕೇಳಿದ್ದಕ್ಕೆ " ನಾನು ವಿಶ್ವಕಪ್​ ಆಡುವುದಕ್ಕಾಗಿ 4 ವರ್ಷ ಬಹಳ ಕಷ್ಟ ಪಟ್ಟಿದ್ದೆ. ಆದರೆ, ನನಗೆ ವಿಶ್ವಕಪ್​ ತಂಡದಲ್ಲಿ ಅವಕಾಶ ಸಿಗದಿದ್ದರಿಂದ ಇದೇ ನಿವೃತ್ತಿಗೆ ಒಳ್ಳೆಯ ಸಮಯ ಎಂದು ಅನಿಸಿತು ಅದಕ್ಕೆ ಆ ನಿರ್ಧಾರ ತೆಗೆದುಕೊಂಡೆ" ಎಂದಿದ್ದಾರೆ.

ಮತ್ತೆ ನಿರ್ಧಾರ ಬದಲಿಸಿಕೊಂಡಿದ್ದೇಕೆ ಎಂಬುದಕ್ಕೆ ಉತ್ತರಿಸಿರುವ ರಾಯುಡು" ನನಗೆ ಚೆನ್ನೈ ಸೂಪರ್​ ತುಂಬಾ ಬೆಂಬಲ ನೀಡಿದೆ. ಸಿಎಸ್​ಕೆ ಅಧಿಕಾರಿಗಳು ನನಗೆ ಕ್ರಿಕೆಟ್​ನಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದಾರೆ. ನನಗೂ ಕ್ರಿಕೆಟ್​ ಮೇಲೆ ಪ್ರಿತಿಯಿದೆ, ಆಟವನ್ನು ಎಂಜಾಯ್​ ಮಾಡುವ ಬಯಕೆಯಿಂದ ನಿರ್ಧಾರ ಬದಲಿಸಿಕೊಂಡಿದ್ದೇನೆ" ಎಂದು ರಾಯುಡು ತಿಳಿಸಿದ್ದಾರೆ.

ನಾನು ಮೊದಲು ಫಿಟ್​ನೆಸ್​ ಕಡೆಗೆ ಮೊದಲ ಆದ್ಯತೆ ನೀಡುತ್ತೇನೆ, ವಿದೇಶಿ ಲೀಗ್​ಗಳಲ್ಲಿ ಆಡುವುದಿಲ್ಲ, ಭಾರತ ತಂಡಕ್ಕೆ ಮತ್ತೆ ಆಡುತ್ತೇನೆ ಎಂಬುದು ಸದ್ಯಕ್ಕೆ ದೂರದ ಮಾತು. ಆದರೆ, ಹಂತ ಹಂತವಾಗಿ ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿ ನಂತರ ಭಾರತ ತಂಡದಲ್ಲಿ ಅವಕಾಶ ಪಡೆಯಲು ಇಚ್ಛಿಸುತ್ತೇನೆ ಎಂದು 33 ವರ್ಷದ ರಾಯುಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.